ಅಧ್ಯಕ್ಷ ಟ್ರಂಪ್‌ ವಿರುದ್ಧ “ವಾಗ್ಧಂಡನೆ’ ನಿರ್ಣಯ


Team Udayavani, Jan 12, 2021, 8:15 AM IST

ಅಧ್ಯಕ್ಷ ಟ್ರಂಪ್‌ ವಿರುದ್ಧ “ವಾಗ್ಧಂಡನೆ’ ನಿರ್ಣಯ

ವಾಷಿಂಗ್ಟನ್‌:  ಕ್ಯಾಪಿಟಲ್‌ ಹಿಲ್‌ ದಾಂದಲೆಗೆ ಛೂಬಿಟ್ಟ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಅಮೆರಿಕದ ಹೌಸ್‌ ಆಫ್ ರೆಪ್ರಸೆಂಟೇಟಿವ್ಸ್‌ ವಾಗ್ಧಂಡನೆ ನಿರ್ಣಯ ಕೈಗೊಳ್ಳಲು ಮುಂದಾಗಿದೆ.

ಯುಎಸ್‌ ಸಂವಿಧಾನದ 25ನೇ ತಿದ್ದುಪಡಿಯಲ್ಲಿ, ಅಪರಾಧ ಎಸಗಿದ ಅಧ್ಯಕ್ಷನನ್ನು ವಾಗ್ಧಂಡನೆಗೆ ಗುರಿಪಡಿಸಲು ಅವಕಾಶವಿದ್ದು, ಈ ಬಗ್ಗೆ ಸ್ಪೀಕರ್‌ ನ್ಯಾನ್ಸಿ ಪೆಲೊಸಿ ರವಿವಾರವೇ ಸಂಸದರಿಗೆ ಬರೆದ ಪತ್ರದಲ್ಲಿ ಸೂಚಿಸಿದ್ದರು.

ಟ್ರಂಪ್‌ರನ್ನು ಇಳಿಸಲು ತುದಿಗಾಲಿನಲ್ಲಿ ನಿಂತಿರುವ ಡೆಮಾಕ್ರಾಟ್‌ ಸದಸ್ಯರು, 25ನೇ ತಿದ್ದುಪಡಿ ಬಳಸಿಕೊಳ್ಳಲು ಯೋಜನೆ ರೂಪಿಸಿದ್ದಾರೆ. “ಗಂಭೀರ ಅಪರಾಧ ಮತ್ತು ದುರ್ವರ್ತನೆ ಕಾರಣಕ್ಕಾಗಿ ಅಧ್ಯಕ್ಷ ಟ್ರಂಪ್‌ ವಿರುದ್ಧ ವಾಗ್ಧಂಡನೆ ನಿರ್ಣಯ ಕೈಗೊಳ್ಳುತ್ತೇವೆ’ ಎಂದು ಡೆಮಾಕ್ರಾಟ್‌ ಸಂಸದ ಬ್ರಾಡ್‌ ಸ್ಕಿಡರ್‌ ಹೇಳಿದ್ದಾರೆ.

ಪರಿಹಾರ ಏರಿಕೆ?: ಬೈಡೆನ್‌ ಅಮೆರಿಕನ್ನರಿಗೆ ಕೋವಿಡ್ ಆರ್ಥಿಕ ಪರಿಹಾರ ವನ್ನು  1.47 ಲಕ್ಷ ರೂ.ಗೆ ಹೆಚ್ಚಿಸುವ ಸುಳಿವು ನೀಡಿದ್ದಾರೆ. ಮಾಸಾಂತ್ಯದಲ್ಲಿ ಈ ಪರಿಹಾರ ಅಮೆರಿಕನ್ನರ ಕೈಗೆ ಸಿಗುವ ಸಾಧ್ಯತೆ ಇದೆ. “ಈಗ ನೀಡುತ್ತಿರುವ 44,099 ರೂ. ನಿಮಗೆ ಬಾಡಿಗೆ, ಟೇಬಲ್ಲಿನ ಆಹಾರಕ್ಕೂ ಸಾಲುವುದಿಲ್ಲ. ಹೀಗಾಗಿ ಇದನ್ನು 2 ಸಾವಿರ ಡಾಲರ್‌ಗೆ ಏರಿಸುತ್ತೇವೆ’ ಎಂದಿದ್ದಾರೆ.

ಟ್ರಂಪ್‌ ಖಾತೆ ರದ್ದತಿ ಹಿಂದೆ ವಿಜಯಾ! :

ಟ್ರಂಪ್‌ರ ಟ್ವಿಟರ್‌ ಖಾತೆಯನ್ನು ಶಾಶ್ವತವಾಗಿ ಕಿತ್ತೂಗೆದ ದಿಟ್ಟ ನಿರ್ಧಾರದ ಹಿಂದೆ ಇದ್ದಿದ್ದು ಭಾರತೀಯ ಮೂಲದ ಸಾಫ್ಟ್ವೇರ್‌ ಎಂಜಿನಿಯರ್‌! ಹೌದು, ವಕೀಲೆ ವಿಜಯಾ ಗದ್ದೆ ಅವರು ಟ್ವಿಟರ್‌ನ ಕಾನೂನು, ನೀತಿ, ವಿಶ್ವಾಸ ಮತ್ತು ಸುರಕ್ಷತೆ ವಿಭಾಗದ ಮುಖ್ಯಸ್ಥೆ. “ಹಿಂಸಾಚಾರ ಕಾರಣದಿಂದಾಗಿ ಅಧ್ಯಕ್ಷ ಟ್ರಂಪ್‌ ಖಾತೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದ್ದೇವೆ. ನಮ್ಮ ನೀತಿ-ನಿಯಮಾವಳಿಗಳನ್ನೂ ಇಲ್ಲಿ ಪ್ರಕಟಿಸುತ್ತಿದ್ದೇವೆ’ ಎಂದು ಅವರು ಟ್ವಿಟರ್‌ ಪರವಾಗಿ ಮೊದಲ ಟ್ವೀಟ್‌ ಮಾಡಿದ್ದರು!

ವೋಗ್‌’ ವಿವಾದ! :

ಭಾರತೀಯ ಮೂಲದ, ಅಮೆರಿಕದ ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್‌ ಚಿತ್ರವನ್ನು ಮುಖಪುಟದಲ್ಲಿ ಮುದ್ರಿಸಿದ “ವೋಗ್‌’ ಮ್ಯಾಗಜಿನ್‌ನ ಸಂಚಿಕೆ ಈಗ ವಿವಾದಕ್ಕೆ ಸಿಲುಕಿದೆ. “ಇಂಡೋ- ಆಫ್ರಿಕನ್‌’ ಎಂದೇ ಗುರುತಿಸಲ್ಪಡುವ ಕಮಲಾರ ಫೋಟೊದಲ್ಲಿ ಮುಖವನ್ನು ಫೋಟೊಶಾಪ್‌ನಿಂದ ಬಿಳಿಯಾಗಿಸಿರುವ ಸಂಗತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣ ವಾಗಿದೆ. “ಮೇಡಂ ವೈಸ್‌ ಪ್ರಸಿಡೆಂಟ್‌!’ ಎಂದು ಅಭಿಮಾನದಿಂದಲೇ “ವೋಗ್‌’ ಇದನ್ನು ಮುದ್ರಿಸಿದ್ದರೂ, ಕಮಲಾ ಅವರ ನೈಜ ಬಣ್ಣವನ್ನು ತೋರಿ ಸದ ಕಾರಣಕ್ಕಾಗಿ ಮ್ಯಾಗಜಿನ್‌ ವಿವಾದಕ್ಕೆ ಗುರಿ ಯಾಗಿದೆ. ಕಮಲಾ ಸಮ್ಮತಿಯಿಲ್ಲದೆ, ಕ್ಯಾಂಪೇನ್‌ ವೇಳೆಯ ಫೋಟೊವನ್ನು ಬಳಸಿಕೊಳ್ಳಲಾಗಿದೆ ಎನ್ನುವ ಆರೋಪವೂ ಕೇಳಿಬಂದಿದೆ.

ಟಾಪ್ ನ್ಯೂಸ್

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

drowned

Vedganga ನದಿಯಲ್ಲಿ ಮುಳುಗಿ ನಾಲ್ವರು ಮೃತ್ಯು:ಇಬ್ಬರು ಬೆಳಗಾವಿಯವರು

Priyanka Gandhi

Election; ಪ್ರಧಾನಿ ಮೋದಿ ಯಾಕೆ ಮಂಗಳಸೂತ್ರ,ಧರ್ಮದ ಮೇಲೆ ಮತ ಕೇಳುತ್ತಾರೆ: ಪ್ರಿಯಾಂಕಾ ಗಾಂಧಿ

raghu bhat

Congress ಗಾಡ್ ಫಾದರ್ ಸಂಸ್ಕೃತಿ ಬಿಜೆಪಿಗೆ ಬಂದಿದೆ: ರಘುಪತಿ ಭಟ್

1-asasa

Cat ರಕ್ಷಣೆಗೆ ಭಾರೀ ಕಾರ್ಯಾಚರಣೆ ; ಕೊನೆಗೆ ಆಗಿದ್ದೆ ಬೇರೆ!: ವೈರಲ್ ವಿಡಿಯೋ ನೋಡಿ

priyanka-gandhi

Priyanka Gandhi ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ; ಇಲ್ಲಿದೆ ಅವರೇ ಕೊಟ್ಟ ಉತ್ತರ

Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ

Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

ಈಜಿಪ್ಟ್ ನ ಅತೀ ಪ್ರಾಚೀನ, ಶ್ರೀಮಂತ ದೊರೆ ಚಿತ್ರ ಸಿದ್ಧ!

1

Abu Dhabi: ಅಬುಧಾಬಿಯಲ್ಲಿ ಬಿಯರ್‌ ಅಂಗಡಿ!

rishi sun

UK; ಶ್ರೀಮಂತರ ಪಟ್ಟಿಯಲ್ಲಿ 245ನೇ ಸ್ಥಾನಕ್ಕೆ ಜಿಗಿದ ರಿಷಿ-ಅಕ್ಷತಾ ದಂಪತಿ

Spicy Chip Challenge; ಅತ್ಯಂತ ಖಾರದ ಚಿಪ್ಸ್ ತಿಂದ 14ರ ಬಾಲಕ ಸಾವು!

Spicy Chip Challenge; ಅತ್ಯಂತ ಖಾರದ ಚಿಪ್ಸ್ ತಿಂದ 14ರ ಬಾಲಕ ಸಾವು!

IT WORK

Microsoft ಚಿಂತನೆ : ಚೀನದಿಂದ 800 ನೌಕರರ‌ ವರ್ಗ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

1-wqewqewe

Ramanagara; ಅಪ್ರಾಪ್ತ ಮಕ್ಕಳ ಮೈಯನ್ನು ಕಾದ ಕಬ್ಬಿಣದಿಂದ ಸುಟ್ಟ ಮದ್ಯವ್ಯಸನಿ ತಂದೆ

drowned

Vedganga ನದಿಯಲ್ಲಿ ಮುಳುಗಿ ನಾಲ್ವರು ಮೃತ್ಯು:ಇಬ್ಬರು ಬೆಳಗಾವಿಯವರು

Priyanka Gandhi

Election; ಪ್ರಧಾನಿ ಮೋದಿ ಯಾಕೆ ಮಂಗಳಸೂತ್ರ,ಧರ್ಮದ ಮೇಲೆ ಮತ ಕೇಳುತ್ತಾರೆ: ಪ್ರಿಯಾಂಕಾ ಗಾಂಧಿ

raghu bhat

Congress ಗಾಡ್ ಫಾದರ್ ಸಂಸ್ಕೃತಿ ಬಿಜೆಪಿಗೆ ಬಂದಿದೆ: ರಘುಪತಿ ಭಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.