ಮುಖ ಗಾಯಗೊಂಡ ರೋಗಿಯ ಆರಂಭಿಕ ನಿಭಾವಣೆ


Team Udayavani, Jan 3, 2021, 12:56 PM IST

ಮುಖ ಗಾಯಗೊಂಡ ರೋಗಿಯ ಆರಂಭಿಕ ನಿಭಾವಣೆ

ಸಾಂದರ್ಭಿಕ ಚಿತ್ರ

ಮ್ಯಾಕ್ಸಿಲೊಫೇಶಿಯಲ್‌ ಗಾಯಗಳಿಂದ ಸಮಸ್ಯೆಗಳು ಉಂಟಾಗದಂತೆ ಮತ್ತು ಕೆಲವು ಸಂದರ್ಭಗಳಲ್ಲಿ ಪ್ರಾಣವನ್ನು  ಉಳಿಸುವುದಕ್ಕೆ ಕೂಡ ಜನಸಾಮಾನ್ಯರು ಏನು ಮಾಡಬಹುದು ಎಂಬ ಮಾಹಿತಿ ಈ ಲೇಖನದಲ್ಲಿದೆ.

ಕೆಟ್ಟದ್ದು ಮುನ್ಸೂಚನೆ ಕೊಟ್ಟು ಬರುವುದಿಲ್ಲ. ನಾವು ಅವುಗಳನ್ನು ತಡೆಯಲು ಸಾಧ್ಯವಿಲ್ಲ. ಆದರೆ ಇನ್ನಷ್ಟು ಸಮಸ್ಯೆ ಉಂಟಾಗುವುದನ್ನು ತಡೆಯಲು ಅವುಗಳನ್ನು ಸಮರ್ಥವಾಗಿ ಎದುರಿಸಲು ನಾವು ಸನ್ನದ್ಧರಾಗಬಹುದು. ಎಲ್ಲೆಂದರಲ್ಲಿ ರಸ್ತೆ ಅಪಘಾತಗಳು ಸಂಭವಿಸುತ್ತಿರುವುದರಿಂದ ಮ್ಯಾಕ್ಸಿಲೊಫೇಶಿಯಲ್‌ ಗಾಯಗಳು ಇಂದು ಅತಿ ಸಾಮಾನ್ಯವಾಗಿವೆ. ರಸ್ತೆ ಅವಘಡಗಳಲ್ಲಿ ಮ್ಯಾಕ್ಸಿಲೊಫೇಶಿಯಲ್‌ ಗಾಯ ಉಂಟಾಗುವುದು ಇಂದು ತೀರಾ ಸಾಮಾನ್ಯವಾಗಿದೆ. ಕಲಹಗಳು, ಕ್ರೀಡಾ ಸಂಬಂಧಿ ಗಾಯಗಳಲ್ಲಿ ಕೂಡ ಮ್ಯಾಕ್ಸಿಲೊಫೇಶಿಯಲ್‌ ಗಾಯ ಉಂಟಾಗುತ್ತವೆ. ಇವೆಲ್ಲವುಗಳ ಪೈಕಿ ಅಪಘಾತಗಳಿಂದ ಅತಿ ಹೆಚ್ಚು ಮ್ಯಾಕ್ಸಿಲೊಫೇಶಿಯಲ್‌ ಗಾಯಗಳು ಉಂಟಾಗುತ್ತವೆ.

 

  • ಕುತ್ತಿಗೆಯನ್ನು ಎಚ್ಚರಿಕೆಯಿಂದ ನಿಭಾಯಿಸಬೇಕು: ಯಾವುದೇ ವ್ಯಕ್ತಿಯ ಮುಖಕ್ಕೆ ಗಾಯವುಂಟಾದಾಗ ಅಂತಹ ವ್ಯಕ್ತಿಯ ಬೆನ್ನುಹುರಿಗೂ ಗಾಯವಾಗಿರಬಹುದು ಎಂದು ಶಂಕಿಸಿ ಮುನ್ನಡೆಯಬೇಕು. ಇಂತಹ ಗಾಯಾಳುಗಳನ್ನು ಕರೆದೊಯ್ಯುವಾಗ ಕುತ್ತಿಗೆ ತಿರುಗದಂತೆ, ತಿರುಚಿಕೊಳ್ಳದಂತೆ ಎಚ್ಚರಿಕೆಯಿಂದ ಆಧರಿಸಿ ನೋಡಿಕೊಳ್ಳಬೇಕು. ಇಲ್ಲವಾದರೆ ಈಗಾಗಲೇ ಇರುವ ಗಾಯ ಉಲ್ಬಣಿಸಬಹುದು.
  • ರಕ್ತಸ್ರಾವದ ನಿರ್ವಹಣೆ: ಮುಖದ ಮೇಲೆ ಯಾವುದೇ ಗಾಯ ಉಂಟಾಗಿದ್ದು, ರಕ್ತಸ್ರಾವ ಆಗುತ್ತಿದ್ದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಒಯ್ಯುವ ಸಂದರ್ಭದಲ್ಲಿ ಗಾಯದಿಂದ ಆಗುತ್ತಿರುವ ರಕ್ತಸ್ರಾವವನ್ನು ನಿಯಂತ್ರಿಸಲು ಪ್ರಯತ್ನಿಸಬೇಕು. ಶುಭ್ರ ಬಟ್ಟೆ ಅಥವಾ ಗಾಸ್‌ನಿಂದ ಗಾಯವನ್ನು ಒತ್ತಿ ಹಿಡಿಯುವುದರ ಮೂಲಕ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಹೆಚ್ಚು ರಕ್ತ ನಷ್ಟವಾಗುವುದನ್ನು ತಡೆಯಬಹುದು.
  • ಅವಘಡದಿಂದಾಗಿ ಹಲ್ಲು ಹೊರಕ್ಕೆ ಬಂದಿದ್ದರೆ: ಅವಘಡದಿಂದಾಗಿ ಹಲ್ಲು ಹೊರಬಂದಿದ್ದರೆ ಅದನ್ನು ಗಾಯಾಳುವಿನ ಬಾಯಿಯೊಳಗೆ ಇರಿಸಬೇಕು (ಪ್ರಜ್ಞೆ ಇದ್ದ ಸಂದರ್ಭದಲ್ಲಿ ಮಾತ್ರ) ಮತ್ತು ಗಾಯಾಳುವನ್ನು ಆದಷ್ಟು ಬೇಗನೆ ಆಸ್ಪತ್ರೆಗೆ ಸಾಗಿಸಬೇಕು. ಹಲ್ಲನ್ನು ಬಾಯಿಯೊಳಗೆ ಇರಿಸುವುದು ಸಾಧ್ಯವಾಗದೆ ಇದ್ದರೆ ಅದನ್ನು ಎಲ್ಲ ಮನೆಗಳಲ್ಲಿ ಲಭ್ಯವಿರುವ ಕಡಿಮೆ ಕೊಬ್ಬಿನ ಹಾಲಿನೊಳಗೆ ಮುಳುಗಿಸಿಟ್ಟು ಒಯ್ಯಬೇಕು. ಯಾವುದೇ ಸಂದರ್ಭದಲ್ಲಿ ಹಲ್ಲನ್ನು ಶುದ್ಧಗೊಳಿಸಲು ತೊಳೆಯಬಾರದು ಅಥವಾ ಉಜ್ಜಬಾರದು.
  • ಊತದ ನಿರ್ವಹಣೆ: ಅಪಘಾತದ ಬಳಿಕ ದವಡೆಯಲ್ಲಿ ಊತ ಕಂಡುಬಂದರೆ ಬಾಧಿತ ಪ್ರದೇಶ ಮೇಲೆ ಐಸ್‌ ಇರಿಸಬೇಕು. ಇದು ಆಂತರಿಕ ರಕ್ತಸ್ರಾವವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಊತವನ್ನು ಕಡಿಮೆಗೊಳಿಸಲು ಕೂಡ ನೆರವಾಗುತ್ತದೆ.
  • ಮೂಗಿನ ರಕ್ತಸ್ರಾವದ ನಿಭಾವಣೆ: ಮೂಗಿನಲ್ಲಿ ರಕ್ತಸ್ರಾವ ಆಗುತ್ತಿದ್ದರೆ ಹೆಪ್ಪುಗಟ್ಟಿದ ರಕ್ತವು ಉಚ್ಛಾ$Ìಸ-ನಿಶ್ವಾಸಕ್ಕೆ ತಡೆಯಾಗದಂತೆ ಮುಖವನ್ನು ಕೆಳಮುಖವಾಗಿ ಬಾಗಿಸಿ ಹಿಡಿಯಬೇಕು. ಮೂಗಿನ ಹೊಳ್ಳೆಗಳನ್ನು ಸ್ವಲ್ಪಕಾಲ ಒತ್ತಿ ಹಿಡಿಯಬಹುದು. ರಕ್ತಸ್ರಾವವನ್ನು ತಡೆಯಲು ಐಸ್‌ಪ್ಯಾಕ್‌ ಅಥವಾ ಬಟ್ಟೆಯನ್ನು ಮೂಗಿನ ಮೇಲೆ ಇರಿಸಬಹುದು. ಮೂಗಿನಲ್ಲಿ ಗಾಯ ಅಥವಾ ನೋವು ಇದ್ದರೆ ಯಾವುದೇ ರೀತಿಯಲ್ಲಿ ಸರಿಪಡಿಸುವುದಕ್ಕೆ ಹೋಗಬಾರದು; ತಜ್ಞ ವೈದ್ಯರ ಸಲಹೆ ಪಡೆಯಬೇಕು.
  • ಮ್ಯಾಕ್ಸಿಲೊಫೇಶಿಯಲ್‌ ಗಾಯ ಹೊಂದಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ರವಾನಿಸುವ ವೇಳೆ ತಲೆಯ ಭಾಗ ಎತ್ತರಿಸಿರುವಂತೆ ಒಯ್ಯಬೇಕು. ಇದು ಉಸಿರಾಟ ನಿರಾತಂಕವಾಗಿರುವುದಕ್ಕೆ ಸಹಾಯ ಮಾಡುತ್ತದೆಯಲ್ಲದೆ ನಾಲಗೆ ಒಳಕ್ಕೆಳೆದುಕೊಳ್ಳದಂತೆ ಕಾಪಾಡುತ್ತದೆ.
  • ಗಾಯಾಳುವನ್ನು ಹೆಚ್ಚು ವಿಳಂಬ ಮಾಡದೆ ಆದಷ್ಟು ಬೇಗನೆ ಆಸ್ಪತ್ರೆಗೆ ಕರೆದೊಯ್ಯಬೇಕು. ಮುಖಕ್ಕೆ ಗಾಯವಾದರೆ ನಿಭಾವಣೆ ಕಷ್ಟ. ಆದರೆ, ಸರಿಯಾದ ಎಚ್ಚರಿಕೆ ತೆಗೆದುಕೊಂಡು ಗಾಯಾಳುವನ್ನು ಕ್ಷಿಪ್ರವಾಗಿ ಆಸ್ಪತ್ರೆಗೆ ರವಾನಿಸಿದರೆ ಅನೇಕ ಸಮಸ್ಯೆಗಳನ್ನು ತಡೆಯಬಹುದು.

 

 

ಆನಂದ ದೀಪ್‌ ಶುಕ್ಲಾ

ರೀಡರ್‌, ಓರಲ್‌ ಮತ್ತು ಮ್ಯಾಕ್ಸಿಲೊಫೇಶಿಯಲ್‌  ಸರ್ಜರಿ ವಿಭಾಗ,

ಮಣಿಪಾಲ ದಂತ ವೈದ್ಯಕೀಯ ಕಾಲೇಜು, ಮಣಿಪಾಲ

ಟಾಪ್ ನ್ಯೂಸ್

Karkala ಪರಶುರಾಮ ಥೀಂ ಪಾರ್ಕ್‌ ಸಮಾಜದ್ದು: ಸುನಿಲ್‌ ಕುಮಾರ್‌

Karkala ಪರಶುರಾಮ ಥೀಂ ಪಾರ್ಕ್‌ ಸಮಾಜದ್ದು: ಸುನಿಲ್‌ ಕುಮಾರ್‌

Mangaluru, ಉಡುಪಿಯಲ್ಲಿ ಆ್ಯಂಬುಲೆನ್ಸ್‌ ಸೇವೆ ಯಥಾಸ್ಥಿತಿ

Mangaluru, ಉಡುಪಿಯಲ್ಲಿ ಆ್ಯಂಬುಲೆನ್ಸ್‌ ಸೇವೆ ಯಥಾಸ್ಥಿತಿ

Manipal ಖಾಸಗಿ ಬಸ್‌ ಮಾಲಕನಿಂದ ನಿರ್ವಾಹಕನಿಗೆ ಹಲ್ಲೆ; ದೂರು ದಾಖಲು

Manipal ಖಾಸಗಿ ಬಸ್‌ ಮಾಲಕನಿಂದ ನಿರ್ವಾಹಕನಿಗೆ ಹಲ್ಲೆ; ದೂರು ದಾಖಲು

Dharmasthala: ಸರಣಿ ಅಪಘಾತ; 5 ವಾಹನಗಳಿಗೆ ಹಾನಿ

Dharmasthala: ಸರಣಿ ಅಪಘಾತ; 5 ವಾಹನಗಳಿಗೆ ಹಾನಿ

PCB

Pakistan ಟಿ20 ವಿಶ್ವಕಪ್‌ ಗೆದ್ದರೆ ಪ್ರತಿ ಆಟಗಾರರಿಗೆ 1 ಲಕ್ಷ ಡಾಲರ್‌ ಬಹುಮಾನ

Lok Sabha Election ಹಂತ 2: ಮತದಾನದ ಹಕ್ಕು ಚಲಾವಣೆಗೆ ಸಕಲ ಸಿದ್ಧತೆ

Lok Sabha Election ಹಂತ 2: ಮತದಾನದ ಹಕ್ಕು ಚಲಾವಣೆಗೆ ಸಕಲ ಸಿದ್ಧತೆ

ICSE: ರಾಜ್ಯದ ವಿದ್ಯಾರ್ಥಿಗಳಿಗೆ‌ ಶೇ. 99 ಮೀರಿದ ಫ‌ಲಿತಾಂಶ; ವಿದ್ಯಾರ್ಥಿನಿಯರೇ ಮೇಲುಗೈ

ICSE: ರಾಜ್ಯದ ವಿದ್ಯಾರ್ಥಿಗಳಿಗೆ‌ ಶೇ. 99 ಮೀರಿದ ಫ‌ಲಿತಾಂಶ; ವಿದ್ಯಾರ್ಥಿನಿಯರೇ ಮೇಲುಗೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-knee

Knee: ಮೊಣಗಂಟು ಸಮಸ್ಯೆ: ನಿಮ್ಮ ರೋಗಿಗಳಿಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು ಹೇಗೆ?

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

hemanth-soren

Arrest ಪ್ರಶ್ನಿಸಿ ಹೇಮಂತ್‌ ಸೊರೇನ್‌ ಸುಪ್ರೀಂ ಮೊರೆ

Karkala ಪರಶುರಾಮ ಥೀಂ ಪಾರ್ಕ್‌ ಸಮಾಜದ್ದು: ಸುನಿಲ್‌ ಕುಮಾರ್‌

Karkala ಪರಶುರಾಮ ಥೀಂ ಪಾರ್ಕ್‌ ಸಮಾಜದ್ದು: ಸುನಿಲ್‌ ಕುಮಾರ್‌

1-bra

Brazil; ಭೀಕರ ಪ್ರವಾಹಕ್ಕೆ 75 ಬಲಿ, 103 ಮಂದಿ ಕಾಣೆ

police USA

Australia; ಚಾಕುವಿನಿಂದ ಇರಿದು ಭಾರತೀಯ ವಿದ್ಯಾರ್ಥಿ ಕೊಲೆ

Mangaluru, ಉಡುಪಿಯಲ್ಲಿ ಆ್ಯಂಬುಲೆನ್ಸ್‌ ಸೇವೆ ಯಥಾಸ್ಥಿತಿ

Mangaluru, ಉಡುಪಿಯಲ್ಲಿ ಆ್ಯಂಬುಲೆನ್ಸ್‌ ಸೇವೆ ಯಥಾಸ್ಥಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.