- Sunday 15 Dec 2019
ಕಥಾ ಸಂಗಮ ನವ ಪ್ರತಿಭೆಗಳ ಮಹಾ ಸಂಗಮ!
Team Udayavani, Dec 2, 2019, 7:22 PM IST
ಒಬ್ಬ ಪ್ರತಿಭಾವಂತ ಯುವ ನಿರ್ದೇಶಕನ ಆಗಮನವಾದರೆ ಆ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ದೊಡ್ಡ ಮಟ್ಟದಲ್ಲಿಯೇ ನಿರೀಕ್ಷೆಗಳು ಮೂಡಿಕೊಳ್ಳುತ್ತವೆ. ಈ ನಿಟ್ಟಿನಲ್ಲಿ ನೋಡ ಹೋದರೆ ರಿಷಬ್ ಶೆಟ್ಟಿ ಸಾರಥ್ಯದ ಕಥಾ ಸಂಗಮದಲ್ಲಿ ನವ ಪ್ರತಿಭೆಗಳ ಮಹಾ ಸಂಗಮವೇ ಸಂಭವಿಸಿದೆ. ರಿಷಬ್ ವರ್ಷಗಟ್ಟಲೆ ಹುಡುಕಾಟ ನಡೆಸಿ ಏಳು ಮಂದಿ ನವ ನಿರ್ದೇಶಕರುಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ತಮ್ಮದೇ ರೀತಿಯಲ್ಲಿ ಸಿನಿಮಾ ಜಗತ್ತಿನಲ್ಲಿ ಛಾಪು ಮೂಡಿಸೋ ಛಾತಿ ಹೊಂದಿರುವ ಇವರುಗಳೆಲ್ಲ ಪ್ರತಿಭಾವಂತರು. ಹೊಸಾ ಸೃಷ್ಟಿಯ ಹಂಬಲ, ಅದಕ್ಕೆ ಬೇಕಾದ ಕಸುವುಗಳನ್ನು ಧಾರಾಳವಾಗಿಯೇ ಹೊಂದಿರುವವರು. ಈ ಏಳು ಮಂದಿಯ ಕಥೆಗಳಿಂದ ಶೃಂಗಾರಗೊಂಡಿರುವ ಕಥಾ ಸಂಗಮ ಡಿಸೆಂಬರ್ 6ರಂದು ತೆರೆಗಾಣುತ್ತಿದೆ.
ಶ್ರೀದೇವಿ ಎಂಟರ್ಪ್ರೈಸಸ್ ಬ್ಯಾನರಿನಡಿಯಲ್ಲಿ ಹೆಚ್.ಕೆ ಪ್ರಕಾಶ್, ಪ್ರದೀಪ್ ಎನ್ ಆರ್ ಮತ್ತು ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ ಕಥಾ ಸಂಗಮದ ಮೂಲಕ ಕಥಾ ಸಂಗಮದ ಮೂಲಕ ಕಿರಣ್ ರಾಜ್ ಕೆ, ಶಶಿಕುಮಾರ್ ಪಿ, ಚಂದ್ರಜಿತ್ ಎಲಿಯಪ್ಪ, ರಾಹುಲ್ ಪಿ.ಕೆ, ಜೈ ಶಂಕರ್, ಕರಣ್ ಅನಂತ್, ಜಮದಗ್ನಿ ಮನೋಜ್ ಎಂಬ ಏಳು ಮಂದಿ ಪ್ರತಿಭಾವಂತ ನಿರ್ದೇಶಕರುಗಳ ಆಗಮನವಾಗಿದೆ. ಇದು ರಿಷಬ್ ಅವರ ಬಹುಕಾಲದ ಹುಡುಕಾಟದ ಫಲವಾಗಿ ಸಂಭವಿಸಿರೋ ಏಳು ಕಥೆಗಳ, ಏಳು ಮಂದಿ ಪ್ರತಿಭೆಗಳ ಸಂಗಮ. ಇವರು ಸೃಷ್ಟಿದ ಏಳು ಕಥೆಗಳೂ ಕೂಡಾ ಒಂದಕ್ಕಿತ ಒಂದು ಭಿನ್ನವಾಗಿವೆ. ಪೈಪೋಟಿಗೆ ಬಿದ್ದಂತೆ ರೋಚಕವಾಗಿವೆಯಂತೆ.
ಹೀಗೆ ಕಥಾ ಸಂಗಮದಲ್ಲಿ ಏಳು ಮಂದಿ ನಿರ್ದೇಶಕರು ಏಳು ಸಿನಿಮಾಗಳನ್ನು ತೋರಿಸಿದ್ದಾರೆ. ಸಸ್ಪೆನ್ಸ್, ಥ್ರಿಲ್ಲರ್ ಮತ್ತು ಕ್ರೈಂ ಅಂಶಗಳನ್ನೊಳಗೊಂಡ ಈ ಕಥೆಗಳೆಲ್ಲವೂ ನಮ್ಮ ನಡುವೆಯೇ ಇದ್ದು, ನಮ್ಮರಿವಿಗೆ ಬಾರದ ಅಪರೂಪದ ಎಳೆಗಳನ್ನು ಹೊಂದಿರುವಂಥವು. ಅದರಲ್ಲಿ ಕೆಲವಂತೂ ನಮ್ಮೊಳಗೆ ನಾವೇ ಪಾತಾಳಗರಡಿ ಹಾಕಿ ನೋಡಿಕೊಳ್ಳುವಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿವೆಯಂತೆ. ಅದರ ಗುಣ ಲಕ್ಷಣಗಳು ಟ್ರೇಲರ್ನಲ್ಲಿ ಕಾಣಿಸಿವೆ. ಅದನ್ನು ಕಂಡು ಪ್ರೇಕ್ಷಕರೆಲ್ಲ ಥ್ರಿಲ್ ಆಗಿದ್ದಾರೆ. ಇದೀಗ ಆದಷ್ಟು ಬೇಗಕನೆ ಕಥಾ ಸಂಗಮವನ್ನು ಕಣ್ತುಂಬಿಕೊಳ್ಳುವ ಕಾತರ ಊರಗಲಕ್ಕೆ ಹರಡಿಕೊಂಡಿದೆ.
ಈ ವಿಭಾಗದಿಂದ ಇನ್ನಷ್ಟು
-
ಕನ್ನಡ ಚಿತ್ರರಂಗ ಕಂಡ ಸುಂದರ ನಟಿಯರಲ್ಲಿ ಜಯಶ್ರೀ ಕೂಡಾ ಒಬ್ಬರು. ರೂಪದರ್ಶಿಯಾಗಿ, ನಟಿಯಾಗಿ ಜನಪ್ರಿಯತೆ ಕಂಡಿದ್ದ ಈ ನಟಿ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ...
-
ಬೆಂಗಳೂರು: ಸ್ಯಾಂಡಲ್ ವುಡ್ ನ ಬ್ಲಾಕ್ ಬಾಸ್ಟರ್ ಚಿತ್ರ ಕೆಜಿಎಫ್ ನ ಎರಡನೇ ಭಾಗಕ್ಕೆ ದೇಶದ ಜನ ಕಾತರಿಸುತ್ತಿದ್ದಾರೆ. ಕೆಜಿಎಫ್ ನ ಮೊದಲ ಭಾಗ ಬಿಡುಗಡೆಯಾಗಿ ಒಂದು...
-
ಸಲ್ಮಾನ್ ಖಾನ್ ನಾಯಕರಾಗಿರುವ "ದಬಾಂಗ್-3' ಚಿತ್ರದಲ್ಲಿ ಸುದೀಪ್ ಪ್ರಮುಖ ಪಾತ್ರ ಮಾಡಿರೋದು ಗೊತ್ತೇ ಇದೆ. ಚಿತ್ರದಲ್ಲಿ ಬಲ್ಲಿ ಸಿಂಗ್ ಎಂಬ ಪಾತ್ರದಲ್ಲಿ...
-
"ದುನಿಯಾ' ವಿಜಯ್ ಇದೇ ಮೊದಲ ಬಾರಿಗೆ "ಸಲಗ' ಚಿತ್ರ ನಿರ್ದೇಶನ ಮಾಡುತ್ತಿರುವುದು ಗೊತ್ತೇ ಇದೆ. ಅವರ ಮೊದಲ ನಿರ್ದೇಶನದ ಚಿತ್ರ ಆಗಿರುವುದರಿಂದ ಎಲ್ಲರಿಗೂ ನಿರೀಕ್ಷೆ...
-
ಬಹುತೇಕ ಹೊಸ ಪ್ರತಿಭೆಗಳು ಸೇರಿ ನಿರ್ಮಿಸುತ್ತಿರುವ "ಲಕ್ಷ್ಯ' ಚಿತ್ರದ ಎರಡು ಲಿರಿಕಲ್ ಹಾಡುಗಳು ಮತ್ತು ಮೋಶನ್ ಪೋಸ್ಟರ್ ಅನ್ನು ನಟ ಅನಿರುದ್ಧ್ ಇತ್ತೀಚೆಗೆ...
ಹೊಸ ಸೇರ್ಪಡೆ
-
ಕುಂದಾಪುರ: ಬೆಳೆಗಳಿಗೆ ವೈಜ್ಞಾನಿಕ ರೀತಿಯಲ್ಲಿ ಲಾಭದಾಯಕ ಬೆಲೆ ನಿಗದಿಪಡಿಸಿ, ಕಟಾವಿಗೆ ಮೊದಲೇ ಬೆಂಬಲ ಬೆಲೆ ಘೋಷಿಸಬೇಕು. ಖರೀದಿ ಕೇಂದ್ರಗಳನ್ನು ತೆರೆಯಬೇಕು...
-
ಸಾವಯವ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರವನ್ನು ಮಣ್ಣಿನಲ್ಲಿ ಬೆರೆಸಿ ಬೀಜೋಪಚಾರ ಮಾಡಿದ ಬೀಜವನ್ನು ಸಾಲಿನಿಂದ 30 ಸೆಂ.ಮೀ. ಅಂತರ ಹಾಗೂ ಬೀಜದಿಂದ ಬೀಜಕ್ಕೆ 15...
-
ಇಬ್ಬರು ಅಕ್ಕ, ತಂಗಿ ಇದ್ದರು. ಅಕ್ಕ ಬಣ್ಣದಲ್ಲಿ ಕಪ್ಪು. ಚಂದವಿಲ್ಲದ ಅವಳಿಗೆ ಬೇರೆಯವರು ಸುಖವಾಗಿರುವುದು ಕಂಡರೆ ಹೊಟ್ಟೆಕಿಚ್ಚು. ಯಾರಿಗೂ ಏನನ್ನೂ ಕೊಡುವವಳಲ್ಲ....
-
ಉಡುಪಿ: ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷೆಯನ್ನು ಸುಧಾರಿಸಲು ಮತ್ತು ಉಡುಪು ಕೈಗಾರಿಕೆಯ ಅವಕಾಶ ಬಳಸಿಕೊಳ್ಳುವ ಮೊದಲ ಪ್ರಾಜೆಕ್ಟ್ಗೆ ಸಿಡ್ನಿಯ ಯುಎನ್ಎಸ್ಡಬ್ಲ್ಯು-...
-
ಉಡುಪಿ: ಇತರರೊಂದಿಗೆ ಹೊಂದಾಣಿಕೆ ಮಾಡುವಾಗ ನಮ್ಮತನ, ನಮ್ಮ ವೈಶಿಷ್ಟéಗಳನ್ನು ಬಿಡಬಾರದು ಎಂದು ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಕಿವಿಮಾತು...