ಭುವನ್ ಈಗ ರಾಂಧವ; 11 ಸಿನಿಮಾ ಬಿಟ್ಟ ಕೊಡಗಿನ ಹುಡುಗ!
Team Udayavani, Sep 4, 2017, 4:58 PM IST
ಬಿಗ್ಬಾಸ್’ ಸ್ಪರ್ಧಿ ಭುವನ್ ಪೊನ್ನಣ್ಣ ನಿಮಗೆ ಗೊತ್ತಲ್ವಾ? ಖಂಡಿತಾ ಗೊತ್ತಿರುತ್ತಾರೆ. ಬಿಗ್ಬಾಸ್ ಮನೆಯೊಳಗಿರುವಾಗ
ಹಾಗೂ ಬಿಗ್ಬಾಸ್ನಿಂದ ಹೊರಗಡೆ ಬಂದ ನಂತರವೂ ಭುವನ್ ಸುದ್ದಿಯಾಗಿದ್ದರು. ಇಂತಿಪ್ಪ ಭುವನ್ ಈಗ ಹೀರೋ ಆಗಿದ್ದಾರೆ. ಅವರು ಹೀರೋ ಆಗಿರುವ ಸಿನಿಮಾ ಇತ್ತೀಚೆಗೆ ಆರಂಭವಾಗಿದೆ. ಆ ಚಿತ್ರಕ್ಕೆ “ರಾಂಧವ’ ಎಂದು ಹೆಸರಿಡಲಾಗಿದೆ. ಸುನೀಲ್ ಆಚಾರ್ಯ ಈ ಚಿತ್ರದ ನಿರ್ದೇಶಕರು.
“ಬಿಗ್ಬಾಸ್’ನಿಂದ ಬಂದ ನಂತರ ಭುವನ್ಗೆ 11 ಸಿನಿಮಾಗಳಿಂದ ಹೀರೋ ಆಗುವಂತೆ ಆಫರ್ ಬಂತಂತೆ. ಆದರೆ, ಅವ್ಯಾವುದನ್ನು ಒಪ್ಪದೇ ಈಗ “ರಾಂಧವ’ ಮೂಲಕ ಹೀರೋ ಆಗಿದ್ದಾರೆ. ಅಷ್ಟಕ್ಕೂ ಭುವನ್ ಆ ಸಿನಿಮಾಗಳನ್ನು ಒಪ್ಪದಿರಲು ಕಾರಣವೇನು ಎಂದರೆ ಒಂದೇ ತರಹದ ಕಥೆಗಳು ಎನ್ನುವ ಉತ್ತರ ಭುವನ್ ರಿಂದ ಬರುತ್ತದೆ.
“ಬಿಗ್ಬಾಸ್ನಿಂದ ಬಂದ ನಂತರ ನನಗೆ 11 ಆಫರ್ಗಳು ಬಂದುವು. ಆದರೆ, ಬರೀ ಲವ್ ಸ್ಟೋರಿಗಳೇ. ಅದರಲ್ಲಿ ಯಾವುದೇ ಹೊಸತನವಿರಲಿಲ್ಲ. ಸಿನಿಮಾ ಅಂದಮೇಲೆ ಕಥೆಯಲ್ಲಿ ವೆರಿಯೇಶನ್ಸ್ ಬೇಕು. ಆದರೆ, ಒಂದೇ ರೀತಿಯ ಲವ್ಸ್ಟೋರಿಯಾಗಿದ್ದರಿಂದ ನಾನು ಯಾವುದನ್ನೂ ಒಪ್ಪಲಿಲ್ಲ. ಕಳೆದ ಎರಡು ವರ್ಷದಲ್ಲಿ ಬಂದ ಯಾವ ಲವ್ಸ್ಟೋರಿಯೂ
ಗೆದ್ದಿಲ್ಲ. ಒಂದೇ ತೆರನಾದ ಲವ್ಸ್ಟೋರಿ ನೋಡಿ ಜನ ಸುಸ್ತಾಗಿದ್ದಾರೆ.
ಹಾಗಾಗಿ, ಹೊಸ ಬಗೆಯ ಕಥೆಗೆ ಎದುರು ನೋಡುತ್ತಿದ್ದಾಗ ಸಿಕ್ಕಿದ್ದು “ರಾಂಧವ’. ಈ ಕಥೆಯಲ್ಲಿ ನನಗೆ ಹೊಸತನ ಕಾಣಿಸಿತು. ಬೇರೆ ತರಹದ ಟ್ರೀಟ್ಮೆಂಟ್ ಬಯಸುವ ಕಥೆಯಿದು. ಹಾಗಾಗಿ, ಈ ಸಿನಿಮಾ ಮಾಡುತ್ತಿದ್ದೇನೆ’ ಎನ್ನುವುದು ಭುವನ್ ಮಾತು.
“ರಾಂಧವ’ನಿಗೆ ಶ್ರೇಯಾ ಅಂಚನ್ ನಾಯಕಿ. ಯಾವ ಶ್ರೇಯಾ ಎಂದರೆ “ಒಂದು ಮೊಟ್ಟೆಯ ಕಥೆ’ ಸಿನಿಮಾ ತೋರಿಸಬೇಕು. ಆ ಸಿನಿಮಾದಲ್ಲಿ ನಟಿಸಿದ ಶ್ರೇಯಾ ಇಲ್ಲಿ ನಟಿಸುತ್ತಿದ್ದಾರೆ. ಉಳಿದಂತೆ ಯಮುನಾ ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್