ಭವಿಷ್ಯದ ಶಾಸಕರಿಗೆ ಮಾದರಿ


Team Udayavani, Feb 25, 2023, 6:10 AM IST

ಭವಿಷ್ಯದ ಶಾಸಕರಿಗೆ ಮಾದರಿ

ವಿಧಾನಸಭೆಯಲ್ಲಿ ಇನ್ನು ಮುಂದೆ ಬಿ.ಎಸ್‌.ಯಡಿಯೂರಪ್ಪ ಅವರ ಕಂಚಿನ ಕಂಠ ಕೇಳುವುದಿಲ್ಲ; ತಮ್ಮದೇ ಆದ ಶೈಲಿಯಲ್ಲಿ ವಿಚಾರವನ್ನು ಮಂಡಿಸುವ ಅವರ ಸಂಸದೀಯ ಪಟುತ್ವ ಇನ್ನು ಕಾಣಿಸುವುದಿಲ್ಲ. ಕರ್ನಾಟಕ ಕಂಡ ಅಪರೂಪದ ಹೋರಾಟಗಾರ, ಸಂಸದೀಯ ಪಟು ಬಿ.ಎಸ್‌. ಯಡಿಯೂರಪ್ಪ ಅವರು ಚುನಾವಣ ರಾಜಕೀಯದಿಂದ ನಿವೃತ್ತರಾಗಿರುವುದು ಸಹಜವಾಗಿಯೇ ಒಂದು ನಿರ್ವಾತವನ್ನು ಸೃಷ್ಟಿಸಲಿದೆ.

ಅತ್ಯದ್ಭುತ ಸಂಸದೀಯ ಪಟುಗಳನ್ನು ದೇಶಕ್ಕೆ ನೀಡಿದ ಕರ್ನಾಟಕ ವಿಧಾನಮಂಡಲಕ್ಕೆ ತನ್ನದೇ ಆದ ಇತಿಹಾಸವಿದೆ. ಅಂಥವರ ಸಾಲಿನಲ್ಲಿ ಬಿಎಸ್‌ವೈ ಸೇರಿದ್ದಾರೆ ಎನ್ನುವುದರಲ್ಲಿ ಅನುಮಾನ ಇಲ್ಲ. ಚರ್ಚೆ ಎಂದರೆ ಅಲ್ಲಿ ಆಕ್ರೋಶ ಇದೆ, ಆವೇಶ ಇದೆ, ಛಲ ಇದೆ, ಹೋರಾಟ ಇದೆ ಎಂದು ತೋರಿಸಿಕೊಟ್ಟ ಯಡಿಯೂರಪ್ಪ ವಿಧಾನಸಭೆಯ ಕಲಾಪಕ್ಕೆ ಹೊಸ ದಿಕ್ಕನ್ನೂ ಕೊಟ್ಟವರು. ಮುಂದಿನ ತಲೆಮಾರಿನ ಜನಪ್ರತಿನಿಧಿಗಳಿಗೂ ಮಾದರಿ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲದಿಂದ ಬಂದ ಯಡಿಯೂರಪ್ಪ, ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು ರಾಜಕಾರಣಿಗಳ ಸಂಘಟನ ಚಾತುರ್ಯಕ್ಕೆ ಸದಾ ಮಾದರಿ. ಶಿಕಾರಿಪುರ ಪುರಸಭೆಯ ಚುನಾವಣೆಯಿಂದ ಹಿಡಿದು, ಇತ್ತೀಚಿನ ಶಿಕಾರಿಪುರ ವಿಧಾನಸಭೆ ಚುನಾವಣೆವರೆಗೂ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಶಿಕಾರಿಪುರದ ಜತೆಗೆ ಶಿವಮೊಗ್ಗ ಲೋಕಸಭೆ ಚುನಾವಣೆಗೂ ಸ್ಪರ್ಧಿಸಿ, ಗೆದ್ದು ಲೋಕಸಭೆಗೂ ಒಮ್ಮೆ ಹೋಗಿಬಂದರು.

ಬಿಎಸ್‌ವೈ ಅವರು ಮೊದಲ ಬಾರಿಗೆ ಶಿಕಾರಿಪುರದಿಂದ ವಿಧಾನಸಭೆ ಪ್ರವೇಶಿಸಿದ್ದು 1983ರಲ್ಲಿ. 23 ವರ್ಷಗಳ ಕಾಲ ವಿಪಕ್ಷದ ಸಾಲಿನಲ್ಲಿ ಕುಳಿತು 2007ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಅಧಿಕಾರ ಸ್ವೀಕಾರ ಮಾಡಿದರು. ಯಡಿಯೂರಪ್ಪ ಅವರು ಎರಡನೇ ಬಾರಿಗೆ ಸಿಎಂ ಆಗಿದ್ದು 2008ರಲ್ಲಿ. ಆಗ ಬಿಜೆಪಿ 110 ಸ್ಥಾನದಲ್ಲಿ ಗೆದ್ದು ಬಹುಮತಕ್ಕೆ ಕೇವಲ 3 ಶಾಸಕರ ಕೊರತೆ ಕಂಡಿತ್ತು. ಆಗಲೂ ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಸರಕಾರ ರಚಿಸಿದ್ದ ಬಿಎಸ್‌ವೈ, ಉತ್ತಮ ಆಡಳಿತವನ್ನೇ ನೀಡಿದ್ದರು. 2018ರಲ್ಲಿ ಮತ್ತೆ 104 ಸ್ಥಾನಗಳಲ್ಲಿ ಗೆದ್ದು ಸಿಎಂ ಸ್ಥಾನಕ್ಕೇರಿದರೂ ಬಹುಮತಕ್ಕೆ ಬೇಕಾದ ಶಾಸಕರನ್ನು ಹೊಂದಿಸಿಕೊಳ್ಳಲು ಆಗದೇ ಇದ್ದುದರಿಂದ ರಾಜೀನಾಮೆ ನೀಡಬೇಕಾಯಿತು. ಆದರೆ 2019ರಲ್ಲಿ ಕಾಂಗ್ರೆಸ್‌-ಜೆಡಿಎಸ್‌ನಿಂದ 17 ಶಾಸಕರು ಬಂದು, 4ನೇ ಬಾರಿಗೆ ಸರಕಾರ ರಚನೆ ಮಾಡಿದ್ದರು.

ಸಂಘಟನೆ ವಿಚಾರದಲ್ಲಿ ಬಿಎಸ್‌ವೈ ಅವರನ್ನು ಮೀರಿಸಲು ಯಾರಿಗೂ ಸಾಧ್ಯವಿಲ್ಲದ ವಿಚಾರ. ರೈತಾಪಿ ವಿಚಾರ ಮತ್ತು ರೈತ-ನೀರಾವರಿ ವಿಚಾರಗಳ ಹೋರಾಟದಿಂದಾಗಿಯೇ ರಾಜ್ಯಾದ್ಯಂತ ಬಿಜೆಪಿಗೆ ಕಾರ್ಯಕರ್ತರ ಪಡೆಯನ್ನೇ ಕಟ್ಟಿದರು. ಶಿಕಾರಿಪುರದಲ್ಲಿ ಜೀತಮುಕ್ತರ ಪರಿಹಾರಕ್ಕಾಗಿ 5 ತಿಂಗಳ ಹಗಲು ರಾತ್ರಿ ಧರಣಿ, 2002ರಲ್ಲಿ ಶಿವಮೊಗ್ಗದಲ್ಲಿ ಬಗರ್‌ಹುಕುಂ ಸಾಗುವಳಿದಾರರನ್ನು ಸರಕಾರ ಒಕ್ಕಲೆಬ್ಬಿಸಲು ನೋಡಿದಾಗ ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಪಾದಯಾತ್ರೆ ಮಾಡಿ ಅಹೋರಾತ್ರಿ ಧರಣಿಯನ್ನೂ ನಡೆಸಿದ್ದರು.

ಕೃಷಿಕರ ಮನೆತನದಿಂದಲೇ ಬಂದವರಾಗಿದ್ದರಿಂದ ಬಿಎಸ್‌ವೈ ಅವರಿಗೆ ರೈತರ ಕಷ್ಟಗಳು ಗೊತ್ತಿತ್ತು. ಹೀಗಾಗಿಯೇ ರಾಜ್ಯದಲ್ಲಿ ಪ್ರತ್ಯೇಕ ಕೃಷಿ ಬಜೆಟ್‌ ಮಂಡಿಸುವ ಕೆಲಸ ಮಾಡಿದ್ದರು. ಹಾಗೆಯೇ ಹೆಣ್ಣು ಮಕ್ಕಳಿಗಾಗಿ ಭಾಗ್ಯಲಕ್ಷ್ಮಿ, ಉಚಿತ ಸೈಕಲ್‌ ನೀಡುವ ಯೋಜನೆಗಳನ್ನೂ ಮಾಡಿದ್ದರು. ಈ ರೀತಿ ಹೋರಾಟಗಳಿಂದಲೇ ರಾಜ್ಯದಲ್ಲಿ ಜನಜನಿತವಾಗಿದ್ದ ಬಿಎಸ್‌ವೈ ಅವರು, ಶುಕ್ರವಾರ ಚುನಾವಣ ರಾಜಕೀಯಕ್ಕೆ ವಿದಾಯ ಹೇಳಿದ್ದಾರೆ. ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದಿರುವ ಅವರು, ರಾಜಕೀಯದಲ್ಲಿ ಸಕ್ರಿಯವಾಗಿರುತ್ತೇನೆ ಎಂದೂ ಹೇಳಿದ್ದಾರೆ. ಬಿಎಸ್‌ವೈ ಹೆಸರು ರಾಜ್ಯ ರಾಜಕೀಯ ಇತಿಹಾಸದಲ್ಲಿ ಎಂದಿಗೂ ಅಳಿಯದೇ ಉಳಿದಿರುತ್ತದೆ. ಇವರ ಹೋರಾಟದ ಅನುಭವ ಮುಂದಿನ ಪೀಳಿಗೆಗೂ ಆದರ್ಶವಾಗಿರುತ್ತದೆ ಎಂದು ಹೇಳಲು ಅಡ್ಡಿಯೇನಿಲ್ಲ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.