ಆಡಳಿತ ಮತ್ತು ಸಿಬಂದಿ ಸುಧಾರಣೆ ಇಲಾಖೆಯಿಂದ ಸುತ್ತೋಲೆ

ದಕ್ಷತೆ ಹೆಚ್ಚಿಸುವ ನಡೆ

Team Udayavani, Feb 10, 2020, 7:20 AM IST

workers

ಸಾಹೇಬ್ರು ಕಾಫಿಗೆ ಹೋಗಿದ್ದಾರೆ ಎನ್ನುವುದು ನಮ್ಮ ಸರಕಾರಿ ಕಚೇರಿಗಳಲ್ಲಿ ಸಿಗುವ ಒಂದು ಸಾಮಾನ್ಯ ಉತ್ತರ. ಕಾಫಿ, ಟೀಗೆ ಹೋಗಲು ಅವರಿಗೆ ಹೊತ್ತುಗೊತ್ತು ಇಲ್ಲ. ಖಾಲಿ ಕುರ್ಚಿಗಳು ಸರಕಾರಿ ಕಚೇರಿಗಳ ಒಂದು ಸಾಮಾನ್ಯ ನೋಟ. ಈ ಹಿನ್ನೆಲೆಯಲ್ಲಿ ನೌಕರರ ಬಿಡುವಿಗೆ ಲಗಾಮು ತೊಡಿಸುವುದು ಅಪೇಕ್ಷಣೀಯವೂ ಹೌದು.

ಸರಕಾರಿ ನೌಕರರು ಕಾಫಿ, ಟೀ ಎಂದು ಕಚೇರಿ ಸಮಯದಲ್ಲಿ ಬಿಡುವು ಪಡೆದುಕೊಂಡು ಕಾಲ ಹರಣ ಮಾಡುವುದನ್ನು ನಿಯಂತ್ರಿಸಲು ಸರಕಾರ ಮುಂದಾಗಿದೆ.ಆಡಳಿತ ಮತ್ತು ಸಿಬಂದಿ ಸುಧಾರಣೆ ಇಲಾಖೆ ಈ ಸಂಬಂಧ ವಿಧಾನಸೌಧ, ವಿಕಾಸ ಸೌಧ ಮತ್ತು ಎಂ.ಎಸ್‌.ಬಿಲ್ಡಿಂಗ್‌ನಲ್ಲಿರುವ ಕಚೇರಿಗಳಿಗೆ ಕಳುಹಿಸಿರುವ ಸುತ್ತೋಲೆಯಲ್ಲಿ ಹಲವಾರು ಸಲಹೆ ಸೂಚನೆಗಳನ್ನು ನೀಡಲಾಗಿದ್ದು, ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಹೇಳಿದೆ. ಸರಕಾರಿ ನೌಕರರ ಕಾರ್ಯದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇದೊಂದು ಉತ್ತಮ ಉಪಕ್ರಮ.

ಸಾಹೇಬ್ರು ಕಾಫಿಗೆ ಹೋಗಿದ್ದಾರೆ ಎನ್ನುವುದು ನಮ್ಮ ಸರಕಾರಿ ಕಚೇರಿಗಳಲ್ಲಿ ಸಿಗುವ ಒಂದು ಸಾಮಾನ್ಯ ಉತ್ತರ. ಕಾಫಿ, ಟೀಗೆ ಹೋಗಲು ಅವರಿಗೆ ಹೊತ್ತು ಗೊತ್ತು ಇಲ್ಲ. ಖಾಲಿ ಕುರ್ಚಿಗಳು ಸರಕಾರಿ ಕಚೇರಿಗಳ ಒಂದು ಸಾಮಾನ್ಯ ನೋಟ. ಈ ಹಿನ್ನೆಲೆಯಲ್ಲಿ ನೌಕರರ ಬಿಡುವಿಗೆ ಲಗಾಮು ತೊಡಿಸುವುದು ಅಪೇಕ್ಷಣೀಯವೂ ಹೌದು. ಇದಕ್ಕಾಗಿ ಎಲ್ಲ ಕಚೇರಿಗಳಲ್ಲಿ ಹಾಜರಾತಿಯ ದಾಖಲಾತಿಯೊಂದನ್ನು ಇಡಲು ಸೂಚಿಸಲಾಗಿದೆ. ಕಚೇರಿ ಅವಧಿಯಲ್ಲಿ ಪ್ರತಿಸಲ ಕುರ್ಚಿ ಬಿಟ್ಟು ಹೊರ ಹೋಗುವಾಗ ಅದರಲ್ಲಿ ಹೊರಗೆ ಹೋಗುವ ಸಮಯ ಮತ್ತು ಒಳಗೆ ಬರುವ ಸಮಯವನ್ನು ದಾಖಲಿಸಬೇಕು. ಅಲ್ಲದೆ ಹೀಗೆ ಹೊರ ಹೋಗಬೇಕಾದರೆ ಮೇಲಧಿಕಾರಿಗಳ ಅನುಮತಿ ಪಡೆದುಕೊಳ್ಳಬೇಕು.

ಆದರೆ ಈ ಡಿಜಿಟಲ್‌ ಯುಗದಲ್ಲಿ ದಾಖಲಾತಿ ಇಡುವ ಹಳೇ ಸಂಪ್ರದಾಯ ಏಕೆ ಎನ್ನುವುದು ಆಶ್ಚರ್ಯವುಂಟು ಮಾಡುತ್ತಿದೆ. ಇದರ ಬದಲಾಗಿ ಹಾಜರಾತಿಗಿರುವಂತೆ ಇದಕ್ಕೂ ಬಯೋಮೆ ಟ್ರಿಕ್‌ನಂಥ ಡಿಜಿಟಲ್‌ ವ್ಯವಸ್ಥೆಯನ್ನೇ ಮಾಡಬಹುದಲ್ಲ.ಇದರಿಂದ ಪ್ರತಿ ಸಲ ಹೋಗುವ ಮತ್ತು ಬರುವ ಸಮಯ ಬರೆಯುವ ಹೆಚ್ಚುವರಿ ಕೆಲಸ ತಪ್ಪಬಹುದು.

ನಮ್ಮ ಸರಕಾರಿ ನೌಕರರು ಆಲಸಿಗಳು ಎಂಬ ಸಾರ್ವತ್ರಿಕವಾದ ಅಭಿಪ್ರಾಯವಿದೆ. ಆದರೆ ಇದು ಪೂರ್ತಿ ನಿಜವಲ್ಲ. ಸರಕಾರಿ ಇಲಾಖೆಗಳಲ್ಲಿ ದಕ್ಷರೂ, ಪ್ರಾಮಾಣಿಕರೂ ಆಗಿರುವ ಸಾಕಷ್ಟು ಅಧಿಕಾರಿಗಳೂ ಇದ್ದಾರೆ. ಆದರೆ ಇಷ್ಟೇ ಪ್ರಮಾಣದಲ್ಲಿ ಇರುವ ಆಲಸಿಗಳಿಂದಾಗಿ ಇಡೀ ಸಿಬಂದಿ ವರ್ಗಕ್ಕೆ ಕಳಂಕ ತಟ್ಟಿದೆ. ಸರಕಾರಿ ನೌಕರಿಗೆ ಸೇರಿದರೆ ಸಾಕು ಕೆಲಸ ಮಾಡಬೇಕೆಂದಿಲ್ಲ ಎಂದು ಹೆಚ್ಚಿನವರ ಭಾವನೆ. ಹಾಗೆಂದು ಇಂಥ ಮನೋಭಾವ ಉಂಟಾಗಲು ಪೂರ್ತಿಯಾಗಿ ನೌಕರರೇ ಕಾರಣವಲ್ಲ. ಇದರಲ್ಲಿ ಆಳುವವರ ಪಾಲೂ ಇದೆ ಎನ್ನುವುದನ್ನು ಮರೆಯಬಾರದು. ಅಸಮರ್ಪಕ ನೇಮಕಾತಿ ನೀತಿ ನಿಯಮಾವಳಿಗಳು, ಪ್ರಾಮಾಣಿಕರಿಗೆ ಕಿರುಕುಳ, ತರ್ಕ ರಹಿತ ವರ್ಗಾವಣೆಗಳು ಹೀಗೆ ಆಡಳಿತದ ಕಡೆಯಿಂದಲೂ ಸಾಕಷ್ಟು ಲೋಪ ದೋಷಗಳಿವೆ. ಇದು ದಶಕಗಳಿಂದ ಜಡ್ಡುಗಟ್ಟಿರುವ ಒಂದು ಅವ್ಯವಸ್ಥೆ.

ಕೆಲ ಹಂತದ ಸಿಬಂದಿಗಳಲ್ಲಿ ದಕ್ಷತೆ ಬರಬೇಕಾದರೆ, ಅವರ ಮೇಲಧಿಕಾರಿಗಳು ದಕ್ಷರಾಗಿರಬೇಕು. ಒಟ್ಟಾರೆ ವ್ಯವಸ್ಥೆ ಸರಿಯಾಗಬೇಕಾದರೆ ಮೊದಲು ಮೇಲಿನ ಹಂತವನ್ನು ಸರಿಪಡಿಸಬೇಕು. ಈ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕಾರ್ಯಾಂಗ ವ್ಯವಸ್ಥೆಯಲ್ಲಿ ಆಗಿರುವ ಕೆಲವೊಂದು ಗುಣಾತ್ಮಕವಾದ ಬದಲಾವಣೆಗಳನ್ನು ಉದಾಹರಿಸಬಹುದು. ಬೆಳಗ್ಗೆ 11 ಗಂಟೆಗೆ ಕಚೇರಿಗೆ ಬರುವುದು, ಅನಂತರ ಟೀ, ಕಾಫಿ ಎಂದು ಮಧ್ಯಾಹ್ನದ ತನಕ ಕಾಲ ತಳ್ಳುವುದು. ಊಟದ ವಿರಾಮದಲ್ಲಿ ಮನೆಗೆ ಹೋದವರು ವಾಪಾಸು ಬರುವ ಯಾವುದೇ ಖಾತರಿಯಿರುತ್ತಿರಲಿಲ್ಲ.

ಇದು ಕೇಂದ್ರ ಸರಕಾರದ ಆಡಳಿತ ಕಚೇರಿಗಳಲ್ಲಿ 2014ರಿಂದ ಮುಂಚೆ ಕಂಡು ಬರುತ್ತಿದ್ದ ದೃಶ್ಯ. ಆದರೆ ಮೋದಿ ಪ್ರಧಾನಿಯಾದ ಬಳಿಕ ತಾವೇ ಸ್ವತಹ ಬೆಳಗ್ಗೆ 9ಕ್ಕೂ ಮೊದಲೇ ಕಚೇರಿಗೆ ಬರುವ ಅಭ್ಯಾಸ ರೂಢಿಸಿಕೊಂಡರು. ಸಚಿವರು ಕೂಡ ಈ ಮೇಲ್ಪಂಕ್ತಿಯನ್ನು ಅನುಸರಿಸಲು ತೊಡಗಿದ ಬಳಿಕ ಕಚೇರಿಗಳ ಕಾಯಕ ಸಂಸ್ಕೃತಿಯೇ ಬದಲಾಯಿ. ಸಚಿವರೇ ಸಮಯಕ್ಕೆ ಸರಿಯಾಗಿ ಬರುವಾಗ ಅವರ ಕೈಕೆಳಗಿನ ಅಧಿಕಾರಿಗಳು ತಡ ಮಾಡಲು ಸಾಧ್ಯವೇ? ಕಾರ್ಯದರ್ಶಿಗಳು, ಅಧೀನ ಕಾರ್ಯದರ್ಶಿಗಳೆಲ್ಲ ಸಚಿವರಿಗಿಂತ ಮೊದಲೇ ಕಚೇರಿಯಲ್ಲಿರುವುದು ಅನಿವಾರ್ಯವಾಯಿತು. ಸಂಜೆ 6ಕ್ಕಿಂತ ಮೊದಲು ಯಾರೂ ಕಚೇರಿ ಬಿಡುವ ಹಾಗೇ ಇರಲಿಲ್ಲ. ಹೀಗೆ ಮೋದಿ ಸರಕಾರ ತಾನೇ ಮಾಡಿ ತೋರಿಸಿದ ಪರಿಣಾಮವಾಗಿ ಇಂದು ಅಧಿಕಾರಶಾಹಿಯಲ್ಲಿ ತುಸುವಾದರೂ ದಕ್ಷತೆ ತರಲು ಸಾಧ್ಯವಾಗಿದೆ. ರಾಜ್ಯದಲ್ಲೂ ಈ ಮೇಲ್ಪಂಕ್ತಿಯನ್ನು ಅನುಸರಿಸಬೇಕು. ಸಚಿವರೇ ಕಟ್ಟುನಿಟ್ಟಾಗಿ ಸಮಯ ಪಾಲನೆ ಮಾಡಿದರೆ ಅವರ ಕೈಕೆಳಗಿನ ಅಧಿಕಾರಿಗಳೂ ಪಾಲಿಸುತ್ತಾರೆ. ಅಲ್ಲದೆ ದಕ್ಷ, ಪ್ರಾಮಾಣಿಕ ಅಧಿಕಾರಿಗಳನ್ನು ಪದೇ ಪದೆ ವರ್ಗಾಯಿಸಿ ಕಿರುಕುಳ ನೀಡುವಂಥ ಪ್ರವೃತ್ತಿಗಳಿಗೆ ಕಡಿವಾಣ ಹಾಕುವುದು ಕೂಡ ಅಗತ್ಯ.

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.