ಇದು… ಪಾಕ್ ನಲ್ಲಿ ಕಾಣೆಯಾದ ಭಾರತದ ಅಮರ್ ಜೀತ್ ನ ಇಂಟರೆಸ್ಟಿಂಗ್ ಕಹಾನಿ


Team Udayavani, Apr 25, 2018, 1:13 PM IST

Amrjith-Singh-1.jpg

ನಮ್ಮ ದೇಶದಲ್ಲಿ ಬೇಕಾದುದಕ್ಕಿಂತ ಬೇಡವಾದ ವಿಷಯಕ್ಕೇ ಹೆಚ್ಚು ಪ್ರಚಾರದಲ್ಲಿರುವ ಸಾಮಾಜಿಕ ಜಾಲತಾಣಗಳು, ಅದರಲ್ಲೂ ಮುಖ್ಯವಾಗಿ ಫೇಸ್ಬುಕ್, ಇತ್ತೀಚಿನ ದಿನಗಳಲ್ಲಿಯಂತೂ ಈ ಕೇಂಬ್ರಿಡ್ಜ್ ಅನಾಲಿಟಿಕಾ ಅವಾಂತರ ಮೂಲಕ ಭರ್ಜರಿ ಸುದ್ದಿಗೊಳಗಾಗಿತ್ತು. ಇವೆಲ್ಲದರ ನಡುವೆಯೇ ಇದೇ ಫೇಸ್ಬುಕ್ ಮಾಧ್ಯಮವು ಏಷ್ಯಾದ ಎರಡು ಸಾಂಪ್ರದಾಯಿಕ ವೈರಿ ರಾಷ್ಟ್ರಗಳ ನಡುವಿನ ಪ್ರಜೆಗಳಿಬ್ಬರ ನಡುವೆ ಗೆಳೆತನದ ಬೆಸುಗೆಯ ಕುರಿತಾಗಿಯೂ ಸುದ್ದಿಯಾಗುತ್ತಿದೆ. ಈ ಇಂಟೆರೆಸ್ಟಿಂಗ್ ವಿಷಯದ ಕುರಿತಾಗಿಯೇ ಈ ಲೇಖನ…

ಆತ 23 ವರ್ಷದ ಸಿಖ್ ಯುವಕ, ಅವನ ಹೆಸರು ಅಮರ್ ಜೀತ್ ಸಿಂಗ್. ಈ ಯುವಕ ಯಾತ್ರಾ ತಂಡದವರ ಜೊತೆಯಲ್ಲಿ, ಸದ್ಯ ಪಾಕಿಸ್ಥಾನದಲ್ಲಿರುವ ಸಿಖ್ಖರ ಪ್ರಸಿದ್ಧ ಯಾತ್ರಾ ಸ್ಥಳ ಪಂಜಾ ಸಿಂಗ್ ಗುರುದ್ವಾರಕ್ಕೆ ಯಾತ್ರೆಗೆ ಹೊರಟಿದ್ದ. ಇದು ಪ್ರತೀ ವರ್ಷ ನಡೆಯುವ ಯಾತ್ರೆ. ಇದಕ್ಕೆ ‘ಭೈಸಾಕಿ ಯಾತ್ರೆ’ ಎಂದೇ ಹೆಸರು. ಭಾರತ ಮತ್ತು ಪಾಕ್ ನಡುವೆ ಇರುವ ದ್ವಿಪಕ್ಷೀಯ ಒಪ್ಪಂದದಂತೆ ಎರಡೂ ದೇಶಗಳಲ್ಲಿ ಇರುವ ಯಾತ್ರಾ ಸ್ಥಳಗಳಿಗೆ ಬೇಟಿ ನೀಡಲು ತಮ್ಮ ತಮ್ಮ ದೇಶವಾಸಿಗಳಿಗೆ ಅವಕಾಶ ಮಾಡಿಕೊಡುವ ಒಪ್ಪಂದ ಇದಾಗಿದ್ದು, ಇದರ ಪ್ರಕಾರ ಪ್ರತೀ ವರ್ಷದಂತೆ ಈ ವರ್ಷವೂ ಸಿಖ್ ಯಾತ್ರಿಕರ ತಂಡ ಪಾಕಿಸ್ಥಾನದ ಹಸನಾಬ್ದಲ್ ಎಂಬ ಪ್ರದೇಶದಲ್ಲಿರುವ ಗುರುದ್ವಾರ ಪಂಜಾ ಸಾಹೀಬ್ ಗೆ ಹೊರಟಿದೆ. ನಿಯಮದಂತೆ ಪಾಕಿಸ್ಥಾನಕ್ಕೆ ಪ್ರವೇಶಿಸಿದ ನಂತರ ಯಾತ್ರಿಕರು ತಮ್ಮ ತಮ್ಮ ಪಾಸ್ ಪೋರ್ಟ್ ಗಳನ್ನು ಈ ಯಾತ್ರೆಯ ಕಾರ್ಯಚಟುವಟಿಕೆಗಳನ್ನು ನಿಯಂತ್ರಿಸುವ ಇಟಿಪಿಬಿ ಎಂಬ ನೋಡಲ್ ಏಜೆನ್ಸಿಗೆ ಒಪ್ಪಿಸಬೇಕು, ಮತ್ತೆ ಭಾರತಕ್ಕೆ ಹಿಂದಿರುಗುವಾಗ ಅವುಗಳನ್ನು ಮರಳಿ ಪಡೆದುಕೊಳ್ಳಬೇಕು ಇದು ನಿಯಮ.

ಎಪ್ರಿಲ್ 12ನೇ ತಾರೀಖಿನಿಂದ 1800 ಸಿಖ್ ಯಾತ್ರಿಕರ ತಂಡವು ಈ ಯಾತ್ರೆಯಲ್ಲಿತ್ತು. ಮತ್ತು ನಿಯಮದಂತೆ ಈ ತಂಡವು ಎಪ್ರಿಲ್ 21ನೇ ತಾರೀಖಿನ ಶನಿವಾರದಂದು ಹಿಂದಿರುಗಬೇಕಿತ್ತು. ಯಡವಟ್ಟಾಗಿದ್ದೇ ಇಲ್ಲಿ! ಎಲ್ಲ ಭಾರತೀಯ ಯಾತ್ರಿಕರು ತಮ್ಮ ದೇಶಕ್ಕೆ ಹಿಂತಿರುಗಿದ ಬಳಿಕ ಇಟಿಪಿಬಿ ಬಳಿಯಲ್ಲಿ ಓರ್ವನ ಪಾಸ್ ಪೋರ್ಟ್ ಉಳಿದುಕೊಂಡುಬಿಟ್ಟಿದೆ. ತಕ್ಷಣವೇ ಈ ವಿಷಯವನ್ನು ಅಲ್ಲಿನ ಅಧಿಕಾರಿಗಳು ತಮ್ಮ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಹೇಳಿ ಕೇಳಿ ಇದು ಬಹಳ ಸೂಕ್ಷ್ಮ ವಿಚಾರ, ಈಗಾಗಲೇ ಹಳಸಿರುವ ಎರಡು ದೇಶಗಳ ಸಂಬಂಧಕ್ಕೆ ಇನ್ನಷ್ಟು ಹಾನಿ ಮಾಡಬಹುದಾದ ವಿಷಯ. ಹಾಗಾಗಿ ತಕ್ಷಣವೇ ಕಾರ್ಯಪ್ರವೃತ್ತರಾದ ಪಾಕ್ ಅಧಿಕಾರಿಗಳು ತಪ್ಪಿಸಿಕೊಂಡಿರುವ ಸಿಖ್ ಯುವಕನ ಪತ್ತೆಗೆ ಕ್ರಮ ಕೈಗೊಂಡರು. ಎಲ್ಲಿಯವರೆಗೆ ಅಂದರೆ ಪಾಕಿಸ್ಥಾನದ ವಿದೇಶಾಂಗ ವ್ಯವಹಾರಗಳ ವಕ್ತಾರರೇ ಹೇಳಿಕೆಯೊಂದನ್ನು ನೀಡಿ, ‘ಯುವಕನ ಪತ್ತೆಗೆ ನಾವು ಸೂಕ್ತ ಕ್ರಮ ಕೈಗೊಂಡಿದ್ದೇವೆ…” ಎಂಬ ಭರವಸೆಯನ್ನು ಭಾರತಕ್ಕೆ ನೀಡಿದರು! ಇತ್ತ ಭಾರತ ಸರಕಾರವೂ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ‘ನಾವು ಈ ವಿಚಾರವಾಗಿ ಪಾಕಿಸ್ಥಾನ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ..” ಎಂದು ಹೇಳಿತು.ಅಮರ್ ಜಿತ್ ನಾಪತ್ತೆ ಪ್ರಕರಣವು ಅದಾಗಲೇ ಅಷ್ಟರಮಟ್ಟಿಗೆ ಎರಡೂ ದೇಶಗಳ ನಡುವೆ ಗಂಭೀರ ವಿಚಾರವಾಗಿ ಮಾರ್ಪಟ್ಟಿತ್ತು.

ಇಷ್ಟೆಲ್ಲಾ ರಾಮಾಯಣದ ನಡುವೆ ಇಲ್ಲೊಂದು ಪಿಡ್ಕಾಯಣ ನಡೆದಿತ್ತು! ಇದನ್ನು ನೀವು ಕೇಳಿದರೆ ಈ ದೇಶ ಭಾಷೆಗಳ ಗಡಿಯಿರುವುದು ರಾಜತಾಂತ್ರಿಕ ವಿಷಯಗಳಿಗೇ ಹೊರತು ಮನುಷ್ಯ ಸಂಬಂಧಗಳಿಗಲ್ಲಾ ಅನ್ನುವ ವಿಚಾರ ನಿಮಗೆ ಅರಿವಾದೀತು. ಭಾರತೀಯ ಯುವಕನೊಬ್ಬ ಪಾಕಿಸ್ಥಾನದಲ್ಲಿ ಕಾಣೆಯಾಗಿದ್ದಾನಂತೆ ಎಂಬ ವಿಷಯ ಎರಡೂ ದೇಶಗಳ ಅಧಿಕಾರಿಗಳ ನಿದ್ದೆಗೆಡಿಸಿದ್ದರೆ, ಅಲ್ಲಿನ ಮತ್ತು ಇಲ್ಲಿನ ಮಾಧ್ಯಮಗಳ ಬಾಯಿಗೆ ವಿವಿಧ ರೀತಿಯಲ್ಲಿ ಆಹಾರವಾಗುತ್ತಿದ್ದರೆ, ಈ ಪುಣ್ಯಾತ್ಮ ಅಮರ್ ಜೀತ್ ಸಿಂಗ್ ಹೋಗಿದ್ದೆಲ್ಲಿಗೆ ಗೊತ್ತಾ…?

ಫೇಸ್ಬುಕ್ ದೋಸ್ತಿಯ ಮನೆಯಲ್ಲಿದ್ದ…!
ಅತ್ತ ತನ್ನ ಯಾತ್ರಾ ತಂಡದ ಗುಂಪಿನಿಂದ ಇದ್ದಕ್ಕಿದ್ದಂತೆಯೇ ಮಿಸ್ಸಾಗಿದ್ದ ಅಮರ್ ಜಿತ್ ಸಿಂಗ್ ಸೀದಾ ಹೋಗಿದ್ದು ತನ್ನ ಪಾಕ್ ಫೇಸ್ಬುಕ್ ಫ್ರೆಂಡ್ ಅಮೀರ್ ರಝಾಕ್ ಮನೆಗೆ! ಲಾಹೋರ್ ನಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಶೇಖುಪುರ ಎಂಬ ಊರಿನಲ್ಲಿರುವ ತನ್ನ ಗೆಳೆಯನನ್ನು ಮತ್ತು ಆತನ ಕುಟುಂಬದವರನ್ನು ಭೇಟಿ ಮಾಡಲು ಅಮರ್ ಜಿತ್ ಹೋಗಿದ್ದ. ತನ್ನ ವೀಸಾವಧಿ 1 ತಿಂಗಳಿನದ್ದಾಗಿದ್ದು ಆ ಅವಧಿ ಮುಗಿಯುವವರೆಗೆ ತನ್ನ ಗೆಳೆಯನ ಮನೆಯಲ್ಲಿ ಸ್ವಲ್ಪ ಸಮಯ ಕಳೆಯುವ ಇರಾದೆ ಆತನದ್ದಾಗಿತ್ತು. ಆದರೆ ನಿಜವಾಗಿ ಆತನ ವೀಸಾವಧಿ 1 ತಿಂಗಳಿನದ್ದಾಗಿರಲಿಲ್ಲ, ಈ ಗೊಂದಲವೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿತ್ತು.

ಅಂತೂ ಅಮೀರ್ ಮನೆಯವರು ಅಮರ್ ಜೀತ್ ಇರುವಿಕೆ ಕುರಿತು ಪಾಕ್ ಅಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಇಡಿಯ ಪ್ರಕರಣಕ್ಕೆ ಒಂದು ಪೂರ್ಣವಿರಾಮ ಬಿತ್ತೆನ್ನಿ. ಮತ್ತೆ ತನ್ನ ಭಾರತೀಯ ಗೆಳೆಯನನ್ನು ಕರೆದುಕೊಂಡು ಅಮೀರ್ ರಝಾಕ್ ಲಾಹೋರ್ ನಲ್ಲಿರುವ ಇಟಿಪಿಬಿ ಕಛೇರಿಗೆ ಬಂದು ವಾಸ್ತವಾಂಶವನ್ನು ವಿವರಿಸಿ ಭಾರವಾದ ಹೃದಯದಿಂದ ತನ್ನ ಗೆಳೆಯನಿಗೆ ಅಲ್ವಿದಾ ಹೇಳಿದ.

ಈ ನಾಪತ್ತೆ ಪ್ರಕರಣ ಸುಖಾಂತ್ಯವಾದುದಕ್ಕೆ ಪಾಕ್ ಅಧಿಕಾರಿಗಳು ನಿಟ್ಟುಸಿರು ಬಿಟ್ಟರೆ ಇತ್ತ ಭಾರತೀಯ ಅಧಿಕಾರಿಗಳಲ್ಲೂ ನಿರಾಳತೆ ಕಾಣಿಸಿತ್ತು. ಬಳಿಕ ನಮ್ಮ ಅಮರ ದೋಸ್ತಿಯನ್ನು ವಾಘಾ ಗಡಿಯ ಮೂಲಕ ಭಾರತಕ್ಕೆ ಕಳುಹಿಸಿಕೊಟ್ಟು ಅಯ್ಯಬ್ಬಾ ಅಂದರು ಪಾಕ್ ಅಧಿಕಾರಿಗಳು! ಇತ್ತ ತಮ್ಮ ಮನೆ ಮಗ, ಊರಿನ ಯುವಕ ಪಾಕಿಸ್ಥಾನದಲ್ಲಿ ಕಾಣೆಯಾಗಿದ್ದಾನೆಂದು ಕಂಗಾಲಾಗಿದ್ದ ಆತನ ಹೆತ್ತವರು ಮತ್ತು ಊರವರು, ವಾಘಾ ಗಡಿಯಲ್ಲಿ ಅಮರ್ ಜೀತ್ ನನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ದೇಶ ಭಾಷೆಗಳ ಗಡಿಯನ್ನು ಮೀರಿ ಅರಳುವ ಈ ರೀತಿಯ ದೋಸ್ತಿ – ಪ್ರೀತಿಗಳಿಗೆ ಸೂಕ್ತವಾದ ಬೆಂಬಲ ಸಿಗದೇ ಇದ್ದಾಗ ಅವಾಂತರವಾಗುತ್ತದೆ. ಆದರೆ ಅಮರದ ಜೀತ್ ವಿಷಯದಲ್ಲಿ ಎರಡೂ ದೇಶಗಳು ಸಂಯಮದಿಂದ ವರ್ತಿಸಿದ ಕಾರಣ ಈ ಫೇಸ್ಬುಕ್ ದೋಸ್ತಿ ಪ್ರಕರಣ ಸುಖಾಂತ್ಯಗೊಂಡಿತೆನ್ನಿ…!

ಟಾಪ್ ನ್ಯೂಸ್

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.