Kannada Rajyotsava: ಪಂಚ ಭೂತಗಳಷ್ಟೇ ಪ್ರಕೃತಿಗೆ ಕನ್ನಡವೂ ಅನಿವಾರ್ಯ…


Team Udayavani, Nov 1, 2023, 7:45 AM IST

tdy-13

ನನ್ನ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನ ಎರಡೂ ಕೂಡ ವ್ಯಾಪಿಸಿ­ಕೊಂಡಿರುವುದು ಕನ್ನಡದಲ್ಲಿ. ಇವತ್ತು ಕನ್ನಡದ ಅಕ್ಷರಗಳೇ ನನಗೆ ಅನ್ನ ಕೊಡುತ್ತಿರುವುದು. ಕನ್ನಡ ಅಂದರೆ ನನ್ನ ಭಾವುಕತೆ, ನನ್ನ ದೈವಿಕತೆ, ಕನ್ನಡದ ನನಗೆ ಮೇಲೆ ಭಕ್ತಿ, ಸೆಳೆತ ಸದಾ ಇರುತ್ತದೆ. ಬಹುಶಃ ಕನ್ನಡ ಭಾಷೆಯ ಓದು-ಬರಹ ನನಗೆ ಗೊತ್ತಿಲ್ಲದಿದ್ದರೆ, ನನ್ನ ಬದುಕೇ ನಡೆಯುತ್ತಿರಲಿಲ್ಲ. ಅನ್ನ, ಆಹಾರ, ಉಸಿರಾಟ ಎಲ್ಲವೂ ನನ್ನ ಮಟ್ಟಿಗೆ ಕನ್ನಡಮಯವಾಗಿದೆ. ನನಗೆ ಕನ್ನಡ ಅಂದ್ರೆ ಮೊದಲು ನೆನಪಾಗುವುದು ಭುವನೇಶ್ವರಿ. ನಾನು ರನ್ನ, ಪಂಪ, ರಾಘವಾಂಕರನ್ನು ನೋಡಿಲ್ಲ. ನಾನು ಚಿಕ್ಕವಯಸ್ಸಿನಲ್ಲಿ ಮೊದಲು ಕೇಳಿಸಿಕೊಂಡಿದ್ದು, ನೋಡಿದ್ದು ವಿಶ್ವೇಶ್ವರಯ್ಯ, ಕುವೆಂಪು, ರಾಜಕುಮಾರ್‌ ಅವರನ್ನ ಕನ್ನಡ ಅಂದ್ರೆ ನಾನು ಕಂಡ ಇಂಥ ಧೀಮಂತ ವ್ಯಕ್ತಿತ್ವಗಳು ಕಣ್ಮುಂದೆ ಬರುತ್ತಾರೆ. ನನ್ನ ಪ್ರಕಾರ ಕನ್ನಡ ಎಂಬುದು ಸ್ವಯಂ ಪ್ರಕಾಶ ಭಾಷೆ. ಇದಕ್ಕೆ ಬೇರೆ ಬೆಳಕಿನ ಅವಶ್ಯಕತೆ ಇಲ್ಲ. ಹಾಗಾಗಿಯೇ ಈ ಭಾಷೆ 2 ಸಾವಿರ ವರ್ಷ ದಾಟಿದರೂ ತನ್ನ ಅಸ್ಮಿತೆ ಮತ್ತು ಅಸ್ವಿತ್ವ ಉಳಿಸಿಕೊಂಡಿರುವುದು. ಈ ಭಾಷೆ ಈ ಮಣ್ಣಿನಲ್ಲಿ ಹುಟ್ಟಿದ ಸಾಧಾರಣಾ ಜನರನ್ನೂ ಅವರವರ ಕ್ಷೇತ್ರದಲ್ಲಿ ಮಹಾನುಭಾವರನ್ನಾಗಿ ಮಾಡಿದೆ. ನಿಜವಾದ ಮಹಾನುಭಾವರು ಕೂಡ ಈ ಭಾಷೆಯನ್ನು ತಮ್ಮ ಜೀವ ಅಂದುಕೊಂಡಿದ್ದಾರೆ. ಈ ಭಾಷೆಗೆ ಪಂಚ ಭೂತ ಗುಣವಿದೆ. ಆಕಾಶದ ಗುಣ ವಿಶಾಲತೆ, ಭೂಮಿಯ ಗುಣ ಸಹಿಷ್ಣುತೆ, ಅಗ್ನಿಯ ಗುಣ ಅಗ್ರತೆ, ಜಲ ತತ್ವದ ಗುಣ ಸಮಗ್ರತೆ, ವಾಯುತತ್ವದ ಗುಣ ಆಪ್ಯಾಯತೆ. ಇವಿಷ್ಟು ನಮ್ಮ ಭಾಷೆಗೆ ಇರುವುದರಿಂದ ಹೇಗೆ ಪಂಚ ಭೂತಗಳು ಅನಿವಾರ್ಯವೋ,ಕನ್ನಡ ಭಾಷೆ ಪ್ರಕೃತಿಗೆ ಅನಿವಾರ್ಯ ಎಂಬುದು ನನ್ನ ಭಾವನೆ.

ಕನ್ನಡ ಭಾಷೆ ಕೇವಲ ಕಲಿಕೆಯ ಮಾಧ್ಯಮವಲ್ಲ. ಇದಕ್ಕೆ ವೈದ್ಯಕೀಯ ಗುಣ, ವೈಜ್ಞಾನಿಕ ಗುಣ, ವೈಚಾರಿಕ ಗುಣ ಮೂರು ಇದೆ. ಇದು ಇರುವುದರಿಂದಲೇ ನಮ್ಮ ಭಾಷೆಯೇ ಒಂದು ಪ್ರಕೃತಿ. ಇಂಥ ಭಾಷೆಯ ಜೀವಸೆಲೆಯನ್ನು ಇಟ್ಟುಕೊಂಡ ಮಹಾನ್‌ ವೇದಿಕೆ ಕರ್ನಾಟಕ. ಇಂಥ ಕರ್ನಾಟಕದ ಹೆಸರಿಗೆ ಐವತ್ತು ಹುಟ್ಟುಹಬ್ಬವೇ ವಿನಃ ಕನ್ನಡಕ್ಕಲ್ಲ… ಕನ್ನಡ ಅಜರಾಮವಾಗಲಿ, ಅವಿಸ್ಮರಣೀಯವಾಗಲಿ ಕರ್ನಾಟಕ. ನಮ್ಮ ನೆಲ ನಲ್ಮೆ ಇನ್ನಷ್ಟು ಹತ್ತಿರವಾಗಲಿ.

-ಕೆ. ಕಲ್ಯಾಣ್‌,
ಸಂಗೀತ ನಿರ್ದೇಶಕ
ಮತ್ತು ಚಿತ್ರ ಸಾಹಿತಿ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.