Yakshagana; ಕೆಟ್ಟದ್ದನ್ನು ಖಂಡಿಸುವ ಜತೆ ಒಳ್ಳೆಯದರ ಶ್ಲಾಘನೆಯೂ ಇರಲಿ


Team Udayavani, Nov 12, 2023, 5:40 AM IST

1-assadsa

ಯಕ್ಷಗಾನ ಆಟ ಮತ್ತು ತಾಳಮದ್ದಲೆಗಳ ಕುರಿತು ಈಗಿನ ದಿನಗಳಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಪ್ರದರ್ಶನಗಳ ಮತ್ತು ಕಲಾವಿದರ ನಿರ್ವಹಣೆಯ ಕುರಿತು ಆಕ್ಷೇಪಗಳು ವ್ಯಕ್ತವಾಗುತ್ತವೆ. (ವಿಪರೀತಕ್ಕೆ ಹೋದಾಗ ಪ್ರತಿಭಟನೆ, ಬಹಿಷ್ಕಾರ, ಧಿಕ್ಕಾರಗಳೂ ನಡೆಯುತ್ತವೆ.) ರಂಗಭೂಮಿಯೊಂದು ಆರೋಗ್ಯಪೂರ್ಣ ಚರ್ಚೆಗೆ ತನ್ನನ್ನು ತೆರೆದುಕೊಳ್ಳುವುದು ಮತ್ತು ವಿಮರ್ಶೆಗೆ ಪಕ್ಕಾಗುವುದು ಬೆಳವಣಿಗೆಯ ದೃಷ್ಟಿಯಿಂದ ಆವಶ್ಯಕವೂ ಹೌದು. ಅಂತಹ ಒಂದು ಅವಕಾಶ ಇಲ್ಲವಾದರೆ ಅದು ಮೃತಪ್ರಾಯವಾಗುತ್ತದೆ. ಅಷ್ಟಕ್ಕೆ ಇದು ಸ್ವಾಗತಾರ್ಹವೇ.

ಅಷ್ಟೇ ಅಲ್ಲ. ಅಭಿಪ್ರಾಯಗಳು, ವಿಮರ್ಶೆಗಳು, ಪ್ರತಿಕ್ರಿಯೆಗಳು ಹೀಗೆ ವಿಪುಲವಾದ ಸಂಖ್ಯೆಯಲ್ಲಿ ಪ್ರಕಟವಾಗುತ್ತಿವೆ. ಇದಕ್ಕೆ ಕಾರಣವೇನು? ಪ್ರಧಾನತಃ ಸಾಮಾಜಿಕ ಮಾಧ್ಯಮಗಳ ಮುಕ್ತತೆ. ಎಲ್ಲರಿಗೂ ಅವರವರ ಅಭಿಪ್ರಾಯಗಳನ್ನು ಪ್ರಕಟಿಸುವುದಕ್ಕೆ ಅನುಕೂಲವಿದೆ. ಸ್ವಾತಂತ್ರÂವೂ ಇದೆ. ಅದರಿಂದಾಗಿ, “ನಾನು ನನಗೆ ತೋರಿದ್ದನ್ನು ಹೇಳುವುದಕ್ಕೆ ಯಾವ ಅಭ್ಯಂತರವೂ ಇಲ್ಲ’ ಎಂಬ ಭಾವನೆಯಿಂದಾಗಿ ಪ್ರತಿಯೊಬ್ಬನೂ ವಿಮರ್ಶಕನಾಗುತ್ತಾನೆ. ಇದು ಅಪಾಯದ ಸೂಚನೆಯೂ ಹೌದು. ಯಾಕೆಂದರೆ ವೇದಿಕೆಯ ಮುಕ್ತತೆಯಿಂದಾಗಿ ಕಲೆಯೊಂದರ ಒಳಹೊರಗುಗಳ ಅರಿವಿಲ್ಲದ ಜನರೂ ಪ್ರದರ್ಶನಗಳ ವೀಡಿಯೋ ತುಣುಕುಗಳನ್ನಷ್ಟೇ ನೋಡಿ ವಿಮರ್ಶಿಸುತ್ತಾರೆ. ಇದು ಪೂರ್ಣ ಪ್ರದರ್ಶನದ ವಿಮರ್ಶೆಯಾಗುವುದಿಲ್ಲ. ಮಾತ್ರವಲ್ಲ, ಇಂತಹ ವಿಮರ್ಶೆಗಳಿಗೆ ಕಲಾತ್ಮಕ ಉದ್ದೇಶಗಳಿಗಿಂತ ಹೆಚ್ಚು ಅನ್ಯೋದ್ದೇಶಗಳೂ ಇರುವುದು ಶಕ್ಯ. ಸಾರ್ವಜನಿಕರಿಗೆ ಇದೇ ಸತ್ಯ ಎಂಬ ಭಾವನೆ ಉಂಟಾಗುತ್ತದೆ. ಆಗ ರಂಗಭೂಮಿಯ ಒಳಗಿದ್ದವರಲ್ಲಿ ಅನೇಕರಿಗೆ ಅಸಹಾಯಕತೆಯ ಅನುಭವವಾಗುತ್ತದೆ.

ಏನು ಅಸಹಾಯಕತೆ?
ಯಕ್ಷಗಾನ ಅಥವಾ ತಾಳಮದ್ದಲೆ ರಂಗಭೂಮಿಯ ಪ್ರದರ್ಶನಗಳಿಗೆ ಆ ಕ್ಷಣದಲ್ಲಿ ಪ್ರೇಕ್ಷಕರು ಪ್ರತಿಕ್ರಿಯಿಸುತ್ತಾರೆ. ಅದಕ್ಕೆ ಕಲಾವಿದನ ಸ್ಪಂದನವೂ ಆ ಕ್ಷಣದ್ದೇ ಆಗಿರುತ್ತದೆ. ಚಿಂತಿಸಿ, ಪರಿಣಾಮಗಳನ್ನು ತರ್ಕಿಸಿ, ನಿರ್ವಹಿಸುವ ವ್ಯವಧಾನ ಅವನಿಗಿರುವುದಿಲ್ಲ. ಅದೆಲ್ಲ ಆ ಕ್ಷಣದಲ್ಲಿ ಹುಟ್ಟಿದ ಭಾವನೆಯ ಪರಿಣಾಮವಾಗಿ ಸಂಭವಿಸುವುದು. ಕಲೆಯ ಸೂಕ್ಷ¾ವನ್ನು ತಿಳಿಯದ ಜನ ಇದನ್ನು ಆಕ್ಷೇಪಿಸುವಾಗ ನಿರ್ದಿಷ್ಟ ಸಂದರ್ಭವನ್ನಷ್ಟೇ ಅವರ ಗಮನದಲ್ಲಿರುತ್ತದೆ. ಅದರ ಹಿಂದೆ ಮುಂದೆ ಗೊತ್ತಿರುವುದಿಲ್ಲ. ಒಂದು ನಿರ್ದಿಷ್ಟ ಪ್ರದರ್ಶನದ ಒಂದು ತುಣುಕು ಇಡಿಯ ಪ್ರದರ್ಶನದ ಯೋಗ್ಯತೆಗೆ ಮಾನದಂಡವಾಗಲಾರದು. ಆ ತುಣುಕಿನ ವಿಕಾರಕ್ಕೆ ಪ್ರಚೋದನೆ ನೀಡಿದವರ ಕುರಿತು ಆಕ್ಷೇಪಣಕಾರರು ಮೌನವಾಗುತ್ತಾರೆ. ಅಲ್ಲದೆ ಪರಿಣಾಮದಲ್ಲಿ ಇಂತಹ ಅಭಿಪ್ರಾಯಗಳು ಒಟ್ಟು ರಂಗಭೂಮಿಯ ಎಲ್ಲರಿಗೂ ಅನ್ವಯವಾಗುತ್ತದೆ. ಈ ಸಾಮೂಹಿಕ ಆಕ್ಷೇಪಗಳಿಗೆ ಉತ್ತಮ ನಿರ್ವಹಣೆ ಮಾಡಿದ ಕಲಾವಿದನೂ ಗುರಿಯಾಗುತ್ತಾನೆ. ಅವನೇನು ಮಾಡಬೇಕು?

ಬೇಜವಾಬ್ದಾರಿಯಿಂದ ಟೀಕಿಸುವವರನ್ನು ಬಿಡೋಣ. ಬಹು ಮುಖ್ಯವಾಗಿ ಇಂದು ಯಕ್ಷಗಾನ ಅಥವಾ ತಾಳಮದ್ದಲೆ ಹಾಳಾಗಿದೆ ಎಂಬ ಅಭಿಪ್ರಾಯವನ್ನು ಅನೇಕ ಮಂದಿ ಹಿರಿಯರು, ಈ ಕ್ಷೇತ್ರಗಳನ್ನು ಬಲ್ಲವರು ಭಾಷಣಗಳಲ್ಲಿ, ಮಾಧ್ಯಮಗಳಲ್ಲಿ ಪ್ರಕಟಿಸುತ್ತ ಇರುತ್ತಾರೆ. ಅವರು ಅದರ ಸೂಕ್ಷ್ಮಗಳನ್ನು ಅರಿತವರಾದುದರಿಂದ ಎಲ್ಲವೂ ತೀರಾ ಹಾಳಾಗಿ ಈಗಿನ ಪ್ರದರ್ಶನಗಳು ನೋಡುವ ಹಾಗಿಲ್ಲ ಎನ್ನುವ ಭಾವನೆ ಸಾರ್ವಜನಿಕವಾಗಿ ಉಂಟಾಗುತ್ತದೆ. ಇದರಲ್ಲಿ ಬಹುಮಟ್ಟಿಗೆ ನಿಜ ಇದ್ದೀತು. ಆದರೆ ಎಲ್ಲವೂ ನೂರಕ್ಕೆ ನೂರು ಹಾಳಾಗಿದೆಯೆ? ಹೌದಾದರೆ ಇಂತಹ ಕಲಾ ವಿಭಾಗವೊಂದು ಇರಬೇಕಾದರೂ ಯಾಕೆ? ಅಥವಾ ಇನ್ನೂ ಉಳಿದಿದೆ ಹೇಗೆ? ಇನ್ನು ಸರಿಪಡಿಸಲಾರದಷ್ಟು ಹಾನಿಯಾಗಿದೆಯೆ? ಹಾಗೇನಿಲ್ಲ. ಕಾಲಾಂತರದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಸಂಭವಿಸುವುದೇ ಇಲ್ಲಿಯೂ ಸಂಭವಿಸುತ್ತಿದೆ. ಸಿನೆಮಾ, ಸಾಹಿತ್ಯ, ನಾಟಕ ಇತ್ಯಾದಿ ಇತರ ಅಭಿವ್ಯಕ್ತಿಯ ಮಾಧ್ಯಮಗಳಲ್ಲೂ ಈ ಬಗೆಯ ಏರಿಳಿತಗಳನ್ನು ಗುರುತಿಸಬಹುದು. ಇಲ್ಲಿಯೂ ಅಷ್ಟೇ. ಚಕ್ರಗತಿಯಲ್ಲಿ ಕೆಳಗಿರುವುದು ಮೇಲಕ್ಕೂ, ಮೇಲಿರುವುದು ಕೆಳಗೂ ಸರಿಯುವುದು ಸ್ವಾಭಾವಿಕ. ಉತ್ಸರ್ಪಿಣೀ ಮತ್ತು ಅವಸರ್ಪಿಣೀ ಎರಡೂ ಉಂಟು. ಆದುದರಿಂದ ಕೆಟ್ಟಿದೆ ಎಂದು ಹೇಳುವಾಗ ಗಮನಿಸಬೇಕಾದ ಸಂಗತಿಗಳು ಬೇರೆಯೂ ಇರುತ್ತವೆ. ಒಂದಿಷ್ಟು ಉತ್ತಮ ಬೆಳವಣಿಗೆಗಳೂ ಆಗುತ್ತಿವೆ; ಕೆಲವು ಕಲಾವಿದರಾದರೂ ಶ್ರದ್ಧೆಯಿಂದ ತಮ್ಮ ಮಿತಿಯೊಳಗೆ ಉತ್ತಮ ರೀತಿಯ ಪ್ರದರ್ಶನಕ್ಕೆ ಪರಿಶ್ರಮಿಸುತ್ತಿದ್ದಾರೆ ಎನ್ನುವುದನ್ನೂ ಗಮನಿಸಬೇಡವೆ? ಹಾಗೆ ಶ್ರಮಿಸುವ ಕಲಾವಿದರನ್ನು ಗುರುತಿಸಿ ಉಲ್ಲೇಖಿಸುವ ಹೊಣೆಯು “ಕೆಟ್ಟಿದೆ’ ಎಂದು ಆರೋಪಿಸುವವರಿಗೂ ಇಲ್ಲವೆ? ಹೀಗೊಂದು ಮನೋಧರ್ಮದಿಂದ ಒಳ್ಳೆಯ ಕಲಾವಿದನನ್ನೋ, ಅರ್ಥಧಾರಿಯನ್ನೋ ಸಾರ್ವಜನಿಕವಾಗಿ ಮೆಚ್ಚಿ ಉಲ್ಲೇಖಿಸುವವರ ಸಂಖ್ಯೆ ತುಂಬ ವಿರಳ.

ಬರೇ ಹಾಳಾಗಿದೆ ಎಂದು ಸಾರಾಸಗಟಾಗಿ ತೀರ್ಮಾನ ಘೋಷಿಸುವುದರಿಂದ, ನಾನು ಈಗಿನ ತಾಳಮದ್ದಲೆ ಅಥವಾ ಆಟಗಳನ್ನು ನೋಡುವುದೇ ಇಲ್ಲ ಎಂದು ಗಟ್ಟಿಯಾಗಿ ಸಾರುವುದರಿಂದ ತಾವು ಇಷ್ಟು ಕಾಲ ಸಂತೋಷ ಪಡೆದ ರಂಗಭೂಮಿಗೆ ನ್ಯಾಯ ಸಲ್ಲಿಸಿದ ಹಾಗೆ ಆದೀತೆ? ಒಂದು ಮಗು ಕೆಟ್ಟ ವರ್ತನೆಯನ್ನು ತೋರಿದಾಗ ಅದನ್ನು ತಪ್ಪು ಎನ್ನುವುದರ ಜತೆಗೆ ಅದರ ಒಳ್ಳೆಯ ವರ್ತನೆಯನ್ನೂ ಮೆಚ್ಚಬೇಕು. ಆಗ ತಪ್ಪು-ಸರಿಗಳ ಅರಿವು ಉಂಟಾಗಿ ಅದು ಉತ್ತಮ ನಾಗರಿಕನಾಗಿ ಬೆಳೆಯುತ್ತದೆ ಎನ್ನುತ್ತದೆ ಮನಃಶಾಸ್ತ್ರ. ಕಲಾವಿದರಿಗೂ ಇದನ್ನು ಅನ್ವಯಿಸುವುದು ಸರಿಯಷ್ಟೆ? ಇಲ್ಲವಾದರೆ “ಎಷ್ಟು ಮಾಡಿದರೂ ಅಷ್ಟೇ’ ಎಂಬ ಹತಾಶೆಯ ಮನೋಭಾವ ಉತ್ತಮ ಕಲಾವಿದನಲ್ಲೂ ಮೂಡುವ ಅಪಾಯ ಉಂಟು. ಇದರಿಂದ ಏನಾಗುತ್ತದೆ? ಒಂದೋ ಅವನು ಉಳಿದವರಂತೆ ಜನಪ್ರಿಯತೆಯ ಸುಲಭ ಮಾರ್ಗವನ್ನು ಅನುಸರಿಸುತ್ತಾನೆ ಅಥವಾ ಇದರ ಗೋಜೇ ಬೇಡವೆಂದು ರಂಗಭೂಮಿಯಿಂದಲೇ ದೂರ ಸರಿಯುತ್ತಾನೆ. ಇದರಿಂದ ಕಲೆಗೆ ಲಾಭವಾದೀತೇ? ಬಲ್ಲವರು ಇದನ್ನು ಚಿಂತಿಸಬೇಕು. ಕೆಟ್ಟದ್ದನ್ನು ಖಂಡಿಸುವುದರ ಜತೆಗೆ ಒಳ್ಳೆಯದನ್ನು ಗುರುತಿಸಿ, ಗೌರವಿಸುವ ಜವಾಬ್ದಾರಿ ವಿಮರ್ಶಕರಿಗೂ, ಕಲಾ ಪ್ರೇಮಿಗಳಿಗೂ ಇದೆ ಎಂದು ನಾನು ತಿಳಿಯುತ್ತೇನೆ.

ರಾಧಾಕೃಷ್ಣ ಕಲ್ಚಾರ್‌

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.