Cricket ಸಮಯ ಪಾಲನೆಗೆ ಸ್ಟಾಪ್‌ ಕ್ಲಾಕ್‌ ಬಳಕೆ

ಐಸಿಸಿಯಿಂದ ಎಪ್ರಿಲ್‌ ಅಂತ್ಯದವರೆಗೆ ಟಿ20, ಏಕದಿನ ಪಂದ್ಯಗಳಲ್ಲಿ ಪ್ರಯೋಗ

Team Udayavani, Dec 24, 2023, 5:13 AM IST

1-asddasd

ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿ ರುವ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿರುವ ಕ್ರಿಕೆಟ್‌ ಆಟದಲ್ಲಿ ಆಗಾಗ್ಗೆ ಹೊಸ ಹೊಸ ನಿಯಮಗಳು, ತಂತ್ರಜ್ಞಾನಗಳನ್ನು ಅಳವ ಡಿಸಿಕೊಳ್ಳಲಾಗುತ್ತಿದೆ. ಆ ಮೂಲಕ ಆಟವನ್ನು ಇನ್ನಷ್ಟು ರೋಮಾಂಚನಗೊಳಿಸಲು ಪ್ರಯ ತ್ನಗಳು ನಡೆಯುತ್ತಿವೆ. ಈಗಾಗಲೇ ಹಲವಾರು ತಂತ್ರಜ್ಞಾನಗಳ ಅಳವಡಿಕೆಯಿಂದ ಕ್ರಿಕೆಟ್‌ನ ಪ್ರತೀ ಕ್ಷಣವನ್ನು ಆನಂದಿಸಲು ಸಾಧ್ಯವಾಗುತ್ತಿದೆ. ಆಟವು ಯಾವುದೇ ವಿರಾಮವಿಲ್ಲದಂತೆ ನಿರಂತರ ಸಾಗಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಆಗಾಗ್ಗೆ ಹೊಸ ಹೊಸ ನಿಯಮಗಳ ಅನ್ವೇ ಷಣೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಇದೀಗ ಓವರ್‌ಗಳ ನಡುವೆ ವ್ಯರ್ಥವಾಗುತ್ತಿರುವ ಸಮಯವನ್ನು ಕಡಿಮೆ ಮಾಡಲು “ಸ್ಟಾಪ್‌ ಕ್ಲಾಕ್‌’ ಅಳವಡಿಸಲು ಮುಂದಾಗಿದೆ. ಐಸಿಸಿ ಯ ಈ ಚಿಂತನೆ ಇದೀಗ “ಪ್ರಯೋಗ’ ಹಂತ ದಲ್ಲಿದ್ದು ಮುಂದಿನ ದಿನಗಳಲ್ಲಿ ಇದನ್ನು ಕೂಡ ನಿಯಮವನ್ನಾಗಿ ಜಾರಿಗೊಳಿಸುವ ಸಾಧ್ಯತೆಯಿದೆ.

ಸ್ಟಾಪ್‌ ಕ್ಲಾಕ್‌ ಪ್ರಯೋಗ
ಕೆಲವು ದಿನಗಳ ಹಿಂದೆ ಮುಗಿದ ವೆಸ್ಟ್‌ ಇಂಡೀಸ್‌- ಇಂಗ್ಲೆಂಡ್‌ ನಡುವಣ ಟಿ20 ಸರಣಿಯಲ್ಲಿ ಮೊದಲ ಬಾರಿ “ಸ್ಟಾಪ್‌ ಕ್ಲಾಕ್‌’ ಅನ್ನು ಬಳಕೆ ಮಾಡಲಾಯಿತು. ಟಿ20 ಮತ್ತು ಏಕದಿನ ಪಂದ್ಯಗಳಲ್ಲಿ ಓವರ್‌ಗಳ ನಡುವೆ ತೆಗೆದುಕೊಳ್ಳುವ ಸಮಯವನ್ನು ನಿರ್ಬಂ ಧಿಸಲು ಮತ್ತು ಆಟದ ವೇಗವನ್ನು ಸಾಧ್ಯ ವಾದಷ್ಟು ಹೆಚ್ಚಿಸಲು ಐಸಿಸಿ “ಸ್ಟಾಪ್‌ ಕ್ಲಾಕ್‌’ ಬಳಕೆಯ ಪ್ರಯೋಗ ಮಾಡಲು ಮುಂ ದಾಗಿದೆ. ಮುಂದಿನ ಎಪ್ರಿಲ್‌ ಅಂತ್ಯದವರೆಗೆ ವಿಶ್ವದ ವಿವಿಧೆಡೆಗಳಲ್ಲಿ ನಡೆಯಲಿರುವ ಹಲವು ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಈ ಪ್ರಯೋಗ ನಡೆಸಲಾಗುತ್ತದೆ. ಆ ಬಳಿಕ ಐಸಿಸಿಯ ಸಮಿತಿ ಇದರ ಬಗ್ಗೆ ಚರ್ಚಿಸಿ ಭವಿಷ್ಯದ ಪಂದ್ಯಗಳಲ್ಲಿ ಇದರ ಬಳಕೆ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಏನಿದು ಸ್ಟಾಪ್‌ ಕ್ಲಾಕ್‌?
ಓವರ್‌ಗಳ ನಡುವೆ ತೆಗೆದುಕೊಳ್ಳುವ ಸಮಯವನ್ನು ಕಡಿತಗೊಳಿಸುವ ಉದ್ದೇ ಶದಿಂದ “ಸ್ಟಾಪ್‌ ಕ್ಲಾಕ್‌’ ಬಳಕೆ ಮಾಡಲಾ ಗುತ್ತದೆ. ಇಲ್ಲಿ ಬೌಲಿಂಗ್‌ ಮಾಡುವ ತಂಡವು ಹಿಂದಿನ ಓವರ್‌ ಮುಗಿದ 60 ಸೆಕೆಂಡುಗಳ ಅಂತರದಲ್ಲಿ ತಮ್ಮ ಮುಂದಿನ ಓವರಿನ ಮೊದಲ ಎಸೆತವನ್ನು ಮಾಡಲು ಸಿದ್ಧವಿ ರಬೇಕು. ಎರಡು ಎಚ್ಚರಿಕೆಯ ಬಳಿಕ ಬೌಲಿಂ ಗ್‌ ತಂಡ ಮೂರನೇ ಬಾರಿ ಒಂದು ವೇಳೆ ತಪ್ಪು ಮಾಡಿದರೆ ಐದು ರನ್‌ಗಳ ದಂಡ ವಿಧಿಸಲಾಗುತ್ತದೆ.

ಇಲ್ಲಿ ಮೂರನೇ ಅಂಪಾಯರ್‌ ಓವ ರೊಂದು ಪೂರ್ತಿಯಾದ ತತ್‌ಕ್ಷಣ “ಸ್ಟಾಪ್‌ ಕ್ಲಾಕ್‌’ ಆನ್‌ ಮಾಡುತ್ತಾರೆ. ಇದರ ಚಿತ್ರವನ್ನು ಮೈದಾನದಲ್ಲಿ ಅಳವಡಿಸಲಾದ ದೊಡ್ಡ ಪರದೆಯಲ್ಲಿ ಪ್ರದರ್ಶಿಸಲಾಗುತ್ತದೆ. ಒಂದು ವೇಳೆ ಈ ಸಮಯದಲ್ಲಿ ಬ್ಯಾಟ್ಸ್‌ಮನ್‌ ಸಲ ಕರಣೆ ಬದಲಾವಣೆ, ಪಾನೀಯ ಅಥವಾ ಗಾಯದ ವಿರಾಮವಿದ್ದರೆ 60 ಸೆಕೆಂಡುಗಳ ಫೀಲ್ಡಿಂಗ್‌ ಸಮಯ ಮೀರಿದರೆ ದಂಡ ವಿಧಿಸಲಾಗುವುದಿಲ್ಲ. ಒಂದು ವೇಳೆ ಬೌಲರ್‌ ಸಿದ್ಧರಾಗಿದ್ದರೂ ಬ್ಯಾಟ್ಸ್‌ಮನ್‌ ಸಿದ್ಧವಾ ಗದಿದ್ದ ಸಂದರ್ಭ ಪಂದ್ಯದ ಅಧಿಕಾರಿಗಳು ಬ್ಯಾಟಿಂಗ್‌ ತಂಡದ ಇನ್ನಿಂಗ್ಸ್‌ನ ಸಮಯದ ಅವಧಿಯಿಂದ ಬ್ಯಾಟ್ಸ್‌ಮನ್‌ ವ್ಯರ್ಥ ಮಾಡಿದ ನಿಮಿಷಗಳನ್ನು ಕಡಿತ ಮಾಡುತ್ತಾರೆ ಮಾತ್ರವಲ್ಲದೇ ಅಗತ್ಯಬಿದ್ದರೆ ದಂಡ ವಿಧಿಸುವ ಸಾಧ್ಯತೆಯೂ ಇದೆ.

ಕ್ರಿಕೆಟ್‌ನಲ್ಲಿ “ಸ್ಟಾಪ್‌ ಕ್ಲಾಕ್‌’ನ ಕಲ್ಪನೆಯನ್ನು ಎಂಸಿಸಿಯ ವಿಶ್ವ ಕ್ರಿಕೆಟ್‌ ಸಮಿತಿಯು 2018ರಲ್ಲಿ ಪ್ರಸ್ತಾವ ಮಾಡಿತ್ತು. ರಿಕಿ ಪಾಂಟಿಂಗ್‌, ಸೌರವ್‌ ಗಂಗೂಲಿ, ಕುಮಾರ ಸಂಗಕ್ಕರ ಮತ್ತು ಇತರರು ಈ ಸಮಿತಿಯ ಲ್ಲಿದ್ದರು. ಅವರೆಲ್ಲರೂ ಓವರ್‌ಗಳ ನಡುವಣ ಸಮಯ ವ್ಯರ್ಥ ಮಾಡುವುದನ್ನು ಕಡಿತ ಮಾಡಲು “ಸ್ಟಾಪ್‌ ಕ್ಲಾಕ್‌’ ಬಳಕೆ ಸೂಕ್ತವೆಂದು ಅಭಿಪ್ರಾಯಪಟ್ಟಿದ್ದರು.

ಶಂಕರನಾರಾಯಣ ಪಿ.

ಟಾಪ್ ನ್ಯೂಸ್

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.