‘ತಿಮ್ಮಯ್ಯ ಅಂಡ್ ತಿಮ್ಮಯ್ಯ’ ಸ್ಕ್ರಿಪ್ಟ್ ಓದಿದಾಗ ಅಳುಕಾಗಿತ್ತು.. ಅನಂತ ಮಾತು
Team Udayavani, Nov 21, 2022, 3:30 PM IST
ಅನಂತ್ ನಾಗ್ ಹಾಗೂ ದಿಗಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ “ತಿಮ್ಮಯ್ಯ ಅಂಡ್ ತಿಮ್ಮಯ್ಯ’ ಚಿತ್ರ ಡಿ.02 ರಂದು ಬಿಡುಗಡೆಯಾಗುತ್ತಿದೆ. ಸಂಜಯ್ ಶರ್ಮಾ ಈ ಸಿನಿಮಾದ ನಿರ್ದೇಶಕರು. ರಾಜೇಶ್ ಶರ್ಮಾ ನಿರ್ಮಾಣದ ಮಾಡಿದ್ದಾರೆ. ಅನಂತ್ ನಾಗ್ ಈ ಚಿತ್ರದಲ್ಲಿ ವಿಭಿನ್ನಪಾತ್ರ ಮಾಡಿದ್ದಾರೆ.
ಸಹಜವಾಗಿಯೇ ಅನಂತ್ ನಾಗ್ ಅವರು ಕೂಡಾ ಈ ಸಿನಿಮಾ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ತಮ್ಮ ಪಾತ್ರದ ಬಗ್ಗೆ ಮಾತನಾಡುವ ಅನಂತ್ ನಾಗ್ ಅವರು ಇದೊಂದು ಸವಾಲಿನ ಪಾತ್ರ ಎನ್ನುತ್ತಾರೆ.
“”ತಿಮ್ಮಯ್ಯ ಅಂಡ್ ತಿಮ್ಮಯ್ಯ’ದಲ್ಲಿ ನನಗೆ ಒಂದು ವಿಭಿನ್ನವಾದ ಪಾತ್ರ ಸಿಕ್ಕಿದೆ ಎಂದು ಹೇಳಿದರೆ ತಪ್ಪಾಗಲಾರದು. ಮೊದಲು ಈ ಆಫರ್ ಬಂದಾಗ, ಸ್ಕ್ರಿಪ್ಟ್ ಕಳುಹಿಸಿ ಅಂದೆ. ಸ್ಕ್ರಿಪ್ಟ್ ಓದಿದಾಗ ತುಂಬಾ ಸಂತೋಷವಾಯಿತು. ಎಷ್ಟು ಚೆನ್ನಾಗಿ ಬರೆದಿದ್ದಾರೆ ಎನಿಸಿತು. ತಿಮ್ಮಯ್ಯ ಅಂಡ್ ತಿಮ್ಮಯ್ಯ ಎಂಬ ಎರಡು ಪಾತ್ರಗಳ ಸುತ್ತ ಈ ಸಿನಿಮಾ ಮಾಡಿದ್ದಾರೆ. ಮೂವತ್ತು ವರ್ಷಗಳ ನಂತರ ಮೊಮ್ಮಗನನ್ನು ಭೇಟಿಯಾಗುವ ಪಾತ್ರ. ಸ್ಕ್ರಿಪ್ಟ್ ಓದುತ್ತಲೇ ತುಂಬಾ ವಿಶಿಷ್ಟವಾದ ಪಾತ್ರ ಅಂತೆನಿಸಿತು. ಜೊತೆಗೊಂದು ಅಳುಕು ಕೂಡಾ ಬಂತು. ಏಕೆಂದರೆ ಇದು ಬಹಳ ಸರಳವಾದ ಪಾತ್ರವಲ್ಲ. ಈ ಪಾತ್ರ ಶ್ರೀಮಂತ, ಆ ಶ್ರೀಮಂತಿಕೆಯ ಅಹಂ ಕೂಡಾ ಅವನಿಗಿದೆ. ಒಂದು ರೀತಿ ಅಲೆಮಾರಿ ಬದುಕು ಆತ ಬದುಕಿದ್ದಾನೆ. ಸ್ವಾರ್ಥದಿಂದಲೇ ಬದುಕಿದ್ದಾನೆ. ಬೇರೆಯವರನ್ನು ಹೀಯಾಳಿಸೋದು, ಹಂಗಿಸೋದು ಅವನ ಗುಣದಲ್ಲಿದ್ದರೂ ಅದು ಹಾಸ್ಯಧಾಟಿಯಲ್ಲಿದೆ. ಹೀಗಾಗಿ ನನ್ನ ಹಿನ್ನೆಲೆಯಲ್ಲಿ ನಾನು ಈ ಪಾತ್ರವನ್ನು ಮಾಡುವುದೋ, ಬೇಡವೋ ಎಂಬ ಕನ್ಫ್ಯೂಶನ್ ಇತ್ತು. ಜೊತೆಗೆ, ಮಾಡಿದರೆ ಇದೊಂದು ಸವಾಲು ಎಂಬ ಭಾವನೆಯೂ ಇತ್ತು. ಈ ಪಾತ್ರದಲ್ಲಿ ಎಲ್ಲಾ ಅಂಶಗಳನ್ನು ತೋರಿಸಿದ್ದಾರೆ. ನೆಗೆಟಿವ್ ಅಂಶಗಳ ಜೊತೆ ಹ್ಯೂಮರ್ ಇದೆ. ಹಾಗಾಗಿ, ಒಂದು ಕೈ ನೋಡೇ ಬಿಡೋಣ ಎಂದು ಒಪ್ಪಿಕೊಂಡೆ. ಈ ಪಾತ್ರ ಸಿಂಪಲ್ ಆಗಿಲ್ಲ. ನೆಗೆಟಿವ್ ಅಂಶವಿರುವ ಪಾತ್ರ. ಅದನ್ನು ಪಾಸಿಟಿವ್ ಆಗಿ ಪ್ರಸೆಂಟ್ ಮಾಡುವ ಸವಾಲಿತ್ತು. ಈ ತರಹದ ಒಂದು ವಿಚಿತ್ರ ಮತ್ತು ವಿಭಿನ್ನ ವ್ಯಕ್ತಿತ್ವದ ಅವನಿಗೆ ಲಕ್ಷ್ಮೀ ಜೊತೆಗೆ ಸರಸ್ವತಿ ಕೂಡಾ ಒಲಿದಿರುತ್ತಾಳೆ. ಟ್ರಂಪೆಟ್ ಪ್ಲೇಯರ್ ಕೂಡಾ. ಮಡಿಕೇರಿಯಿಂದ ಬಂದು ಬೆಂಗಳೂರಿನಲ್ಲಿ ಇರುವ ಪಾತ್ರವದು. ಎಲ್ಲರೂ ಕೂಡಾ ತನಗೆ ವಿಧೇಯವಾಗಿರಬೇಕೆಂಬ ಹಂಬಲ ಅವನದು. ಜೊತೆಗೆ ತನ್ನ ಗತ ಜೀವನದ ಪಶ್ಚಾತ್ತಾಪ ಕೂಡಾ ಅವನಿಗೆ ಆಗುತ್ತದೆ. ಮೂಲತಃ ಬೆಂಗಳೂರಿನವರಾ ಸಂಜಯ್ ಈ ತರಹದ ಒಂದು ವಿಭಿನ್ನ ಪಾತ್ರ ಬರೆದಿದ್ದಾರೆ. ಬಹಳ ಎಂಟರ್ಟೈನಿಂಗ್ ಆಗಿದೆ. ಡಬ್ಬಿಂಗ್ ಮಾಡುವಾಗಲೂ ನೋಡಿದೆ. ತುಂಬಾ ಖುಷಿಪಟ್ಟೆ. ಅಣ್ಣ-ತಮ್ಮಂದಿರ ಕನಸಿನ ಸಿನಿಮಾವಿದು. ಟೀಸರ್, ಟ್ರೇಲರ್ಗೆ ಪಾಸಿಟಿವ್ ರಿಯಾಕ್ಷನ್ ಬಂದಿದೆ’ ಎಂದು ತಮ್ಮ ಪಾತ್ರದ ಬಗ್ಗೆ ಖುಷಿಯಿಂದ ಮಾತನಾಡುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ