4 ಲಕ್ಷ ರೂ. ನಗದು ಹೊಂದಿದ್ದ ಬ್ಯಾಗ್ ಎತ್ತಿಕೊಂಡು ಮರವೇರಿದ ಕಪಿ…ಮುಂದೇನಾಯ್ತು?
ರಿಜಿಸ್ಟ್ರಾರ್(ನೋಂದಣಿ ಕಚೇರಿ) ಕಚೇರಿ ಹೊರಗಿನ ಮರವೇರಿ ನೋಟುಗಳನ್ನು ಎಸೆದಿತ್ತು
Team Udayavani, Dec 23, 2020, 2:34 PM IST
ಸೀತಾಪುರ್(ಉತ್ತರಪ್ರದೇಶ): ಕಪಿ ಚೇಷ್ಟೆ ಒಂದೆರಡಲ್ಲ ಎಂಬುದಕ್ಕೆ ಉತ್ತರಪ್ರದೇಶದ ಸೀತಾಪುರ್ ಎಂಬಲ್ಲಿ ನಡೆದ ಈ ಘಟನೆಯೂ ಸಾಕ್ಷಿಯಾಗಿದೆ. ದಿಢೀರನೆ ಬಂದು ಹಣ ತುಂಬಿದ್ದ ಬ್ಯಾಗ್ ಅನ್ನು ಎತ್ತಿಕೊಂಡು ಹೋದ ಕಪಿ ರಿಜಿಸ್ಟ್ರಾರ್(ನೋಂದಣಿ ಕಚೇರಿ) ಕಚೇರಿ ಹೊರಗಿನ ಮರವೇರಿ ನೋಟುಗಳನ್ನು ಎಸೆದಿತ್ತು.!
ನೋಡ, ನೋಡುತ್ತಿದ್ದಂತೆಯೇ ಲಕ್ಷಾಂತರ ರೂಪಾಯಿ ನೋಟು ಗಾಳಿಯಲ್ಲಿ ಹಾರಾಡುತ್ತ ನೋಂದಣಿ ಕಚೇರಿ ಸುತ್ತಮುತ್ತ ಬೀಳುತ್ತಿರುವುದನ್ನು ಕಂಡು ಏನಿದು ಎಂದು ಕುತೂಹಲ, ಅಚ್ಚರಿಯಿಂದ ಕಂಡವರಿಗೆ ಕಪಿ ಚೇಷ್ಟೆ ಬೆಳಕಿಗೆ ಬಂದಿತ್ತು.
ಸೀತಾಪುರ್ ನ ವಿಕಾಸ್ ಭವನದ ರಿಜಿಸ್ಟ್ರಿ ಕಚೇರಿ ಹೊರಭಾಗದಲ್ಲಿ ಹಿರಿಯ ವ್ಯಕ್ತಿಯೊಬ್ಬರು 4 ಲಕ್ಷ ರೂಪಾಯಿ ಹೊಂದಿದ್ದ ಬ್ಯಾಗ್ ಅನ್ನು ಪಕ್ಕದಲ್ಲಿಟ್ಟುಕೊಂಡು ಕುಳಿತಿದ್ದರು. ಆಗ ದಿಢೀರ್ ಆಗಿ ಬಂದ ಮಂಗ ಬ್ಯಾಗ್ ಎತ್ತಿಕೊಂಡು ಮರ ಏರಿ ಕುಳಿತುಕೊಂಡು ಬಿಟ್ಟಿತ್ತು. ನಂತರ ಸುಮಾರು 10, 12 ಸಾವಿರ ರೂಪಾಯಿಗಳಷ್ಟು ನೋಟುಗಳನ್ನು ಕೆಳಗೆ ಎಸೆದಿತ್ತು ಎಂದು ವರದಿ ವಿವರಿಸಿದೆ.
ಪುಕ್ಕಟ್ಟೆ ಸಿಕ್ಕ ಹಣ ಎಂದು ಗುಂಪುಗೂಡಿದ ಜನ ಹಣವನ್ನು ತಮ್ಮ ಜೇಬಿಗೆ ಹಾಕಿಕೊಂಡಿದ್ದು, ಕೊನೆಗೂ ಏನೆಲ್ಲಾ ಪ್ರಯತ್ನ ಮಾಡಿದ ನಂತರ ಮಂಗ ಬ್ಯಾಗ್ ಅನ್ನು ಕೆಳಕ್ಕೆ ಎಸೆದಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್
Adani-Ambaniಯಿಂದ ಎಷ್ಟು ಕಪ್ಪು ಹಣ ಪಡೆದಿದ್ದೀರಿ? ರಾಹುಲ್ ವಿರುದ್ಧ ಮೋದಿ ವಾಗ್ದಾಳಿ
Heavy Rain: ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್ಮೆಂಟ್ನ ಗೋಡೆ ಕುಸಿದು 7 ಮಂದಿ ಸಾವು
ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು
Bhupal: ʼಭೂಪೇಂದ್ರ ಜೋಗಿʼ ರೀಲ್ಸ್ ಖ್ಯಾತಿಯ ವ್ಯಕ್ತಿಗೆ ಅಪರಿಚಿತರಿಂದ ಚಾಕುವಿನಿಂದ ಹಲ್ಲೆ
MUST WATCH
ಹೊಸ ಸೇರ್ಪಡೆ
ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼKGF -3ʼ.. ಬಿಗ್ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್
Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್
ತೆಕ್ಕಟ್ಟೆ: ಅಪಾಯದಲ್ಲಿದ್ದ ನವಿಲಿನ ರಕ್ಷಣೆ
Tulu Movie: ಕತಾರ್ ನಲ್ಲಿ ವಿಜೃಂಭಿಸಿದ ತುಳು ಚಿತ್ರ “ತುಡರ್”
Bandipura ಅರಣ್ಯಕ್ಕೆ ಬೆಂಕಿ ಹಚ್ಚಿದ್ದ ಪ್ರಕರಣ: ಅರಣ್ಯಾಧಿಕಾರಿಗಳಿಂದ ಓರ್ವ ಆರೋಪಿಯ ಬಂಧನ