ಅವರು, ಇವರು, ಮತ್ತೂಬ್ಬರು – ಎಲ್ಲರೂ ನಮ್ಮವರು!


Team Udayavani, Oct 10, 2020, 6:09 AM IST

Flowerಅವರು, ಇವರು, ಮತ್ತೂಬ್ಬರು – ಎಲ್ಲರೂ ನಮ್ಮವರು!ಅವರು, ಇವರು, ಮತ್ತೂಬ್ಬರು – ಎಲ್ಲರೂ ನಮ್ಮವರು!

ಬೌದ್ಧ ಮಠವೊಂದರಲ್ಲಿ ಝೆನ್‌ ಗುರುಗಳು ಒಲೆ ಉರಿಸಲು ಪ್ರಯತ್ನಿಸುತ್ತಿದ್ದರು. ಕಟ್ಟಿಗೆ ಕೊಂಚ ಒದ್ದೆಯಾದ ಕಾರಣ ಬೆಂಕಿ ಹತ್ತಿ ಕೊಳ್ಳುತ್ತಿರಲಿಲ್ಲ. ಊದಿ ಊದಿ ಗುರುಗಳ ಕಣ್ಣುಗಳಲ್ಲಿ ನೀರು ಬಂತು.

ಗುರುಗಳ ಕಷ್ಟವನ್ನು ನೋಡಿದ ಒಬ್ಬ ಶಿಷ್ಯ ಹತ್ತಿರ ಬಂದು ಏನು ಮಾಡುತ್ತಿದ್ದೀರಿ ಎಂದು ಕೇಳಿದ. ಚಹಾ ಮಾಡುತ್ತಿದ್ದೇನೆ ಎಂದು ಗುರುಗಳು ಉತ್ತರಿಸಿದರು. “ಯಾರಿಗಾಗಿ?’ ಮರುಪ್ರಶ್ನೆ ತೂರಿಬಂತು. “ಓ ಅಲ್ಲಿ ಕುಳಿತಿ ದ್ದಾನಲ್ಲ ಸೋಮಾರಿ, ಅವನಿಗಾಗಿ’ ಎಂದರು ಗುರುಗಳು.

ಮಠದಲ್ಲೊಬ್ಬ ಜಡಭರತ ಶಿಷ್ಯನಿದ್ದ. ಸದಾ ನಿದ್ದೆ ತೂಗುವುದು, ಉಳಿದವರೆಲ್ಲರೂ ಕೆಲಸಕಾರ್ಯಗಳಲ್ಲಿ ವ್ಯಸ್ತರಾಗಿದ್ದರೆ ತಾನು ಉದಾಸವಾಗಿರುವುದು ಅವನ ಸ್ವಭಾವ. ಗುರುಗಳು ಹೇಳಿದ್ದು ಅವನ ಬಗ್ಗೆಯೇ.
ಶಿಷ್ಯ ಹೇಳಿದ, “ಅವನು ಈಗ ತಾನೇ ಚಹಾ ಮಾಡಿಕೊಳ್ಳುವಷ್ಟು ದೊಡ್ಡವನಾಗಿ ದ್ದಾನಲ್ಲ! ಅವನೇ ಚಹಾ ತಯಾರಿಸಿಕೊಳ್ಳ ಬಹುದಲ್ಲ’. ಗುರುಗಳು ನಸುನಕ್ಕು ಹೇಳಿ ದರು, “ನಾನೀಗ ಇದ್ದೇನಲ್ಲ!’

ಬದುಕಿನ ಅತ್ಯಂತ ಪ್ರಾಮುಖ್ಯವಾದ ತಣ್ತೀ ಏನು? ನಾವು ಏನು ಮಾಡ ಬೇಕೋ, ನಮ್ಮಿಂದ ಏನು ಸಾಧ್ಯವೋ ಅದನ್ನು ಮಾಡು ವುದು. ಪ್ರತೀ ದಿನ ಕೆಲಸ ಕಾರ್ಯಗಳಲ್ಲಿ ಲವಲವಿಕೆ, ನನ್ನಿಂದ ಇದು ಸಾಧ್ಯ ಎಂಬ ಆಶಾಭಾವ, ಆತ್ಮವಿಶ್ವಾಸ ಹೊಂದಿ ತೊಡಗಿಸಿ ಕೊಳ್ಳುವುದು. ನಮ್ಮ ಆಲೋಚನೆಯು “ನಾನು ಇದನ್ನು ಮಾಡಬೇಕು’ ಮತ್ತು “ನಾನು ಇದನ್ನು ಮಾಡಬಾರದು’ ಎಂಬುದ ಕ್ಕಿಂತ “ನಾನು ಇದನ್ನು ಮಾಡಬಲ್ಲೆ’ ಮತ್ತು “ನಾನು ಇದನ್ನು ಮಾಡಲಾರೆ’ ಎಂಬ ಹಾಗಿ ದ್ದರೆ ಚೆನ್ನ. ಅದು ಸಕಾರಾತ್ಮಕವಾಗಿರುತ್ತದೆ ಮತ್ತು ಪ್ರಾಮಾಣಿಕವಾಗಿರುತ್ತದೆ.

ನಾವು ಯಾವಾಗಲೂ ಇನ್ನೊಬ್ಬರ ಜತೆಗೆ ನಮ್ಮನ್ನು ಗುರುತಿಸಿಕೊಳ್ಳುವಾಗ ಇವಳು ನನ್ನ ಹೆಂಡತಿ, ಈತ ನನ್ನ ಮಗ, ಇವರು ನನ್ನ ಅಪ್ಪ, ಇದು ನನ್ನ ಕುಟುಂಬ ಎಂದು ಹೇಳಿಕೊಳ್ಳುತ್ತೇವೆ. ಇದು ನನ್ನ ಮನೆ, ಇದು ನನ್ನ ಮನೆಯಿರುವ ರಸ್ತೆ, ಇದು ನನ್ನ ಗ್ರಾಮ, ಇದು ನನ್ನ ಊರು… ಹೀಗೆ ಇದು ಮುಂದುವರಿಯುತ್ತದೆ. ಇದರ ಆಧಾರದಲ್ಲಿ ನಾವು “ಇದನ್ನು ಮಾಡುತ್ತೇನೆ’, “ಇದನ್ನು ಮಾಡುವುದಿಲ್ಲ’ ಎಂದು ಬೇಲಿ ಹಾಕಿ ಕೊಳ್ಳುತ್ತೇವೆ. “ನನ್ನ ಮಗು ಗಾಯಗೊಂಡರೆ ಓಡಿಹೋಗಿ ರಕ್ಷಿಸುತ್ತೇನೆ, ಇನ್ಯಾರದೋ ಮಗುವಿಗೆ ಗಾಯವಾದರೆ ನನಗೇನಂತೆ’ ಎನ್ನುವುದು ಇಂತಹ ಚಿಂತನೆಯ ಮುಂದುವರಿದ ರೂಪ.

ನಿಜಕ್ಕಾದರೆ ಈ ಜಗತ್ತಿನಲ್ಲಿ ನಮಗೆ ಸೇರಿದವರು ಯಾರೂ ಇಲ್ಲ. ನಾವು -ನೀವು ಈ ಭೂಮಿಯಲ್ಲಿ ಜನ್ಮ ತಾಳಿದ ಹಾಗೆ ಅವರೂ ಬಂದವರು. ಮದುವೆಯಾದ ಬಳಿಕ ಈಕೆ ನನ್ನ ಹೆಂಡತಿ ಎನ್ನುತ್ತೇವೆ. ಅದು ನಾವೇ ಸೃಷ್ಟಿಸಿಕೊಂಡ ಸಂಬಂಧ. ಆ ಬಳಿಕ ಆ ವ್ಯಕ್ತಿಯಲ್ಲಿ ಪ್ರೀತಿ, ಮೋಹ ಬೆಳೆಯುತ್ತದೆ. ಸಂಸಾರದಲ್ಲಿ ವಿರಸ ಮೂಡಿದಾಗ ಪ್ರೀತಿ, ಮೋಹಗಳ ಸ್ಥಾನವನ್ನು ಹತಾಶೆ, ದ್ವೇಷ ಆಕ್ರಮಿಸಿ ಕೊಳ್ಳುತ್ತವೆ. ಇದು ಮನಸ್ಸಿನ ಭಾವನೆಗಳ ಆಟ.

ಕೆಲವೇ ಕೆಲವರನ್ನು, ಕೆಲವು ವಸ್ತುಗಳನ್ನು ನಮ್ಮವರು, ನಮ್ಮದು ಎಂದುಕೊಳ್ಳುವುದು ಇನ್ನುಳಿದವರು, ಇನ್ನುಳಿದವುಗಳ ಬಗ್ಗೆ ಪಕ್ಷಪಾತದ ಭಾವನೆಗಳು, ಆಲೋಚನೆಗಳು ರೂಪುಗೊಳ್ಳುವಂತೆ ಮಾಡುತ್ತವೆ. “ನಾನು ಇದನ್ನು ಮಾಡುತ್ತೇನೆ’ – “ಇದನ್ನು ಮಾಡುವುದಿಲ್ಲ’ ಎಂಬುದು ಹುಟ್ಟಿ ಕೊಳ್ಳುವುದು ಆಗಲೇ. ಇಂತಹ ಬೇಲಿಗಳನ್ನು ಹಾಕಿಕೊಂಡಾಗ ನಮ್ಮ ವ್ಯಕ್ತಿತ್ವ ಪೂರ್ಣ ಪ್ರಮಾಣದಲ್ಲಿ ಅರಳುವುದಿಲ್ಲ, ನಾವು ನಮ್ಮ ಪೂರ್ಣ ಸಾಮರ್ಥ್ಯದಲ್ಲಿ ಈ ಜೀವನದಲ್ಲಿ ತೊಡಗಿಕೊಳ್ಳುವುದಿಲ್ಲ.

“ವಸುಧೈವ ಕುಟುಂಬಕಮ್‌’ ಎಂಬೊಂದು ಆರ್ಷವಾಕ್ಯವಿದೆಯಲ್ಲ! ಅದರಂತೆ ನಡೆಯುವುದು ಶ್ರೇಷ್ಠವಾದ ಮಾರ್ಗ.

( ಸಾರ ಸಂಗ್ರಹ)

ಲೇಖನಗಳನ್ನು ಈ ವಿಳಾಸಕ್ಕೆ ಕಳುಹಿಸಿ
ಬರಹಗಾರರು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಲೇಖನಗಳನ್ನು ಛಿಛಜಿಠಿಃuಛಚyಚvಚnಜಿ.cಟಞಗೆ ಕಳುಹಿಸಬಹುದು.
ಸೂಕ್ತವಾದವುಗಳನ್ನು ಪ್ರಕಟಿಸಲಾಗುವುದು.

ಟಾಪ್ ನ್ಯೂಸ್

ನವಜಾತ ಶಿಶುವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಚರಂಡಿಗೆ ಎಸೆದು ಪರಾರಿ… ಪೊಲೀಸರಿಂದ ಶೋಧ

ನವಜಾತ ಶಿಶುವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಚರಂಡಿಗೆ ಎಸೆದ ಪಾಪಿಗಳು; ಪೊಲೀಸರಿಂದ ಶೋಧ

Jet Airways ಸಂಸ್ಥಾಪಕ ನರೇಶ್ ಗೋಯಲ್ ಪತ್ನಿ ಅನಿತಾ ಗೋಯಲ್ ಕ್ಯಾನ್ಸರ್‌ನಿಂದ ನಿಧನ

Jet Airways ಸಂಸ್ಥಾಪಕ ನರೇಶ್ ಗೋಯಲ್ ಪತ್ನಿ ಅನಿತಾ ಗೋಯಲ್ ಕ್ಯಾನ್ಸರ್‌ನಿಂದ ನಿಧನ

Lok Sabha Election: ರಾಹುಲ್‌ ಗಾಂಧಿ ಪಿಎಂ ಆಗುತ್ತಾರೆ: ಕೈ ನಾಯಕ

Lok Sabha Election: ರಾಹುಲ್‌ ಗಾಂಧಿ ಪಿಎಂ ಆಗುತ್ತಾರೆ: ಕೈ ನಾಯಕ

Lok Sabha Polls: ಪಂಜಾಬ್‌ನ ಖಡೂರ್‌ ಕ್ಷೇತ್ರದಿಂದ ಖಲಿಸ್ಥಾನ ಉಗ್ರ ಅಮೃತ್‌ ಸ್ಪರ್ಧೆ

Lok Sabha Polls: ಪಂಜಾಬ್‌ನ ಖಡೂರ್‌ ಕ್ಷೇತ್ರದಿಂದ ಖಲಿಸ್ಥಾನ ಉಗ್ರ ಅಮೃತ್‌ ಸ್ಪರ್ಧೆ

Mallikarjun Kharge: ಮಟನ್‌-ಚಿಕನ್‌ ಬಿಡಿ, ಅಭಿವೃದ್ಧಿ ಬಗ್ಗೆ ಮಾತಾಡಿ: ಮೋದಿಗೆ ಖರ್ಗೆ

Mallikarjun Kharge: ಮಟನ್‌-ಚಿಕನ್‌ ಬಿಡಿ, ಅಭಿವೃದ್ಧಿ ಬಗ್ಗೆ ಮಾತಾಡಿ: ಮೋದಿಗೆ ಖರ್ಗೆ

Slovak PM: ದುಷ್ಕರ್ಮಿಯಿಂದ ಸ್ಲೊವಾಕ್‌ ಪ್ರಧಾನಿ ರಾಬರ್ಟ್‌ಗೆ ಗುಂಡೇಟು…

Slovak PM: ದುಷ್ಕರ್ಮಿಯಿಂದ ಸ್ಲೊವಾಕ್‌ ಪ್ರಧಾನಿ ರಾಬರ್ಟ್‌ ಮೇಲೆ ಗುಂಡಿನ ದಾಳಿ…

Haji Karam Din: 102ನೇ ವಯಸ್ಸಿನಲ್ಲೂ ಕ್ರಿಕೆಟ್‌ ಆಟ!

Haji Karam Din: 102ನೇ ವಯಸ್ಸಿನಲ್ಲೂ ಕ್ರಿಕೆಟ್‌ ಆಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

ನವಜಾತ ಶಿಶುವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಚರಂಡಿಗೆ ಎಸೆದು ಪರಾರಿ… ಪೊಲೀಸರಿಂದ ಶೋಧ

ನವಜಾತ ಶಿಶುವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಚರಂಡಿಗೆ ಎಸೆದ ಪಾಪಿಗಳು; ಪೊಲೀಸರಿಂದ ಶೋಧ

Jet Airways ಸಂಸ್ಥಾಪಕ ನರೇಶ್ ಗೋಯಲ್ ಪತ್ನಿ ಅನಿತಾ ಗೋಯಲ್ ಕ್ಯಾನ್ಸರ್‌ನಿಂದ ನಿಧನ

Jet Airways ಸಂಸ್ಥಾಪಕ ನರೇಶ್ ಗೋಯಲ್ ಪತ್ನಿ ಅನಿತಾ ಗೋಯಲ್ ಕ್ಯಾನ್ಸರ್‌ನಿಂದ ನಿಧನ

Lok Sabha Election: ರಾಹುಲ್‌ ಗಾಂಧಿ ಪಿಎಂ ಆಗುತ್ತಾರೆ: ಕೈ ನಾಯಕ

Lok Sabha Election: ರಾಹುಲ್‌ ಗಾಂಧಿ ಪಿಎಂ ಆಗುತ್ತಾರೆ: ಕೈ ನಾಯಕ

Lok Sabha Polls: ಪಂಜಾಬ್‌ನ ಖಡೂರ್‌ ಕ್ಷೇತ್ರದಿಂದ ಖಲಿಸ್ಥಾನ ಉಗ್ರ ಅಮೃತ್‌ ಸ್ಪರ್ಧೆ

Lok Sabha Polls: ಪಂಜಾಬ್‌ನ ಖಡೂರ್‌ ಕ್ಷೇತ್ರದಿಂದ ಖಲಿಸ್ಥಾನ ಉಗ್ರ ಅಮೃತ್‌ ಸ್ಪರ್ಧೆ

Mallikarjun Kharge: ಮಟನ್‌-ಚಿಕನ್‌ ಬಿಡಿ, ಅಭಿವೃದ್ಧಿ ಬಗ್ಗೆ ಮಾತಾಡಿ: ಮೋದಿಗೆ ಖರ್ಗೆ

Mallikarjun Kharge: ಮಟನ್‌-ಚಿಕನ್‌ ಬಿಡಿ, ಅಭಿವೃದ್ಧಿ ಬಗ್ಗೆ ಮಾತಾಡಿ: ಮೋದಿಗೆ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.