ಜ್ವಾಲಾಮುಖಿ ಸ್ಫೋಟದಿಂದ ಉಂಟಾದ ಸುಂದರ ಪ್ರವಾಸಿ ತಾಣ, ಇಲ್ಲಿದೆ ಎಮರಾಲ್ಡ್ ಐಲ್ಯಾಂಡ್ ಪರಿಚಯ !


Team Udayavani, Sep 27, 2020, 12:17 PM IST

irland-1

ಬೆಂಗಳೂರು: ಮೂರು ತಿಂಗಳ ವೀಸಾ ಪಡೆದು ಐರ್ಲೆಂಡ್ ನ ಡಬ್ಲಿನ್ ವಿಮಾನ ನಿಲ್ದಾಣದಲ್ಲಿ ಇಳಿದಾಗ  ರಾತ್ರಿ ಏಳರ ಸಮಯ. ಸಣ್ಣಗೆ ಮಂಜಿನ ಮಳೆಯಿಂದಾಗಿ  ಛಳಿಗಾಳಿ ಬೀಸುತ್ತಿತ್ತು. ಎಮರಾಲ್ಡ್ ಐಲ್ಯಾಂಡ್ ಎಂದು ಕರೆಯಲ್ಪಡುವ ಈ ದೇಶ ನಿಜಕ್ಕೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.

ಪ್ರತಿ ಶನಿವಾರ ಅಥವಾ ಭಾನುವಾರ ಇಲ್ಲಿ ಪ್ರವಾಸ ಆರಂಭವಾಗುತ್ತದೆ. ಉತ್ತರ ಐರ್ಲೆಂಡ್ ಬ್ರಿಟಿಷ್‌ ಆಳ್ವಿಕೆಯಲ್ಲಿದ್ದು, ಇಲ್ಲಿಯ ಕ್ಯಾರಿಕ್-ಒ-ರೀಡ್ (Carrik O reed) Gaints causeway, ಸುಂದರವಾದ ಪ್ರವಾಸ ತಾಣ. ಅರವತ್ತು ಸಾವಿರ ವರ್ಷಗಳ ಹಿಂದೆ ಜ್ವಾಲಾಮುಖಿಯ ಸ್ಫೋಟದಿಂದ ಉಂಟಾದ ಸುಮಾರು ನಲವತ್ತು ಸಾವಿರ ಬೆಸಾಲ್ಟ್‌ ಕಂಬಗಳು ಧೀಮಂತವಾಗಿ ನಿಂತಿರುವ ಕಡಲ ತೀರ. ಕೆಲವು ಕಂಬಗಳಿಗೆ 4, 5, 7 ಹಾಗು 8 ಬದಿಗಳಿವೆ. 6 ಬದಿಗಳ (hexagon)  ಕಂಬಗಳೇ ಜಾಸ್ತಿಯಾಗಿ ಕಾಣಸಿಗುತ್ತದೆ.

ಘನೀಭೂತ ಲಾವಾದ ಈ ಕಲ್ಲುಗಂಬಗಳ ಗರಿಷ್ಟ ಎತ್ತರ 12 ಮೀಟರ್ ಅಂದರೆ 39 ಅಡಿಗಳು. ಕೆಲವು ಕಡೆ ಕ್ಲಿಫ್ ಗಳಲ್ಲಿ 28 ಮೀಟರ್ ಇದ್ದು ಮಜಬೂತಾಗಿ ಇವೆ. ಶತಮಾನಗಳ ಇತಿಹಾಸ ಹೊಂದಿರುವ ಈ ಕಲ್ಲು ಕಂಬಗಳು ಕಾಲನ ಹೊಡೆತ ಎದುರಿಸಿ ನಿಂತಿರುವ ಉದಾಹರಣೆಗಳು. ಇದೆಲ್ಲವನ್ನೂ ದಾಟಿ ಮುಂದೆ ಸಿಗುವುದೇ ಕ್ಯಾರಿಕ್-ಒ-ರೀಡ್. ಬ್ಯಾಲಿಂಟಾಯ್, ಅಂಟ್ರಿಮ್ ಕೌಂಟಿಯಲ್ಲಿ ಪವಡಿಸಿರುವ ಈ ಸುಂದರ ಸಮುದ್ರತೀರ ನಯನ ಮನೋಹರ.

ಇಲ್ಲಿ ಅನತಿ ದೂರದಲ್ಲಿ ಇರುವ ಒಂದು ದ್ವೀಪಕ್ಕೆ ಹೋಗಲು ವೈರಿನ ರೋಪ್ ಸೇತುವೆಯನ್ನು ನಿರ್ಮಿಸಿದ್ದಾರೆ. 20 ಮೀಟರ್ ಉದ್ದ ಇರುವ ಈ ಸೇತುವೆ ಭೋರ್ಗರೆಯುವ ಸಮುದ್ರದ ಮೇಲೆ 30 ಮೀಟರ್ ( 98 ಅಡಿಗಳು) ಎತ್ತರದಲ್ಲಿ ಇದೆ. ಬೆಟ್ಟದಿಂದ ದೂರದಲ್ಲಿ ಸ್ಕಾಟ್ಲೆಂಡ್‌ ಹಾಗು ಲಾತ್ಲಿನ್ ದ್ವೀಪವನ್ನು ನೋಡಬಹುದು. ಹದಿನಾರು ಸಾವಿರ ಪೌಂಡು ವೆಚ್ಚದಲ್ಲಿ ಕಟ್ಟಿರುವ ಈ ಹಗ್ಗದ ತೂಗು ಸೇತುವೆಯ ಮೇಲೆ ಒಂದು ಸಲಕ್ಕೆ ಎಂಟು ಮಂದಿ ನಡೆದು ಹೋಗಬಹುದು. ಇದೊಂದು ಅದ್ಭುತವಾದ ಅನುಭವ.

ಸಸ್ಯಾಹಾರ ಸಿಗದೆ ಇರುವುದರಿಂದ ನಾವು ಮನೆಯಿಂದ ಕೊಂಡು ಹೋದ ಆಹಾರವನ್ನು ಸೇವಿಸುತ್ತಾ ನಯನ ಮನೋಹರ ಪ್ರಕೃತಿಯ ಮಡಿಲಲ್ಲಿ ಒಂದಾದೆವು.  ಈ ಪ್ರದೇಶ ನ್ಯಾಷನಲ್ ಟ್ರಸ್ಟ್ ಅಡಿ ಇದ್ದು  ಯುನೆಸ್ಕೋ ನಿಂದ World Heritage ಎಂದು ಘೋಷಿಸಲ್ಪಟ್ಟಿದೆ.

-ನಾಗಮಣಿ ನಾರಾಯಣ

ಬೆಂಗಳೂರು

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.