ಶಿಕ್ಷಕರ ನೇಮಕ ತನಿಖೆ ಸ್ವಾಗತಾರ್ಹ; ಆದರೆ ರಾಜಕೀಯ ಕಾರಣ ಸಲ್ಲದು


Team Udayavani, Sep 8, 2022, 6:00 AM IST

ಶಿಕ್ಷಕರ ನೇಮಕ ತನಿಖೆ ಸ್ವಾಗತಾರ್ಹ; ಆದರೆ ರಾಜಕೀಯ ಕಾರಣ ಸಲ್ಲದು

ಹಿಂದಿನ ಸರಕಾರದಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಹಗರಣದ ಕುರಿತು ಪ್ರಸಕ್ತ ಬಿಜೆಪಿ ಸರಕಾರ ತನಿಖೆ ಮಾಡಲು ಹೊರಟಿ ರುವುದು ಸ್ವಾಗತಾರ್ಹ ಬೆಳವಣಿಗೆಯೇ. ಆದರೆ ಈ ತನಿಖೆಯನ್ನು ಕೈಗೆತ್ತಿಕೊಂಡಿರುವ ಸಮಯದ ಬಗ್ಗೆ ಹಲವು ಪ್ರಶ್ನೆಗಳು ಏಳುತ್ತಿವೆ. ಬಿಜೆಪಿ ಸರಕಾರದ ಮೇಲೆ 40 ಪರ್ಸೆಂಟ್‌ ಕಮಿಷನ್‌ ಆರೋಪಗಳು ಬಂದಿರುವ ಬೆನ್ನಲ್ಲೇ ಹಿಂದಿನ ಸರಕಾರದ ಹಗರಣದ ಕುರಿತು ತನಿಖೆ ನಡೆಸಲು ಮುಂದಾಗಿದೆ ಎಂಬ ಅನುಮಾನಗಳು ಏಳುತ್ತವೆ.

ಹಿಂದಿನ ಸರಕಾರಗಳ ಅವಧಿಯಲ್ಲಿ ನಡೆದಿರಬಹುದಾದ ಅಕ್ರಮಗಳ ಬಗ್ಗೆ ತನಿಖೆ ನಡೆಸುವುದು ಹೊಸದೇನಲ್ಲ. ಅದು ಪ್ರಜಾಪ್ರಭುತ್ವದಲ್ಲಿ ಸಹಜ ಕೂಡ. ಆದರೆ ಬಿಜೆಪಿ ಸರಕಾರ ಬಂದು ಮೂರು ವರ್ಷಗಳಾದ ಮೇಲೆ ಮತ್ತು ಚುನಾವಣೆ ಹತ್ತಿರ ಬರುತ್ತಿರುವಾಗ ಈಗ ತನಿಖೆ ನಡೆಸಲು ಹೊರ ಟಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಹಿಂದಿನ ಸರಕಾರದ ಅವಧಿಯಲ್ಲಿ ಶಿಕ್ಷಕರ ನೇಮಕ, ಅರ್ಕಾವತಿ ಬಡಾವಣೆಯ ರಿಡೂ ಹಾಗೂ ಪಾವಗಡ ಸೋಲಾರ್‌ ಘಟಕ ನಿರ್ಮಾಣ ದಲ್ಲಿ ಅವ್ಯವಹಾರ ಆಗಿದ್ದರೆ ಅಕ್ಷಮ್ಯವೇ. ಹಿಂದಿನ ಸರಕಾರದಲ್ಲಿ ಹಗರಣ ನಡೆದಿದ್ದರೆ ಭ್ರಷ್ಟಾಚಾರ ಆಗಿದ್ದರೆ ರಾಜ್ಯ ಸರಕಾರ ಅಧಿಕಾರಕ್ಕೆ ಬಂದ ತತ್‌ಕ್ಷಣ ತನಿಖೆಗೆ ವಹಿಸಿ ಕ್ರಮ ಕೈಗೊಳ್ಳಬಹುದಿತ್ತು. ಮೂರು ವರ್ಷ ಏಕೆ ಸುಮ್ಮನಿತ್ತು? ಭ್ರಷ್ಟಾಚಾರ ಆಗಿರುವುದು ಗೊತ್ತಿದ್ದರೂ ಸುಮ್ಮನಿದ್ದು ಇದೀಗ ವಿಪಕ್ಷ ಕಾಂಗ್ರೆಸ್‌ ಅಥವಾ ಜೆಡಿಎಸ್‌ ನಾಯಕರು ಆರೋಪ ಮಾಡಿದಾಗ ಹಿಂದಿನ ಸರಕಾರದಲ್ಲೂ ಆಗಿತ್ತು ಎಂದು ಹೇಳಲಾಗುತ್ತಿದೆಯೇ? ಸರಕಾರ ರವು ವಿಪಕ್ಷ ನಾಯಕರ ಆರೋಪಕ್ಕೆ ಬೆದರಿಕೆ ಅಸ್ತ್ರವಾಗಿ ಹಿಂದಿನ ಸರಕಾರದ ನೇಮಕಾತಿ, ಟೆಂಡರ್‌ ಪ್ರಕರಣದ ತನಿಖೆ ಎಂದು ಹೇಳುತ್ತಿದೆಯಾ ಎಂಬ ಅನುಮಾನ ಜನಸಾಮಾನ್ಯರಲ್ಲಿ ಸಹಜವಾಗಿ ಬರುತ್ತದೆ.

ಅಕ್ರಮದ ಕಾರಣ ಮುಂದಿರಿಸಿಕೊಂಡು ತನಿಖೆ ನಡೆದಲ್ಲಿ ಅದು ಸ್ವಾಗತಾರ್ಹವೇ. ಆದರೆ ಅದು ಚುನಾವಣೆ ಸಂದರ್ಭದಲ್ಲಿ ರಾಜಕೀಯ ಕಾರಣದ ಗುದ್ದಾಟ ಆಗದಿರಲಿ. ಏಕೆಂದರೆ ಮತ್ತೆ ಮುಂದೆ ಬರುವ ಸರಕಾರವೂ ಇದೇ ಹಾದಿ ಹಿಡಿದರೆ ಸಾರ್ವಜನಿಕರಿಗೆ ಯಾವ ಪಕ್ಷ, ನಾಯಕರ ಮೇಲೂ ನಂಬಿಕೆ ಇಲ್ಲದಂತಾಗುತ್ತದೆ. ಅವರ ಕಾಲದಲ್ಲೂ ಆಗಿತ್ತು ಎಂದು ಈಗಿನದ್ದು ಸಮರ್ಥನೆ ಮಾಡಿಕೊಳ್ಳುವುದೇ ಅರ್ಥಹೀನ. ಹಾಗಾದರೆ ಅವರಿಗೂ ನಮಗೂ ವ್ಯತ್ಯಾಸ ಏನೂ ಇಲ್ಲ ಎಂಬ ಸಂದೇಶ ರವಾನಿಸಿದಂತಾಗುತ್ತದೆ.

ರಾಜಕೀಯ ಕೆಸರೆರೆಚಾಟದ ಭರದಲ್ಲಿ ಪರಸ್ಪರ ಆರೋಪ- ಪ್ರತ್ಯಾ ರೋಪ, ತನಿಖೆ, ಬೆದರಿಕೆಯಂತಹ ವಿಚಾರಗಳಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಈಗಾಗಲೇ ಈ ಹಿಂದೆ ವಿದ್ಯುತ್‌ ಖರೀದಿ ವಿಚಾರದ ತನಿಖೆಗೆ ಸದನ ಸಮಿತಿ ರಚಿಸಲಾಗಿತ್ತು, ನೈಸ್‌ ಸಂಸ್ಥೆಯ ವಿಚಾರವಾಗಿ ಸದನ ಸಮಿತಿ ರಚಿಸಲಾಗಿತ್ತು. ತಿಂಗಳುಗಟ್ಟಲೆ ಸಮಿತಿಗಳು ಸಭೆ ನಡೆಸಿ ಸ್ಥಳ ಪರಿಶೀಲನೆ ಮಾಡಿ ಕೆಜಿಗಟ್ಟಲೆ ದಾಖಲೆ ಸಮೇತ ಪುಸ್ತಕ ಮುದ್ರಿಸಿ ಸದನದ ಮುಂದಿ ಟ್ಟರೂ ಇದುವರೆಗೂ ಕ್ರಮ ಆಗಿಲ್ಲ. ಇವರಷ್ಟೇ ಅಲ್ಲ ಇಂತಹ ಸಾಕಷ್ಟು ಪ್ರಕರಣಗಳ ತನಿಖೆಗಳೂ ತಾರ್ಕಿಕ ಅಂತ್ಯ ಕಂಡಿಲ್ಲ. ಸದನ ಸಮಿತಿಯ ಖರ್ಚು, ವೆಚ್ಚ, ಭತ್ತೆ, ತನಿಖೆಯ ಅನಂತರ ಪುಸ್ತಕ ಮುದ್ರಣ ಹೊರೆ ಯಾಗಿದ್ದು ಬಿಟ್ಟರೆ ಉಳಿದಂತೆ ಯಾವುದೇ ಪ್ರಯೋಜನವಾಗಿಲ್ಲ.

ಹಾಗೆಂದು ತನಿಖೆ ಮಾಡಬಾರದೆಂಬ ವಾದವಲ್ಲ. ತನಿಖೆ ಸಮಗ್ರ ರೂಪದಲ್ಲಿ ಇರಲಿ, ಕಾಲಮಿತಿಯೊಳಗೆ ಇರಲಿ ಹಾಗೂ ತನಿಖಾ ವರದಿಯನ್ನು ಅನು ಷ್ಠಾನಗೊಳಿಸುವ ಬದ್ಧತೆಯನ್ನು ಸರಕಾರ ಪ್ರದರ್ಶಿಸಲಿ. ಹೀಗಾಗಿ ರಾಜ ಕೀಯ ಕಾರಣ, ದ್ವೇಷಕ್ಕೆ ತನಿಖೆಗೆ ವಹಿಸುವುದು ಬಿಟ್ಟು, ನಿಜಕ್ಕೂ ಭ್ರಷ್ಟಾ ಚಾರ, ಅಕ್ರಮ ಆಗಿದ್ದರೆ ಯಾವೆಲ್ಲ ಇಲಾಖೆಗಳಲ್ಲಿ ನಡೆದಿದೆಯೋ ಆ ಕುರಿತು ನಿಷ್ಪಕ್ಷಪಾತ ತನಿಖೆ ಕಾಲಮಿತಿಯಲ್ಲಿ ನಡೆಸಿ ಕ್ರಮಕೈಗೊಂಡರೆ ಸರಕಾರದ ವಿಶ್ವಾಸಾರ್ಹತೆ ಹೆಚ್ಚುತ್ತದೆ.

ಟಾಪ್ ನ್ಯೂಸ್

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.