ಬ್ಯಾಂಕ್‌ಗಳಿಗೆ ವಂಚನೆ ಉತ್ತರದಾಯಿತ್ವ ನಿಗದಿಗೊಳಿಸಿ


Team Udayavani, May 4, 2018, 6:00 AM IST

s-49.jpg

ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ನಡೆಯುತ್ತಿರುವ ವಂಚನೆ ಪ್ರಕರಣಗಳು ಕಳವಳಕ್ಕೆ ಕಾರಣವಾಗಿವೆ. ಐದು ವರ್ಷಗಳಲ್ಲಿ 1 ಲಕ್ಷ ಕೋ. ರೂ.ಗೂ ಅಧಿಕ ಮೊತ್ತದ ವಂಚನೆ ನಡೆದಿದೆ ಎಂದು ಸ್ವತಹ ಆರ್‌ಬಿಐ ಮಾಹಿತಿ ಬಹಿರಂಗಪಡಿಸಿದೆ. ವರ್ಷದಿಂದ ವರ್ಷಕ್ಕೆ ವಂಚನೆ ಮೊತ್ತ ಹೆಚ್ಚುತ್ತಾ ಹೋಗುತ್ತಿರುವುದು ಆರ್‌ಬಿಐ ನೀಡಿದ ಮಾಹಿತಿಯಿಂದ ತಿಳಿದುಬಂದಿದೆ. 2017-18ನೇ ಸಾಲಿನಲ್ಲಿ ಅತ್ಯಧಿಕ ವಂಚನೆ ನಡೆದಿದೆ. ಎಸ್‌ಬಿಐ, ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌, ಐಡಿಬಿಐ, ಬ್ಯಾಂಕ್‌ ಆಫ್ ಇಂಡಿಯಾ ಸೇರಿದಂತೆ ಹಲವು ಅಗ್ರಗಣ್ಯ ಬ್ಯಾಂಕುಗಳಲ್ಲೇ ಕೋಟಿಗಟ್ಟಲೆ ರೂಪಾಯಿಯ ವಂಚನೆ ಸಂಭವಿಸಿದೆ. ಬ್ಯಾಂಕ್‌ಗಳಲ್ಲಾಗಿರುವ ವಂಚನೆ ಪ್ರಕರಣಗಳಿಗೂ ಬ್ಯಾಂಕ್‌ಗಳ ಮರುಪಾವತಿಯಾಗದ ಸಾಲದ ಮೊತ್ತ ಅಥವಾ ಎನ್‌ಪಿಎಗೆ ನೇರ ಸಂಬಂಧವಿದೆ. ವಂಚನೆ ಹೆಚ್ಚಿದಂತೆ ಎನ್‌ಪಿಎ ಹೊರೆಯೂ ಹೆಚ್ಚುತ್ತಾ ಹೋಗುತ್ತದೆ. 

ಬ್ಯಾಂಕುಗಳಿಗೆ ವಂಚಿಸಿ ವಿದೇಶಗಳಿಗೆ ಪಲಾಯನ ಮಾಡಿ ಸುಖ ಜೀವನ ನಡೆಸುವುದು ಈಗ ಉದ್ಯಮಿಗಳ ಹೊಸ ತಂತ್ರವಾಗಿದೆ. 9,000 ಕೋ. ರೂ. ವಂಚಿಸಿದ ವಿಜಯ್‌ ಮಲ್ಯ, 13,000 ಕೋ. ರೂ. ವಂಚಿಸಿದ ನೀರವ್‌ ಮೋದಿ ಇವರನ್ನು ವಾಪಸು ಕರೆತಂದು ನ್ಯಾಯಾಲಯದ ಕಟೆಕಟೆಯಲ್ಲಿ ನಿಲ್ಲಿಸಲು ಸರಕಾರ ಹರ ಸಾಹಸಪಡುತ್ತಿದೆ.   ರೈತನೋ, ಸಣ್ಣ ವ್ಯಾಪಾರಿಯೋ ಕೆಲವೇ ಸಾವಿರ ಸಾಲ ಬಾಕಿಯಿಟ್ಟರೆ ಬೆನ್ನುಬಿಡದೆ ಕಾಡಿ ವಸೂಲು ಮಾಡುವ ಬ್ಯಾಂಕುಗಳಿಗೆ ಈ ಸಿರಿವಂತ ಬಂಡವಾಳಶಾಹಿಗಳು ಇಷ್ಟು ಸುಲಭವಾಗಿ ಹೇಗೆ ಮೋಸ ಮಾಡುತ್ತಾರೆ? ಪ್ರತಿ ವಂಚನೆಯಲ್ಲೂ ಬ್ಯಾಂಕಿನ ಅಧಿಕಾರಿಗಳ ನೆರಳು ಕಾಣಿಸುತ್ತಿರುವುದು ಬ್ಯಾಂಕುಗಳ ಆಂತರಿಕ ನಿಯಂತ್ರಣ ವ್ಯವಸ್ಥೆ ದುರ್ಬಲಗೊಂಡಿರುವುದನ್ನು ಸೂಚಿಸುತ್ತದೆ. ಕೆಲವೇ ಅಪ್ರಾಮಾಣಿಕ ಅಧಿಕಾರಿಗಳಿಂದಾಗಿ ಲಕ್ಷಾಂತರ ಸಿಬಂದಿ ಬಾಹುಳ್ಯವುಳ್ಳ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಅಪನಂಬಿಕೆಯಿಂದ ನೋಡುವಂತಾಗಿದೆ. ಹೀಗಾಗದಂತೆ ಮಾಡಲು ತ್ವರಿತವಾಗಿ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಹೊಣೆಗಾರಿಕೆ ಆರ್‌ಬಿಐ ಮತ್ತು ಸರಕಾರದ ಮೇಲಿದೆ. 

ಒಂದೆಡೆ ಬ್ಯಾಂಕ್‌ಗಳಿಗೆ ಬಂಡವಾಳಶಾಹಿಗಳು ವಂಚಿಸುತ್ತಾ ಇದ್ದರೆ ಇನ್ನೊಂದೆಡೆಯಿಂದ ಸರಕಾರ ಬ್ಯಾಂಕ್‌ಗಳನ್ನು ಎನ್‌ಪಿಎ ಹೊರೆಯಿಂದ ಪಾರು ಮಾಡುವ ಉದ್ದೇಶದಿಂದ ಬಂಡವಾಳ ಮರುಪೂರಣ ಮಾಡಲು ಮುಂದಾಗಿದೆ. ಬ್ಯಾಂಕ್‌ಗಳ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಸಂದರ್ಭದಲ್ಲೆಲ್ಲ ಸರಕಾರ ಈ ರೀತಿ ಹಣಕಾಸಿನ ನೆರವು ಒದಗಿಸುತ್ತಿರುವುದು ಇದೇ ಮೊದಲೇನಲ್ಲ. ಆದರೆ ಹೀಗೆ ಬ್ಯಾಂಕ್‌ ಸೇರುತ್ತಿರುವುದು ಮಾತ್ರ ಜನರ ತೆರಿಗೆ ಹಣ. ಅರ್ಥಾತ್‌ ಉದ್ಯಮಿಗಳು ಪರೋಕ್ಷವಾಗಿ ದೋಚುತ್ತಿರುವುದು ನಮ್ಮದೇ ಹಣವನ್ನು. ಈ ವರ್ಷವೂ ಸುಮಾರು 80,000 ಕೋ. ರೂ. ಮರುಪೂರಣ ಮಾಡಲು ಸರಕಾರ ನಿರ್ಧರಿಸಿದೆ. ಸಾಲ ವಸೂಲಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬದಲು ಹೀಗೆ ಬಂಡವಾಳ ಮರುಪೂರಣ ಮಾಡುತ್ತಾ ಎಷ್ಟು ಸಮಯ ಬ್ಯಾಂಕ್‌ಗಳನ್ನು ಸಾಕಬಹುದು ಎಂಬುದನ್ನು ಸರಕಾರ ಉತ್ತರಿಸಬೇಕು.  ವಂಚನೆ ಪ್ರಕರಣಗಳು ಬ್ಯಾಂಕ್‌ಗಳ ಆಂತರಿಕ ಲೆಕ್ಕ ಪರಿಶೋಧನೆ ಮತ್ತು ರಿಸ್ಕ್ ಮೆನೇಜ್‌ಮೆಂಟ್‌ ವ್ಯವಸ್ಥೆ ದುರ್ಬಲಗೊಂಡಿರುವುದನ್ನು ಬಯಲುಗೊಳಿಸಿದೆ. ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಇಷ್ಟು ಬೃಹತ್‌ ಮೊತ್ತದ ವಂಚನೆ ನಡೆದಿದ್ದರೂ ಯಾವುದೇ ಬ್ಯಾಂಕ್‌ ಆಡಳಿತವನ್ನಾಗಲಿ, ನಿರ್ದೇಶಕ ಮಂಡಳಿಯನ್ನಾಗಲಿ ಉತ್ತರದಾಯಿ ಮಾಡಿದ್ದು ಕಂಡಿಲ್ಲ. ಒಂದಿಬ್ಬರು ಅಧಿಕಾರಿಗಳನ್ನು ವಜಾಗೊಳಿಸಿರುವುದು ಬಿಟ್ಟರೆ ಬೇರೆ ಯಾವುದೇ ಕಠಿನ ಕ್ರಮ ಕೈಗೊಂಡಿರುವ ಕುರಿತು ವರದಿಯಾಗಿಲ್ಲ. ಇದರ ಅರ್ಥ ಎಷ್ಟೇ ದೊಡ್ಡ ವಂಚನೆ ನಡೆದರೂ ಯಾರೂ ಉತ್ತರದಾಯಿಗಳು ಅಲ್ಲ ಎಂದೇ? ಒಂದು ವೇಳೆ ಇದೇ ರೀತಿಯ ವಂಚನೆ ಖಾಸಗಿ ವಲಯದ ಬ್ಯಾಂಕ್‌ನಲ್ಲೇನಾದರೂ ನಡೆದಿದ್ದರೆ ಕೈಗೊಳ್ಳುವ ಕ್ರಮದ ತೀವ್ರತೆ ಬೇರೆಯೇ ಇರುತ್ತಿತ್ತು. ಇಂಟರ್ನಲ್‌ ಆಡಿಟ್‌, ಕಾನ್ಕರೆಂಟ್‌ ಆಡಿಟ್‌ ಮತ್ತು ಸ್ಟಾಚ್ಯುಟರಿ ಆಡಿಟ್‌ ಎಂಬ ಮೂರು ಸ್ತರದ ಲೆಕ್ಕಪರಿಶೋಧನೆ ವ್ಯವಸ್ಥೆ ಬ್ಯಾಂಕಿನಲ್ಲಿದೆ. ಇದರ ಜತೆಗೆ ಆರ್‌ಬಿಐ ಕಾಲಕಾಲಕ್ಕೆ ಪರಿಶೋಧನೆ ನಡೆಸುತ್ತದೆ. ಇದರ ಹೊರತಾಗಿಯೂ ವಂಚನೆಗಳು ಸಂಭವಿಸುತ್ತಿವೆ ಎಂದಾದರೆ ವ್ಯವಸ್ಥೆಯಲ್ಲಿ ಎಲ್ಲೋ ಲೋಪ ಇದೆ ಎಂದರ್ಥ. ಈ ಲೋಪವನ್ನು ಸರಿಪಡಿಸಬೇಕಾದರೆ ವಂಚನೆ ಬೆಳಕಿಗೆ ಬಂದ ಬೆನ್ನಿಗೆ ಸಂಬಂಧಪಟ್ಟ ಬ್ಯಾಂಕಿನ ಉನ್ನತ ಸ್ತರದ ಅಧಿಕಾರಿಗಳನ್ನೇ ಅದಕ್ಕೆ ಹೊಣೆಯನ್ನಾಗಿಸುವ ವ್ಯವಸ್ಥೆಯೊಂದನ್ನು ಜಾರಿಗೆ ತರುವ ಕೆಲಸ ತುರ್ತಾಗಿ ಆಗಬೇಕಿದೆ.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.