ಇಂಗ್ಲೆಂಡ್ ನಲ್ಲಿ ಬಾದಾಮಿಯ ಗವಿಗಳ ನೆನಪು; ಕಾಲಗರ್ಭದಲ್ಲಿ ಅಡಗಿದ ಮರಳಿನ ಮಹಲ್


Team Udayavani, Mar 22, 2023, 2:29 PM IST

ಇಂಗ್ಲೆಂಡ್ ನಲ್ಲಿ ಬಾದಾಮಿಯ ಗವಿಗಳ ನೆನಪು; ಕಾಲಗರ್ಭದಲ್ಲಿ ಅಡಗಿದ ಮರಳಿನ ಮಹಲ್

The Elephant in the Room ಎನ್ನುವುದು ಆಂಗ್ಲಭಾಷೆಯಲ್ಲೊಂದು ಪ್ರಸಿದ್ಧ ನುಡಿಗಟ್ಟು. ಅದರರ್ಥ ಆನೆ ಎದುರಿಗೆ ಕಂಡರೂ ಕಾಣದವರಂತೆ ಜನ ವರ್ತಿಸುವ ಪರಿ ಎಂಬುದು. ಮರಳಿನ ಮನೆಗೂ ಈ ನುಡಿಗಟ್ಟಿಗೂ ಏನು ಸಂಬಂಧ ಎಂದೆನಿಸಬಹುದು. ಇಲ್ಲಿ ನಾನು ಹೇಳಲು ಹೊರಟಿದ್ದು ಡೋಂಕಾಸ್ಟರ್‌ ನಲ್ಲಿರುವ ಕಲ್ಲಿನ ಕೆತ್ತನೆಗಳಿಂದ ಕೂಡಿದ ಒಂದು ಅಪರೂಪದ ಮರಳುಗಲ್ಲಿನ ಅದ್ಭುತ ವಿಕ್ಟೋರಿಯನ್‌ ಕಾಲದ “ಸ್ಯಾಂಡ್‌ ಹೌಸ್‌’ ಎನ್ನುವ ಮಹಲಿನ ಬಗ್ಗೆ.

ಇದೊಂದು ಕಳೆದ ಶತಮಾನದ ಸ್ವಾರಸ್ಯಕರ ಇತಿಹಾಸದ ತುಣುಕು. ಈ ಮನೆಯನ್ನು ಬಾದಾಮಿಯ ಗವಿಗಳನ್ನು ಹೋಲುವ ಶೆರ್ವುಡ್‌ ಸ್ಯಾಂಡ್‌ ರಾಕ್‌ ಎನ್ನುವ ಮರಳು ಶಿಲೆಯಲ್ಲಿ ಕೊರೆದಂತೆ ಕೊರೆದು ತೆಗೆದಿದ್ದಾರೆ.

ಇದು ವಾಸಕ್ಕೆ ಮನೆಯಾಗಿತ್ತಲ್ಲದೆ ಅದಕ್ಕೆ ಹೊಂದಿಯೇ ತೋಟ, 900 ಫೀಟ್‌ ಉದ್ದದ ಸಿಂಗರಿಸಿದ ಸುರಂಗ ಮಾರ್ಗಗಳು (Grotto), ಪ್ರಾಂಗಣದ ಸುತ್ತಲಿನ ನೆಲ ಮಾಳಿಗೆ (cloisters), ಅದರ ಭಿತ್ತಿಗಳಲ್ಲಿ ತರಹೇವಾರಿ ಕೆತ್ತನೆಗಳು. ಮನುಷ್ಯನೆತ್ತರಕ್ಕೆ ನಿಂತ ಶಿಲ್ಪಗಳು, ವಿಕ್ಟೋರಿಯಾ ರಾಣಿ, ಮತ್ತಿತರ ಮುಖಗಳು, ಎಲ್ಲಕ್ಕಿಂತ ಕಳಶಪ್ರಾಯವಾಗಿ ಒಂದು ದೊಡ್ಡ ಶಿಲ್ಪ- ಜಂಬೋ ಸ್ತಂಭಕ್ಕೆ ಒರಗಿ ನಿಂತ ಮಾಹುತ ಮತ್ತು ಆತನ ಪಕ್ಕದಲ್ಲಿ ಹೆಚ್ಚು ಕಡಿಮೆ ಹತ್ತೂವರೆ ಅಡಿ ಎತ್ತರದ ಆನೆ! ಇವೆಲ್ಲವುಗಳೊಂದಿಗೆ ವೈಭವದಿಂದ ಮೆರೆದ ಈ ಭವನ ಈಗ ಪೂರ್ತಿಯಾಗಿ ಕಣ್ಮರೆಯಾಗಿರುವುದು ಒಂದು ಐತಿಹಾಸಿಕ ದುರಂತ ಎನ್ನಬೇಕು. ಅದರ ರೋಚಕ ಕಥೆ ಇಲ್ಲಿದೆ.

ಇಂಗ್ಲೆಂಡ್‌ನ‌ ಮಧ್ಯಭಾಗದಲ್ಲಿ ನಾಟಿಂಗಮ್ಮಿನಿಂದ ಪೂರ್ವಕ್ಕೆ ಸಮುದ್ರದ ವರೆಗೆ ಭೂಗರ್ಭದಲ್ಲಿ ಮರಳು ಶಿಲೆಯ ಹಾಸು ಹರಡಿದೆ. ಇದೊಂದು ತರಹ ಬಾದಾಮಿ ಬಣ್ಣದ ಸೆಡಿಮೆಂಟರಿ ರಾಕ್‌ ಅಂತ ಭೂಗರ್ಭಶಾಸ್ತ್ರಜ್ಞರು ಕರೆಯುತ್ತಾರೆ. ಅಲ್ಲಲ್ಲಿ ಇದನ್ನು ಉತ್ಖನನ ಮಾಡಿ (quarry) ಮಾರುವುದು ಲಾಭದಾಯಕ ವೃತ್ತಿಯಾಗಿತ್ತು.  ಸುಮಾರು 1845ರಲ್ಲಿ ಹೆನ್ರಿ ವಿಲಿಯಮ್‌ ಸೀನಿಯರ್‌ ಎನ್ನುವವ ಈ ಊರಿನ ದಕ್ಷಿಣ ಭಾಗದಲ್ಲಿ ಮರಳು ವ್ಯಾಪಾರ ಮಾಡಲು ಶುರು ಮಾಡಿದಾಗ ರೇಲ್ವೆಯ ಆಗಮನದಿಂದ ಈ ಊರು ಭರದಿಂದ ಬೆಳೆಯಲಾರಂಭಿಸಿತ್ತು. ಆತ ಕೊಂಡ ಮೂರು ಎಕರೆ ಭೂಮಿಯ ಮಧ್ಯದಲ್ಲಿ ಸಿಕ್ಕ ಒಂದು ವಿಶಾಲವಾದ ಮರಳು ಶಿಲೆಯ ಬ್ಲಾಕ್‌ ಅನ್ನು ಕೊರೆದು ಆ ಮರಳನ್ನು ಕಟ್ಟಡ ಕೆಲಸಗಳಿಗಾಗಿ ಮಾರುತ್ತಿದ್ದ. ಅದೇ ಸಮಯದಲ್ಲಿ ಒಂದು ಭಾಗದಲ್ಲಿ ತನಗಾಗಿ ಒಂದು ವಾಸಸ್ಥಾನವನ್ನೂ ಕಲ್ಲಿನಲ್ಲಿಯೇ ಕೊರೆದು ತೆಗೆದ. ತಾನು ಶ್ರೀಮಂತನಾದಂತೆ ಅದನ್ನು ಬೆಳೆಸುತ್ತ ಹೋಗಿದ್ದರಿಂದ ಆತನ ಸ್ವಗೃಹ ದೊಡ್ಡದಾಗಿ ಒಂದು ಬಾಲ್‌ ರೂಮು ಸಹ ಒಳಗೊಂಡ ಭವನವೇ ಆಗಿ ಮಾರ್ಪಾಡಾಯಿತು!

ಎರಡು ಅಂತಸ್ತಿನ ಮನೆಯ ಸುತ್ತ ತೋಟ ನಿರ್ಮಾಣವಾಯಿತು. ತನ್ನ ಮನೆಗೆ “ಡಾನ್‌ ಕಾಸಲ್‌ (ಕೋಟೆ)’ ಅಂತ ಹೆಸರಿಟ್ಟು ಹೊರ ಜನರಿಗೆ ಪ್ರದರ್ಶಿಸುತ್ತಿದ್ದ. An Englishman’s house is his castle ಅಲ್ಲವೇ? (ಇಂಗ್ಲಿಷ್‌ ಸಜ್ಜನನ ಮನೆಯೇ ಆತನ ಕೋಟೆ!).

ಸ್ಯಾಂಡ್‌ ಹೌಸ್‌ನ ಉಚ್ಛ್ರಾಯ ಸ್ಥಿತಿ, ಅವನತಿ

1870- 80ರ ಸುಮಾರಿಗೆ ಮರಳಿನ ಉದ್ಯಮದಲ್ಲಷ್ಟೇ ಅಲ್ಲ, ಭೂಮಿ, ಮನೆಗಳನ್ನು ಕೊಳ್ಳುವ ಮಾರುವ ಎಸ್ಟೇಟ್‌ ಬಿಸ್‌ನೆಸ್‌ನಲ್ಲೂ ಆತ ಕೈಹಾಕಿದ್ದ. ತಾನು ಕೊಂಡ ಒಂದು ಬ್ರೂವರಿಯಲ್ಲದೆ ಒಂದೆರಡು ಪಬ್‌ ಗಳನ್ನೂ ನಡೆಸುತ್ತಿದ್ದ. ತನ್ನ ಸಿರಿವಂತ ಅಂತಸ್ತಿಗೆ ತಕ್ಕ ಜೀವನ ಶೈಲಿಯಿಂದ ತನ್ನ ದೊಡ್ಡ ಕುಟುಂಬದೊಂದಿಗೆ ವಾಸಿಸುತ್ತಿದ್ದ. ಶಿಲೆಯಲ್ಲೇ ಕೊರೆದಿದ್ದರಿಂದ ಗೋಡೆಗಳ ಗಾತ್ರ ಒಂದು ಕಡೆ ಮೂರರಿಂದ ಇನ್ನೊಂದೆಡೆ ಒಂಬತ್ತು ಫೀಟ್‌ನವರೆಗೆ ಇತ್ತು! ಇಡೀ ಮನೆಯ ಉದ್ದಗಲ 120×42 ಫೀಟ್‌ ಇದ್ದರೂ, ಒಂದು ಉದ್ದನೆಯ ಕೋಣೆಯೇ 30 ಫೀಟ್‌ ಇತ್ತು (ಲಾಂಗ್‌ ರೂಮ್).

ಬಾಲ್‌ ರೂಮು ಏಕಕಾಲಕ್ಕೆ 300 ಜನರು ಕೂಡಿ ನರ್ತಿಸುವಷ್ಟು ಭವ್ಯವಾಗಿತ್ತು. ಪ್ರೇಕ್ಷಣೀಯ ದೃಶ್ಯಗಳಲ್ಲಿ ಉಲ್ಲೇಖೀಸಬಹುದಾದ ಇನ್ನೊಂದು ವಿಷಯ ಅಂದರೆ ಸುರಂಗದ ಮೇಲ್ಛಾವಣಿಯಲ್ಲಿ ಆಕಸ್ಮಿಕವಾಗಿ ಹುಟ್ಟಿ ದೈತ್ಯಾಕಾರವಾಗಿ ಬೆಳೆದ ಶಿಲೀಂದ್ರ (Fungus) ಸಹ. ಇವೆಲ್ಲಕ್ಕೂ ಪ್ರವೇಶ ಶುಲ್ಕ ಇಡುವ ಜಾಣ್ಮೆ ಆತನಲ್ಲಿತ್ತು. ಆ ಮನೆಯಲ್ಲಿ ನಲವತ್ತು ವರ್ಷಗಳ ವಾಸದ ಅನಂತರ ಆತನ ತುಂಬು ಜೀವನದ 74ನೇ ವಯಸ್ಸಿನಲ್ಲಿ ಅಂದರೆ 1900ನೇ ಇಸವಿಯಲ್ಲಿ ಆತನನ್ನು ಮಣ್ಣು ಮಾಡಲಾಯಿತು.

ಇವೆಲ್ಲ ಐತಿಹಾಸಿಕ ವಿಷಯಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ನಮಗೆ ಕೊಟ್ಟವರು ಹೆನ್ರಿ ಸೀನಿಯರ್‌ ಮಹಾಶಯನ ಐದು ತಲೆಮಾರು ಕೆಳಗಿನ ಮೊಮ್ಮಗ ರಿಚರ್ಡ್‌ ಬೆಲ್. ಅವರು ಈ “ವಿಕ್ಟೋರಿಯನ್‌ ಮಾರ್ವೆಲ್’ ಬಗ್ಗೆ ತಾವು ಬರೆದ ಪುಸ್ತಕದಲ್ಲಿನ ಕೆಲವು ಚಿತ್ರಗಳನ್ನು ಈ ಲೇಖನದೊಂದಿಗೆ ಪ್ರಕಟಿಸಲು ಅನುಮತಿಯನ್ನೂ ಕೊಟ್ಟಿದ್ದಾರೆ.

ತನ್ನ ಪೂರ್ವಜರ ಆ ಮನೆಯನ್ನು ಸುರಂಗದಲ್ಲಿಳಿದು ಇನ್ನುಳಿದ ವಂಶಜರೊಂದಿಗೆ ಕೊನೆಯ ಸಲ ಕಂಡವರೂ ಅವರೇ. ಹೆನ್ರಿಯ ಮರಣಾನಂತರ ಆತನ ಮನೆಯನ್ನು ಮುನ್ಸಿಪಾಲಿಟಿಗೇ ಮಾರಲಾಯಿತು. ಅದನ್ನು ಅವರು ಸ್ಯಾನಿಟರಿ ಡಿಪಾರ್ಟ್ಮೆಂಟ್‌ ಗೆ ಕೊಟ್ಟರೂ 1940ರ ಹೊತ್ತಿಗೆ ಅದು ದುಃಸ್ಥಿತಿಯನ್ನು ಕಂಡಿತು. ಈ ಊರಿನ ಹೆಮ್ಮೆಯ ಅಪರೂಪದ ಐತಿಹಾಸಿಕ ಮನೆಯನ್ನು ಉಳಿಸಿಕೊಳ್ಳುವ ದೂರದೃಷ್ಟಿ ನಗರದ ಆಡಳಿತ ಮಂಡಳಿ ಹೊಂದಿರಲಿಲ್ಲ. ಒಂದು ತರದ ಅಂಧಗಜ ನ್ಯಾಯವೇ ಸೈ! ಅಲ್ಲಲ್ಲಿ ಬಿರುಕು ಬಿಟ್ಟು ಭೂ ಕುಸಿತವಾಗದಿರಲೆಂದು ಅದರ ಸುರಂಗಗಳಲ್ಲಿ ಕಾಂಕ್ರೀಟ್‌ ಪಂಪು ಮಾಡಿ, ಒಂದು ಕಾಲದಲ್ಲಿ ಡೌಲಾಗಿದ್ದ ಮನೆ ಮತ್ತು ಕುದುರೆ ಲಾಯಗಳನ್ನು ಭೂಗತ ಮಾಡಿ ಅದರ ಮೇಲೆ ಕಣ್ಣಿಗೆ ಕೀಸರವಾಗುವಂಥ ಮಲ್ಟಿ ಸ್ಟೋರಿ ಫ್ಲ್ಯಾಟುಗಳನ್ನು ಕಟ್ಟಿದ್ದಾರೆ.

ಈಗ ಆ ಮರಳಿನ ಮನೆ, ಅದರಲ್ಲಿಯ ಆನೆ ಮರಳಿ ಕಾಣುವಂತಿಲ್ಲ. ರಿಚರ್ಡ್‌ ಬೆಲ್‌ ಅವರಿಂದ ಸ್ಯಾಂಡ್‌ ಹೌಸ್‌ನ ವರ್ಣನೆ ಕೇಳುವಾಗ ನನಗೆ ಇದೇ ತರದ ಮರಳು ಶಿಲೆಯಲ್ಲಿ ಶತಮಾನಗಳ ಪೂರ್ವದಲ್ಲಿ ಕೊರೆದ ಬಾದಾಮಿಯ ಗವಿಗಳು ಮತ್ತು ಜೋರ್ಡನ್‌ನ ಪೆಟ್ರಾ ನೆನಪಾಗುತ್ತವೆ. ರಿಚರ್ಡ್‌ ಮಾತ್ರ ಈ ಮನೆಯ ಇತಿಹಾಸವನ್ನು ಸಚಿತ್ರ ವಿಡಿಯೋ ಉಪನ್ಯಾಸಗಳಲ್ಲಿ ವರ್ಣಿಸುತ್ತ ಜನಮಾನಸದಲ್ಲಿ ಅದರ ನೆನಪು ಉಳಿಯುವಂತೆ ಪ್ರಯತ್ನಿಸುತ್ತಿದ್ದಾರೆ. ಕಳೆದ ವಾರ ನಾನು ಎರಡನೇ ಬಾರಿ ಅವರ ಬಾಯಿಂದಲೇ ಕೇಳಿದ್ದು ಉಪನ್ಯಾಸ ನಂಬರ್‌ 198!

ಶ್ರೀವತ್ಸ ದೇಸಾಯಿ

ಟಾಪ್ ನ್ಯೂಸ್

Kadaba: ಕಾಡಾನೆ ದಾಳಿ; ಕೆಎಸ್ಸಾರ್ಟಿಸಿ ಬಸ್ ಗೆ ಹಾನಿ

Kadaba: ಕಾಡಾನೆ ದಾಳಿ; ಕೆಎಸ್ಸಾರ್ಟಿಸಿ ಬಸ್ ಗೆ ಹಾನಿ

Mohan Bhagwat; ಪ್ರತಿಯೊಬ್ಬರೂ ಭಾರತದ ಏಕತೆ-ಸಮಗ್ರತೆಯನ್ನು ಕಾಪಾಡಿಕೊಳ್ಳಲು ಶ್ರಮಿಸಬೇಕು

Mohan Bhagwat; ಪ್ರತಿಯೊಬ್ಬರೂ ಭಾರತದ ಏಕತೆ-ಸಮಗ್ರತೆಯನ್ನು ಕಾಪಾಡಿಕೊಳ್ಳಲು ಶ್ರಮಿಸಬೇಕು

anಯಾವ ಯಾವ ರಾಜ್ಯಗಳಲ್ಲಿ ಸೌಲಭ್ಯ- ಕೊಡುಗೆಗಳ ಮಹಾಪೂರ ಜಾರಿಯಲ್ಲಿವೆ? ಇಲ್ಲಿದೆ ಮಾಹಿತಿ

ಯಾವ ಯಾವ ರಾಜ್ಯಗಳಲ್ಲಿ ಸೌಲಭ್ಯ- ಕೊಡುಗೆಗಳ ಮಹಾಪೂರ ಜಾರಿಯಲ್ಲಿವೆ? ಇಲ್ಲಿದೆ ಮಾಹಿತಿ

Mangaluru Airport bomb case; ಆದಿತ್ಯ ರಾವ್‌ ವಿರುದ್ಧ ಜೈಲು ಅಧಿಕಾರಿಗಳೇ ದೂರು ದಾಖಲು

Mangaluru Airport bomb case; ಆದಿತ್ಯ ರಾವ್‌ ವಿರುದ್ಧ ಜೈಲು ಅಧಿಕಾರಿಗಳ ದೂರು

Thailand Open Badminton: ಕಿರಣ್‌, ಸೇನ್‌ ಕ್ವಾರ್ಟರ್‌ ಫೈನಲಿಗೆ

Thailand Open Badminton: ಕಿರಣ್‌, ಸೇನ್‌ ಕ್ವಾರ್ಟರ್‌ ಫೈನಲಿಗೆ

ಪ್ರವಾಹ ಮುನ್ಸೂಚನೆ ನೀಡುವ ಗೂಗಲ್‌ನ ಫ್ಲಡ್‌ ಹಬ್‌

ಪ್ರವಾಹ ಮುನ್ಸೂಚನೆ ನೀಡುವ ಗೂಗಲ್‌ನ ಫ್ಲಡ್‌ ಹಬ್‌

Hunsur;ಪ್ರೀತಿಯ ನಾಯಿ ತಿಥಿ ಮಾಡಿ ಪ್ರೀತಿ ತೋರಿದ ಜನ

Hunsur;ಪ್ರೀತಿಯ ನಾಯಿ ತಿಥಿ ಮಾಡಿ ಪ್ರೀತಿ ತೋರಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DAIRY FARMING

ಸರಕಾರದ ನೆರವಿನ ನಿರೀಕ್ಷೆಯಲ್ಲಿ ಹೈನುಗಾರರು

AKHAND BHARATH

ಮಸ್ಕಿ ರಾಯಚೂರಿನದ್ದು; ನಾವುಂದದ್ದಲ್ಲ!

ONDC

ONDC ಡಿಜಿಟಲ್‌ ಸರ್ಕಾರಿ ಕಾಮರ್ಸ್‌ ವ್ಯವಸ್ಥೆ: ಏನಿದು ವ್ಯವಸ್ಥೆ? ಯಾರಿಗೆ ತರಲಿದೆ ಲಾಭ?

CIGERATTE

ತಂಬಾಕು ಸೇವನೆಯ ದುಶ್ಚಟದಿಂದ ದೂರ ಉಳಿಯೋಣ

ipl 2023

16ನೇ IPL ನೊಳಗೊಂದು ಸುತ್ತು

MUST WATCH

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

ಹೊಸ ಸೇರ್ಪಡೆ

Kadaba: ಕಾಡಾನೆ ದಾಳಿ; ಕೆಎಸ್ಸಾರ್ಟಿಸಿ ಬಸ್ ಗೆ ಹಾನಿ

Kadaba: ಕಾಡಾನೆ ದಾಳಿ; ಕೆಎಸ್ಸಾರ್ಟಿಸಿ ಬಸ್ ಗೆ ಹಾನಿ

Mohan Bhagwat; ಪ್ರತಿಯೊಬ್ಬರೂ ಭಾರತದ ಏಕತೆ-ಸಮಗ್ರತೆಯನ್ನು ಕಾಪಾಡಿಕೊಳ್ಳಲು ಶ್ರಮಿಸಬೇಕು

Mohan Bhagwat; ಪ್ರತಿಯೊಬ್ಬರೂ ಭಾರತದ ಏಕತೆ-ಸಮಗ್ರತೆಯನ್ನು ಕಾಪಾಡಿಕೊಳ್ಳಲು ಶ್ರಮಿಸಬೇಕು

anಯಾವ ಯಾವ ರಾಜ್ಯಗಳಲ್ಲಿ ಸೌಲಭ್ಯ- ಕೊಡುಗೆಗಳ ಮಹಾಪೂರ ಜಾರಿಯಲ್ಲಿವೆ? ಇಲ್ಲಿದೆ ಮಾಹಿತಿ

ಯಾವ ಯಾವ ರಾಜ್ಯಗಳಲ್ಲಿ ಸೌಲಭ್ಯ- ಕೊಡುಗೆಗಳ ಮಹಾಪೂರ ಜಾರಿಯಲ್ಲಿವೆ? ಇಲ್ಲಿದೆ ಮಾಹಿತಿ

Mangaluru Airport bomb case; ಆದಿತ್ಯ ರಾವ್‌ ವಿರುದ್ಧ ಜೈಲು ಅಧಿಕಾರಿಗಳೇ ದೂರು ದಾಖಲು

Mangaluru Airport bomb case; ಆದಿತ್ಯ ರಾವ್‌ ವಿರುದ್ಧ ಜೈಲು ಅಧಿಕಾರಿಗಳ ದೂರು

Thailand Open Badminton: ಕಿರಣ್‌, ಸೇನ್‌ ಕ್ವಾರ್ಟರ್‌ ಫೈನಲಿಗೆ

Thailand Open Badminton: ಕಿರಣ್‌, ಸೇನ್‌ ಕ್ವಾರ್ಟರ್‌ ಫೈನಲಿಗೆ