ಬಿಜೆಪಿ-ಎಐಎಡಿಎಂಕೆ ಸಮರ; ಪ್ರಮುಖ ಮುಖಂಡರ ಬಂಧನ, ಬಿಡುಗಡೆ
Team Udayavani, Nov 7, 2020, 1:15 AM IST
ಚೆನ್ನೈ: ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ತಮಿಳುನಾಡಿನಲ್ಲಿ “ಮಿತ್ರ’ ಪಕ್ಷಗಳ ನಡುವೆ ಯಾತ್ರೆ ಸಮರ ಏರ್ಪಟ್ಟಿದೆ.
ಪೊಲೀಸರ ಅನುಮತಿ ಇಲ್ಲದೆಯೇ ಯಾತ್ರೆ ಆರಂಭಕ್ಕೆ ಮುಂದಾದ ಬಿಜೆಪಿ ರಾಜ್ಯಾಧ್ಯಕ್ಷ ಎಲ್.ಮುರುಗನ್, ರಾಜ್ಯ ಉಸ್ತುವಾರಿ ಸಿ.ಟಿ.ರವಿ ಸೇರಿದಂತೆ 100ಕ್ಕೂ ಹೆಚ್ಚು ನಾಯಕರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಲಾಗಿದೆ.
ಗುರುವಾರವಷ್ಟೇ ಮದ್ರಾಸ್ ಹೈಕೋರ್ಟ್ಗೆ ಮಾಹಿತಿ ನೀಡಿದ್ದ ತಮಿಳುನಾಡು ಸರಕಾರ, ಕೊರೊನಾ ಸೋಂಕು ಕಾರಣದಿಂದಾಗಿ ವೆಟ್ರಿ ವೇಲ್ ಯಾತ್ರೆಗೆ ಅನುಮತಿ ನೀಡಲಾಗಿಲ್ಲ ಎಂದಿತ್ತು. ಆದರೆ, ಶುಕ್ರವಾರ ಬೆಳಗ್ಗೆ ಎಲ್.ಮುರುಗನ್, ಸಿ.ಟಿ.ರವಿ ಮತ್ತು ಅಣ್ಣಾಮಲೈ ನೇತೃತ್ವದಲ್ಲಿ ತಿರುವಲ್ಲೂರು ಜಿಲ್ಲೆಯ ಥಿರುತ್ತಾನಿ ಮುರುಗನ್ ದೇವಾಲಯದಿಂದ ಯಾತ್ರೆ ಆರಂಭಿಸಿತು. ಚೆನ್ನೈ-ತಿರುವಲ್ಲೂರು ಗಡಿಯಲ್ಲಿ ಈ ಯಾತ್ರೆ ತಡೆದ ಪೊಲೀಸರು, ಮುರುಗನ್ ಮತ್ತು ಕೆಲವೇ ಮಂದಿ ಕಾರ್ಯಕರ್ತರಿಗೆ ಹೋಗಲು ಅವಕಾಶ ಮಾಡಿಕೊಟ್ಟಿದ್ದರು. ಬಳಿಕ ಅನುಮತಿ ಇಲ್ಲದಿದ್ದರೂ ಯಾತ್ರೆ ನಡೆಸಿದ ಕಾರಣಕ್ಕಾಗಿ ಬಂಧಿಸಿದರು.
ಮುರುಗನ್ ದೇವರನ್ನು ಪೂಜಿಸುವುದು ಅಪರಾಧವೇ? ದೇಗುಲಗಳ ನಾಡಾದ ತಮಿಳುನಾಡಿನಲ್ಲಿ ಇಂಥ ಘಟನೆಯಾಗಬಾರದಿತ್ತು. ತಮಿಳು ಜನರ ಸೇವೆ ಮುಂದುವರಿಸುತ್ತೇವೆ.
– ಸಿ.ಟಿ.ರವಿ ಬಿಜೆಪಿ ಪ್ರ. ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ
Road Mishap; ಬೈಕ್-ಪಿಕ್ ಅಪ್ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು
Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ