ನಸುಗೆಂಪು ಬಣ್ಣಕ್ಕೆ ತಿರುಗಿದ ಲೋನಾರ್‌ ಲೇಕ್‌


Team Udayavani, Jun 12, 2020, 7:50 AM IST

ನಸುಗೆಂಪು ಬಣ್ಣಕ್ಕೆ ತಿರುಗಿದ ಲೋನಾರ್‌ ಲೇಕ್‌

ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯಲ್ಲಿರುವ ಆಕಾಶಕಾಯ ನಿರ್ಮಿತ ಸರೋವರವಾದ ಲೋನಾರ್‌ ಲೇಕ್‌ನಲ್ಲಿನ ನೀರಿನ ಬಣ್ಣ ರಾತ್ರೋರಾತ್ರಿ ನಸುಗೆಂಪು ಬಣ್ಣಕ್ಕೆ ತಿರುಗಿದೆ. ಮೊದಲ ಬಾರಿಗೆ ಈ ಸರೋವರದ ಬಣ್ಣ ಬದಲಾಗಿದ್ದು ವಿಜ್ಞಾನಿಗಳ ಕುತೂಹಲವನ್ನು ಕೆರಳಿಸಿದೆ.

ಏನಿದರ ಹೆಗ್ಗಳಿಕೆ?
“ಸೋಡಾ ಲೇಕ್‌’ ಎಂಬ ಹೆಸರನ್ನೂ ಹೊಂದಿರುವ ಲೋನಾರ್‌ಗೆ ವಿಶ್ವದ ಅತಿ ದೊಡ್ಡ ಆಕಾಶಕಾಯ ನಿರ್ಮಿತ ಸರೋವರ ಎಂಬ ಹೆಗ್ಗಳಿಕೆಯಿದೆ. ಸುಮಾರು 50,000 ವರ್ಷಗಳ ಹಿಂದೆ, ಗಂಟೆಗೆ ಸುಮಾರು 90,000 ಕಿ.ಮೀ. ಸಾಗಿಬರುತ್ತಿದ್ದ ಆಕಾಶಕಾಯವು ಈ ಭೂಮಿಗೆ ಢಿಕ್ಕಿ ಹೊಡೆದ ಪರಿಣಾಮ, 1.8 ಕಿ.ಮೀ.ವರೆಗೆ ಬಿದ್ದಿರುವ ಕುಳಿಯಲ್ಲಿ 1.2 ಕಿ.ಮೀ.ವರೆಗೆ ನೀರಿದೆ. ಇದನ್ನು ಜಿಯೋ ಹೆರಿಟೇಜ್‌ ಸ್ಥಳವೆಂದು ಘೋಷಿಸಲಾಗಿದೆ.

ಸಂಶೋಧನೆ  ಅನಂತರವಷ್ಟೇ ಸತ್ಯ
ಇನ್ನೂ ಕೆಲವು ವಿಜ್ಞಾನಿಗಳು, ಕ್ಷಾರೀಯ ನೀರಿನಲ್ಲಿ ಸಾಮಾನ್ಯವಾಗಿ ಹಸುರು ಬಣ್ಣದಲ್ಲಿರುವ ಡ್ಯುನಾಲಿ ಯೇನ ಸ್ಯಲಿನ್‌ ಎಂಬ ಸೂಕ್ಷ್ಮಾಣುಗಳು, ನೀರಿನ ಕ್ಷಾರ ಗುಣ ಅತಿಯಾದಾಗ ಕೆಂಪಾಗಿ ಬದಲಾವಣೆಯಾಗುತ್ತದೆ. ಇನ್ನು ಕೆಲವು ಸಂಶೋಧಕರ ಪ್ರಕಾರ ಕ್ಷಾರೀಯ ನೀರಿನಲ್ಲಿ ಉತ್ಪತ್ತಿಯಾಗುವ ವಿಶೇಷ ಬಗೆಯ ಶಿಲೀಂಧ್ರಗಳು ಇಡೀ ಸರೋವರ ಹರಡಿದ್ದಾಗ ಅಲ್ಲಿನ ನೀರು ಹೀಗೆ ಕೆಂಪಾಗಿ ಕಾಣಿಸುತ್ತದೆ ಎಂದಿದ್ದಾರೆ. ಆದರೆ, ಸೂಕ್ತ ಸಂಶೋಧನೆಯ ಅನಂತರವಷ್ಟೇ ಸತ್ಯ ಹೊರಬೀಳುತ್ತದೆ.

ಬ್ಯಾಕ್ಟೀರಿಯಾಗಳು ಕಾರಣ?
ಆಕಾಶಕಾಯ ನಿರ್ಮಿತ ಸರೋವರಗಳಲ್ಲಿ ನೀರು ಅತ್ಯಂತ ಕ್ಷಾರೀಯ ಗುಣ ಹೊಂದಿರುತ್ತದೆ. ಲೋನಾರ್‌ ಲೇಕ್‌ನ ನೀರೂ ಕೂಡ ಕ್ಷಾರವಾಗಿದ್ದು, ಅದರ ಪಿಎಚ್‌ ವ್ಯಾಲ್ಯೂ 10.5ರಷ್ಟಿದೆ. ಇಂಥ ನೀರಿನಲ್ಲಿ ಹ್ಯಾಲೋಬ್ಯಾಕ್ಟೀರಿಯಾಯೇಸಿ ಎಂಬ ವಿಶಿಷ್ಟ ಜಾತಿಯ ಸೂಕ್ಷ್ಮಾಣುಜೀವಿಗಳು ಉತ್ಪಾದನೆಯಾಗುತ್ತವೆ. ಇವು, ಉತ್ಪಾದಿಸುವ ಕೆಂಪು ಬಣ್ಣದ ದ್ರವ್ಯ ಸೂರ್ಯನ ಬೆಳಕನ್ನು ಹೀರಿ ಅದನ್ನು ಶಕ್ತಿಯನ್ನಾಗಿ ಪರಿವರ್ತಿಸಿ ಸೂಕ್ಷ್ಮಾಣುಜೀವಿಗಳಿಗೆ ಸರಬರಾಜು ಮಾಡುತ್ತವೆ. ಸರೋವರದ ತುಂಬೆಲ್ಲ ಇವು ಹರಡಿದಾಗ ಇಡೀ ಸರೋವರದ ನೀರು ಕೆಂಪಾಗಿ ಕಾಣಿಸುತ್ತದೆ ಎನ್ನುತ್ತಿದ್ದಾರೆ ಕೆಲ ವಿಜ್ಞಾನಿಗಳು.

1.8 ಕಿ.ಮೀ. ಕುಳಿಯ ಅಗಲ
1.2 ಕಿ.ಮೀ. ನೀರಿನ ವ್ಯಾಪ್ತಿ
50 ಸಾವಿರ ವರ್ಷ. ಸರೋವರದ ವಯಸ್ಸಿನ ಬಗ್ಗೆ ವಿಜ್ಞಾನಿಗಳ ಅಂದಾಜು
10.5 ಸರೋವರದ ನೀರಿನ ಪಿಎಚ್‌ ವ್ಯಾಲ್ಯೂ

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.