ಬ್ರಿಟಿಷರನ್ನು ನಡುಗಿಸಿದ್ದ ಮುಂಡರಗಿ ಭೀಮರಾವ್‌


Team Udayavani, Aug 11, 2021, 6:40 AM IST

ಬ್ರಿಟಿಷರನ್ನು ನಡುಗಿಸಿದ್ದ ಮುಂಡರಗಿ ಭೀಮರಾವ್‌

1857, ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಸ್ಮರಣೀಯ ವರುಷ. ಲಕ್ಷಾಂತರ ಜನ ತಮ್ಮೆಲ್ಲ ಭೇದ ಭಾವ ತೊರೆದು, ದಾಸ್ಯದ ನೊಗವನ್ನು ಕಿತ್ತೂಗೆಯಲು ಮೈ ಕೊಡವಿ ನಿಂತ ವರ್ಷ. ಈ ಹೋರಾಟದಲ್ಲಿ ರಾಜ – ಮಹಾ­ರಾಜರು ಮಾತ್ರವಲ್ಲ, ಸಾಮಾನ್ಯ ವ್ಯಕ್ತಿಗಳೂ ಬಲಿದಾನ ಮಾಡಿದರು. ಅಂಥವರಲ್ಲಿ ಮುಂಡರಗಿ ಭೀಮರಾಯ (ಮುಂಡರಗಿ ಭೀಮರಾವ್‌) ಕೂಡ ಒಬ್ಬ.

ಈ ಭೀಮರಾವ್‌ ಅವರ ತಾತನ ಹೆಸರು ಮೊಂಡಗೈ ಭೀಮರಾಯ. ಈತ ಡಂಬಳದ ದೇಸಾಯಿಯವರ ಸಂಸ್ಥಾನದಲ್ಲಿ ಸಚಿವನಾಗಿದ್ದ. ಭೀಮರಾಯನ ತಂದೆ ರಂಗರಾಯ, ಪೇಶ್ವೆಯ ಕೈಕೆಳಗೆ ಅಧಿಕಾರಿ ಯಾಗಿದ್ದ. ಇಂಥ ಕುಟುಂಬದ ಕುಡಿಯಾದ ಭೀಮರಾಯ, ಶೂರ, ಸಾಹಸಿ, ಅಪ್ರತಿಮ ಬೇಟೆಗಾರ ಎಂದೆಲ್ಲ ಹೆಸರಾಗಿದ್ದ. ಕನ್ನಡ, ಮರಾಠಿ ಹಾಗೂ ಇಂಗ್ಲಿಷ್‌ನಲ್ಲಿ ವ್ಯವಹರಿಸಲೂ ತಿಳಿದಿದ್ದ.

ಅದೊಮ್ಮೆ ಬೇಟೆಯ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ಕಲೆಕ್ಟರ್‌ ಆಗಿದ್ದ ಬ್ರಿಟಿಷ್‌ ಅಧಿಕಾರಿಯ ಜೀವ ಉಳಿಸಿದ. ಇದಕ್ಕೆ ಕೃತಜ್ಞತೆಯ ರೂಪದಲ್ಲಿ ಭೀಮರಾಯನಿಗೆ ಕೊಪ್ಪಳದಲ್ಲಿ ತಹಶೀಲ್ದಾರ್‌ ಹುದ್ದೆಯನ್ನು ಆ ಆಂಗ್ಲ ಅಧಿಕಾರಿ ಕೊಡಿಸುತ್ತಾನೆ. ಮುಂದೆ ಜನಪರ ಕೆಲಸಗಳಿಂದ ಎಲ್ಲರ ವಿಶ್ವಾಸ ಗಳಿಸುವ ಭೀಮರಾವ್‌, ಮುಂದೆ ಬಳ್ಳಾರಿಯ ಮಾಮಲೇದಾರನಾಗಿ ಭಡ್ತಿ ಪಡೆಯುತ್ತಾನೆ.

ಹೀಗೆ ಆರಂಭದಲ್ಲಿ ಬ್ರಿಟಿಷರ ನೆಚ್ಚಿನ, ನಿಷ್ಠಾವಂತ ಅಧಿಕಾರಿಯಾಗಿದ್ದ ಮುಂಡರಗಿ ಭೀಮರಾವ್‌, ಅನಂತರ ಬ್ರಿಟಿಷರ ವಿರುದ್ಧವೇ ಯುದ್ಧ ಸಾರಲು ಕಾರಣವಾದ ಸಂದರ್ಭ ಒದಗಿ ಬಂದದ್ದು ಹೀಗೆ: ಆ ದಿನಗಳಲ್ಲಿ, ಭಾರತೀಯರನ್ನು ಕಂಡರೆ ಬ್ರಿಟಿಷ್‌ ಅಧಿಕಾರಿಗಳಿಗೆ ತಿರಸ್ಕಾರವಿತ್ತು. ಸಮಯ ಸಿಕ್ಕಾಗಲೆಲ್ಲ ಅವರು ಭಾರತೀಯರನ್ನು ಕಾಡುತ್ತಿದ್ದರು, ಅವಮಾನಿಸುತ್ತಿದ್ದರು, ಟೀಕಿಸುತ್ತಿದ್ದರು. ಇದನ್ನೆಲ್ಲ  ನೋಡುವಷ್ಟು ದಿನವೂ ನೋಡಿದ ಭೀಮರಾವ್‌, ಕಡೆಗೊಮ್ಮೆ ಬ್ರಿಟಿಷ್‌ ಅಧಿಕಾರಿಗಳ ವರ್ತನೆಯನ್ನು ಗಟ್ಟಿಯಾಗಿ ಆಕ್ಷೇಪಿಸತೊಡಗಿದ. ತಮ್ಮ ಕೈಕೆಳಗೆ ಕೆಲಸ ಮಾಡುವ ಭಾರತೀಯನೊಬ್ಬ ತಮ್ಮ ವಿರುದ್ಧ ಮಾತಾಡುವುದನ್ನು ಕಂಡು ಬ್ರಿಟಿಷ್‌ ಅಧಿಕಾರಿಗಳು ಸಿಟ್ಟಾದರು. ಭೀಮರಾಯನ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ಅವನನ್ನು ಕೆಲಸದಿಂದ ತೆಗೆದುಹಾಕಿದರು.

ಸ್ವಾತಂತ್ರ್ಯ ಸಾಧನೆಗಾಗಿ ತಹತಹಿಸುತ್ತಿದ್ದ ಭೀಮರಾವ್‌, ಅಂದಿನಿಂದಲೇ ಬ್ರಿಟಿಷ್‌ ಆಡಳಿತವನ್ನು ನಿರ್ಮೂಲನೆ ಮಾಡಲು ಪಣತೊಟ್ಟ. ಬ್ರಿಟಿಷರ ವಿರುದ್ಧ ಹೋರಾಡಲು ಹವಣಿಸುತ್ತಿದ್ದ ಸೊರಟೂರು ದೇಸಾಯಿ, ಹಮ್ಮಿಗೆ ಕೆಂಚನಗೌಡ, ಡಂಬಳದ ದೇಶಮುಖ್‌, ಗೋವಿನಕೊಪ್ಪದ ದೇಸಾಯಿ-ಮುಂತಾದವರ ಸಂಪರ್ಕ ಸಾಧಿಸಿದ. ಆಯಕಟ್ಟಿನ ಜಾಗಗಳಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟ. ನಂಬಿಗಸ್ತರ ತಂಡ ಕಟ್ಟಿಕೊಂಡ.

ಅಧಿಕಾರಿಯಾಗಿದ್ದ ದಿನದಿಂದಲೂ ಭೀಮರಾಯ ಜನರ ವಿಶ್ವಾಸ ಗಳಿಸಿದ್ದ. ಕೊಪ್ಪಳ ಸೀಮೆಯಲ್ಲಂತೂ ಇವನ ಪ್ರಭಾವ ಅಪಾರವಾಗಿತ್ತು. ಇದನ್ನು ಗಮನಿಸಿದ್ದ ಬ್ರಿಟಿಷರು, ಭೀಮರಾವ್‌ನ ಪ್ರಯತ್ನಗಳನ್ನು ಆರಂಭದಲ್ಲಿಯೇ ಚಿವುಟಿ ಹಾಕಲು ಮುಂದಾದರು. ಡಂಬಳದಲ್ಲಿದ್ದ ಬ್ರಿಟಿಷ್‌ ಅಧಿಕಾರಿ, ಹಮ್ಮಿಗೆಯ ಕೆಂಚಿನ ಗೌಡನ ಮನೆಯನ್ನು ಮುತ್ತಿ, ಮದ್ದುಗುಂಡುಗಳನ್ನು ವಶಪಡಿಸಿಕೊಂಡ. ತನ್ನ ಗುಪ್ತಕಾರ್ಯ ಬೆಳಕಿಗೆ ಬಂದುದನ್ನು ಗಮನಿಸಿದ ಭೀಮರಾಯ, ನೇರ ಕಾರ್ಯಾಚರಣೆ ಆರಂಭಿಸಿದ, ರೈತ ಜನರಿಗೆ ಕ್ರಾಂತಿತಣ್ತೀ  ಸಾರಿದ. ಬ್ರಿಟಿಷ್‌ ಸರಕಾರಕ್ಕೆ ಕಂದಾಯ ಕೊಡಬೇಡಿರೆಂದು ಹೇಳಿದ. ನರಗುಂದದ ದೇಸಾಯಿ, ಆನೆಗೊಂದಿಯ ಅರಸರಿಗೆ ಪತ್ರ ಬರೆದು, ಬ್ರಿಟಿಷರ ವಿರುದ್ಧದ ತನ್ನ ಹೋರಾಟಕ್ಕೆ ಬೆಂಬಲ ನೀಡುವಂತೆ ಕೇಳಿಕೊಂಡ. ಮೊದಲು ಭೀಮರಾಯ ಮತ್ತು ಕೆಂಚನಗೌಡ ಡಂಬಳವನ್ನು ಮುತ್ತಿ ಆ ನಗರವನ್ನು ಸೂರೆ ಮಾಡಿದರು. ಭೀಮರಾಯ ಅಲ್ಲಿಂದ ಗದಗಕ್ಕೆ, ಅನಂತರ ಕೊಪ್ಪಳಕ್ಕೆ ನಡೆದ.

ಈ ಸುದ್ದಿ ಬ್ರಿಟಿಷರಿಗೆ ಮುಟ್ಟಿತು. ಅವರೂ ಸಿದ್ಧರಾದರು. ಇದರ ಪರಿಣಾಮ ಧಾರವಾಡ, ಬಳ್ಳಾರಿ, ರಾಯಚೂರು ಕಡೆಗಳಿಂದ ಬ್ರಿಟಿಷ್‌ ಸೈನ್ಯಗಳು ಕೊಪ್ಪಳದ ಕಡೆ ಧಾವಿಸಿದವು. ಹೈದರಾಬಾದಿನಿಂದ ಟೇಲರ್‌ ಸಾಹೇಬನ ನೇತೃತ್ವದಲ್ಲಿ ಒಂದು ದಳ ಬಂತು. ಮೇಜರ್‌ ಹೋಗನ್‌ ನೇತೃತ್ವದಲ್ಲಿದ್ದ ಬ್ರಿಟಿಷ್‌ ಸೈನ್ಯ ಕೊಪ್ಪಳದ ಕೋಟೆ ಸುತ್ತುವರಿದು, ಶರಣಾ­ಗುವಂತೆ ಭೀಮರಾಯನಿಗೆ ಆಜ್ಞೆ ಮಾಡಿತು (31-5-1858). ಆದರೆ ಭೀಮರಾಯ ಯುದ್ದಕ್ಕೇ ಸಿದ್ಧನಾದ. ಉಭಯ ಸೈನ್ಯಗಳಿಗೂ ಘೋರ ಯುದ್ಧ­ವಾಯಿತು. ಕೆಲವು ವಂಚಕರ ಸಹಾಯದಿಂದ ಬ್ರಿಟಿಷ್‌ ಸೈನ್ಯ ಕೋಟೆಯೊಳಗೂ ನುಗ್ಗಿತು. ಭೀಮರಾಯ ವೀರಾವೇಶದಿಂದ ಹೋರಾಡಿ ರಣರಂಗದಲ್ಲಿ ಅಸುನೀಗಿದ.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.