ಪಕ್ಷಿ ವೈವಿಧ್ಯ ಅಧ್ಯಯನ ಶಿಬಿರ

ಜಿಲ್ಲೆಯ ಪಕ್ಷಿ ಸಂತತಿಗಳ ಉಳಿವಿಗೆ ನೀರು-ಕಾಡು ಅತ್ಯವಶ್ಯ: ಅನಂತ ಹೆಗಡೆ ಅಶೀಸರ

Team Udayavani, Nov 14, 2020, 4:33 PM IST

uk-tdy2

ಶಿರಸಿ: ಜಿಲ್ಲೆಯ ಪಕ್ಷಿ ಸಂತತಿ ಉಳಿವಿಗೆ ಜಲ, ವನ ಸಮೃದ್ಧಿ ಅತ್ಯವಶ್ಯ ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷಅನಂತ ಹೆಗಡೆ ಅಶೀಸರ ಪ್ರತಿಪಾದಿಸಿದರು.

ಅವರು ಪಕ್ಷಿ ತಜ್ಞರು, ವನ್ಯಜೀವಿ ಕಾರ್ಯಕರ್ತರ ತಂಡ ತಾಲೂಕಿನ ಕೈಲಾಸಗುಡ್ಡದಿಂದ ಗುಡವಿ ಪಕ್ಷಿಧಾಮದವರೆಗೆ ಅಧ್ಯಯನ ಪ್ರವಾಸ ನಡೆಸಿದ ವೇಳೆ ಮಾತನಾಡಿದರು.

ಜಿಲ್ಲೆ ಪಕ್ಷಿ ಸಮೃದ್ಧಿ ಹೊಂದಿದೆ. ಅತ್ತೀವೇರಿ ಪಕ್ಷಿಧಾಮವಿದೆ. ಸೋಂದಾ ಮುಂಡಿಗೆ ಕೆರೆಗೆ ಪಕ್ಷಿಧಾಮ ಪಟ್ಟ ನೀಡಲಾಗುತ್ತಿದೆ. ಶಾಲ್ಮಲಾ, ಬೇಡ್ತಿ, ಸಂರಕ್ಷಿತ ಪ್ರದೇಶ ನಿರ್ವಹಣಾ ಸಮೀತಿ ರಚನೆ ಆಗಬೇಕು. ಬೇಡ್ತಿ ಅಘನಾಶಿನಿ ಕಣಿವೆಗಳ ನಿರ್ವಹಣಾ ಯೋಜನೆ ತಯಾರಿಸಬೇಕು. ಪಕ್ಷಿ ಧಾಮಗಳ ನಿರ್ವಹಣೆಗೆ ಆದ್ಯತೆ ನೀಡಬೇಕು. ಪರಿಸರ ಪ್ರವಾಸೋದ್ಯಮದಲ್ಲಿ ಪಕ್ಷಿ ವೀಕ್ಷಣೆಗೆ ಮಹತ್ವ ಸಿಗಬೇಕು. ಪಕ್ಷಿಗಳ ಆವಾಸ ಸ್ಥಾನ ಕೆರೆ, ಕಾನು, ದೇವರಕಾನು, ಜಡ್ಡಿಗಳ ಉಳಿವು ಮುಖ್ಯ ಎಂದರು. ಉಪರಣ್ಯ ಸಂರಕ್ಷಣಾಧಿಕಾರಿ ಎಸ್‌.ಜಿ. ಹೆಗಡೆ ವಿದ್ಯಾರ್ಥಿ ದೆಸೆಯಲ್ಲಿ ಪಕ್ಷಿವೀಕ್ಷಣೆಯು ಒಳ್ಳೆಯ ಹವ್ಯಾಸ ಎಂದರು. ಅರಣ್ಯ ಕಾಲೇಜು ಪ್ರಾಧ್ಯಾಪಕ ಪ್ರೊ| ಶ್ರೀಧರ ಭಟ್‌ ಪಕ್ಷಿ ಅಧ್ಯಯನದಲ್ಲಿ ಅರಣ್ಯ ಕಾಲೇಜು ವಿದ್ಯಾರ್ಥಿಗಳು ತೊಡಗಿದ್ದಾರೆ. ಜೀವವೈವಿಧ್ಯ ದಾಖಲಾತಿ ವರದಿಗಳಲ್ಲಿ ಪಕ್ಷಿ ವೈವಿಧ್ಯತೆ ಸೇರಿದೆ ಎಂದರು.

ವನ್ಯಜೀವಿ ತಜ್ಞ ಬಾಲಚಂದ್ರ ಸಾಯಿಮನೆ, ದೇವರಕಾಡುಗಳು ಪಕ್ಷಿಗಳ ಉಳಿವಿಗೆ ಮಹತ್ವದ ಕೊಡುಗೆನೀಡುತ್ತವೆ ಎಂದು ತಿಳಿಸಿದರು. ಪುಣೆಯಲ್ಲಿ ಅರ್ಥಶಾಸ್ತ್ರ ಸಲಹೆಗಾರ ವನಿತಾ ಅಶೀಸರ ಹಳ್ಳಿಯ ಹಣ್ಣು, ಹೂ ಗಿಡಗಳ ಪರಿಸರದಲ್ಲಿ ಅಪಾರ ಪಕ್ಷಿಗಳನ್ನು ಗುರುತಿಸಿದ್ದೇವೆ ಎಂದರು. 7ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಪೂಜಾ ಕೋವಿಡ್ ರಜೆಯಲ್ಲಿ ಪಕ್ಷಿ ವೀಕ್ಷಣೆ ಮಾಡುವ ಹವ್ಯಾಸ ಬೆಳೆಸಿಕೊಂಡೆ ಎಂದು ತಿಳಿಸಿದಳು.

ಪಕ್ಷಿ ಸಮೀಕ್ಷಕ ಓಂಕಾರ್‌ ಪೈ, ಅತ್ತೀವೇರಿ ಮಹೇಶ್‌, ವಲಯ ಅಧಿಕಾರಿಗಳಾದ ಬಸವರಾಜ, ಮಂಜುನಾಥ, ಸೋಂದಾದ ರತ್ನಾಕರ ಬಾಡಲಕೊಪ್ಪ, ಮುಂತಾದವರು ತಮ್ಮ ಅನುಭವ ಹಂಚಿಕೊಂಡರು.

ವಿಎಫ್‌ಸಿ ಅಧ್ಯಕ್ಷ ವಿಶ್ವನಾಥ ಬುಗಡಿಮನೆ ಅಧ್ಯಕ್ಷತೆ ವಹಿಸಿದ್ದರು. ಗಣಪತಿ ಬಿಸಲಕೊಪ್ಪ ಸ್ವಾಗತಿಸಿದರು. ಇದೇ ವೇಳೆ ಅಗಸಾಲ ಬೊಮ್ಮನಳ್ಳಿ ಗ್ರಾಮ ಅರಣ್ಯ ಸಮೀತಿ, ಅರಣ್ಯ ಇಲಾಖೆ, ವೃಕ್ಷಲಕ್ಷ ಆಂದೋಲನ ಇವರು ಏರ್ಪಡಿಸಿದ ಪಕ್ಷಿ ಪ್ರವಾಸ ಕೈಲಾಸ ಗುಡ್ಡದ ಬುಡದ ಬೊಮ್ಮನಳ್ಳಿ, ಅಶೀಸರ, ಕಾಳಿಸರ, ಗಡಿಗೆಹೊಳೆ, ಅಡವಿಗಲ್ಲದ ಮನೆ ಬೆಟ್ಟ, ಅರಣ್ಯಗಳಲ್ಲಿ ಪಕ್ಷಿ ವೀಕ್ಷಣೆ ಮಾಡಿದ ಬಳಿಕ 42 ಜಾತಿಯ ವಿವಿಧ ಪಕ್ಷಿ ಸಂಕುಲಗಳ ಆವಾಸವನ್ನು ಗುರುತಿಸಲಾಯಿತು. ನಂತರ ಗುಡ್ನಾಪುರ ಕೆರೆ, ಬನವಾಸಿ, ಸಮೀಪದ ಕೆರೆ ಪರಿಸರದಲ್ಲಿ ಪಕ್ಷಿ ವೀಕ್ಷಣೆ ಮಾಡಿದ ತಂಡ ಗುಡವಿ ಪಕ್ಷಿ ಧಾಮಕ್ಕೆ ಭೇಟಿ ನೀಡಿತು.

ಟಾಪ್ ನ್ಯೂಸ್

1-wqqewqeq

Hubli; ಜನರಲ್ಲಿ ಪೊಲೀಸರ ಬಗ್ಗೆ ನಂಬಿಕೆ ಹೋಗಿದೆ: ಎಡಿಜಿಪಿ ಹಿತೇಂದ್ರ

1-qweeqw

Kundapura; ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿಯೂ ವಿಧಿವಶ!

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

13-doctor

Health: ಸದಾ ಎಚ್ಚರದಿಂದಿರಿ: ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ

Basavakalyana; ಬ್ಯಾಂಕ್ ಗೆ ಜಮೆ ಮಾಡಲು ತಂದಿದ್ದ 1.37 ಲಕ್ಷ ರೂ‌ ಎಗರಿಸಿದ ಖದೀಮ

Basavakalyana; ಬ್ಯಾಂಕ್ ಗೆ ಜಮೆ ಮಾಡಲು ತಂದಿದ್ದ 1.37 ಲಕ್ಷ ರೂ‌ ಎಗರಿಸಿದ ಖದೀಮ

12-

Heat Weather: ಹಬೆಯಾಡುತ್ತಿರುವ ವಸುಂಧರೆ

11-candle

UV Fusion: ಆಯಸ್ಸು ಅಳಿಯುವ ಮುನ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-sirsi

Sirsi: ಬಾರದ ಹೈನು ಪ್ರೋತ್ಸಾಹ; ಶೀಘ್ರ ಬಿಡುಗಡೆಗೆ ಒತ್ತಾಯ

Minchu

Banavasi ; ಕ್ರಿಕೆಟ್ ಆಡುತ್ತಿದ್ದ ಬಾಲಕ ಸಿಡಿಲಿಗೆ ಬಲಿ

1-wqewqwqe

Bhatkal;ವೆಂಕಟಾಪುರ ನದಿಯಲ್ಲಿ ಮುಳುಗಿ ಇಬ್ಬರು ಮೃತ್ಯು

1-qwew-eqw-wq

Yellapur; ಶಾಲೆಯ ಮೇಲೆ ಬಿದ್ದ ಬೃಹತ್ ಮರ

Ankola: ಅಪ್ರಾಪ್ತ ಬಾಲಕಿಯ ಮೇಲೆ ವಯೋವೃದ್ಧನಿಂದ ಲೈಂಗಿಕ ದೌರ್ಜನ್ಯ; ಪ್ರಕರಣ ದಾಖಲು

Ankola: ಅಪ್ರಾಪ್ತ ಬಾಲಕಿಯ ಮೇಲೆ ವಯೋವೃದ್ಧನಿಂದ ಲೈಂಗಿಕ ದೌರ್ಜನ್ಯ; ಪ್ರಕರಣ ದಾಖಲು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-qweqwe

Kushtagi: ಸಿಡಿಲಿಗೆ ಬಿತ್ತನೆ ಕಾರ್ಯ ನಿರತ ರೈತ ಬಲಿ

1-wqqewqeq

Hubli; ಜನರಲ್ಲಿ ಪೊಲೀಸರ ಬಗ್ಗೆ ನಂಬಿಕೆ ಹೋಗಿದೆ: ಎಡಿಜಿಪಿ ಹಿತೇಂದ್ರ

1-qweeqw

Kundapura; ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿಯೂ ವಿಧಿವಶ!

1-aaa

Kaup: ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

Davanagere; ಭಾರೀ ಮಳೆಗೆ ನೆಲಕಚ್ಚಿದ ಭತ್ತದ ಬೆಳೆ

Davanagere; ಭಾರೀ ಮಳೆಗೆ ನೆಲಕಚ್ಚಿದ ಭತ್ತದ ಬೆಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.