Vivek Agnihotri: ಪ್ರಭಾಸ್ಯೊಂದಿಗೆ ಹೋಲಿಕೆ; ಸುಳ್ಳು ಸುದ್ದಿ ವಿರುದ್ದ ಅಗ್ನಿಹೋತ್ರಿ ಗರಂ
Team Udayavani, Jul 27, 2023, 6:21 PM IST
ಮುಂಬಯಿ: ʼಕಾಶ್ಮೀರ್ ಫೈಲ್ಸ್ʼ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಒಂದಲ್ಲ ಒಂದು ಕಾರಣಕ್ಕೆ ಟ್ರೆಂಡ್ ನಲ್ಲಿರುತ್ತಾರೆ. ನೇರಾ ನುಡಿಗಳಿಂದ ಹೇಟರ್ಸ್ ಗಳಿಗೆ ಜವಾಬ್ ನೀಡುವ ಅವರು ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಸದ್ಯ ʼ’ಕಾಶ್ಮೀರ್ ಫೈಲ್ ಆನ್ರಿರ್ಪೋಟೆಡ್ʼʼ ಸಾಕ್ಷ್ಯ ಚಿತ್ರವನ್ನು ಘೋಷಿಸಿದ್ದರು. ಈ ಡಾಕ್ಯುಮೆಂಟರಿ ರಿಲೀಸ್ ಬಗ್ಗೆ ಇತ್ತೀಚೆಗೆ ಟ್ರೇಲರ್ ವೊಂದನ್ನು ರಿಲೀಸ್ ಮಾಡಿ ಘೋಷಿಸಿದ್ದರು.
ಇದಲ್ಲದೇ ಇತ್ತೀಚೆಗೆ ಟ್ವಿಟರ್ ಬಳಕೆದಾರರೊಬ್ಬರು ʼಗಂಡಸಾಗಿದ್ರೆ ಮಣಿಪುರ್ ಫೈಲ್ಸ್ʼ ಮಾಡಿ ಎಂದು ಅಗ್ನಿಹೋತ್ರಿ ಅವರಿಗೆ ಸವಾಲು ಹಾಕಿದ್ದರು. ಇದಕ್ಕೆ ಅಗ್ನಿಹೋತ್ರಿ ಅವರು “ನನ್ನ ಮೇಲೆ ತುಂಬಾ ನಂಬಿಕೆ ಇಟ್ಟಿದ್ದಕ್ಕೆ ಧನ್ಯವಾದಗಳು. ಆದರೆ ಎಲ್ಲಾ ಸಿನಿಮಾನೂ ನನ್ನ ಹತ್ರನೇ ಮಾಡಿಸ್ತೀರಾ? ನಿನ್ನ “ಟೀಮ್ ಇಂಡಿಯಾ” ದಲ್ಲಿ ಸಿನಿಮಾ ಮಾಡಲು ಧೈರ್ಯವಿರುವ ಯಾವ ಗಂಡಸು ಇಲ್ವೇ?” ಎಂದು ಪ್ರಶ್ನೆ ಮಾಡಿದ್ದರು.
ಕಳೆದ ಕೆಲ ದಿನದಿಂದ ಸೋಶಿಯಲ್ ಮೀಡಿಯಾದಲ್ಲಿ ಪ್ರಭಾಸ್ ಹಾಗೂ ಅಗ್ನಿಹೋತ್ರಿ ಅವರ ʼಕಾಶ್ಮೀರ್ ಫೈಲ್ಸ್ʼ ಸಿನಿಮಾದ ಬಗ್ಗೆ ಕೆಲವೊಂದು ವಿಚಾರ ಹರಿದಾಡುತ್ತಿದೆ.
“ದಿ ಕಾಶ್ಮೀರ್ ಫೈಲ್ಸ್’ʼ ಸಿನಿಮಾ ಪ್ರಭಾಸ್ ಅವರ “ರಾಧೆ ಶ್ಯಾಮ್” ಸಿನಿಮಾದ ವಿರುದ್ಧದ ಬಾಕ್ಸ್ ಆಫೀಸ್ ಫೈಟ್ ನಲ್ಲಿ ಗೆದ್ದು ತೋರಿಸಿದೆ. ಈ ಬಾರಿ ನನ್ನ ‘ವ್ಯಾಕ್ಸಿನ್ ವಾರ್’ ಸಿನಿಮಾವೂ ಅವರ ವಿರುದ್ಧ ಗೆದ್ದು ತೋರಿಸಲಿದೆ” ಇದನ್ನು ವಿವೇಕ್ ಅಗ್ನಿಹೋತ್ರಿ ಅವರು ಹೇಳಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಒಂದೇ ದಿನ, ಒಂದೇ ಟೈಟಲ್ನಲ್ಲಿ ಎರಡು ಪ್ರತ್ಯೇಕ ಸಿನಿಮಾ ರಿಲೀಸ್: ಏನಿದು ʼಜೈಲರ್ʼ ವಿವಾದ
“ನಾನು ಹೇಳಿಕೆ ಕೊಟ್ಟಿದ್ದೇನೆ ಎಂದು ಇಂತಹ ಸುಳ್ಳು ಸುದ್ದಿಗಳನ್ನು ಯಾರು ಹರಡುತ್ತಿದ್ದಾರೆ? ಪ್ರಭಾಸ್ ಮೆಗಾ ಮೆಗಾ ಸ್ಟಾರ್, ಅವರು ಮೆಗಾ ಮೆಗಾ ಬಜೆಟ್ ನ ಸಿನಿಮಾಗಳನ್ನು ಮಾಡುತ್ತಾರೆ. ನಾವು ಸ್ಟಾರ್ ಗಿರಿ ಇಲ್ಲದ, ಸಣ್ಣ ಬಜೆಟ್ ವುಳ್ಳ, ಜನರ ಸಿನಿಮಾಗಳನ್ನು ಮಾಡುವವರು. ನಮ್ಮ ನಡುವೆ ಯಾವುದೇ ಹೋಲಿಕೆ ಇಲ್ಲ. ದಯವಿಟ್ಟು ನನ್ನನ್ನು ಬಿಡಿ” ಎಂದು ವಿವೇಕ್ ಅಗ್ನಿಹೋತ್ರಿ ಅವರು ಟ್ವೀಟ್ ಮಾಡಿದ್ದಾರೆ.
ಸದ್ಯ ಅಗ್ನಿಹೋತ್ರಿ ಅವರು ಅವರ ʼದಿ ವ್ಯಾಕ್ಸಿನ್ ವಾರ್ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cannes 2024 : ಐಶ್ವರ್ಯಾ ರೈ ಹೊಸ ಲುಕ್ಗೆ ನೆಟ್ಟಿಗರ ಪರ, ವಿರೋಧ ಕಮೆಂಟ್
Cannes Film Festival: ಕೇನ್ಸ್ ನಲ್ಲಿ ಪ್ರದರ್ಶನ ಕಾಣಲಿದೆ ಭಾರತದ ಈ 7 ಸಿನಿಮಾಗಳು
ಹೃದಯ ಸಂಬಂಧಿ ಕಾಯಿಲೆ: ಬಿಗ್ ಬಾಸ್ ಖ್ಯಾತಿ, ನಟಿ ರಾಖಿ ಸಾವಂತ್ ಆಸ್ಪತ್ರೆಗೆ ದಾಖಲು
Ramayana: 100, 200.. ಕೋಟಿಯಲ್ಲ ʼರಾಮಾಯಣʼ ಮೊದಲ ಪಾರ್ಟ್ನ ಬಜೆಟ್ಟೇ 835 ಕೋಟಿ ರೂ.
Bollywood: ಜೂನ್ನಿಂದಲೇ ಬ್ಯುಸಿಯಾಗಲಿದೆ ಬಾಲಿವುಡ್; ಶುರುವಾಗಲಿದೆ ರಿಲೀಸ್ ಭರಾಟೆ
MUST WATCH
ಹೊಸ ಸೇರ್ಪಡೆ
Chhattisgarh; ಪಿಕಪ್ ವಾಹನ ಕಂದಕಕ್ಕೆ ಪಲ್ಟಿಯಾಗಿ 18 ಮಂದಿ ದಾರುಣ ಅಂತ್ಯ
Road Mishap ಮಂಗಳೂರು: ಕಾರು ಢಿಕ್ಕಿ; ಬೈಕ್ ಸವಾರ ಸಾವು
Kannada Cinema; ರಿಲೀಸ್ ಅಖಾಡಕ್ಕೆ ಸಂಭವಾಮಿ ಯುಗೇ ಯುಗೇ..
Gujarat ATS; ಅಹಮದಾಬಾದ್ ಏರ್ಪೋರ್ಟ್ ನಲ್ಲಿ ನಾಲ್ವರು ಉಗ್ರರನ್ನು ಬಂಧಿಸಿದ ಪೊಲೀಸರು
HD Revanna; ಮನೆ ಕೆಲಸದಾಕೆಗೆ ದೌರ್ಜನ್ಯ ಪ್ರಕರಣದಲ್ಲಿ ರೇವಣ್ಣಗೆ ಜಾಮೀನು ಮಂಜೂರು