ಹಬ್ಬ: ಜಗಕೆ ಕಾಣಿಪುದೊಂದು, ಮನೆಯ ಜನಕೊಂದು.


Team Udayavani, Oct 22, 2017, 5:06 PM IST

prakash-raj.jpg

“ಏನಪ್ಪಾ, ಈ ಸಲ ಹೋಳಿ ಹಬ್ಬಕ್ಕೆ ವಿಶ್‌ ಮಾಡ್ಲೇ ಇಲ್ಲ?’ ಅಂತ ಮಗಳು ಕೇಳಿದಳು. ಹೋಳಿ ನಮ್ಮ ಸಂಸ್ಕೃತಿ ಅಲ್ಲಮ್ಮ ಅಂದೆ. ಉತ್ತರದ ಬೆನ್ನಲ್ಲೇ ಇನ್ನೊಂದು ಪ್ರಶ್ನೆ. “ಸಂಸ್ಕೃತಿ ಅಂದ್ರೆ ಏನಪ್ಪಾ?’ ತತ್‌ಕ್ಷಣ, ಒಂದೇ ಹಿಡಿಯಲ್ಲಿ ಉತ್ತರಿಸುವಂಥದ್ದಲ್ಲ ಇದು. ಸಂಸ್ಕೃತಿ ಹಿಂದೆ ಹರಿಯುವ ಬದುಕು, ಹರಡಿರುವ ನಂಬಿಕೆ ಬಗ್ಗೆ ಹೇಳಬೇಕಿತ್ತು ಅವಳಿಗೆ. ನಮ್ಮದು ಹಳ್ಳಿಗಳಿಂದ ಕೂಡಿದ ಬಡವರ ದೇಶ. ಚಪ್ಪಲಿ ಇಲ್ಲದೆ ನಡೆಯುವ ಜನ ನಮ್ಮಲ್ಲಿ ಕೋಟಿಗಟ್ಟಲೆ ಇದ್ದಾರೆ. ಅವರು ಪ್ರಯಾಣ ಮಾಡುವಾಗ ಅಲ್ಲಲ್ಲಿ ಕೂತು ದಣಿವಾರಿಸಿಕೊಳ್ಳಲು ಕಟ್ಟೆ ಕಟ್ಟಬೇಕು ಅಂತ ಯೋಚಿಸುವುದು ಒಂದು ಊರಿನ ಸಂಸ್ಕೃತಿ. ಶತ್ರುವೇ ಬಂದರೂ ಕುಡಿಯುವ ನೀರನ್ನು ಅವರು ಕೇಳುವ ಮೊದಲೇ ಕೊಡಬೇಕು ಅನ್ನೋದು ನಮ್ಮ ಮಣ್ಣಿನ ಸಂಸ್ಕೃತಿ. ಒಂದು ಬುಡಕಟ್ಟಿನ ಜನರ ಪ್ರತಿಯೊಂದು ಮನೆಯಲ್ಲೂ ಗಂಧದ ಮರವಿರುತ್ತದೆ. ಮರಗಳನ್ನು ಕಡಿಯಬಾರದು ಅಂತ ತಿಳಿದಿರುವ ಅವರು, ಹಣೆಗೆ ಗಂಧದ ಬೊಟ್ಟು ಇಟ್ಟುಕೊಳ್ಳುವುದು ಪಾಪ, ಹಾಗೇನಾದರು ಇಟ್ಟುಕೊಂಡರೆ ಊರ ಸ್ವಾಮಿಯು ದಂಡಿಸುತ್ತಾನೆ ಅಂತ ನಂಬಿ ಪ್ರಕೃತಿಯನ್ನು ಕಾಪಾಡಿಕೊಳ್ಳುವುದು ಅವರ ಒಂದು ಸಂಸ್ಕೃತಿ. ರಾತ್ರಿ ಮಲಗುವಾಗ ಊಟವನ್ನು ಉಳಿಸಿ, ಅದನ್ನು ಎತ್ತಿಡೋದು ದಿಢೀರಂತ ಬರುವ ಅತಿಥಿಗಳಿಗೆ ಊಟಹಾಕಲು ಅನ್ನೋದು ಮನೆಯ ಸಂಸ್ಕೃತಿ. ಹೀಗೆ ಮಣ್ಣಿಗೂ ಮನುಷ್ಯನಿಗೂ ಅಸ್ತಿತ್ವವಾಗಿ ಸಂಸ್ಕೃತಿ ಇದೆ. ಇಂಥ ಸಂಸ್ಕೃತಿಯ ಹಿಂದೆ ದಟ್ಟವಾದ ನಂಬಿಕೆ ಇದೆ. ಬದುಕು ಇದೆ. ಇವತ್ತು ಈ ಬದುಕಿನ ಉದ್ದೇಶಗಳೇ ಬದಲಾಗುತ್ತಿರುವುದರಿಂದ ಸಂಸ್ಕೃತಿಯೆಡೆಗಿನ ನಮ್ಮ
ನೋಟವೂ ಬದಲಾಗುತ್ತಿದೆ. 

ನನ್ನ ಮಗಳು “ಅಪ್ಪಾ ಹೋಳಿ ಹಬ್ಬಕ್ಕೆ ಏಕೆ ವಿಶ್‌ ಮಾಡಲಿಲ್ಲ?’ ಅಂತ ಕೇಳಿದಾಕ್ಷಣ ಉತ್ತರಿಸಲು ಹಿಂಜರಿದದ್ದು ಏಕೆ ಅಂತ ಯೋಚಿಸುತ್ತಾ ಕುಳಿತೆ. ಕೆಲ ವರ್ಷಗಳ ಹಿಂದೆ ಮಹಾರಾಷ್ಟ್ರದ ಪೂನಾ ನಗರದಲ್ಲಿ ಹೋಳಿಹಬ್ಬದಂದು ನಡೆದ ಘಟನೆ ಕಣ್ಣ ಮುಂದೆ ಬಂದುಬಿಟ್ಟಿತು. ಅಲ್ಲಿ ಬಡವರು, ಶ್ರೀಮಂತರು, ವಿದ್ಯಾವಂತರು, ಹೆಂಗಸರು, ಗಂಡಸರು, ಮಕ್ಕಳು ಎಲ್ಲರೂ ಸೇರಿ ಹೋಳಿಯಾಡಿ
ಹಬ್ಬವನ್ನು ಕೊಂಡಾಡಿದರು. ಸಂಭ್ರಮ ಬಣ್ಣಗೆಡಲು ಜಾಸ್ತಿ ಹೊತ್ತು ಬೇಕಿರಲಿಲ್ಲ. ಇದ್ದಕ್ಕಿದ್ದಂತೆ ಹೋಲಿಯಾಡುತ್ತಿದ್ದ 270 ಜನ 
ರನ್ನು ಒಂದೇ ಸಲ ಅರೆಸ್ಟ್‌ ಮಾಡಿದ ಸುದ್ದಿ ಕೇಳಿಬಂತು. ನೋಡಿದರೆ, ಇದರಲ್ಲಿ ಮುಕ್ಕಾಲು ಪಾಲು ಹದಿಹರೆಯದವರು. ಅದೂ ವಿದ್ಯಾವಂತ ರಾದ, ಕೈತುಂಬ ಸಂಬಳ ಪಡೆಯುವ ಯುವಕ, ಯುವತಿಯರು. ಅಸಲಿ ವಿಚಾರ ಏನೆಂದರೆ, ಇವರೆಲ್ಲರೂ
ರೇವ್‌ ಪಾರ್ಟಿಯಲ್ಲಿ ಭಾಗಿಗಳಾಗಿದ್ದರು. ಅದಕ್ಕಾಗಿ ಪೊಲೀಸರು ಅರೆಸ್ಟ್‌ ಮಾಡಿ ಕರೆದೊಯ್ಯುತ್ತಿದ್ದಾಗ ಮುಖಗಳನ್ನು ಬಟ್ಟೆಗಳಿಂದ ಮುಚ್ಚಿಕೊಂಡು ತಲೆ ತಗ್ಗಿಸಿ ಹೋಗುತ್ತಿದ್ದರು. ಹಿಂದಿನ ರಾತ್ರಿ ಇದ್ದ ಸಂತೋಷ ಮರುದಿನದ ಹಗಲಲ್ಲಿ ಅವಮಾನವಾಗಿ
ಎದುರಿಗೆ ನಿಂತಿದೆ. ಅರೆಸ್ಟ್‌ ಆದವರ ಅಪ್ಪ ಅಮ್ಮಂದಿರಿಗೆ ಸುದ್ದಿ ಮುಟ್ಟಿತು. “ನಮ್ಮ ಮಕ್ಕಳು ಪಾರ್ಟಿಗೆ ಹೋಗಿದ್ದರಾ?’ ಅಂತ ಶಾಕ್‌ ಆದರು. ಆ ರೇವ್‌ ಪಾರ್ಟಿಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ತಮ್ಮ ಸಂಭ್ರಮ, ಸಡಗರದ ಬಗೆಗಿನ ಪಾಪಪ್ರಜ್ಞೆಯ
ಅರಿವಿತ್ತು. ಅದಕ್ಕೆ ತಾವು ಎಲ್ಲಿಗೆ ಹೋಗುತ್ತಿದ್ದೇವೆ ಅಂತ ಹೆತ್ತವರಿಗೆ ಹೇಳಿಯೇ ಇರಲಿಲ್ಲ. ಮಾದಕವಸ್ತುಗಳ ಮತ್ತಿನಲ್ಲಿ ಬದುಕನ್ನು ಸಂಭ್ರಮಿಸಬಹುದು ಎಂದು ಯೋಚಿಸುವ ಆ ಯುವ ಪೀಳಿಗೆಯನ್ನು ನೋಡಿದಾಗ ಒಬ್ಬ ತಂದೆಯಾಗಿ ನನ್ನ ಎದೆ ತಲ್ಲಣಗೊಂಡಿತು.
“ಯಾಕಪ್ಪಾ ನನಗೆ ಹೋಲಿಗೆ ವಿಶ್‌ ಮಾಡಲಿಲ್ಲ?’ ಮತ್ತದೇ ಮಗಳ ಪ್ರಶ್ನೆ ಕಾಡತೊಡಗಿತು. ತಮ್ಮ ಮಕ್ಕಳನ್ನು ಯಾರೋ ಯಾಮಾರಿಸಿ, ರೇವ್‌ ಪಾರ್ಟಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ಹೆತ್ತವರು ಪೊಲೀಸರ ಮುಂದೆ ರೋಧಿಸುತ್ತಿದ್ದಾರೆ.
ಹಾಗಂತ ಅವರೆಲ್ಲ ಮಕ್ಕಳ ಮನಸ್ಸನ್ನು ಅರಿಯದವರೇ ಅಥವಾ ಆ ಕ್ಷಣದಲ್ಲಿ ತಮ್ಮ ಮಕ್ಕಳನ್ನು ಪೊಲೀಸರಿಂದ ಹೇಗಾದರು ಮಾಡಿ ಕಾಪಾಡಬೇಕೆಂದು ಏನೂ ಅರಿಯದಂತೆ ನಟಿಸುತ್ತಿದ್ದಾರೆಯೇ? ಕಂಡು ಹಿಡಿಯಲು ಆಗಲಿಲ್ಲ. ಬಣ್ಣದ ಸೌಂದರ್ಯ ಬೆಳಕಿನಲ್ಲೇ ಗೊತ್ತಾಗೋದು. ಹೋಳಿ ಹಬ್ಬವನ್ನು ಕತ್ತಲಲ್ಲಿ ಕೊಂಡಾಡಬೇಕು ಅಂತ ಅವರ ಮಕ್ಕಳು ಯೋಚಿಸಿದಾಗಲೇ ಅವರು ಒಬ್ಬರ
ಮೇಲೊಬ್ಬರು ಎರಚಿಕೊಂಡದ್ದು ಬಣ್ಣಗಳನ್ನಲ್ಲ, ಮಸಿಯನ್ನು ಎಂಬುದು ಅರ್ಥವಾಗುತ್ತದೆ. ಮಾದಕ ವಸ್ತುಗಳಿಂದ -ಕಾಂಡೋಮ್‌ವರೆಗೆ
ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾಮಿಸುವುದಕ್ಕೆ ಮುಂಜಾಗ್ರತೆ ಇರಬೇಕೆಂದು ಯೋಚಿಸಿದ ಮಕ್ಕಳಿಗೂ, ಈ ಕ್ಷಣದಲ್ಲಿ ಹೇಗಾದರು ಮಕ್ಕಳನ್ನು ಬಚಾವ್‌ ಮಾಡಲು ಹವಣಿಸುತ್ತಿರುವ ಹೆತ್ತವರಿಗೂ ದೊಡ್ಡ ವ್ಯತ್ಯಾಸವೇನು ಕಾಣಿಸುತ್ತಿಲ್ಲ. ಇದೆಲ್ಲ
ಎಲ್ಲೋ ದೂರದ ಮಹಾರಾಷ್ಟ್ರದಲ್ಲಿ ನಡೆದದ್ದು ಅಂತ ನಾವೆಲ್ಲ ಮುಗುಮ್ಮಾಗಿರಲು ಆಗದು. ಆಭಾಸವೂ, ಹಿಂಸೆಯೂ ನಮ್ಮ ಸಡಗರಗಳಲ್ಲೂ ಸೇರಿವೆ. ಸಂಭ್ರಮಿಸುವ ಅರ್ಥ ತಿಳಿಯದ ನಮ್ಮ ಮಕ್ಕಳೂ ಇದ್ದಾರೆ. 

ನನ್ನ ಪ್ರೀತಿಯ ಗೆಳತಿ ಮುಂಬಯಿಯಲ್ಲಿದ್ದಾಳೆ. ಮಣ್ಣಿನ ಹಬ್ಬ ಹರಿದಿನಗಳನ್ನು ಸಂಭ್ರಮಿಸಿ ಬದುಕಿಬಿಡಬೇಕೆಂಬ ಉತ್ಸಾಹದಿಂದಿದ್ದವಳು. ತನ್ನ ಸಂಸ್ಕೃತಿ ತನ್ನ ಅಸ್ತಿತ್ವ ಅಂತ ಬೀಗುತ್ತಿದ್ದ ಆಕೆಗೆ ಹಲವು ವರ್ಷಗಳಿಂದ ಹೋಳಿ ಹಬ್ಬ ಅಂದರೆ ಅಲರ್ಜಿ. “ಹೋಲೀನ ಏಕೆ ಆಚರಿಸೋಲ್ಲ?’ ಅಂತ ಕೇಳಿದೆ. “ಬಣ್ಣಗಳ ಹಿಂದೆ ಅವಿತು ಅಸಹ್ಯವಾಗಿ ವರ್ತಿಸುವ ಆ ಥರ ಸಂಭ್ರಮ
ಬೇಕಿಲ್ಲ’ ಅಂತ ಮುಖಕ್ಕೆ ರಾಚುವಂತೆ ಹೇಳಿದಳು. ಆಕೆಯ ಮಾತಿನ ಹಿಂದೆ ಕಹಿಘಟನೆಯೊಂದು ಇತ್ತು. ಹಲವು ವರ್ಷಗಳ ಹಿಂದೆ ಈಕೆ ಒಬ್ಬರ ಮೇಲೊಬ್ಬರು ಬಣ್ಣಗಳನ್ನು ಎರಚುತ್ತಾ, ಬೀದಿ, ಬೀದಿಗಳಲ್ಲಿ ಸಂತೋಷದ ಓಕಳಿ ಆಡುತ್ತಿದ್ದಾಗ, ಅವಳ ಹಾಗೇ ಮೈಯೆಲ್ಲಾ ಬಣ್ಣ ಮೆತ್ತಿಕೊಂಡವನೊಬ್ಬ ತುಂಬಾ ಅನುಚಿತವಾಗಿ ನಡೆದುಕೊಡಿದ್ದಾನೆ. ಅವನು ಯಾರೆಂದು ಕಂಡು ಹಿಡಿದು ಹೇಳಲಾಗಲಿಲ್ಲ ಅವಳಿಗೆ.
ತನ್ನ ಗೆಳತಿಯರಿಗೂ ಇಂಥದೇ ಅನುಭವವಾಗಿದೆ. ಆಗಿನಿಂದ ಹೋಳಿ ಅಂದರೆ ಆಕೆಗೆ ಆಗೋಲ್ಲ. ಹೀಗೆ ಬಣ್ಣದ ಮುಖವಾಡದೊಂದಿಗೆ ಹೆಣ್ಣು ಮಕ್ಕಳನ್ನು ಬಲತ್ಕಾರ ಮಾಡಿದ ಬಹಳಷ್ಟು ಮಂದಿಯನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ದಿನದಿಂದ ದಿನಕ್ಕೆ
ಇಂಥ ಸಡಗರದ ನೆಪದಲ್ಲಿ ಬಹಳಷ್ಟು ಘಟನೆಗಳು ದಾಖಲೆಯಾದ ಉದಾಹರಣೆ ಇದೆ. 

ಬದುಕು ಎನ್ನುವುದು ನಮಗೆ ದೊರೆತ ವರ. ಅದನ್ನು ಸರಿಯಾಗಿ ಬಳಸಲು ತಿಳಿದಿರಬೇಕು. ಇಲ್ಲವಾದಲ್ಲಿ ಭಸ್ಮಾಸುರರಾಗಿಬಿಡುತ್ತೇವೆ. ಈ ವರಕ್ಕೆ ಬೆಳೆಸುವ ಶಕ್ತಿಯೂ ಇದೆ, ಅಳಿಸುವ ಶಕ್ತಿಯೂ ಇದೆ. ಬದುಕೆಂಬ ವರವನ್ನು ತಪ್ಪಾಗಿ ಬಳಸಿಕೊಳ್ಳುವ ಯೋಚನೆ ಮನುಷ್ಯನಿಗೆ ಬಂದೊಡನೆ ತನ್ನ ತಲೆಯ ಮೇಲೆ ತಾನೇ ಕೈ ಇಟ್ಟುಕೊಳ್ಳುವ ಕ್ಲೈಮ್ಯಾಕ್ಸ್‌ ಶುರುವಾಗಿಬಿಡುತ್ತದೆ. ಬದುಕನ್ನು ಕೊಂಡಾಡಬೇಕು, ಸಂಭ್ರಮಿಸಬೇಕು. ಇದ್ದ ಹಲವು ವರ್ಷಗಳಾದರೂ ತೀವ್ರವಾಗಿ ಜೀವಿಸಿಬಿಡಬೇಕು. ಇದು ನನ್ನ ಪಾಲಿಸಿ.
ಏಕೆಂದರೆ, ಸಾವಿನ ಬಗ್ಗೆ ಚಿಂತೆ ಇಲ್ಲ ನನಗೆ. ಅದು ಒಮ್ಮೆ ಮಾತ್ರ ಬರುತ್ತದೆ. ಬದುಕಿನ ಬಗ್ಗೆಯೇ ಅಕ್ಕರೆ. ಪ್ರತಿದಿನ, ಪ್ರತಿ ಕ್ಷಣ ಬದುಕಿ ತೀರಲೇಬೇಕಲ್ಲವೇ? 

ಚೆನ್ನೈ ನಗರದ ಕಾಲೇಜ್‌ಗಳು ಬಸ್‌ಡೇ ಅಂತ ಸಂಭ್ರಮಿಸುವ ದಿನವೊಂದಿದೆ. ವರ್ಷವಿಡೀ ಪಯಣಿಸುವ ಮಹಾನಗರ ಪಾಲಿಕೆಯ ಬಸ್‌ಅನ್ನು ಅಲಂಕರಿಸಿ ಅದರ ಡ್ರೈವರ್‌ ಮತ್ತು ಕಂಡಕ್ಟರ್‌ಗಳಿಗೆ ಕೃತಜ್ಞತೆ ಹೇಳುವ ಸಂಭ್ರಮ. ಅದ್ಭುತವಾದ ಕಾನ್ಸೆಪ್ಟ್. ಆದರೆ ಸಿಕ್ಕಾಪಟ್ಟೆ ಕುಡಿದು, ಅದೇ ಬಸ್ಸಿನ ಚಾಲಕರನ್ನು, ದಾರಿ ಹೋಕರನ್ನು ಗೇಲಿ ಮಾಡುತ್ತಾ ಹೆಣ್ಣು ಮಕ್ಕಳನ್ನು ಚುಡಾಯಿಸುತ್ತಾ ಅಸಹ್ಯವಾಗಿ ವರ್ತಿಸುವ ಯುವಕರನ್ನು ನಾನು ಹಲವು ಬಾರಿ ನೋಡಿದ್ದೇನೆ. ಆ ಬಸ್‌ನಲ್ಲಿ ವರ್ಷವಿಡೀ ಪಯಣಿಸುವ ವಿದ್ಯಾರ್ಥಿನಿಯರು ಆ ಬಸ್‌ಡೇ ದಿವಸ ಇದೇ ಕಾರಣಕ್ಕೆ ಬಸ್‌ ಹತ್ತಲು ಹಿಂಜರಿಯುತ್ತಾರೆ. ಹೀಗೆ ಹೈದರಾಬಾದ್‌ನ ರಸ್ತೆಗಳಲ್ಲಿ, ಕೋಮುಗಲಭೆಯ ಆತಂಕದ ವಾತಾವರಣದಲ್ಲಿ ಜರುಗುವ ವಿನಾಯಕ ಚತುರ್ಥಿಯ ಮೆರವಣಿಗೆಗಳನ್ನು, ಅಸ್ವಸ್ಥರಾದ ಹಿರಿಯರು, ಹೆದರುವ ಕಂದಮ್ಮಗಳು, ವೇದನೆಯನ್ನು ಅನುಭವಿಸುತ್ತಾ ಬಾಲ ಮುದುರಿ ಕೂತ ಮೂಕ ಪ್ರಾಣಿಗಳನ್ನು ಲೆಕ್ಕಿಸದೆ ಪಟಾಕಿ
ಸಿಡಿಸುವ ದೀಪಾವಳಿಗಳನ್ನು, ಎಲ್ಲರನ್ನೂ ಬೆಚ್ಚಿ ಬೀಳುವಂತೆ ಕರ್ಕಷವಾದ ಸಿನಿಮಾ ಹಾಡಿನ ಮಟ್ಟಿಗೆ ಅರಚುವ ದೇವರನಾಮ ಸ್ಮರಣೆಗಳನ್ನು, ಮೀಸೈಲ್‌ಗ‌ಳಂತೆ ಹಾರುವ ಬೀರ್‌ಬಾಟಲ್‌ಗ‌ಳ ನಡುವೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುವ ಹ್ಯಾಪಿ ನ್ಯೂಇಯರ್‌ಗಳನ್ನು, ಅಷ್ಟೇಕೆ, ಇತ್ತೀಚೆಗೆ ಉತ್ತರಭಾರತದಲ್ಲಿ ಹೆಲಿಕಾಪ್ಟರ್‌ ಎಂಬ ಪುಷ್ಪಕವಿಮಾನದಲ್ಲಿ ರಾಮಾ, ಸೀತೆ, ಲಕ್ಷ್ಮಣರೂ ಬಂದಿಳಿದದ್ದನ್ನು ನೋಡಿದ್ದೇವೆ. ಇವೆಲ್ಲವೂ ನಮ್ಮ ಸಂಸ್ಕೃತಿ, ಅದರ ಮೇಲೆ ನಾವಿಟ್ಟ ನಂಬಿಕೆಗಳೆಲ್ಲ ಬುಡಮೇಲಾಗುತ್ತಿರುವ ಉದಾಹರಣೆಗಳಂತೆ ಕಾಣುತ್ತಿಲ್ಲವೇ? ನಾವು, ನಮ್ಮ ಹಬ್ಬ, ಅದರ ಹಿಂದಿನ ಸಂಸ್ಕೃತಿಯನ್ನು ನೋಡುತ್ತಿರುವುದೇ ಹೀಗೆ. ನೋಟ
ಒಂದು ಭಾವ ಹಲವು. ಹಿಂದೆ ಇದ್ದದ್ದು ಭಾವ ಒಂದು ನೋಟ ಹಲವು -ಆಗ ಅದರಲ್ಲಿದ್ದ ಸಂಭ್ರಮ, ಖುಷಿ ಈಗಿನ ಹಬ್ಬಗಳಲ್ಲಿ ಇಲ್ಲ. ಹೀಗೆ ನಗರಗಳಿಂದ ಪ್ರಾರಂಭವಾಗಿ ಹಳ್ಳಿಯವರೆಗೆ ಜರುಗುವ ಸಡಗರ, ಸಂಭ್ರಮಗಳು ಪೊಲೀಸರ ಬಿಗಿಕಾವಲಿನಲ್ಲಿ ನಡೆಯುತ್ತಿರುವುದು ದುರಂತ. “ಇವತ್ತು ಹಬ್ಬ, ಮನೆಯಿಂದ ಹೊರಗೆ ಹೋಗಬೇಡಿ’ ಅಂತ ಎಚ್ಚರಿಸುವಷ್ಟರ ಮಟ್ಟಿಗೆ
ಸಡಗರಗಳಾಗಿಬಿಡಬಾರದು. ಒಂದು ಹಣತೆ ನೂರಾರು, ಸಾವಿರಾರು ದೀಪ ಗಳನ್ನು ಹೊತ್ತಿಸುವಂತೆಯೇ, ಒಂದು
ಹಬ್ಬವೇ ಲಕ್ಷಾಂತರ ಬದುಕುಗಳ ದೊಡ್ಡ ಸಡಗರ, ಸಂಭ್ರಮವಾಗಬೇಕು. ಇಲ್ಲವಾದರಲ್ಲಿ ಸಂತೋಷವೇ ಅವಮಾನವಾಗುತ್ತದೆ.
ಏನಂತೀರಿ?

ಟಾಪ್ ನ್ಯೂಸ್

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.