ವೇಯ್ಟಿಂಗ್ ಲಿಸ್ಟ್ನ ಪ್ರಯಾಣಿಕರಿಗೆ ಸಿಹಿಸುದ್ದಿ
ಕ್ಲೋನ್ ರೈಲು ವ್ಯವಸ್ಥೆಯಲ್ಲಿ ಒಂದೇ ಹೆಸರಲ್ಲಿ ಮತ್ತೂಂದು ರೈಲನ್ನು ಹೆಚ್ಚುವರಿಯಾಗಿ ಓಡಿಸಲಾಗುತ್ತದೆ.
Team Udayavani, Sep 9, 2020, 10:03 AM IST
ನವದೆಹಲಿ: ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ ಇಲ್ಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಓಡಾಡುವ ಮಾರ್ಗಗಳಲ್ಲಿ ಹೆಚ್ಚಿನ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಯಾವ ಮಾರ್ಗಗಳಲ್ಲಿ ವೇಯ್ಟಿಂಗ್ ಲಿಸ್ಟ್ನಲ್ಲಿರುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆಯೋ, ಅಂಥ ಮಾರ್ಗಗಳಲ್ಲಿ ಹೆಚ್ಚುವರಿ ರೈಲುಗಳನ್ನು ಓಡಿಸಲಾಗುತ್ತದೆ. ಈ ವ್ಯವಸ್ಥೆಯನ್ನು “ಕ್ಲೋನ್ ಟ್ರೈನ್’ ಎಂದು ಕರೆಯಲಾಗುತ್ತದೆ.
ಮುಂದಿನ 15 ದಿನಗಳಲ್ಲೇ ಹಂತ ಹಂತವಾಗಿ ಈ ಯೋಜನೆ ಜಾರಿಗೆ ಬರಲಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವೈ.ಕೆ.ಯಾದವ್ ತಿಳಿಸಿದ್ದಾರೆ. ನಿಗದಿತ ರೈಲುಗಳಿಗೆ ಬೇಡಿಕೆ ಇರುವಲ್ಲಿ ಹೆಚ್ಚುವರಿಯಾಗಿ ರೈಲು ಓಡಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುವಂತೆ ಮಾಡಲಾಗುತ್ತದೆ. ಆದರೆ, ಈ ರೈಲುಗಳಿಗೆ ಎಲ್ಲ ನಿಲ್ದಾಣಗಳಲ್ಲೂ ನಿಲುಗಡೆ ಇರುವುದಿಲ್ಲ.
ನಿಗದಿತ ರೈಲಿನ ಸಂಚಾರ ಆರಂಭವಾಗುವ ಮುನ್ನವೇ ಕ್ಲೋನ್ ರೈಲುಗಳು ಸಂಚರಿಸಲಿದ್ದು,ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆಯಿರಲಿದೆ ಎಂದು ಅವರು ಹೇಳಿದ್ದಾರೆ. ಕ್ಲೋನ್ ರೈಲು ವ್ಯವಸ್ಥೆಯಲ್ಲಿ ಒಂದೇ ಹೆಸರಲ್ಲಿ ಮತ್ತೂಂದು ರೈಲನ್ನು ಹೆಚ್ಚುವರಿಯಾಗಿ ಓಡಿಸಲಾಗುತ್ತದೆ. ಉದಾ ಹರಣೆಗೆ, 12423/12424 ನವದೆಹಲಿ – ದಿಬ್ರೂಗಢ ರಾಜಧಾನಿ ಎಕ್ಸ್ಪ್ರೆಸ್ ನಲ್ಲಿ ಇರುವ ಎಲ್ಲಾ ಸೀಟ್ಗಳು ಕಾಯ್ದಿರಿಸಿದ್ದರೆ, ರೈಲ್ವೆ ಇಲಾಖೆಯು ಅದೇ ಹೆಸರಿನ ಮತ್ತೂಂದು ರೈಲನ್ನು ಓಡಿಸುತ್ತದೆ. ಆದರೆ ಇಂಥ ವ್ಯವಸ್ಥೆ ಯನ್ನು ಶುರು ಮಾಡಲು ಹೆಚ್ಚುವರಿ ರೈಲುಗಳ ಅಗತ್ಯತೆಯೂ ಸರ್ಕಾರಕ್ಕೆ ಇದೆ.
ಐಆರ್ಸಿಟಿಸಿ ಶೇ. 20ಷೇರುಗಳ ಮಾರಾಟ
ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಷನ್ (ಐಆರ್ ಸಿಟಿಸಿ) ನ ಶೇ.15-20ರಷ್ಟು ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಸಾರ್ವಜನಿಕ ಸೊತ್ತು ನಿರ್ವಹಣೆ ಮತ್ತು ಬಂಡವಾಳ ಹೂಡಿಕೆ ವಿಭಾಗ ಮರ್ಚೆಂಟ್ ಬ್ಯಾಂಕ್ ಒಂದನ್ನು ನೇಮಕ ಮಾಡಲು ಆಹ್ವಾನ ನೀಡಿದೆ.
ಈ ಬಗ್ಗೆ ಸೆ.11ರಿಂದ ಬಿಡ್ಡಿಂಗ್ ಪ್ರಕ್ರಿಯೆ ಶುರುವಾಗಲಿದೆ. ಆಫರ್ ಆನ್ ಸೇಲ್ ಅಥವಾ ಇಳಿಕೆ ಮಾರಾಟದ ನೀಡಿಕೆ ಆಧಾರದಲ್ಲಿ ಷೇರು ಮಾರಾಟ ಮಾಡಲಾಗುತ್ತದೆ. ಐಆರ್ಸಿಟಿಸಿಯಲ್ಲಿ ಕೇಂದ್ರ ಶೇ.87.40ರಷ್ಟು ಪಾಲು ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್ಗೆ ಭಾರಿ ಡಿಮ್ಯಾಂಡ್
Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ