ಆರ್‌ಟಿಐ ದುರ್ಬಲಗೊಳಿಸಿದರೆ ಅಪಾಯ


Team Udayavani, Jul 26, 2019, 5:20 AM IST

m-36

ವಿರೋಧವನ್ನು ಬರೀ ರಾಜಕೀಯ ವಿರೋಧ ಎಂಬ ದೃಷ್ಟಿಯಲ್ಲಿ ನೋಡದೆ ಅದರಲ್ಲಿರುವ ನೈಜ ಕಾಳಜಿಯನ್ನು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ.

ಮಾಹಿತಿ ಹಕ್ಕು ಕಾಯಿದೆ(ಆರ್‌ಟಿಐ)ಗೆ ಸರಕಾರ ಮಾಡಲು ದ್ದೇಶಿಸಿದ ತಿದ್ದುಪಡಿ ವಿವಾದಕ್ಕೀಡಾಗಿದೆ. ಲೋಕಸಭೆಯಲ್ಲಿ ಮಂಡಿಸಲಾದ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲೂ ಅಂಗೀಕಾರ ಸಿಕ್ಕರೆ ಜಾರಿಗೆ ಬರಲಿದೆ. ಎನ್‌ಡಿಎ ಸರಕಾರ ಹಿಂದಿನ ಅವಧಿಯಲ್ಲೇ ತಿದ್ದುಪಡಿಗೆ ಮುಂದಾದರೂ ವಿಪಕ್ಷಗಳ ತೀವ್ರ ವಿರೋಧದಿಂದಾಗಿ ಕೈಬಿಟ್ಟಿತ್ತು. ಇದೀಗ ನಿಚ್ಚಳ ಬಹುಮತದೊಂ ದಿಗೆ ಎರಡನೇ ಅವಧಿಗೆ ಅಧಿಕಾರಕ್ಕೇರಿರುವ ಮೋದಿ ಸರಕಾರ ಉದ್ದೇಶಿತ ತಿದ್ದುಪಡಿಯನ್ನು ಆದ್ಯತೆಯಲ್ಲಿ ಪರಿಗಣಿಸಿರುವುದು ಅದರ ಉದ್ದೇಶದ ಬಗ್ಗೆ ಕೊಂಚ ಸಂದೇಹ ಮೂಡಿಸಿದೆ.

ಕಾಂಗ್ರೆಸ್‌, ಡಿಎಂಕೆ, ಟಿಎಂಸಿ ಮತ್ತಿತರ ವಿಪಕ್ಷಗಳು ಈ ತಿದ್ದುಪಡಿ ಯನ್ನು ತೀವ್ರವಾಗಿ ವಿರೋಧಿಸಿವೆ. ಮಸೂದೆ ಅಂಗೀಕಾರದ ಸಂದರ್ಭದಲ್ಲಿ ಕಾಂಗ್ರೆಸ್‌ ಸಭಾತ್ಯಾಗ ಮಾಡಿದೆ. ಈ ವಿರೋಧವನ್ನು ಬರೀ ರಾಜಕೀಯ ದೃಷ್ಟಿಯಲ್ಲಿ ನೋಡದೆ ಅದರಲ್ಲಿರುವ ನೈಜ ಕಾಳಜಿಯ ಅಂಶವನ್ನೂ ಪರಿಶೀಲಿಸುವ ಅಗತ್ಯವಿದೆ.

2005ರಲ್ಲಿ ಅಂದಿನ ಯುಪಿಎ ಸರಕಾರ ಜಾರಿಗೆ ತಂದ ಆರ್‌ಟಿಐ ಕಾಯಿದೆ ಜನಸಾಮಾನ್ಯರ ಕೈಗೆ ಸಿಕ್ಕ ಬಲವಾದ ಅಸ್ತ್ರ ಎಂಬುದು ಸ್ಪಷ್ಟ. ಬರೀ 10 ರೂ.ನ ಅರ್ಜಿಗೆ ಕೋಟಿಗಟ್ಟಲೆ ರೂ.ಗಳ ಹಗರಣವನ್ನು ಬಯಲಿಗೆ ತರಲು, ಸರಕಾರಿ ಇಲಾಖೆಗಳ ನಿದ್ದೆಗೆಡಿಸಲು ಸಾಧ್ಯವಾದದ್ದು ಈ ಕಾಯಿದೆಯಿಂದಲೇ. ಆಡಳಿತ, ನಿರ್ದಿಷ್ಟ ಸಾರ್ವಜನಿಕ ಸೇವೆಗಳನ್ನು ಇನ್ನಷ್ಟು ಸಶಕ್ತಗೊಳಿಸುವ ಮತ್ತು ಸರಕಾರಿ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಜನರಿಗೆ ಸಿಕ್ಕ ಸುಲಭ ಸೌಲಭ್ಯವಿದು. ಹೀಗಾಗಿ ಆರ್‌ಟಿಐ ಬಳಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಜನರಿಗೆ ತಮ್ಮ ನಿರೀಕ್ಷೆ ಈಡೇರೀತೆಂಬ ಭರವಸೆ ನೀಡುವ ಹಾಗೂ ವ್ಯವಸ್ಥೆಗೆ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸು ವಂತೆ ಎಚ್ಚರಿಕೆ ನೀಡುವಂಥ ಕಾಯಿದೆಯನ್ನು ಯಾವುದೇ ಸರಕಾರ ವಾಗಲಿ ತನ್ನ ಮರ್ಜಿಗೆ ತಕ್ಕಂತೆ ಬದಲಾಯಿಸಿಕೊಳ್ಳಬಾರದು.

ತಿದ್ದುಪಡಿ ಮಸೂದೆಯಲ್ಲಿರುವ ಮೂರು ಅಂಶಗಳಿಗೆ ವಿಪಕ್ಷಗಳು ಮತ್ತು ಆರ್‌ಟಿಐ ಕಾರ್ಯಕರ್ತರ ತೀವ್ರ ವಿರೋಧ ಇದೆ. ಮುಖ್ಯ ಮಾಹಿತಿ ಆಯುಕ್ತರು ಮತ್ತು ಇತರ ಮಾಹಿತಿ ಆಯುಕ್ತರಿಗಿರುವ ಐದು ವರ್ಷದ ಸ್ಥಿರ ಕಾಲಾವಧಿಯ ಬದಲಾವಣೆ, ವೇತನವನ್ನು ಚುನಾವಣಾ ಆಯುಕ್ತರ ವೇತನಕ್ಕೆ ಸಮಾನಗೊಳಿಸುವುದು ಮತ್ತು ಈ ಬದಲಾವಣೆಗೆ ಸಂಬಂಧಿಸಿದಂತೆ ಸರಕಾರವೇ ಅಧಿಸೂಚನೆ ಹೊರಡಿಸುವುದು ವಿವಾದಿತ ಅಂಶಗಳು.

ಈ ತಿದ್ದುಪಡಿಯ ಪ್ರಕಾರ ಸರಕಾರ ತನ್ನ ಮೂಗಿನ ನೇರಕ್ಕೆ ನಡೆದು ಕೊಳ್ಳದ ಮುಖ್ಯ ಮಾಹಿತಿ ಆಯುಕ್ತರಿಗೆ ಪದಚ್ಯುತಿಯ ಬೆದರಿಕೆಯನ್ನೊಡ್ಡಬಹುದು ಇಲ್ಲವೇ ಅಧಿಕಾರಾವಧಿ ವಿಸ್ತರಣೆಯ ಆಮಿಷ ಒಡ್ಡಬಹುದು. ಅಂತೆಯೇ ವೇತನ ಏರಿಸುವ ಪ್ರಲೋಭನೆ ಯನ್ನೂ ಒಡ್ಡಬಹುದು. ಈ ರಾಜಕೀಯ ಕಾರಣಗಳಿಗಾಗಿ ತಿದ್ದು ಪಡಿಯ ಹಿಂದಿನ ನೈಜ ಉದ್ದೇಶ ಪ್ರಶ್ನೆಗೀಡಾಗಿದೆ. ಹಿಂದಿನ ಅವಧಿ ಯಲ್ಲಿ ಎನ್‌ಡಿಎ ಸರಕಾರ ಆರ್‌ಟಿಐಯಿಂದಾಗಿ ಕೆಲವು ಮುಜು ಗರದ ಸನ್ನಿವೇಶಗಳನ್ನು ಎದುರಿಸಿತ್ತು. ಹೀಗಾಗಿ ಕಾಯಿದೆಯನ್ನು ಹಲ್ಲಿಲ್ಲದ ಹಾವನ್ನಾಗಿಸಲಾಗುತ್ತಿದೆ ಎನ್ನುವುದು ವಿಪಕ್ಷಗಳ ಟೀಕೆ.

2005ರಲ್ಲಿ ಆರ್‌ಟಿಐ ಕಾಯಿದೆಯನ್ನು ಅವಸರದಲ್ಲಿ ಅನುಮೋದನೆ ಪಡೆಯಲಾಗಿತ್ತು. ಆರ್‌ಟಿಐ ಆಯುಕ್ತರಿಗೆ ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ಸ್ಥಾನಮಾನವನ್ನು ನೀಡಿದ್ದರೂ ಅವರ ತೀರ್ಪನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಬಹುದಿತ್ತು. ಅಂತೆಯೇ ಕಾಯಿದೆ ಸರಕಾರಕ್ಕೆ ಕಾನೂನು ರಚಿಸುವ ಅಧಿಕಾರ ವನ್ನು ಕೊಟ್ಟಿರಲಿಲ್ಲ. ಈ ವಿರೋಧಾಭಾಸಗಳನ್ನು ಸರಿಪಡಿಸಲಾ ಗುತ್ತಿದೆ ಅಷ್ಟೇ ಎಂಬುದು ಸರಕಾರದ ವಿವರಣೆ.

ಯಾವುದೇ ಕಾಯಿದೆ ಅಥವಾ ಕಾನೂನನ್ನು ಕಾಲಕಾಲಕ್ಕೆ ಪರಿಷ್ಕರಿಸಬೇಕು ಎನ್ನುವುದು ನಿಜ. ಆರ್‌ಟಿಐ ಕಾಯಿದೆ ಜಾರಿಗೆ ಬಂದು 15 ವರ್ಷಗಳಾಗುತ್ತಿದ್ದು, ಲೋಪದೋಷಗಳನ್ನು ಸರಿಪಡಿ ಸಲು ಇದು ಪಕ್ವವಾದ ಸಮಯ. ಆದರೆ ಇಂಥ ತಿದ್ದುಪಡಿ ಕಾಯಿದೆಯ ಮೂಲ ಆಶಯಕ್ಕೆ ಭಂಗ ತರಬಾರದೆಂಬ ಎಚ್ಚರಿಕೆ ಆಳುವವರಲ್ಲಿ ಇರಬೇಕಾದದ್ದು ಅವಶ್ಯ. ಆರ್‌ಟಿಐ ಆಯುಕ್ತರ ಸ್ಥಾನಮಾನ, ಅಧಿಕಾರ, ವೇತನ ಮತ್ತು ಸ್ವಾಯತ್ತೆಯನ್ನು ದುರ್ಬಲಗೊಳಿಸುವ ಪ್ರಯತ್ನ ಬರೀ ಆ ಸಂಸ್ಥೆಯ ಮೇಲೆ ಮಾತ್ರವಲ್ಲದೆ ಒಟ್ಟಾರೆಯಾಗಿ ಇಡೀ ಸಾಂವಿಧಾನಿಕ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುವ ಅಪಾಯವಿದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.