Portable Hospital; ಆರೋಗ್ಯ ಸೇವಾ ಕ್ಷೇತ್ರದಲ್ಲಿ ಹೊಸ ಕ್ರಾಂತಿ


Team Udayavani, Dec 26, 2023, 5:16 AM IST

1-cssadsad

ಪ್ರವಾಹ, ಭೂಕಂಪದಂತಹ ನೈಸರ್ಗಿಕ ವಿಕೋಪಗಳು, ಯುದ್ಧಗ್ರಸ್ತ ಪ್ರದೇಶ ಮತ್ತು ಆರೋಗ್ಯ ಸೇವೆಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಗಾಯಗೊಂಡವರು ಹಾಗೂ ಅನಾರೋಗ್ಯಕ್ಕೆ ತುತ್ತಾಗುವ ನಾಗರಿಕರನ್ನು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಪ್ರಾಣ ಕಳೆದುಕೊಳ್ಳುವ ಘಟನೆಗಳು ಪ್ರತಿನಿತ್ಯ ವರದಿಯಾಗುತ್ತಲೇ ಇರುತ್ತವೆ. ಇಂತಹ ಸಂದರ್ಭಗಳಲ್ಲಿ ಗಾಯಾಳುಗಳು ಮತ್ತು ಅನಾರೋಗ್ಯ ಪೀಡಿತರಿಗೆ ತುರ್ತು ಆರೋಗ್ಯ ಸೇವೆ ದೊರಕದಿರುವುದೇ ಇದಕ್ಕೆ ಕಾರಣ. ಗೋಲ್ಡನ್‌ ಅವರ್‌ನಲ್ಲಿ ಚಿಕಿತ್ಸೆ ಲಭಿಸದೆ ಸಂಭವಿಸುವ ಸಾವುಗಳನ್ನು ತಪ್ಪಿಸಲು ಮತ್ತು ಗಾಯಾಳುಗಳಿಗೆ ಕ್ಲಪ್ತ ಸಮಯಕ್ಕೆ ಸ್ಥಳದಲ್ಲೇ ಅಥವಾ ಹತ್ತಿರದಲ್ಲೇ ಪರಿಪೂರ್ಣ ಆರೋಗ್ಯ ಸೇವೆಯನ್ನು ಒದಗಿಸಲು ಜೀವ ರಕ್ಷಕ ಆರೋಗ್ಯ ಮೈತ್ರಿ ಏಡ್‌ ಕ್ಯೂಬ್‌ ಪೋರ್ಟೇಬಲ್‌ ಆಸ್ಪತ್ರೆಯನ್ನು ರೂಪಿಸಲಾಗಿದ್ದು, ಇದು ಆರೋಗ್ಯ ಕ್ಷೇತ್ರದ ಭರವಸೆಯ ಬೆಳಕಾಗಿ ಕಾಣಿಸಿಕೊಂಡಿದೆ. ಏನಿದು ಯೋಜನೆ ? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ? ಎನ್ನುವುದರ ಸಮಗ್ರ ಮಾಹಿತಿ ಇಲ್ಲಿದೆ.

ಏನಿದು ಆರೋಗ್ಯ ಮೈತ್ರಿ ಏಡ್‌ ಕ್ಯೂಬ್‌ ?
ಯಾವುದೇ ಸ್ಥಳಕ್ಕೂ ಸಾಗಾಟ ಮಾಡಬಹುದಾದ ಹಾಗೂ ಒಂದು ಗಂಟೆಯ ಅವಧಿಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಿಸಬಹುದಾದ ಸುಸಜ್ಜಿತವಾದ ಪೋರ್ಟೇಬಲ್‌ (ಜೋಡಿಸ ಬಹುದಾದ) ಆಸ್ಪತ್ರೆ. ಇದಕ್ಕೆ ಆರೋಗ್ಯ ಮೈತ್ರಿ ಏಡ್‌ ಕ್ಯೂಬ್‌ ಎಂದು ಹೆಸರಿಡಲಾಗಿದೆ. ಈ ಪೋರ್ಟೇಬಲ್‌ ಆಸ್ಪತ್ರೆಗಳು ವೆಚ್ಚದಾಯಕವಾದರೂ ಜೀವನ್ಮರಣ ಸ್ಥಿತಿಯಲ್ಲಿರುವವರ ಪ್ರಾಣ ರಕ್ಷಣೆಯಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ.

ಎಲ್ಲಿ ಆರಂಭ ?
ದೇಶದ ಮೊದಲ ಪೋರ್ಟೇಬಲ್‌ ಆಸ್ಪತ್ರೆಯನ್ನು ಇತ್ತೀಚೆಗೆ ಹರಿಯಾಣದ ಗುರುಗ್ರಾಮದಲ್ಲಿ ಆರಂಭಿಸಲಾಗಿದೆ. ಭಾರತ್‌ ಹೆಲ್ತ್‌ ಇನಿಶಿಯೇಟಿವ್‌ ಯೋಜನೆಯ ಸಹಯೋಗ್‌ ಹಿತಾ ಮತ್ತು ಮೈತ್ರಿ (BHISHM) ಯಡಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ಇದು ವಿಶ್ವದ ಮೊದಲ ಪೋರ್ಟೇಬಲ್‌ ವಿಪತ್ತು ಆಸ್ಪತ್ರೆ ಎಂದು ಗುರುತಿಸಿ ಕೊಂಡಿದೆ. ಸರಿ ಸುಮಾರು 2.5 ಕೋಟಿ ರೂ. ವೆಚ್ಚದಲ್ಲಿ 72 ಕ್ಯೂಬ್‌ ಬಾಕ್ಸ್‌ ಗಳನ್ನು ಈ ಪೋರ್ಟೇಬಲ್‌ ಆಸ್ಪತ್ರೆ ಒಳಗೊಂಡಿದೆ.

ಹೇಗಿರಲಿದೆ ಈ ಆಸ್ಪತ್ರೆ ?
ಒಂದು ಪೋರ್ಟೇಬಲ್‌ ಆಸ್ಪತ್ರೆಯಲ್ಲಿ 200 ರೋಗಿಗಳಿಗೆ ಚಿಕಿತ್ಸೆ ನೀಡಬಹುದಾಗಿದೆ. ಈ ಆಸ್ಪತ್ರೆಯು ಟೆಂಟ್‌ಗಳ ರೂಪದಲ್ಲಿದ್ದು, ಅಗತ್ಯಕ್ಕೆ ಅನುಗುಣವಾಗಿ ರೂಪಿಸಲಾಗಿರುವ ವೈದ್ಯಕೀಯ ಉಪಕರಣಗಳನ್ನು ಹೊಂದಿದೆ. ಜತೆಗೆ ಸುಸಜ್ಜಿತವಾದ 72 ಸಣ್ಣ ಕ್ಯೂಬ್‌ಗಳನ್ನು ಒಳಗೊಂಡಿದೆ. ಇಲ್ಲಿರುವ ಪ್ರತಿಯೊಂದು ಕ್ಯೂಬ್‌ಗಳು 15 ಕೆ.ಜಿ.ಗಿಂತ ಕಡಿಮೆ ತೂಕ ಮತ್ತು ಪ್ರತಿಯೊಂದು ಬದಿಯೂ 38 ಸೆಂ.ಮೀ. ಅಳತೆ ಹೊಂದಿದೆ. ಕೇವಲ ಒಂದು ಗಂಟೆಯಲ್ಲಿ ಈ ಕ್ಯೂಬ್‌ಗಳನ್ನು ಸುಸಜ್ಜಿತ ಆಸ್ಪತ್ರೆಯ ರೂಪದಲ್ಲಿ ಜೋಡಿಸಬಹುದಾಗಿದ್ದು, ಇದಕ್ಕೆ ತರಬೇತಿ ಪಡೆದ ಕನಿಷ್ಠ ಐದು ಮಂದಿಯ ಅಗತ್ಯವಿದೆ. ಸಂಚಾರ ದುಸ್ತರವಾಗಿರುವ ಕಡಿದಾದ ಮತ್ತು ದುರ್ಗಮ ಸ್ಥಳ ಹಾಗೂ ಯುದ್ಧ ಪೀಡಿತ ಪ್ರದೇಶಗಳಲ್ಲಿ ಇದು ಬಹಳಷ್ಟು ಉಪಯುಕ್ತವಾಗಿದ್ದು, ವಿಮಾನದ ಮೂಲಕ ಯಾವುದೇ ಸ್ಥಳದಲ್ಲೂ ಈ ಪೋರ್ಟೇಬಲ್‌ ಆಸ್ಪತ್ರೆಯನ್ನು ಲ್ಯಾಂಡ್‌ ಮಾಡಬಹುದಾಗಿದೆ.

ಏನೆಲ್ಲ ಸೌಲಭ್ಯವಿದೆ ?
72 ಸಣ್ಣ ಕ್ಯೂಬ್‌ಗಳು, ವೆಂಟಿಲೇಟರ್‌ಗಳು, ಸೌರ ಫ‌ಲಕ ಆಧಾರಿತ ಜನರೇಟರ್‌ಗಳು, ಅಲ್ಟ್ರಾಸೌಂಡ್‌ ಯಂತ್ರಗಳು,
ಡಿಜಿಟಲ್‌ ಇಮೇಜಿಂಗ್‌, ರೇಡಿಯೋಗ್ರಾಫಿ ಯಂತ್ರಗಳು, ಡಿಫಿಬ್ರಿಲೇಟರ್‌ಗಳು, ಹೈ-ಮೌಂಟೆಡ್‌ ಒಟಿ ಲೈಟ್‌ಗಳು, ಸ್ಟ್ರೆಚರ್‌ಗಳು, ಆಧುನಿಕ ಶಸ್ತ್ರಚಿಕಿತ್ಸಕ ಸಾಧನಗಳು ಮತ್ತು ಪೋಟೇìಬಲ್‌ ಪ್ರಯೋಗಾಲಯದಂತಹ ವಿಭಿನ್ನ ಸಾಧನಗಳನ್ನು ಈ ಆಸ್ಪತ್ರೆಗಳು ಒಳಗೊಂಡಿವೆ. ಇವುಗಳಲ್ಲಿರುವ ಕಿಟ್‌ಗಳು ಜಲನಿರೋಧಕ ಮತ್ತು ತುಕ್ಕು ನಿರೋಧಕವಾಗಿವೆ. ಜತೆಗೆ ಶಸ್ತ್ರಚಿಕಿತ್ಸೆಯ ತುರ್ತು ಪರಿಸ್ಥಿತಿ ಎದುರಾದಾಗ ಈ ಕಿಟ್‌ಗಳ ಸಹಾಯದಿಂದ 10 ನಿಮಿಷ ಅವಧಿಯಲ್ಲಿ ಆಪರೇಶನ್‌ ಥಿಯೇಟರ್‌ ಅನ್ನು ಸಿದ್ಧಪಡಿಸಬಹುದಾಗಿದೆ. ಇದಕ್ಕೆ ಬೇಕಾಗಿರುವ ಅಗತ್ಯ ಸಾಧನ, ಸಲಕರಣೆಗಳ ಸಹಿತ ಎಲ್ಲ ವ್ಯವಸ್ಥೆಗಳನ್ನು ಇದರಲ್ಲಿ ಕಲ್ಪಿಸಲಾಗಿದೆ. ಆಸ್ಪತ್ರೆಯು 100 ಜನರಿಗೆ 48 ಗಂಟೆಗಳವರೆಗೆ ವೈದ್ಯಕೀಯ ಆರೈಕೆಯನ್ನು ಒದಗಿಸುವ ಸಾಮರ್ಥ್ಯವನ್ನು ಸಹ ಹೊಂದಿದೆ.

ಆರೋಗ್ಯ ಮೈತ್ರಿ ಏಡ್‌ ಕ್ಯೂಬ್‌
ಪ್ರಾಕೃತಿಕ ವಿಕೋಪ, ಯುದ್ಧದ ಸಂದರ್ಭದಲ್ಲಿ ಸಂತ್ರಸ್ತರಿಗೆ ತುರ್ತು ಆರೋಗ್ಯ ಸೇವೆ
ಗೋಲ್ಡನ್‌ ಅವರ್‌ನಲ್ಲಿ ವಿಪತ್ತು ಪೀಡಿತರ ಜೀವ ರಕ್ಷಣೆಗೆ ಆದ್ಯತೆ
ಅವಶ್ಯವಿದ್ದಲ್ಲಿ ತುರ್ತು ಶಸ್ತ್ರಚಿಕಿತ್ಸೆ ನಡೆಸಲೂ ಸಾಧ್ಯ
ವಿಪತ್ತು ಪೀಡಿತ ದುರ್ಗಮ ಪ್ರದೇಶಗಳಲ್ಲಿಯೇ ಸಂತ್ರಸ್ತರಿಗೆ ಸಿಗಲಿದೆ ವೈದ್ಯಕೀಯ ಚಿಕಿತ್ಸೆ

ಆರೋಗ್ಯ ಸೇವೆಯಲ್ಲಿ ಕ್ರಾಂತಿಕಾರಿ ಹೆಜ್ಜೆ
ಕೊರೊನಾ ಸಾಂಕ್ರಾಮಿಕದ ಬಳಿಕ ಕೇಂದ್ರ ಸರಕಾರ ಆರೋಗ್ಯ ಕ್ಷೇತ್ರದತ್ತ ಹೆಚ್ಚಿನ ಲಕ್ಷ್ಯ ಹರಿಸಿದ್ದು ದೇಶದ ನಾಗರಿಕರೆಲ್ಲರಿಗೂ ಆರೋಗ್ಯ ಸೇವೆ ಲಭಿಸುವಂತಾಗಲು ಹೊಸ ಉಪಕ್ರಮ, ಯೋಜನೆ, ಆವಿಷ್ಕಾರಗಳನ್ನು ಜಾರಿಗೊಳಿಸುತ್ತಲೇ ಬಂದಿದೆ. ಅಷ್ಟು ಮಾತ್ರವಲ್ಲದೆ ಆರೋಗ್ಯ ಸೇವೆಯಲ್ಲಿ ತಂತ್ರಜ್ಞಾನದ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಲೇ ಬಂದಿದ್ದು ಈ ದಿಸೆಯಲ್ಲಿ ಆರೋಗ್ಯ ಮೈತ್ರಿ ಏಡ್‌ ಕ್ಯೂಬ್‌ ಅತ್ಯಂತ ಮಹತ್ವದ ಮತ್ತು ಕ್ರಾಂತಿಕಾರಿ ಉಪಕ್ರಮವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ಏಡ್‌ ಕ್ಯೂಬ್‌ಗಳನ್ನು ಹೊಂದಲು ಸರಕಾರ ಈಗಾಗಲೇ ಯೋಜನೆ ರೂಪಿಸಿದೆ. ದೇಶದ ಒಟ್ಟಾರೆ ಆರೋಗ್ಯ ಸೇವಾ ಕ್ಷೇತ್ರ ಸುಧಾರಣೆಯ ಹಾದಿಯಲ್ಲಿದ್ದು ಪೋಟೇìಬಲ್‌ ಆಸ್ಪತ್ರೆ ಸದ್ಯೋಭವಿಷ್ಯದಲ್ಲಿ ದೇಶದೆಲ್ಲೆಡೆ ವಿಪತ್ತುಗಳ ಸಂದರ್ಭದಲ್ಲಿ ಸಂಕಷ್ಟಪೀಡಿತರಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ಬಳಕೆಯಾಗಲಿದೆ.

ಎಲ್ಲೆಲ್ಲಿ ಬಳಕೆ ಸಾಧ್ಯ?
ಸಾಮಾನ್ಯವಾಗಿ ಯುದ್ಧ ಪೀಡಿತ ಪ್ರದೇಶ, ಭೂಕಂಪ, ಪ್ರವಾಹ, ಹಿಮಪಾತಗಳಂತಹ ನೈಸರ್ಗಿಕ ವಿಕೋಪಗಳಿಂದ ತೀವ್ರ ಹಾನಿಗೊಳಗಾದ ಮತ್ತು ಸಾರಿಗೆ ಸಂಪರ್ಕ ಕಡಿತಗೊಂಡ ದುರ್ಗಮ ಪ್ರದೇಶಗಳಲ್ಲಿನ ಸಂತ್ರಸ್ತರಿಗೆ ತುರ್ತು ಆರೋಗ್ಯ ಸೇವೆ ನೀಡಲು ಈ ಪೋಟೇìಬಲ್‌ ಆಸ್ಪತ್ರೆ ಸಹಕಾರಿ ಮಾತ್ರವಲ್ಲದೆ ಅತ್ಯಂತ ಪರಿಣಾಮಕಾರಿ ಕೂಡ. ಈ ಆರೋಗ್ಯ ಮೈತ್ರಿ ಏಡ್‌ ಕ್ಯೂಬ್‌ ಕಿಟ್‌ನಲ್ಲಿ ಒದಗಿಸಲಾದ ಟ್ಯಾಬ್ಲೆಟ್‌ ಆಧಾರಿತ ಆ್ಯಪ್ಲಿಕೇಶನ್‌ ಬಳಸಿಕೊಂಡು ಆಸ್ಪತ್ರೆಯನ್ನು ಸಂತ್ರಸ್ತರ ಸೇವೆಗೆ ಕ್ಷಿಪ್ರಗತಿಯಲ್ಲಿ ಅಣಿಗೊಳಿಸಬಹುದಾಗಿದೆ.

ವಿದೇಶಗಳಿಗೂ ನೆರವು
ಪೋಟೇìಬಲ್‌ ಆಸ್ಪತ್ರೆಗಳು ಭಾರತದಲ್ಲಿ ಎದುರಾಗುವ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಮಾತ್ರವಲ್ಲದೇ ಇತರ ದೇಶಗಳ ನೆರವಿಗೂ ಒದಗಿಬರಲಿದೆ. ಇದರ ಭಾಗವಾಗಿ ಭಾರತವು ಈಗಾಗಲೇ ಎರಡು ಆರೋಗ್ಯ ಮೈತ್ರಿ ಏಡ್‌ ಕ್ಯೂಬ್‌ಗಳನ್ನು ಮ್ಯಾನ್ಮಾರ್‌ಗೆ ನೀಡಿದ್ದು, ಶ್ರೀಲಂಕಾಕ್ಕಾಗಿ ಒಂದನ್ನು ಸಿದ್ಧಪಡಿಸಲಾಗುತ್ತಿದೆ.

ಪೂಜಾ ಆರ್‌. ಹೆಗಡೆ, ಮೇಲಿನಮಣ್ಣಿಗೆ

ಟಾಪ್ ನ್ಯೂಸ್

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

B.Y. Raghavendra: ಕಾಂಗ್ರೆಸ್‌ನವರ ಬಳಿ ಗ್ಯಾರಂಟಿ ಅಡ್ವಾನ್ಸ್‌ ಹಣ ಕೇಳಿ: ಬಿವೈಆರ್‌

B.Y. Raghavendra: ಕಾಂಗ್ರೆಸ್‌ನವರ ಬಳಿ ಗ್ಯಾರಂಟಿ ಅಡ್ವಾನ್ಸ್‌ ಹಣ ಕೇಳಿ: ಬಿವೈಆರ್‌

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.