ಕೊಳವೆಯಲ್ಲಿ ನೀರು ಸೋರಿಕೆ: ಇಂದು ನೀರು ಸರಬರಾಜಿನಲ್ಲಿ ವ್ಯತ್ಯಯ
Team Udayavani, Feb 19, 2021, 5:20 AM IST
ಮಹಾನಗರ: ಮಂಗಳೂರು ಮಹಾನಗರ ಪಾಲಿಕೆ ನೀರು ಸರಬರಾಜು ವ್ಯವಸ್ಥೆಯ ತುಂಬೆ ಎಚ್ಎಲ್ಪಿಎಸ್-1ರ 18 ಎಂಜಿಡಿ ರೇಚಕ ಸ್ಥಾವರದಿಂದ ಬೆಂದೂರು, ಪಣಂಬೂರು ಕಡೆಗೆ ನೀರು ಸರಬರಾಜು ಮಾಡುವ ಮುಖ್ಯ ಕೊಳವೆಯಲ್ಲಿ ಕಣ್ಣೂರಿನ ಬಳಿ ನೀರು ಸೋರಿಕೆ ಉಂಟಾಗಿದೆ.
ಇದನ್ನು ದುರಸ್ತಿಗೊಳಿಸುವ ಕಾರ್ಯವನ್ನು ಫೆ. 19ರಂದು ಬೆಳಗ್ಗೆ 9 ಗಂಟೆಯಿಂದ ಫೆ.20ರ ಬೆಳಗ್ಗೆ 6 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.
ಆದುದರಿಂದ ಈ ಅವಧಿಯಲ್ಲಿ ಸುರತ್ಕಲ್, ಪಣಂಬೂರು, ಕಾನಾ, ಬಾಳ, ಕುಳೂರು, ಭಾಗಶಃ ಬೆಂದೂರು, ಭಾಗಶಃ ಕಾರ್ಸ್ಟ್ರೀಟ್, ಕೋಡಿಕಲ್, ಆಕಾಶಭವನ ಪ್ರದೇಶಗಳಲ್ಲಿ ನೀರು ವಿತರಣೆ ಸಂಪೂರ್ಣ ಸ್ಥಗಿತಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.