ರಿಷಭ್‌ ಕೈಯಲ್ಲಿ 4 ಸಿನಿಮಾ

ಬೆಲ್‌ ಬಾಟಮ್‌ ಎಫೆಕ್ಟ್ ....

Team Udayavani, Aug 21, 2019, 3:04 AM IST

RISHAB

ನಟ, ನಿರ್ದೇಶಕ ರಿಷಭ್‌ ಶೆಟ್ಟಿ ಈಗ ಬಿಝಿ ಹೀರೋ! ಹೀಗೆಂದರೆ ನೀವು ಆಶ್ಚರ್ಯಪಡುವ ಅಗತ್ಯವಿಲ್ಲ. ಅವರ ನಟನೆಯ “ಬೆಲ್‌ ಬಾಟಮ್‌’ ಚಿತ್ರ ಹಿಟ್‌ ಆದ ಬಳಿಕ ಅವರನ್ನು ಹುಡುಕಿಕೊಂಡು ಬರುವ ಕಥೆಗಳ ಸಂಖ್ಯೆ ಹೆಚ್ಚಾಗಿದೆ. ರಿಷಭ್‌ರನ್ನು ಹೀರೋ ಮಾಡಿ ಸಿನಿಮಾ ಮಾಡಬೇಕೆಂದು ಕನಸು ಕಾಣುವ ಮಂದಿಯೂ ಹುಟ್ಟಿಕೊಂಡಿದ್ದಾರೆ. ಹಾಗಾದರೆ ರಿಷಭ್‌ ಕೈಯಲ್ಲಿ ಎಷ್ಟು ಸಿನಿಮಾಗಳಿವೆ ಎಂದು ನೀವು ಕೇಳಿದರೆ ಅದಕ್ಕೆ ಉತ್ತರ ನಾಲ್ಕು ಸಿನಿಮಾ.

ಹೌದು, ಈಗಾಗಲೇ ರಿಷಭ್‌ ಕಥೆ ಕೇಳಿ ಓಕೆ ಮಾಡಿರುವ ಸಂಖ್ಯೆ 4. ಹಾಗಾದರೆ ಯಾವುದು ಎಂದು ನೀವು ಕೇಳಬಹುದು. ಈ ಬಗ್ಗೆ ಈಗಲೇ ರಿಷಭ್‌ ಹೇಳಲು ರೆಡಿಯಿಲ್ಲ. ಸಿನಿಮಾಗಳು ಸೆಟ್ಟೇರಿದಂತೆ ಗೊತ್ತಾಗುತ್ತದೆ ಎನ್ನುವ ರಿಷಭ್‌ ಒಂದಕ್ಕಿಂತ ಒಂದು ಸಿನಿಮಾಗಳು ಭಿನ್ನವಾಗಿವೆ ಎನ್ನುತ್ತಾರೆ. “ಅನೇಕರು ನಾನು ತುಂಬಾ ಸೀರಿಯಸ್‌ ಮನುಷ್ಯ ಎಂದುಕೊಂಡಿದ್ದರು. ಆದರೆ, “ಬೆಲ್‌ ಬಾಟಮ್‌’ ಸಿನಿಮಾ ನೋಡಿದವರಿಗೆ ಇವರು ಕಾಮಿಡಿ ಕೂಡಾ ಚೆನ್ನಾಗಿ ಮಾಡುತ್ತಾರೆ.

ಸೀರಿಯಸ್‌-ಕಾಮಿಡಿ ಎರಡಕ್ಕೂ ವರ್ಕೌಟ್‌ ಆಗುತ್ತಾರೆಂದು ಅನೇಕರು ಕಥೆ ತರುತ್ತಾರೆ. ಅದರಲ್ಲಿ ಇಷ್ಟವಾದ 4 ಕಥೆಗಳನ್ನು ಒಪ್ಪಿದ್ದೇನೆ’ ಎನ್ನುತ್ತಾರೆ. ಹಾಗೆ ನೋಡಿದರೆ ರಿಷಭ್‌ ಆರು ಕಥೆಗಳನ್ನು ಒಪ್ಪಿಕೊಂಡಿದ್ದರಂತೆ. ಆದರೆ, ಕಾರಣಾಂತರಗಳಿಂದ ಬಿಟ್ಟರಂತೆ. “ನನಗೆ ಸುದೀಪ್‌ ಅವರೊಂದು ಪಾಠ ಹೇಳಿಕೊಟ್ಟಿದ್ದಾರೆ, ಅದೇನೆಂದರೆ ಯಾರಿಂದಲೂ ಮೊದಲೇ ಅಡ್ವಾನ್ಸ್‌ ತಗೋಬೇಡ. ಒಂದು ವೇಳೆ ಅಡ್ವಾನ್ಸ್‌ ತಗೊಂಡರೆ ಲಾಕ್‌ ಆದಂತೆ ಎಂದು. ಆ ಪಾಠವನ್ನು ಪಾಲಿಸುತ್ತಿದ್ದೇನೆ.

ಹಾಗಾಗಿ, ಕಾಸು ತಗೊಂಡು ಮಾಡಿಲ್ಲ ಎಂಬ ಅಪವಾದ ಬರಲ್ಲ’ ಎನ್ನುವುದು ರಿಷಭ್‌ ಮಾತು. ರಿಷಭ್‌ ಮೊದಲ ಆದ್ಯತೆ ಯಾವುದು ಎಂದರೆ ನಿರ್ದೇಶನ ಎಂಬ ಉತ್ತರ ಬರುತ್ತದೆ. “ನಾನು ಚಿತ್ರರಂಗಕ್ಕೆ ಹೀರೋ ಆಗಬೇಕೆಂದು ಬಂದವನು. ಆದರೆ, ನನ್ನೊಳಗೆ ನಿರ್ದೇಶಕ ಸೀರಿಯಸ್‌ ಆಗಿದ್ದಾನೆ. ಮೊದಲ ಆದ್ಯತೆ ನಿರ್ದೇಶನಕ್ಕೆ’ ಎನ್ನುತ್ತಾರೆ. ಈ ನಡುವೆಯೇ ರಿಷಭ್‌ “ರುದ್ರ ಪ್ರಯಾಗ’ ಎಂಬ ಸಿನಿಮಾವನ್ನು ನಿರ್ದೇಶನ ಮಾಡಲು ಹೊರಟಿದ್ದಾರೆ. ಇದು ಅವರು ಎಸೆಸ್ಸೆಲ್ಸಿಯಲ್ಲಿದ್ದಾಗ ಬರೆದ ಕಥೆಯಂತೆ. ಅದನ್ನು ಇವತ್ತಿನ ಕಾಲಘಟ್ಟಕ್ಕೆ ಆಪ್‌ಡೇಟ್‌ ಮಾಡಿದ್ದಾರಂತೆ.

ಟಾಪ್ ನ್ಯೂಸ್

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.