2021ರಲ್ಲಿ ನಾಲ್ಕು ಗ್ರಹಣಗಳು! ಆದರೆ ನಮಗೆ ಒಂದು ಗ್ರಹಣವೂ ಕಾಣಿಸದ ವರ್ಷ


Team Udayavani, Dec 28, 2020, 7:30 AM IST

2021ರಲ್ಲಿ ನಾಲ್ಕು ಗ್ರಹಣಗಳು! ನಮಗೆ ಒಂದು ಗ್ರಹಣವೂ ಕಾಣಿಸದ ವರ್ಷ

ಉಡುಪಿ: ಕರಾವಳಿಗರ ಸಹಿತ ದ. ಭಾರತೀಯರಿಗೆ ಒಂದು ಗ್ರಹಣವೂ ಗೋಚರಿಸದ ವರ್ಷವಾಗಿ 2021 ದಾಖಲಾಗಲಿದೆ.
ಹೊಸ ವರ್ಷದಲ್ಲಿ ನಾಲ್ಕು ಗ್ರಹಣಗಳು ಸಂಭವಿಸಲಿವೆ. ಇವುಗಳಲ್ಲಿ ಎರಡು ಚಂದ್ರ ಗ್ರಹಣಗಳು, ಇನ್ನೆರಡು ಸೂರ್ಯಗ್ರಹಣಗಳು. ಮೇ 26ರಂದು ಖಗ್ರಾಸ ಚಂದ್ರಗ್ರಹಣ, ನ. 19ರಂದು ಪಾರ್ಶ್ವ ಚಂದ್ರಗ್ರಹಣ, ಜೂ. 10ರಂದು ಕಂಕಣ ಸೂರ್ಯ ಗ್ರಹಣ ಮತ್ತು ಡಿ. 4ರಂದು ಖಗ್ರಾಸ ಸೂರ್ಯ ಗ್ರಹಣಗಳು ಸಂಭವಿಸಲಿವೆ. ಆದರೆ ಇವ್ಯಾವುವೂ ದಕ್ಷಿಣ ಕನ್ನಡ, ಉಡುಪಿ ಸಹಿತ ಕರಾವಳಿ ಹಾಗೂ ದಕ್ಷಿಣ ಭಾರತೀಯರಿಗೆ ಗೋಚರಿಸುವುದಿಲ್ಲ.

ಮೇ 26ರ ಖಗ್ರಾಸ ಚಂದ್ರಗ್ರಹಣ ವನ್ನು ನೋಡುವ ಅವಕಾಶ ಪಶ್ಚಿಮ ಬಂಗಾಲ, ಒಡಿಶಾ ಮತ್ತಿತರ ಈಶಾನ್ಯ ಭಾರತದ ರಾಜ್ಯಗಳ ಖಗೋಳಾಸಕ್ತರಿಗೆ ಸಿಗಲಿದೆ. ನ. 19ರ ಪಾರ್ಶ್ವ ಚಂದ್ರಗ್ರಹಣವು ಅಸ್ಸಾಂ, ಅರುಣಾಚಲ ಪ್ರದೇಶದವರಿಗೆ ಸ್ವಲ್ಪ ಕಾಲ ಮಾತ್ರ ಕಾಣಿಸಲಿದೆ.

ಬುಧ ಗ್ರಹ ವೀಕ್ಷಣೆ ಬಲು ಕಷ್ಟ
ವರ್ಷದಲ್ಲಿ ಹೆಚ್ಚೆಂದರೆ ಬರೇ ಆರು ಬಾರಿ, ಒಂದು ವಾರ ಕಾಲ ಕಾಣಿಸುವ ಬುಧ ಗ್ರಹ ಈ ವರ್ಷ ಜ. 24, ಮೇ 17, ಸೆ. 14ರಂದು ಸಂಜೆ ಸೂರ್ಯಾಸ್ತವಾದ ಕೆಲವೇ ನಿಮಿಷಗಳ ಕಾಲ ಪಶ್ಚಿಮ ಆಕಾಶದಲ್ಲಿ ಕಂಡರೆ, ಮಾ. 6, ಜು. 4, ಅ. 25ರ ಬೆಳಗಿನ ಜಾವ ಪೂರ್ವ ಆಕಾಶದಲ್ಲಿ ಕಾಣಿಸಲಿದೆ.

ಗುರು, ಶನಿ ದರ್ಶನ
ಪ್ರತೀ ವರ್ಷ ತಲಾ ಒಮ್ಮೆ ಗುರು ಮತ್ತು ಶನಿಗ್ರಹ ಗಳು ಚೆಂದವಾಗಿ ದೊಡ್ಡದಾಗಿ ಕಾಣಿಸುತ್ತವೆ. 2021ರ ಆ. 2ರಂದು ಶನಿ ಗ್ರಹ (Saturn opposition) ಮತ್ತು ಆ. 20ಂದು ಗುರುಗ್ರಹ (Jupiter opposition) ರಾತ್ರಿಯಿಡೀ ಕಾಣಲಿವೆ. ಆಗಸ್ಟ್‌ ತಿಂಗಳಲ್ಲಿ ಈ ಎರಡೂ ಗ್ರಹಗಳು ಅದ್ಭುತವಾಗಿ ಕಾಣಿಸಲಿವೆ.

ಎ. 27ರಂದು ಮಂಗಳ ಗ್ರಹಕ್ಕೆ ಚಂದ್ರನು ಅಡ್ಡಲಾಗಿ ಬಂದು ಮರೆಮಾಚುವ ಕೌತುಕ (lunar occultation of Mars) ನಡೆಯಲಿದೆ.

ಫೆಬ್ರವರಿ ಮೊದಲ ವಾರದ ವರೆಗೆ ಬೆಳಗಿನ ಜಾವ ಕಾಣುವ ಶುಕ್ರ ಗ್ರಹ ಅನಂತರ ಎ. 21ರಿಂದ ಇಡೀ ವರ್ಷ ಪಶ್ಚಿಮ ಆಕಾಶದಲ್ಲಿ ಸಂಜೆ ಗೋಚರಿಸಲಿದೆ.

ಸುಮಾರು 584 ದಿನಗಳಿಗೊಮ್ಮೆ ಸಂಜೆಯ ಆಕಾಶದಲ್ಲಿ ಚೆಂದವಾಗಿ ದೊಡ್ಡದಾಗಿ ಕಾಣಿಸುವ ಶುಕ್ರ ಗ್ರಹವು ಅ. 29ರಂದು 47 ಡಿಗ್ರಿ ಕೋನದಲ್ಲಿ ಪಶ್ಚಿಮ ಆಕಾಶದಲ್ಲಿ ಕಾಣಿಸಲಿದೆ.

ಸೂರ್ಯನಿಗೆ ಹತ್ತಿರ, ದೂರ
ಭೂಮಿಯು ಸೂರ್ಯನ ಸುತ್ತ ದೀರ್ಘ‌ ವೃತ್ತದಲ್ಲಿ ಸುತ್ತುತ್ತದೆ. ಹೀಗಾಗಿ ವರ್ಷಕ್ಕೆ ತಲಾ ಒಂದು ಬಾರಿ ಸೂರ್ಯನಿಗೆ ಅತೀ ಹತ್ತಿರ ಮತ್ತು ಅತೀ ದೂರದಲ್ಲಿ ಇರುತ್ತದೆ. 2012ರಲ್ಲಿ ಜ.2ರಂದು ಸೂರ್ಯನಿಗೆ ಅತೀ ಸಮೀಪ (ಪೆರಿಜಿ)ದಲ್ಲಿದ್ದರೆ, ಜು. 6ರಂದು ಅತೀ ದೂರ(ಅಪೊಜಿ) ದಲ್ಲಿರುತ್ತದೆ ಎನ್ನುತ್ತಾರೆ ಉಡುಪಿಯ ಖಗೋಳಾಸಕ್ತ, ಪಿಪಿಸಿ ಕಾಲೇಜಿನ ನಿವೃತ್ತ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಎ.ಪಿ. ಭಟ್‌.

15 ಬಾರಿ ಉಲ್ಕಾಪಾತ
ಪ್ರಮುಖ
ಎ. 4: ಕ್ವಾಡ್ರಂಟಿಡ್‌ ಉಲ್ಕಾಪಾತ ತಾಸಿಗೆ ಸರಿಸುಮಾರು 120 ಉಲ್ಕೆ ಪತನ
ಆ. 12: ಪರ್ಸಿಡ್‌ ಉಲ್ಕಾಪಾತ ತಾಸಿಗೆ 150ರಷ್ಟು ಉಲ್ಕೆ ಪತನ
ಡಿ. 14: ಜೆಮಿನಿಡ್‌ ಉಲ್ಕಾಪಾತ ತಾಸಿಗೆ 50ರಷ್ಟು ಉಲ್ಕೆ ಪತನ

ಟಾಪ್ ನ್ಯೂಸ್

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.