ಧಾವಂತದ ಬದುಕಿನಲಿ ಭಾವನೆಗಳು ಬತ್ತದಿರಲಿ


Team Udayavani, Jul 9, 2022, 6:05 AM IST

ಧಾವಂತದ ಬದುಕಿನಲಿ ಭಾವನೆಗಳು ಬತ್ತದಿರಲಿ

ಪ್ರಚಲಿತ ದಿನಮಾನಗಳು ಆಧುನಿಕ ಯುಕ್ತವಾಗಿದ್ದು ತತ್ಪರಿಣಾಮ ಮಾನವ ಬದುಕು ಯಂತ್ರಸದೃಶ- ಧಾವಂತ- ಒತ್ತಡ ಮಯ ವಾಗಿದೆ. ಇಡೀ ಜಗತ್ತೇ ಇಂದು ಅಂಗೈಯಲ್ಲಿ ಬಂದು ಕುಳಿತಿರುವುದರಿಂದ ಜನಜೀವನದ ಶೈಲಿ ಅಪಾರ ವ್ಯತ್ಯಾಸ ಕಂಡುಕೊಂಡಿದೆ. ಇದರಿಂದ ವ್ಯಕ್ತಿ- ವ್ಯಕ್ತಿಗಳ ನಡುವಣ ಸಂಬಂಧಗಳ ಸ್ವರೂಪವೇ ಬದಲಾಗಿದ್ದು ಭಾವ- (ಸತ್‌)ಭಾವನೆಗಳ ನ್ಯೂನತೆ- ಕೊರತೆಯ ಪರಿಣಾಮ ಸಮಾಜದಲ್ಲಿ ಸಂಬಂಧಗಳು ಶಿಥಿಲವಾಗುತ್ತಿವೆ, ಸಮಷ್ಟಿ ಭಾವನೆಯ ಪ್ರಜ್ಞೆ ನೇಪಥ್ಯಕ್ಕೆ ಸರಿಯುತ್ತಿದೆ. ಸಮಾಜ ಸಂವೇದನಾಶೀಲತೆ ರಹಿತ ಮಾರ್ಗದತ್ತ ಮುಖ ಮಾಡಿದೆಯೋ ಎಂಬ ಆತಂಕ ಆವರಿಸಿದೆ, ಮನೆ ಮಾಡಿದೆ.

ಮಾನವ ಮೂಲತಃ ಸಂಘಜೀವಿ- ಸ್ನೇಹ ಜೀವಿ. ಸಂಬಂಧಗಳೇ ಮಾನವನ ಬದು ಕಿನ ಜೀವಾಳ-ಬಂಡವಾಳ. ನಾಗರಿ ಕತೆಯ ಬೆಳವಣಿಗೆಯಲ್ಲಿ, ಸಂಬಂಧಗಳ ಸಂಧಿಸು ವಿಕೆಯಲ್ಲಿ ಪ್ರಮುಖ ಕಾರುಬಾರು ಭಾವ – (ಸತ್‌) ಭಾವನೆಗಳದ್ದೇ. ಹೀಗೆ ಸತ್‌ ಭಾವನೆ ಗಳು ಜನ ಜೀವನದ ಜೀವಧಾತು. ಹೀಗಿದ್ದ ಮೇಲೆ ಭಾವನಾರಹಿತ ಜೀವನ ಅನರ್ಥಕಾರಿ, ಅಪಾಯಕಾರಿ ಹಿನ್ನೆಲೆಯದ್ದು ಎಂದು ಸಾರಬೇಕು. ನಯನ ಮನೋಹರ ಬದುಕಿನ ಸೌಧದ ನಿರ್ಮಾಣದಲ್ಲಿ ಭಾವನೆಗಳೇ ಪಂಚಾಂಗ ಮತ್ತು ಇವುಗಳ ಪಾತ್ರ ಅನಿರ್ವಚನೀಯ. ಪರೋಪಕಾರ, ಔದಾರ್ಯ, ನಂಬಿಕೆ, ವಿಶ್ವಾಸ, ಅನುಕಂಪ, ದಯೆ, ಗೌರವ, ಸ್ವಾಭಿಮಾನ, ಕ್ಷಮಾಪಣೆ, ಪ್ರೀತಿ, ಧೈರ್ಯ, ಸಾತ್ವಿಕ ಸಿಟ್ಟು, ನಿಷ್ಠುರತೆ, ಕಠೊರತೆ, ಮುತ್ತಿನಂತಹ ಮಾತು, ಮೃದುತ್ವ, ಹಾಸ್ಯ, ವಿನೋದ ಸುಪ್ರಸನ್ನ ವದನ… ಈ ಪದಪುಂಜಗಳು ಭಾವನೆಯ ಬುಟ್ಟಿಯಲ್ಲಿರುವಂಥವುಗಳು. ಇವುಗಳನ್ನು ಸಂದಭೋìಚಿತವಾಗಿ ಹೆಕ್ಕಿ ಸಂಬೋಧಿ ಸುವುದಾಗಲಿ, ಅಭಿವ್ಯಕ್ತಿಗೊಳಿಸುವುದಾಗಲಿ ಆದಲ್ಲಿ ಭಾವನೆಗಳ ಜತೆಗೆ ಸಂಸ್ಕಾರಗಳ ಪ್ರಯೋ ಗವಾಗುವುದು ಮತ್ತು ಈ ಮುಖೇನ ವ್ಯಕ್ತಿತ್ವದ ಮೆರುಗಿಗೂ ಬಣ್ಣಗಳೂ ತುಂಬುವವು.

ಆಧುನಿಕ ಬದುಕಿನಿಂದ ಸಂಬಂಧಗಳು ಸಂಕೀರ್ಣವಾಗುತ್ತಿವೆ. ಆಧುನಿಕ ತಂತ್ರಜ್ಞಾನದ ಪರಿಕರಗಳಿಂದ ಸಮಾಜ ಶಿಥಿಲವಾಗುತ್ತಿವೆ, ಭಾವನೆಗಳು ಸಾಯುತ್ತಿವೆ ಎನ್ನುವ ಕೂಗು, ಅಪವಾದಗಳಿವೆ. ಇದನ್ನು ನಾವು ಸಾರಾಸಗಟಾಗಿ ಅಲ್ಲಗಳೆಯುವಂತಿಲ್ಲ. ಹಾಗೆಂದು ಆಧುನಿಕ ಪರಿಕರಗಳಿಂದ ಸಮಾ ಜವು ಹಲವಾರು ದೃಷ್ಟಿಕೋನಗಳಿಂದ ಉಪಕೃತ- ಫ‌ಲಭರಿತವಾಗುತ್ತಿವೆ. ಈ ಪರಿಕರಗಳು ನಿತ್ಯದ ಆಗುಹೋಗಿನ ಅವಿಭಾಜ್ಯ ಅಂಗಗಳಾಗಿ ಪರಿಣಮಿಸಿವೆ. ಈ ಪರಿಕರಗಳ ಬಳಕೆ ಮಾತ್ರ ಅವರವರ ವಿವೇಕ, ಆವಶ್ಯಕತೆಗಳ ಮೇಲೆ ಅವಲಂಬಿತವಾಗಿವೆ. “ಅತಿಯಾದರೆ ವಿಷವೂ ಅಮೃತ ಎಂಬಂತೆ’ ಇಂದು ನಮ್ಮ ಸಂಬಂಧಗಳ ಮಹಲು ಕುಸಿದು ಬೀಳುವ ಸಂಕ್ರಮಣ ಘಟ್ಟದಲ್ಲಿ ನಾವಿದ್ದೇವೆ. ಈ ಸಂದಿಗ್ಧಮಯ ಸನ್ನಿವೇಶವನ್ನು ನಾವು ನಾಜೂಕಾಗಿ ಎದುರಿಸಬೇಕಿದೆ. ಆಧುನಿಕ ಪರಿಕರಗಳು ಸದ್ಯಕ್ಕಂತೂ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ ಏನೋ ಹೌದು. ಹಾಗೆಂದು ನಾವು ಈ ಪರಿಕರಗಳಿಗೇ ಜೋತು ಬಿದ್ದಿದ್ದೇವೆ ಎಂದು ಹೇಳಲಾಗದು. ಭಾವನೆ ಮತ್ತು ಈ ಪರಿಕರಗಳ ಬಳಕೆಯಲ್ಲಿ ಸಮ ತೋಲನ ಸಾಧಿಸುವಲ್ಲಿ ನಾವು ಈ ಸವಾಲನ್ನು ದಿಟ್ಟವಾಗಿ ಎದುರಿಸಬಹುದಾಗಿದೆ.

ಭಾವನೆಗಳಿಂದ ಸಂಬಂಧಗಳನ್ನು ಉಳಿಸಿ, ಮುಂದಿನ ತಲೆಮಾರಿಗೆ ವರ್ಗಾಯಿಸುವ ಮಹತ್ತರ ಉತ್ತರದಾಯಿತ್ವ ನಿಭಾಯಿಸಲು ಕಟಿಬದ್ಧರಾಗಬೇಕಾಗಿದೆ. ಭಾವನೆಗಳ ಜೀವಂತ ವಿರಿಸುವಿಕೆಯ, ಪೋಷಿಸುವಿಕೆಯ ದೀಕ್ಷೆ ತೊಡಬೇಕಾಗಿದೆ. ಇಲ್ಲವಾದಲ್ಲಿ ಕರಾಳತೆಯ ಕೂಪದತ್ತ ಸಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ನಮ್ಮ ಜೀವಕ್ಕೆ ಹೇಗೆ ಆತ್ಮ ಭೂಷಿತವೊ ಹಾಗೆಯೇ ನಮ್ಮ ಬದುಕಿಗೆ ಭಾವನೆಗಳು ಭೂಷಣ. ಆದ್ದರಿಂದ ದೇವರ ಉಪಾ ಸನೆಯಿಂದ ಹಿಡಿದು, ಸಮಾಜ ಸೇವೆ, ರಾಷ್ಟ್ರ ಸೇವೆ ಬಾಲ್ಯದಿಂದ ಬಾಳಿನ ಅಂತ್ಯದವರೆಗೂ ಭಾವನೆಗಳು ಬಾಳಿನಲ್ಲಿ ಸಂಗಮಿಸಬೇಕು. ಈ ಥರ ಭಾವನೆಗಳು ಬಾಳಿನಲ್ಲಿ ಅನವರತ ಮಿಳಿತಗೊಂಡರೆ, ಭಾವಗಳ ತೋರಣ ಗಳಿಂದ ಸಿಂಗಾರಗೊಂಡರೆ ನಮ್ಮ ಸಮ ಷ್ಠಿಯ ಸ್ವರೂಪವೇ ವಿಭಿನ್ನ ರೂಪ ತಾಳಿ, ಅಲಂಕಾರಗೊಂಡು ಸುಂದರಮ ಯವಾಗುವುದು. ಪರಿಪೂರ್ಣತೆಯತ್ತ,ಸುಸಂಸ್ಕೃತದತ್ತ, ಸದೃಢ ಆರೋಗ್ಯದತ್ತ, ಸಮಾ ಜದ ಪುರಸ್ಕಾರದತ್ತ ಸಾಗಲು ಭಾವಗಳು ಒಳ್ಳೆಯ ಆಯ್ಕೆಗಳು. ಹೀಗೆ ಸಮಾಜ ಸದಾ ಭಾವನೆಗಳ ಮೆರವಣಿಗೆಯಲ್ಲಿ ಸಾಗುತ್ತಿರಲಿ.

- ಸಂದೀಪ್‌ ನಾಯಕ್‌ ಸುಜೀರ್‌, ಮಂಗಳೂರು

ಟಾಪ್ ನ್ಯೂಸ್

Rain Alert: ಕರಾವಳಿಯಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆ ಸಾಧ್ಯತೆ

Rain Alert: ಕರಾವಳಿಯಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆ ಸಾಧ್ಯತೆ

Siddapura ಮಗನ ಹುಟ್ಟುಹಬ್ಬಕ್ಕೆ ಊರಿಗೆ ಬಂದ ತಂದೆ ಸಿಡಿಲಾಘಾತಕ್ಕೆ ಬಲಿ!

Siddapura ಮಗನ ಹುಟ್ಟುಹಬ್ಬಕ್ಕೆ ಊರಿಗೆ ಬಂದ ತಂದೆ ಸಿಡಿಲಾಘಾತಕ್ಕೆ ಬಲಿ!

Rain ಕುಂದಾಪುರ, ಬೈಂದೂರು, ಹೆಬ್ರಿ: ಗಾಳಿ-ಮಳೆ ಅಬ್ಬರ; ಅಪಾರ ಹಾನಿ

Rain ಕುಂದಾಪುರ, ಬೈಂದೂರು, ಹೆಬ್ರಿ: ಗಾಳಿ-ಮಳೆ ಅಬ್ಬರ; ಅಪಾರ ಹಾನಿ

Malpe Beach: ಸೆ.15ರ ವರೆಗೆ ಪ್ರವಾಸೀ ಬೋಟ್‌ ಚಟುವಟಿಕೆ ಸ್ಥಗಿತ

Malpe Beach: ಸೆ.15ರ ವರೆಗೆ ಪ್ರವಾಸೀ ಬೋಟ್‌ ಚಟುವಟಿಕೆ ಸ್ಥಗಿತ

Uppinangady: ಬರಿದಾಗಿದೆ ನೇತ್ರಾವತಿ ನದಿಯ ಒಡಲು

Uppinangady: ಬರಿದಾಗಿದೆ ನೇತ್ರಾವತಿ ನದಿಯ ಒಡಲು

“ಉದಯವಾಣಿ’ ವರದಿಗೆ ಸಹೃದಯಿಗಳ ವ್ಯಾಪಕ ಸ್ಪಂದನೆ ; ಧನ್ಯಾ ಕಲಿಕೆಗೆ ದಾನಿಗಳ ನೆರವು

“ಉದಯವಾಣಿ’ ವರದಿಗೆ ಸಹೃದಯಿಗಳ ವ್ಯಾಪಕ ಸ್ಪಂದನೆ ; ಧನ್ಯಾ ಕಲಿಕೆಗೆ ದಾನಿಗಳ ನೆರವು

ಪರವಾನಿಗೆದಾರರ ಕಷ್ಟಕ್ಕೆ ಸ್ಪಂದಿಸಿದ ನ್ಯಾಯಾಲಯ; ಚುನಾವಣೆ ಸಂದರ್ಭ ಕೋವಿ ಠೇವಣಿ ಬೇಕಿಲ್ಲ

ಪರವಾನಿಗೆದಾರರ ಕಷ್ಟಕ್ಕೆ ಸ್ಪಂದಿಸಿದ ನ್ಯಾಯಾಲಯ; ಚುನಾವಣೆ ಸಂದರ್ಭ ಕೋವಿ ಠೇವಣಿ ಬೇಕಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqeqwe

Karachi ಭಾರತೀಯ ಮಹಿಳೆಯ ವಡಾಪಾವ್‌, ಪಾವ್‌ಭಾಜಿ ಕಮಾಲ್‌!

Desi Swara: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

World Mother’s Day 2024: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

world mother’s day 2024: ಯುಗಯುಗದಲ್ಲೂ ತಾಯಿ ದೇವತೆ…

World Mother’s Day 2024: ಯುಗಯುಗದಲ್ಲೂ ತಾಯಿ ದೇವತೆ…

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Rain Alert: ಕರಾವಳಿಯಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆ ಸಾಧ್ಯತೆ

Rain Alert: ಕರಾವಳಿಯಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆ ಸಾಧ್ಯತೆ

Siddapura ಮಗನ ಹುಟ್ಟುಹಬ್ಬಕ್ಕೆ ಊರಿಗೆ ಬಂದ ತಂದೆ ಸಿಡಿಲಾಘಾತಕ್ಕೆ ಬಲಿ!

Siddapura ಮಗನ ಹುಟ್ಟುಹಬ್ಬಕ್ಕೆ ಊರಿಗೆ ಬಂದ ತಂದೆ ಸಿಡಿಲಾಘಾತಕ್ಕೆ ಬಲಿ!

Rain ಕುಂದಾಪುರ, ಬೈಂದೂರು, ಹೆಬ್ರಿ: ಗಾಳಿ-ಮಳೆ ಅಬ್ಬರ; ಅಪಾರ ಹಾನಿ

Rain ಕುಂದಾಪುರ, ಬೈಂದೂರು, ಹೆಬ್ರಿ: ಗಾಳಿ-ಮಳೆ ಅಬ್ಬರ; ಅಪಾರ ಹಾನಿ

Malpe Beach: ಸೆ.15ರ ವರೆಗೆ ಪ್ರವಾಸೀ ಬೋಟ್‌ ಚಟುವಟಿಕೆ ಸ್ಥಗಿತ

Malpe Beach: ಸೆ.15ರ ವರೆಗೆ ಪ್ರವಾಸೀ ಬೋಟ್‌ ಚಟುವಟಿಕೆ ಸ್ಥಗಿತ

Uppinangady: ಬರಿದಾಗಿದೆ ನೇತ್ರಾವತಿ ನದಿಯ ಒಡಲು

Uppinangady: ಬರಿದಾಗಿದೆ ನೇತ್ರಾವತಿ ನದಿಯ ಒಡಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.