ಹೊಸ ತಲೆಗೆ ಹಳೆಯ ಕಿರೀಟ!


Team Udayavani, Jul 29, 2017, 10:54 AM IST

samarth—lekhachandra.jpg

ಆತ 24 ಗಂಟೆಯೂ ಆ್ಯಕ್ಷನ್‌ ಮೂಡ್‌ನ‌ಲ್ಲಿರುವ ಖಡಕ್‌ ಯುವಕ. ಆತನ ಧಿಮಾಕೇ ಆತನಿಗೆ ಶೋಭೆ. ಎಲ್ಲರನ್ನು ಬೇಗನೇ ನಂಬುವ ಅಷ್ಟೇ ಬೇಗ ಪ್ರೀತಿಗೆ ಬೀಳುವ “ಮುಗ್ಧ’. ಪ್ರೀತಿಗೆ ಬೇಗ ಕರಗಲು, ಚೂರು ಪ್ರೀತಿ ಸಿಕ್ಕರೂ ಖುಷಿಯಿಂದ ಕುಣಿದಾಡಲು ಕಾರಣ ಆತ ಅನಾಥ. ಹಾಗಾಗಿ, ಪ್ರೀತಿಗೆ ಕರಗುತ್ತಾನೆ, ಮರುಗುತ್ತಾನೆ. ಹಾಗಂತ ಪ್ರೀತಿಯ ಹಿಂದೆ ಸ್ವಾರ್ಥ ಇರುತ್ತದೆಂಬುದನ್ನು ಆತ ತಿಳಿದುಕೊಳ್ಳಲು ಹೋಗುವುದಿಲ್ಲ. ಹಾಗಾಗಿ, ಆತ ಪದೇ ಪದೇ ಕಣ್ಣೀರು ಹಾಕುತ್ತಾನೆ. ಆತನ ಮಾತಲ್ಲೇ ಹೇಳಬೇಕಾದರೆ “ಮೆಂಟಲ್‌’ ಆಗುತ್ತಾನೆ. 

“ಕಿರೀಟ’ ಚಿತ್ರದಲ್ಲಿ ಏನಿದೆ ಎಂದರೆ ಲವ್‌ ಇದೆ, ಆ್ಯಕ್ಷನ್‌ ಇದೆ, ಆಸೆ, ದುರಾಸೆ, ಅಹಂ ಅನ್ನುವ ಕಿರೀಟವನ್ನು ಕಿತ್ತು ಬಿಸಾಕಿ ಎನ್ನುವ ಒಂದು ಸೂಕ್ಷ್ಮ ಸಂದೇಶವಿದೆ. ಹಾಗಂತ ಇದು ಸಂದೇಶ ಸಾರುವ ಸಿನಿಮಾನಾ, ಸಿನಿಮಾದುದ್ದಕ್ಕೂ ಬರೀ ಸಂದೇಶವೇ ತುಂಬಿಕೊಂಡಿದೆಯಾ ಎಂದರೆ ಖಂಡಿತಾ ಇಲ್ಲ. ನಿಮಗೆ ಸಂದೇಶ ಕೇಳುವ ಆಸೆ ಇದ್ದರೆ ನೀವು ಕ್ಲೈಮ್ಯಾಕ್ಸ್‌ವರೆಗೆ ಕಾಯಬೇಕು. ಅದಕ್ಕಿಂತ ಮುಂಚೆ ನಿಮಗೆ ಸಿಗೋದು ಒಂದು ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾ. ಹೀರೋ ಇಂಟ್ರೋಡಕ್ಷನ್‌, ಲವ್‌, ಬಿಲ್ಡಪ್‌, ಗ್ಯಾಪಲ್ಲೆರಡು ಹಾಡುಗಳನ್ನು ನೀವು ಕಣ್ತುಂಬಿಕೊಳ್ಳಬಹುದು.

ಒಬ್ಬ ಕಮರ್ಷಿಯಲ್‌ ಹೀರೋನಾ ಲಾಂಚ್‌ಗೆ ಈ ಸಿನಿಮಾ ಹೊಂದಿಕೊಂಡಿದೆ. ಜಬರ್‌ದಸ್ತ್ ಫೈಟ್‌, ಡೈಲಾಗ್‌ ಮೇಲೆ ಡೈಲಾಗ್‌ … ಎಲ್ಲವೂ ಇದೆ. ಆ ಮಟ್ಟಿಗೆ ನಾಯಕ ಸಮರ್ಥ್ಗೆ ಇದು ಒಳ್ಳೆಯ ಲಾಂಚ್‌. ಹಾಗಂತ ಕಥೆ ವಿಭಿನ್ನವಾಗಿದೆಯಾ, ಹೊಸತನದಿಂದ ಕೂಡಿದೆಯಾ ಎಂದರೆ ಉತ್ತರಿಸೋದು ಕಷ್ಟ. ಏಕೆಂದರೆ, ಇದೊಂದು ಆ್ಯಕ್ಷನ್‌ ಕಂ ಲವ್‌ಸ್ಟೋರಿ. ಖಡಕ್‌ ಆಗಿರುವ ಅನಾಥ ಹುಡುಗನ ಬಾಳಲ್ಲಿ ಬರುವ ಮೂವರು ಹುಡುಗಿಯರು ಹಾಗೂ ಅವರಿಂದ ಈತ ಕಲಿಯುವ ಪಾಠವೇ ಈ ಸಿನಿಮಾದ ಹೈಲೈಟ್‌. ಹಾಗಾಗಿ, ಚಿತ್ರದ ಮೊದಲರ್ಧ ಹೊಡೆದಾಟದ ಜೊತೆಗೆ ಲವ್‌, ಬ್ರೇಕಪ್‌, ತನಗೆ ತಾನೇ ಸಮಾಧಾನ ಮಾಡಿಕೊಳ್ಳುವ ನಾಯಕ…

ಇವೇ ತುಂಬಿಕೊಂಡಿವೆ. ಕಥೆಯ ವಿಷಯದಲ್ಲಿ ಇದು ತೀರಾ ಹೊಸದಲ್ಲದಿದ್ದರೂ ನಿರೂಪಣೆ ಹಾಗೂ ಸನ್ನಿವೇಶಗಳು ನಿಮಗೆ ಖುಷಿಕೊಡುತ್ತದೆ. ಇಲ್ಲಿ ಲವ್‌ಸ್ಟೋರಿ, ಎರಡೆರಡು ಬ್ರೇಕಪ್‌ಗ್ಳಿದ್ದರೂ ಅತಿಯಾದ ಕಣ್ಣೀರ ಕಥೆ ಇಲ್ಲ ಎಂಬುದು ಖುಷಿಯ ವಿಚಾರ.  ನಿರ್ದೇಶಕರು ಉಪೇಂದ್ರ ಹಾಗೂ ಅವರ “ಉಪೇಂದ್ರ’ ಚಿತ್ರದ ದೊಡ್ಡ ಅಭಿಮಾನಿ ಎಂಬುದು ಸಿನಿಮಾದುದ್ದಕ್ಕೂ ಗೊತ್ತಾಗುತ್ತದೆ. ಅದರಲ್ಲೂ ಚಿತ್ರದ ಡೈಲಾಗ್‌ ಡೆಲಿವರಿ ವಿಷಯದಲ್ಲಿ ಅದು ಸ್ಪಷ್ಟವಾಗುತ್ತದೆ. ನಾಯಕನ ಮ್ಯಾನರೀಸಂ, ಆಟಿಟ್ಯೂಡ್‌ನ‌ಲ್ಲಿ “ಉಪೇಂದ್ರ’ ಅವರನ್ನು ಬೆರೆಸುವ ಪ್ರಯತ್ನ ಮಾಡಿರೋದು ಎದ್ದು ಕಾಣುತ್ತದೆ.

ಮೊದಲೇ ಹೇಳಿದಂತೆ ಚಿತ್ರದಲ್ಲಿ ಮನುಷ್ಯನಲ್ಲಿರುವ ಬೇರೆ ಬೇರೆ ರೀತಿಯ ಅಹಂಗಳನ್ನು ಬಿಟ್ಟು ಬದುಕಬೇಕೆಂಬ ಸಂದೇಶವಿದೆ. ಆ ಸಂದೇಶವನ್ನು ತುಂಬಾ ಸುತ್ತುಬಳಸಿ ಹೇಳಲಾಗಿದೆ. ಈ ಸಿನಿಮಾದ ಪ್ಲಸ್‌ ಎಂದರೆ ಸಂಭಾಷಣೆ ಹಾಗೂ ನಾಯಕ ಸಮರ್ಥ್ ಅವರ ನಟನೆ. ಒಂದರ್ಥದಲ್ಲಿ ಈ ಸಿನಿಮಾ ನಿಂತಿರೋದೇ ಸಂಭಾಷಣೆಯ ಮೇಲೆ ಎಂದರೆ ತಪ್ಪಲ್ಲ. ಆ ಮಟ್ಟಿಗೆ ನಿರ್ದೇಶಕರು ಸಂಭಾಷಣೆಯನ್ನು ನಂಬಿಕೊಂಡಿದ್ದಾರೆ. ಚಿತ್ರದ ಸಂಭಾಷಣೆಗಳು ಚುರುಕಾಗಿವೆ ಮತ್ತು ಆ ಸಮಯಕ್ಕೆ ಹೊಂದಿಕೆಯಾಗುತ್ತದೆ.

ಆದರೆ, ನಾಯಕನಿಂದ ಕಂಠಪಾಠ ಮಾಡಿ ಹೇಳಿಸುವ “ಮೈಲುದ್ದದ’ ಡೈಲಾಗ್‌ಗಳು ಅತಿ ಎನಿಸದೇ ಇರದು. ಚಿತ್ರದ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿ, ಮತ್ತಷ್ಟು ಟ್ರಿಮ್‌ ಮಾಡುವ ಅವಕಾಶವಿತ್ತು. ಅದು ಬಿಟ್ಟರೆ ಹೊಸಬರ ಪ್ರಯತ್ನವಾಗಿ “ಕಿರೀಟ’ ನಿಮಗೆ ಮಜಾ ಕೊಡುತ್ತಾ ಸಾಗುತ್ತದೆ. ನಾಯಕ ಸಮರ್ಥ್ಗೆ ಇದು ಒಳ್ಳೆಯ ಲಾಂಚ್‌ ಎಂದರೆ ತಪ್ಪಲ್ಲ. ಆ್ಯಕ್ಷನ್‌, ಲವ್‌, ಸೆಂಟಿಮೆಂಟ್‌ ಎಲ್ಲವೂ ಇದೆ. ಅದಕ್ಕಿಂತ ಹೆಚ್ಚಾಗಿ ಮೊದಲ ಚಿತ್ರದಲ್ಲೇ ಸಮರ್ಥ್ ಭರವಸೆ ಮೂಡಿಸಿದ್ದಾರೆ.

ಖಡಕ್‌ ಹುಡುಗ ದೇವ್ರು ಆಗಿ ಹಾಗೂ ಲವರ್‌ಬಾಯ್‌ ಅಶೋಕ್‌ ಆಗಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇಡೀ ಸಿನಿಮಾ ಅವರ ಸುತ್ತವೇ ಸಾಗಿದ್ದು, ನಟನೆಯಲ್ಲಿ ಸಮರ್ಥ್ ಶ್ರಮ ಎದ್ದು ಕಾಣುತ್ತದೆ. ನಾಯಕಿಯರಾದ ಲೇಖಾ ಚಂದ್ರ, ದೀಪ್ತಿ ಕಾಪ್ಸೆ ಹಾಗೂ ರಿಷಿಕಾ ಸಿಂಗ್‌ ಪಾತ್ರಗಳಿಗೆ ಹೊಂದಿಕೊಂಡಿದ್ದಾರೆ. “ಉಗ್ರಂ’ ಮಂಜು ಪಾತ್ರಕ್ಕೆ ತೂಕವಿಲ್ಲದೇ ಇದ್ದರೂ, ಅವರ ಎಂದಿನಂತೆ ಅಬ್ಬರಿಸಿದ್ದಾರೆ. ಸಮೀರ್‌ ಕುಲಕರ್ಣಿ ಸಂಗೀತದ ಎರಡು ಹಾಡು ಇಷ್ಟವಾಗುತ್ತದೆ.

ಚಿತ್ರ: ಕಿರೀಟ
ನಿರ್ಮಾಣ: ಚಂದ್ರಶೇಖರ್‌
ನಿರ್ದೇಶನ: ಕಿರಣ್‌ ಚಂದ್ರ
ತಾರಾಗಣ: ಸಮರ್ಥ್, ಲೇಖಾ ಚಂದ್ರ, ದೀಪ್ತಿ ಕಾಪ್ಸೆ, ರಿಷಿಕಾ ಸಿಂಗ್‌ ಮತ್ತಿತರರು.

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೋಟಿಸ್

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೋಟಿಸ್

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.