ನಾಳೆ ಕುಂದಾಪುರ-ಮಣಿಪಾಲ್ಗೆ ‘ಹೀರೋ’ ಚಿತ್ರತಂಡ
Team Udayavani, Mar 14, 2021, 6:55 PM IST
ಬೆಂಗಳೂರು: ನಟ ರಿಷಬ್ ಶೆಟ್ಟಿ ನಟಿಸಿರುವ ‘ಹೀರೋ’ ಚಿತ್ರತಂಡ ಸೋಮವಾರ (ಮಾ. 15) ಕುಂದಾಪುರ ಹಾಗೂ ಮಣಿಪಾಲ್ನಲ್ಲಿರುವ ಚಿತ್ರಮಂದಿರಗಳಿಗೆ ಭೇಟಿ ನೀಡಲಿದೆ.
ನಾಳೆ ಮಧ್ಯಾಹ್ನ1 ಗಂಟೆಗೆ ಮಣಿಪಾಲ್ ನ ಐನಾಕ್ಸ್ ಮಲ್ಟಿಪ್ಲೆಕ್ಸ್ , ಸಂಜೆ 4 ಗಂಟೆಗೆ ಉಡುಪಿಯ ಅಲಂಕಾರ್ ಚಿತ್ರಮಂದಿರ, ಸಂಜೆ 5 ಗಂಟೆಗೆ ಮಣಿಪಾಲ್ನ ಭಾರತ್ ಸಿನಿಮಾಸ್ ಹಾಗೂ ಸಂಜೆ 7.30 ಕ್ಕೆ ಕುಂದಾಪುರದ ಭಾರತ್ ಸಿನಿಮಾಸ್ಗಳಿಗೆ ‘ಹೀರೋ’ ಚಿತ್ರತಂಡ ಭೇಟಿ ನೀಡಲಿದೆ ಎಂದು ಚಿತ್ರದ ನಾಯಕ ನಟ ರಿಷಬ್ ಶೆಟ್ಟಿ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಪೈರಸಿ ಕಾಟದ ನಡುವೆಯೂ ಚಿತ್ರಮಂದಿರಗಳಲ್ಲಿ ಹೀರೋ ಅಮೋಘ ಪ್ರದರ್ಶನ ಕಾಣುತ್ತಿದೆ. ಚಿತ್ರ ವಿಮರ್ಶಕರಿಂದ, ಅಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಂಡಿದೆ. ಲಾಕ್ ಡೌನ್ ವೇಳೆ ಚಿತ್ರತಂಡದ ಶ್ರಮದ ಫಲವಾಗಿ ಹೀರೋ ಅದ್ಭುತವಾಗಿ ಮೂಡಿ ಬಂದಿದೆ. ಚಿತ್ರಕತೆ, ಸ್ಕ್ರೀನ್ಪ್ಲೇ, ಹಾಡುಗಳು ಸಿನಿಮಾ ರಸಿಕರನ್ನು ಚಿತ್ರಮಂದಿರಗಳತ್ತ ಬರಸೆಳೆಯುತ್ತಿದೆ.
ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ಹೀರೋ’ 25ನೇ ದಿನದತ್ತ ದಾಪುಗಾಲಿಡುತ್ತಿದೆ. ಈ ಸಂತಸದ ಕ್ಷಣಗಳನ್ನು ಅಭಿಮಾನಿಗಳ ಜತೆ ಸಂಭ್ರಮಿಸುವ ನಿಟ್ಟಿನಲ್ಲಿ ಹೀರೋ ಚಿತ್ರತಂಡ ನಾಳೆ ಮಣಿಪಾಲ್ ಹಾಗೂ ಉಡುಪಿಗೆ ವಿಜಯಯಾತ್ರೆ ಹಮ್ಮಿಕೊಂಡಿದೆ.
ಇನ್ನು ಹೀರೋ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಾಯಕ ನಟರಾಗಿ ಕಾಣಿಸಿಕೊಂಡಿದ್ದಾರೆ. ಇವರಿಗೆ ನಾಯಕಿಯಾಗಿ ಗಾನವಿ ಲಕ್ಷ್ಮಣ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಎಂ.ಭರತ್ ರಾಜ್ ನಿರ್ದೇಶನದ ಹೀರೋ ಚಿತ್ರವನ್ನು ರಿಷಬ್ ಶೆಟ್ಟಿ ಫಿಲಂಸ್ ನಿರ್ಮಾಣ ಮಾಡಿದೆ.
ಇಲ್ ಕೇಳಿ.. ನಾಳೆ ನಾವು ಕುಂದಾಪುರ ಹಾಗೂ ಮಂಗಳೂರಿಗೆ ಬರ್ತಿದೀವಿ. #HeroTheFilm #Hero Running successfully pic.twitter.com/Q0sIgQVVbn
— Rishab Shetty (@shetty_rishab) March 14, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ