Sapta Sagaradaache Ello: ನಾನು ಗಾಯಕಿ ನಾಯಕಿ; ನ‌ಟಿ ರುಕ್ಮಿಣಿ ವಸಂತ್‌


Team Udayavani, Aug 30, 2023, 3:42 PM IST

Sapta Sagaradaache Ello: ನಾನು ಗಾಯಕಿ ನಾಯಕಿ; ನ‌ಟಿ ರುಕ್ಮಿಣಿ ವಸಂತ್‌

ನ‌ಟಿ ರುಕ್ಮಿಣಿ ವಸಂತ್‌ ನಾಯಕಿಯಾಗಿ ಅಭಿನಯಿಸಿರುವ “ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಇದೇ ಸೆ. 1ರಂದು ಬಿಡುಗಡೆಯಾಗುತ್ತಿದೆ.
ಸಿನಿಮಾದ ಬಿಡುಗಡೆಗೂ ಮುನ್ನ ಮಾತನಾಡಿದ ರುಕ್ಮಿಣಿ ವಸಂತ್‌ ತಮ್ಮ ಸಿನಿಮಾದ ಅನುಭವಗಳನ್ನು ಒಂದಷ್ಟು ಹಂಚಿಕೊಂಡಿದ್ದಾರೆ.

ಸಿನಿಮಾ ಬಿಡುಗಡೆಯ ಎಕ್ಸೈಟ್‌ಮೆಂಟ್‌ ಹೇಗಿದೆ?

ನಿಜ ಹೇಳಬೇಕು ಅಂದ್ರೆ, ಈ ಎಕ್ಸೈಟ್‌ಮೆಂಟ್‌ನ ಹೇಳ್ಳೋದಕ್ಕೆ ಪದಗಳೇ ಇಲ್ಲ… ಸುಮಾರು ನಾಲ್ಕು ವರ್ಷದ ನಂತರ ನನ್ನ ಸಿನಿಮಾ ರಿಲೀಸ್‌ ಆಗ್ತಿದೆ. ಹಾಗಾಗಿ ಸಹಜವಾಗಿಯೇ ತುಂಬಾ ಎಕ್ಸೈಟ್‌ಮೆಂಟ್‌ ಅಂತೂ ಇದ್ದೇ ಇದೆ. ಇಷ್ಟೊಂದು ಖುಷಿ, ಎಕ್ಸೈಟ್‌ಮೆಂಟ್‌ ಜೊತೆಗೇ ಆಡಿಯನ್ಸ್‌ ಹೇಗೆ ರಿಸೀವ್‌ ಮಾಡಿಕೊಳ್ಳುತ್ತಾರೋ ಎಂಬ ಸಣ್ಣ ಭಯ ಕೂಡ ಇದೆ…

“ಸಪ್ತಸಾಗರದಾಚೆ ಎಲ್ಲೋ’ ಸಿನಿಮಾದ ಮೇಲೆ ನಿಮ್ಮ ನಿರೀಕ್ಷೆ ಏನು?

“ಬೀರ್‌ಬಲ್‌’ ಸಿನಿಮಾದ ನಂತರ ನಾನು ಅಭಿನಯಿಸಿರುವ ಎರಡನೇ ಸಿನಿಮಾ “ಸಪ್ತಸಾಗರದಾಚೆ ಎಲ್ಲೋ’. ಸುಮಾರು ಮೂರು ವರ್ಷ ಈ ಸಿನಿಮಾಕ್ಕೆ ಇಡೀ ಟೀಮ್‌ ಸಾಕಷ್ಟು ಎಫ‌ರ್ಟ್‌ ಹಾಕಿದೆ. ಈ ಸಿನಿಮಾದ ಮೇಲೆ ಎಲ್ಲರೂ ಕನಸು ಇಟ್ಟುಕೊಂಡಿದ್ದಾರೆ. ನಾನು ಕೂಡ ಈ ಸಿನಿಮಾ ಮತ್ತು ನನ್ನ ಪಾತ್ರದ ಮೇಲೆ ತುಂಬಾನೇ ನಿರೀಕ್ಷೆ ಇಟ್ಟುಕೊಂಡಿದ್ದೇನೆ.

ಸಿನಿಮಾದಲ್ಲಿ ನಿಮ್ಮ ಪಾತ್ರದ ಬಗ್ಗೆ ಏನಂತೀರಿ?

ಈ ಸಿನಿಮಾದಲ್ಲಿ ನಾನು ಪ್ರಿಯಾ ಎಂಬ ಸಿಂಗರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನೋಡುವವರಿಗೆ ನಮ್ಮ ಮನೆ ಹುಡುಗಿ ಎನ್ನುವಂತೆ ಕಾಣುತ್ತೇನೆ. ತುಂಬ ಇಂಟೆನ್ಸ್‌ ಆಗಿರುವಂಥ, ಎಲ್ಲ ಭಾವನೆಗಳಲ್ಲೂ ತನ್ನೊಳಗೆ ಬಚ್ಚಿಟ್ಟುಕೊಂಡು ಸಾಗರದಂತೆ ಗಂಭೀರವಾಗಿರುವಂಥ ಪಾತ್ರವಿದು. ಮನು ಮತ್ತು ಪ್ರಿಯಾ ಕಥೆಯೇ “ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ. ಇಲ್ಲಿ ನಾನು ಪ್ರಿಯಾ ಆಗಿದ್ದೇನೆ.

“ಸಪ್ತಸಾಗರದಾಚೆ ಎಲ್ಲೋ’ ಸಿನಿಮಾದ ಅನುಭವ ಹೇಗಿತ್ತು?

ನನ್ನ ಸಿನಿಮಾ ಕೆರಿಯರ್‌ನಲ್ಲೇ ಮರೆಯಲಾರದಂಥ ಅನುಭವ ಕೊಟ್ಟ ಸಿನಿಮಾ ಎನ್ನಬಹುದು. ರಕ್ಷಿತ್‌ ಶೆಟ್ಟಿ, ನಿರ್ದೇಶಕ ಹೇಮಂತ್‌ ರಾವ್‌ ಹೀಗೆ ಸಿನಿಮಾದ ಪ್ರತಿಯೊಬ್ಬರಿಂದಲೂ ಕಲಿತಿರುವುದು ಸಾಕಷ್ಟಿದೆ. ತುಂಬ ವೃತ್ತಿಪರವಾಗಿ ಹೇಗಿರಬೇಕು. ಒಂದು ಸಿನಿಮಾಕ್ಕೆ ಎಷ್ಟರ ಮಟ್ಟಿಗೆ ತೊಡಗಿಸಿಕೊಳ್ಳಬೇಕು ಎಂಬುದನ್ನು ಈ ಸಿನಿಮಾದಿಂದ ನೋಡಿ ಕಲಿತಿದ್ದೇನೆ.

 ಸಿನಿಮಾದ ಬಿಡುಗಡೆಗೂ ಮುನ್ನ ರೆಸ್ಪಾನ್ಸ್‌ ಹೇಗಿದೆ?

ಈಗಾಗಲೇ ಬಿಡುಗಡೆಯಾಗಿರುವ “ಸಪ್ತಸಾಗರದಾಚೆ ಎಲ್ಲೋ’ ಸಿನಿಮಾದ ಫ‌ಸ್ಟ್‌ಲುಕ್‌, ಸಾಂಗ್ಸ್‌, ಟ್ರೇಲರ್‌ ಎಲ್ಲವೂ ಬಿಡುಗಡೆಯಾಗಿದೆ. ಎಲ್ಲದಕ್ಕೂ ತುಂಬ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತಿದೆ. ಎಲ್ಲೇ ಹೋದರು ಜನ “ಸಪ್ತಸಾಗರದಾಚೆ ಎಲ್ಲೋ’ ಸಿನಿಮಾದ ಬಗ್ಗೆ ಮಾತನಾಡುತ್ತಾರೆ. ಬಹುಶಃ ನಾನು ಮಾಡಿರುವ ಸಿನಿಮಾ ಜನರಿಗೆ ಮುಟ್ಟುತ್ತಿದೆ ಎನಿಸುತ್ತಿದೆ.

ನಿಮ್ಮ ಫ್ರೆಂಡ್ಸ್‌, ಫ್ಯಾಮಿಲಿ ರಿಯಾಕ್ಷನ್‌ ಬಗ್ಗೆ ಏನಂತೀರಾ?

ಇಡೀ ಟೀಮ್‌ ಜೊತೆಗೆ ನಾನು ಸಿನಿಮಾದಲ್ಲಿ ತೊಡಗಿಸಿಕೊಂಡಿರುವುದನ್ನು ಆರಂಭದಿಂದಲೂ ನನ್ನ ಫ್ಯಾಮಿಲಿ ಮತ್ತು ಫ್ರೆಂಡ್ಸ್‌ ತುಂಬ ಹತ್ತಿರದಿಂದ ನೊಡುತ್ತಿದ್ದರು. ಅವರಿಗೂ ನಾವು ಎಷ್ಟು ಎಫ‌ರ್ಟ್‌ ಹಾಕುತ್ತಿದ್ದೇವೆ ಎಂಬುದು ಗೊತ್ತಿತ್ತು. ರಿಲೀಸ್‌ಗೂ ಮುನ್ನ ಸಿನಿಮಾದ ಬಗ್ಗೆ ಎಲ್ಲರೂ ಮಾತನಾಡುತ್ತಿರುವುದಕ್ಕೆ ಅವರೂ ಖುಷಿಯಾಗಿದ್ದಾರೆ. ಅವರಿಗೂ ಈ ಸಿನಿಮಾದ ಮೇಲೆ ನಂಬಿಕೆಯಿದೆ.

ಅಂತಿಮವಾಗಿ “ಸಪ್ತಸಾಗರದಾಚೆ ಎಲ್ಲೋ’ ನಿಮ್ಮ ಪ್ರಕಾರ ಏನು?

ಒಬ್ಬಳು ನಟಿಯಾಗಿ ನನ್ನ ಜೀವನವನ್ನು ಬದಲಾಯಿಸಿದ ಸಿನಿಮಾ. ಜನರು ನನ್ನನ್ನು ಗುರುತಿಸುವಂತೆ ಮಾಡುತ್ತಿರುವ ಸಿನಿಮಾ. ಆಡಿಯನ್ಸ್‌ಗೆ ಬೇರೆಯದ್ದೇ ಅನುಭವ ಕೊಟ್ಟು ಬೇರೊಂದು ಕಡೆ ಕರೆದುಕೊಂಡು ಹೋಗು ವಂಥ ಅನುಭವ ಕೊಡುವ ಸಿನಿಮಾ. ಅದೆಲ್ಲ ದಕ್ಕಿಂತ ಹೆಚ್ಚಾಗಿ ಇದು ಪ್ರತಿಯೊಬ್ಬರ ಮನ ಮುಟ್ಟುವ ಸಿನಿಮಾ ಎನ್ನಬಹುದು.

ಟಾಪ್ ನ್ಯೂಸ್

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

1-modi

Varanasi; 25000 ಮಹಿಳೆಯರ ಜತೆ ಸ್ವಕ್ಷೇತ್ರದಲ್ಲಿ ಪಿಎಂ ಸಂವಾದ

ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

Mangaluru ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

MOdi (3)

Odisha ರಾಜ್ಯ ಸರಕಾರವು ಭ್ರಷ್ಟರ ಹಿಡಿತಕ್ಕೆ ಸಿಲುಕಿದೆ: ಪಿಎಂ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqeqwe

Cannes 2024 : ಐಶ್ವರ್ಯಾ ರೈ ಹೊಸ ಲುಕ್‌ಗೆ ನೆಟ್ಟಿಗರ ಪರ, ವಿರೋಧ ಕಮೆಂಟ್‌

12

Cannes‌ Film Festival: ಕೇನ್ಸ್ ನಲ್ಲಿ ಪ್ರದರ್ಶನ ಕಾಣಲಿದೆ ಭಾರತದ ಈ 7 ಸಿನಿಮಾಗಳು

11

ಹೃದಯ ಸಂಬಂಧಿ ಕಾಯಿಲೆ: ಬಿಗ್‌ ಬಾಸ್‌ ಖ್ಯಾತಿ, ನಟಿ ರಾಖಿ ಸಾವಂತ್‌ ಆಸ್ಪತ್ರೆಗೆ ದಾಖಲು

Ramayana: 100, 200.. ಕೋಟಿಯಲ್ಲ ʼರಾಮಾಯಣʼ ಮೊದಲ ಪಾರ್ಟ್‌ನ ಬಜೆಟ್ಟೇ 835 ಕೋಟಿ ರೂ.

Ramayana: 100, 200.. ಕೋಟಿಯಲ್ಲ ʼರಾಮಾಯಣʼ ಮೊದಲ ಪಾರ್ಟ್‌ನ ಬಜೆಟ್ಟೇ 835 ಕೋಟಿ ರೂ.

Bollywood: ಜೂನ್‌ನಿಂದಲೇ ಬ್ಯುಸಿಯಾಗಲಿದೆ ಬಾಲಿವುಡ್; ಶುರುವಾಗಲಿದೆ ರಿಲೀಸ್‌ ಭರಾಟೆ

Bollywood: ಜೂನ್‌ನಿಂದಲೇ ಬ್ಯುಸಿಯಾಗಲಿದೆ ಬಾಲಿವುಡ್; ಶುರುವಾಗಲಿದೆ ರಿಲೀಸ್‌ ಭರಾಟೆ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

police USA

China ಶಾಲೆಯಲ್ಲಿ ಚಾಕು ಇರಿತ: 5 ಮಂದಿಗೆ ಗಾಯ

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.