ಸುಳ್ಳಾದ ಸಿದ್ಧಾಂತಗಳು


Team Udayavani, Jan 23, 2019, 12:30 AM IST

b-14.jpg

ಆರ್ಥಿಕ ಅಸಮಾನತೆ ಹೆಚ್ಚಾಗುತ್ತಿದೆ ಎನ್ನುವುದರಷ್ಟೇ ಕಳವಳಕ್ಕೆ ದೂಡುವ ಮತ್ತೂಂದು ಅಂಶವೆಂದರೆ, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಮ್ಮ ಬಳಿ ಹೊಸ ಯೋಚನೆಗಳೇ ಇಲ್ಲ ಎನ್ನುವುದು.

ಇಡೀ ಪ್ರಪಂಚದಲ್ಲಿ, ಅದರಲ್ಲೂ ಮುಖ್ಯವಾಗಿ ಭಾರತದಲ್ಲಿ ಒಂದು ಮಾತನ್ನು ಪದೇ ಪದೆ ಹೇಳಲಾಗುತ್ತದೆ: “ಶ್ರೀಮಂತರು ಶ್ರೀಮಂತರಾಗುತ್ತಾ ಸಾಗಿದರೆ, ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ’ ಎಂಬ ಮಾತದು. ಈ ಸಾಲು ಎಷ್ಟು ಬಾರಿ ಬಳಕೆಯಾಗಿಬಿಟ್ಟಿದೆಯೆಂದರೆ, ಅದನ್ನು ಕ್ಲೀಷೆ ಎನ್ನಲಾಗುತ್ತದೆ. ಆದರೆ, ಅದನ್ನು ಸುಳ್ಳು ಎಂದು ತಳ್ಳಿಹಾಕುವುದಕ್ಕಂತೂ ಸಾಧ್ಯವೇ ಇಲ್ಲ. 

ಇತ್ತೀಚೆಗೆ, ಆರ್ಥಿಕ ಅಸಮಾನತೆಯ  ಕುರಿತು ಆಕ್ಸ್‌ಫ್ಯಾಮ್‌ ಇಂಟರ್‌ನ್ಯಾಷನಲ್‌ ಬಿಡುಗಡೆ ಮಾಡಿರುವ ವರದಿಯು ಪ್ರಪಂಚದಲ್ಲಿನ ಆರ್ಥಿಕ ಅಸಮಾನತೆಯ ಮೇಲೆ ಬೆಳಕು ಚೆಲ್ಲಿದ್ದು, ಪ್ರತಿ ರಾಷ್ಟ್ರಗಳಿಗೂ ಈ ವರದಿಯಲ್ಲಿನ ಅಂಶಗಳು ತಮ್ಮ “ಆರ್ಥಿಕ ನೀತಿ’ಗಳನ್ನು ಮರುಪರಿಶೀಲಿಸಲು ಕಿವಿಹಿಂಡುವಂತಿವೆ. ಕಳೆದ ವರ್ಷದ ಆಧಾರದಲ್ಲಿ ಸಿದ್ಧಪಡಿಸಲಾಗಿರುವ ಈ ವರದಿಯು ಇಡೀ ಪ್ರಪಂಚದಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚುತ್ತಿರುವುದಷ್ಟೇ ಅಲ್ಲ, ಅದು ಮೊದಲಿಗಿಂತಲೂ ಹೆಚ್ಚು ವೇಗ ಪಡೆಯುತ್ತಿದೆ ಎನ್ನುತ್ತಿದೆ. 

ಪ್ರಪಂಚದ 380 ಕೋಟಿ ಜನರ ಬಳಿ ಇರುವ ಒಟ್ಟಾರೆ ಹಣಕ್ಕಿಂತಲೂ ಹೆಚ್ಚು ಹಣ ಕೇವಲ 26 ಶ್ರೀಮಂತರ ಬಳಿ ಇದೆಯಂತೆ. ಈ ಪರಿಸ್ಥಿತಿ ಭಾರತದಲ್ಲೇನೂ ಭಿನ್ನವಾಗಿಲ್ಲ.  ದೇಶದ ಒಂದು ಪ್ರತಿಶತ ಸಿರಿವಂತರ ಬಳಿ ಒಟ್ಟು 51.53 ಪ್ರತಿಶತ ಸಂಪತ್ತಿ ಇದೆ ಎನ್ನುತ್ತದೆ ಆಕ್ಸ್‌ಫ್ಯಾಮ್‌ನ ವರದಿ. ಕಳೆದ ಹಲವಾರು ದಶಕಗಳಿಂದ ನಾವು ನಮ್ಮ ಅರ್ಥವ್ಯವಸ್ಥೆಯನ್ನು ಸದೃಢಗೊಳಿಸಿ, ಅದನ್ನು ವಿಶ್ವ ವಿತ್ತ ವ್ಯವಸ್ಥೆಯೊಂದಿಗೆ ಪೈಪೋಟಿ ನಡೆಸುವಂತೆ ಮಾಡಲು ಪ್ರಯತ್ನಿ ಸುತ್ತಿದ್ದೇವೆ. ಆದರೆ ಆರ್ಥಿಕ ಅಸಮಾನತೆಯ ವಿಷಯದಲ್ಲಿ ಈ ಗುರಿ ತಲುಪಿದಂತಾಗಿರುವುದು ದೌರ್ಭಾಗ್ಯ! ಕೆಲವು ದಶಕಗಳ ಹಿಂದೆಯೇ ಪ್ರಪಂಚದಲ್ಲಿ ಆರ್ಥಿಕ ಅಸಮಾನತೆಯ ಅಂತರವನ್ನು ತಗ್ಗಿಸಲು ತರಹೇವಾರಿ ಪ್ರಯತ್ನಗಳಾಗಿವೆ. ಸಮಾನತೆಯ ಸಮಾಜವನ್ನು ಸೃಷ್ಟಿಸುವ ಕನಸು ಬಿತ್ತುತ್ತಾ ಕಮ್ಯುನಿಸಂ ಮತ್ತು ಸೋಷಿಯಲಿಸಂನಂಥ ತತ್ವಗಳೂ ಬಂದವಾದರೂ, ಆ ಇಸಂಗಳಿಂದಲೂ ಸಮಾನತೆ ತರಲು ಆಗಲಿಲ್ಲ, ಬದಲಾಗಿ ಅಸಮಾನತೆಯೇ ಹೆಚ್ಚಾಗಿಬಿಟ್ಟಿತು. ಲಕ್ಷಾಂತರ ಜನರು ಪ್ರಾಣಕಳೆದುಕೊಂಡರು.   

ಯಾವ ಸಮಯದಲ್ಲಿ ಈ ಸಿದ್ಧಾಂತಗಳು ಸದ್ದು ಮಾಡಲಾರಂಭಿಸಿದ್ದವೋ ಅದೇ ವೇಳೆಯಲ್ಲೇ “ಟ್ರಿಕಲ್‌ ಡೌನ್‌ ಥಿಯರಿ’ ಎಂದು ಕರೆಯಲ್ಪಡುವ ಒಂದು ಪರ್ಯಾಯ ಸಿದ್ಧಾಂತವೂ ಹುಟ್ಟಿಕೊಂಡಿತು. ಈಗಿನ ಬಹುತೇಕ ರಾಷ್ಟ್ರಗಳು ಇದೇ ಸಿದ್ಧಾಂತವನ್ನು ಅಪ್ಪಿಕೊಂಡಿವೆ. ಆರ್ಥಿಕತೆಯ ಒಟ್ಟು ಸಂಗ್ರಹಣೆಯು ಹೆಚ್ಚಾಗುತ್ತಾ ಹೋದಂತೆಲ್ಲ, ಆ ಸಂಪತ್ತಿಯು ಸಮಾಜದ ಕೆಳ-ಆದಾಯದ ವರ್ಗಕ್ಕೂ ಹರಿದುಬರುತ್ತದೆ ಮತ್ತು ನಿರುದ್ಯೋಗ ಹಾಗೂ ಆದಾಯ ವಿತರಣೆಯಲ್ಲಿನ ಅಸಮಾನತೆಗಳು ತಮ್ಮಷ್ಟಕ್ಕೆ ತಾವೇ ಬಗೆಹರಿಯುತ್ತವೆ ಎನ್ನುವ ಈ ಆಶಾದಾಯಕ ಸಿದ್ಧಾಂತವೂ ಈಗ ಪೊಳ್ಳೆಂದು ಸಾಬೀತಾಗಿದೆ. ಜಗತ್ತಿನಲ್ಲಿ ಆರ್ಥಿಕ ಅಸಮಾನತೆ ಹೆಚ್ಚಾಗುತ್ತಿದೆ ಎನ್ನುವುದರಷ್ಟೇ ಕಳವಳಕ್ಕೆ ದೂಡುವ ಮತ್ತೂಂದು ಅಂಶವೆಂದರೆ, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಮ್ಮ ಬಳಿ ಹೊಸ ಯೋಚನೆಗಳೇ ಇಲ್ಲ ಎನ್ನುವುದು. ಯಾವೊಬ್ಬ ಅರ್ಥಶಾಸ್ತ್ರಜ್ಞರಿಗೂ ಪರಿಹಾರ ತೋಚುತ್ತಿಲ್ಲ, ಯಾವೊಂದು ರಾಜಕೀಯ ಪಕ್ಷವೂ ಪರಿಹಾರ ತೋರಿಸುತ್ತಿಲ್ಲ. 

ವಿಶ್ವ ಆರ್ಥಿಕ ಸಮ್ಮೇಳನ ನಡೆಯುತ್ತಿರುವ ಸಮಯದಲ್ಲೇ ಆಕ್ಸ್‌ಫ್ಯಾಮ್‌ನ ವರದಿ ಹೊರಬಂದಿರುವುದು ವಿಶೇಷ. ಈ ಬಾರಿಯ ವರ್ಲ್ಡ್ ಎಕನಾಮಿಕ್‌ ಫೋರಂನ ಸಮ್ಮೇಳನದಲ್ಲಿ ಜಗತ್ತಿನ ಅತ್ಯಂತ ಪ್ರಭಾವಿ ಜನರು ಭಾಗವಹಿಸಲಿದ್ದಾರೆ. 100ಕ್ಕೂ ಹೆಚ್ಚು ಪ್ರಭಾವಶಾಲಿ ರಾಜಕೀಯ ನಾಯಕರು, 1000ಕ್ಕೂ ಹೆಚ್ಚು ಉದ್ಯಮಿಗಳು, ನೀತಿ ನಿರೂಪಕರು ಸೇರಲಿರುವ ಈ ಸಮ್ಮಳೇನದ ಉದ್ದೇಶ “ಈ ಪ್ರಭಾವಿಗಳನ್ನು ಒಂದೆಡೆ ಸೇರಿಸಿ ಅಭಿವೃದ್ಧಿಗೆ ಹೊಸ ಮಾರ್ಗಗಳನ್ನು ಹುಡುಕುವುದು’ ಎನ್ನುತ್ತದೆ ವಿಶ್ವ ಆರ್ಥಿಕ ವೇದಿಕೆ. ಹಾಗಿದ್ದರೆ, ಅಸಮಾನತೆಯನ್ನು ತಗ್ಗಿಸುವ ವಿಚಾರದಲ್ಲಿ ಈ ಬಾರಿಯಾದರೂ ಕ್ರಾಂತಿಕಾರಕ ಐಡಿಯಾಗಳು ಹೊರಬೀಳುತ್ತವಾ ಕಾದು ನೋಡಬೇಕು. 

ಟಾಪ್ ನ್ಯೂಸ್

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.