ನೆಲಗಡಲೆ ಬೆಳೆಗೆ ಕಂಟಕ
Team Udayavani, Jan 12, 2021, 11:32 PM IST
ಕೋಟ: ಅಕಾಲಿಕವಾಗಿ ಸುರಿದ ಮಳೆಗೆ ನೆಲಗಡಲೆ ಮುಂತಾದ ದ್ವಿದಳ ಧಾನ್ಯದ ಬೆಳೆಗಳಿಗೆ ಹಾನಿಯಾಗಿದೆ.
ಸುಮಾರು 30 ದಿನಗಳ ಹಿಂದೆ ಬಿತ್ತನೆ ಮಾಡಿದ ನೆಲಗಡಲೆ ಬೀಜ ಇದೀಗ ಹೂ ಬಿಡುವ ಹಂತದಲ್ಲಿದ್ದು, ಮಳೆ ಬಂದುದ ರಿಂದ ತೇವಾಂಶ ಹೆಚ್ಚಿ ಹೂವಿನ ಮೇಲೆ ಪರಿಣಾಮ ಬೀರಲಿವೆ ಹಾಗೂ ಗಿಡ ಅಗತ್ಯಕ್ಕಿಂತ ಎತ್ತರಕ್ಕೆ ಬೆಳೆದು ಫಸಲಿಗೆ ಹಿನ್ನಡೆಯಾಗಲಿದೆ. ಇದೇ ರೀತಿ ಉದ್ದು, ಹುರುಳಿ ಮುಂತಾದ ದ್ವಿದಳ ಧಾನ್ಯಗಳ ಬೆಳೆಗೂ ಅಡ್ಡಿಯಾಗಿವೆ.
ರೈತರ ಮೊಗದಲ್ಲಿ ಆತಂಕ :
ಪ್ರಸ್ತುತ ವರ್ಷ ದ್ವಿದಳ ಧಾನ್ಯ ಬೆಳೆಯುವ ಪ್ರಮಾಣ ಸ್ವಲ್ಪ ಮಟ್ಟಿಗೆ ಏರಿಕೆಯಾ ಗಿದ್ದು ಅಕಾಲಿಕ ಮಳೆಯಿಂದ ಫಸಲಿನ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ರೈತರ ಮೊಗದಲ್ಲಿ ಆತಂಕದ ಕರಿಛಾಯೆ ಮೂಡಿದೆ.
ಅಕಾಲಿಕ ಮಳೆಯಿಂದಾಗಿ ದ್ವಿದಳ ಧಾನ್ಯಗಳ ಮೇಲೆ ಮಾರಕ ಪರಿಣಾಮ ಉಂಟಾಗಿದೆ. ಆದ್ದರಿಂದ ಬೆಳೆಗಳ ಪೋಷಣೆ ಕುರಿತು ರೈತರು ಹೆಚ್ಚಿನ ಗಮನಹರಿಸುವುದು ಅಗತ್ಯ ಹಾಗೂ ಫಸಲು ನಷ್ಟವಾಗದಂತೆ ತಡೆಯಲು ಪೂರಕ ಕ್ರಮ ಕೈಗೊಳ್ಳುವ ಅಗತ್ಯವಿದೆ. –ಡಾ| ನವೀನ್, ಬೇಸಾಯ ತಜ್ಞರು, ಕೆ.ವಿ.ಕೆ. ಬ್ರಹ್ಮಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್
Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ
Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಅಪಘಾತ