ಶೈಲಿ ಯಾವುದೇ ಆದರೂ ಯಕ್ಷಗಾನವಾಗಿಯೇ ಇರಲಿ:99 ರ ಗೋಪಾಲ ರಾಯರು


Team Udayavani, Aug 19, 2018, 4:44 PM IST

2bvbvb.jpg

(ಕಳೆದ ಸಂಚಿಕೆಯಿಂದ ಮುಂದುವರಿದಿದೆ) ಯಕ್ಷಗಾನ ಜಾನಪದ ಕಲೆ ಎಂದು ಪರಿಗಣಿಸಲ್ಪಟ್ಟಿದೆ ಆದರೂ ಅದರಲ್ಲಿ ಖಚಿತತೆ ಇದೆ.ತಾಳಗಳ ಲೆಕ್ಕಾಚಾರವಿದೆ.  ಹಾಗಾಗಿ ಅದನ್ನು ಶಾಸ್ತ್ರೀಯ ಕಲೆ ಎನ್ನಲೂ ಬಹುದು. ತಾಳ, ಲಯ , ಶ್ರುತಿ , ವೇಷ ಭೂಷಣದಲ್ಲಿ ತನ್ನದೇ ಆದ ಚೌಕಟ್ಟು ಇದೆ. ಯಕ್ಷಗಾನದಲ್ಲಿ  ತಿಟ್ಟುಗಳು ಬೇರೆ ಬೇರೆ ಇವೆ. ಹಲವು ಕಲಾವಿದರು ತಮ್ಮ ಪ್ರಭಾವ ಬೀರಿ ಚೌಕಟ್ಟಿನಲ್ಲಿಯೇ  ಹೊಸ ಶೈಲಿಯನ್ನು ಜನಪ್ರಿಯಗೊಳಿಸಿದ್ದಾರೆ. ಶುದ್ಧ ಯಕ್ಷಗಾನದಲ್ಲಿ ಬೇರೆ ಕಲೆಗಳ ಮಿಶ್ರಣ ಮಾಡಿ ಹೊಸ ಶೈಲಿ ಹುಟ್ಟು ಹಾಕುವುದು ಸರಿಯಲ್ಲ ಎಂದರು. 

ನೋಡಿ ಕುಂಜಾಲು ಶೈಲಿ, ಉಪ್ಪೂರರ ಶೈಲಿ ಬೇರೆ ಬೇರೆ ಆದರೂ ಅದರೆಡರಲ್ಲೂ ಹಿಂದೆ ಯಕ್ಷಗಾನ ಭಾಗವತಿಕೆಯ ಶುದ್ಧ ವಾತಾವರಣವಿತ್ತು. ಒಬ್ಬ ಕಲಾವಿದನಿಗಿಂತ ಇನ್ನೋಬ್ಬ ಕಲಾವಿದ ಭಿನ್ನವಾಗಿರುತ್ತಾರೆ ಯಾವುದೇ ರೀತಿಯ ಪ್ರಸ್ತುತಿ ಇದ್ದರೂ ಅದು ಸಂದರ್ಭಕ್ಕನುಗುಣವಾಗಿರುಬೇಕು ಎಂದರು.

ಸಂದರ್ಭಕ್ಕನುಗುಣವಲ್ಲದ ನಾಟ್ಯ,ಗಾಯನ,ಅಭಿನಯ ಪ್ರೇಕ್ಷಕರಿಗೆ ರಸಭಂಗವಾಗುತ್ತದೆ. ಈಗ ಅತೀ ಎನಿಸುವಂತ ಬದಲಾವಣೆಗಳು ಆಗಿ ಪ್ರೇಕ್ಷಕರು ರಸಭಂಗಕ್ಕೀಡಾಗುತ್ತಿದ್ದಾರೆ. ದುರಂತವೆಂದರೆ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಕಲೆಯನ್ನು ಬದಲಾಯಿಸಬೇಕಾಗಿದೆಯಲ್ಲ ಎಂದರು..!

ಹಲವು ಹಾಡುಗಳನ್ನು ಹಾಡಿ ತೋರಿಸಿದ ರಾಯರು…ಕೃಷ್ಣಾರ್ಜುನ ಕಾಳಗ, ಕರ್ಣಾರ್ಜುನ ಕಾಳಗ , ಪ್ರಮೀಳಾರ್ಜುನ ಪ್ರಸಂಗದ ಅಪರೂಪದ ಹಾಡುಗಳನ್ನು ನಮ್ಮೆದುರು ಹಾಡಿ ಇದಕ್ಕೆ ಅತೀಯಾಗಿ ನಾಟ್ಯ ಮಾಡಿದರೆ ಸರಿಯೇ? ನಿಮಗೇನಿಸುತ್ತದೆ ಎಂದು ಪ್ರಶ್ನಿಸಿದರು. 

ಲೋಕೋ ಭಿನ್ನ ರುಚಿ ಎಂಬಂತೆ ಪ್ರೇಕ್ಷಕರು ಭಿನ್ನ ಭಿನ್ನ ಅಭಿರುಚಿ ಹೊಂದಿರುತ್ತಾರೆ.ಕೆಲವರಿಗೆ ಅರ್ಥಗಾರಿಕೆ ಬೇಕಾಗುತ್ತದೆ, ಇನ್ನು ಕೆಲವರಿಗೆ ನಾಟ್ಯವೇ ಇಷ್ಟವಾಗುತ್ತದೆ. ಸ್ತ್ರೀ ವೇಷದ ಅಭಿಮಾನಿಗಳು ಇರುತ್ತಾರೆ ಹೀಗಾಗಿ ಒಂದು ಪ್ರದರ್ಶನ ಎಲ್ಲರಿಗೂ ಖುಷಿ ನೀಡಿದೆ ಎಂದು ಹೇಳಲಾಗುವುದಿಲ್ಲ ಎಂದರು. 

ಕೆಲ ಪ್ರಸಂಗಗಳಲ್ಲಿ ಹಾಸ್ಯಕ್ಕೆ ಹೆಚ್ಚು ಅವಕಾಶಗಳಿರುವುದಿಲ್ಲ. ಅಂತಹ ಪ್ರಸಂಗಗಳು ಕಲಾವಿದರಿಗೆ ಸವಾಲಾಗಿರುತ್ತದೆ ಆದರೂ ಪ್ರೇಕ್ಷಕರಿಗೆ ಮೆಚ್ಚುಗೆಯಾಗುವುದಿಲ್ಲ, ಏನು ಮಾಡಲಿಕ್ಕೆ ಆಗುತ್ತದೆ ಎಂದು ಪ್ರಶ್ನಿಸಿದರು. 

ಯಕ್ಷಗಾನ ಯಾವಾಗಲು ಏಕವ್ಯಕ್ತಿಯಿಂದ ಯಶಸ್ವಿಯಾಗಲು ಸಾಧ್ಯವಿಲ್ಲ. ತಾಳ ಮೇಳ ಸರಿಯಾಗಿದ್ದರೆ ಮಾತ್ರ ಯಶಸ್ಸು ಎನ್ನುವ ಹಾಗೆಯೇ ಹಿಮ್ಮೇಳ, ಮುಮ್ಮೇಳದ  ಎಲ್ಲಾ ಕಲಾವಿದರು ನ್ಯಾಯ ಒದಗಿಸಿದಾಗ ಮಾತ್ರ ಅದ್ಭುತವಾಗದ ಪ್ರದರ್ಶನ ಎನಿಸಿಕೊಳ್ಳುತ್ತದೆ ಎಂದರು. 

ಒಟ್ಟಿನಲ್ಲಿ ಯಕ್ಷಗಾನ ಈಗ ಬದಲಾವಣೆ ಆದದನ್ನು ನೋಡಿದ್ದೇನೆ, ಇನ್ನು ಯಾವ ರೀತಿ ಬದಲಾವಣೆ ಆಗುತ್ತದೆಯೋ ನನಗೆ ಗೊತ್ತಿಲ್ಲ. ಪರಂಪರೆಯ ಚೌಕಟ್ಟುಗಳನ್ನು ಉಳಿಸಿ ಬೆಳೆಸಿ ಅದನ್ನು ರಂಗದಲ್ಲಿ ಬೆಳಗಿದರೆ ಮಾತ್ರ ಯಕ್ಷಗಾನ ಎನ್ನಬಹುದು..ಅಲ್ಲವಾದಲ್ಲಿ ಅದಕ್ಕೆ ಬೇರೆ ಬೇರೆ ಹೆಸರು ಹುಡುಕಬೇಕಾಗುತ್ತದೆ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.