‘ರಿವೈಂಡ್’ ಚಿತ್ರ ವಿಮರ್ಶೆ: ಮಾಡರ್ನ್ ಟೆಕ್ನಿಕ್‌ನಲ್ಲಿ ಕನಸುಗಳ ಹುಡುಕಾಟ


Team Udayavani, Apr 18, 2021, 9:18 AM IST

‘ರಿವೈಂಡ್’ ಚಿತ್ರ ವಿಮರ್ಶೆ: ಮಾಡರ್ನ್ ಟೆಕ್ನಿಕ್‌ನಲ್ಲಿ ಕನಸುಗಳ ಹುಡುಕಾಟ

ಆತ ದೇಶದ ನಂಬರ್‌ ಓನ್‌ ಕ್ರೈಂ ರಿಪೋರ್ಟರ್‌ ಅರ್ಜುನ್‌. ಹತ್ತಾರು ಕಾರ್ಪೋರೆಟ್‌ ಹಗರಣಗಳನ್ನು ಬಯಲಿಗೆಳೆದು, ದೊಡ್ಡ ಕುಳಗಳನ್ನು ಎದುರು ಹಾಕಿಕೊಂಡು ಸೈ ಎನಿಸಿಕೊಂಡಾತ. ಒಮ್ಮೆ ಔಟಿಂಗ್‌ಗೆ ಹೋದ ಅರ್ಜುನ್‌ನ ಮಗಳು ಆಧ್ಯಾ ನಿಗೂಢವಾಗಿ ಕಣ್ಮರೆಯಾಗುತ್ತಾಳೆ. ಪೊಲೀಸ್‌ ಕಂಪ್ಲೆಂಟ್‌ ಕೊಟ್ಟರೂ, ಎಲ್ಲಿ ವಿಚಾರಿಸಿದರೂ ಆಧ್ಯಾಳ ಸುಳಿವೆ ಸಿಗುವುದಿಲ್ಲ. ಆಗ ಅರ್ಜುನ್‌ಗೆ ವೈದ್ಯಕೀಯ ಲೋಕದಲ್ಲಿ ಥೆರೆಪಿಯಾಗಿ ಬಳಕೆಯಲ್ಲಿರುವ ಲೂಸಿಡ್‌ ಡ್ರೀಮ್ಸ್‌ ವಿಧಾನ ತಿಳಿಯುತ್ತದೆ. ಈ ಲೂಸಿಡ್‌ ಡ್ರೀಮ್ಸ್‌ ಟೆಕ್ನಿಕ್‌ ಮೂಲಕ ನಡೆದ ಘಟನೆಗಳನ್ನು “ರಿವೈಂಡ್‌’ ಮಾಡಿಕೊಂಡು, ಕ್ರೈಂ ಜರ್ನಲಿಸ್ಟ್‌ ಅರ್ಜುನ್‌ ತನ್ನ ಮಗಳು ಆಧ್ಯಾಳ ಹುಡುಕಾಟಕ್ಕೆ ಮುಂದಾಗುತ್ತಾನೆ. ಈ “ರಿವೈಂಡ್‌’ ಹುಡುಕಾಟ ಹೇಗೆ ನಡೆಯುತ್ತದೆ. ಈ ಹುಡುಕಾಟದಲ್ಲಿ ಕೊನೆಗೂ ಅರ್ಜುನ್‌ಗೆ ತನ್ನ ಮಗಳು ಸಿಗುತ್ತಾಳಾ? ಇಲ್ಲವಾ..? ಅನ್ನೋದೆ “ರಿವೈಂಡ್‌’ ಚಿತ್ರದ ಕಥೆಯ ಎಳೆ. ಅದು ಹೇಗೆ ಅನ್ನೋದು ಗೊತ್ತಾಗಬೇಕಾದರೆ, ಇಡೀ ಸಿನಿಮಾವನ್ನೇ ನೋಡಬೇಕು.

ಇತ್ತೀಚಿನ ವರ್ಷಗಳಲ್ಲಿ ಸೈನ್ಸ್‌ ಫಿಕ್ಷನ್‌ ಅಂಶಗಳನ್ನು ಇಟ್ಟುಕೊಂಡು ಬಂದಿರುವ ಸಸ್ಪೆನ್ಸ್‌ – ಥ್ರಿಲ್ಲರ್‌ ಸಿನಿಮಾ ಗಳು ತುಂಬ ಅಪರೂಪ. ಇಂಥ ಸಿನಿಮಾಗಳ ಸಾಲಿಗೆ “ರಿವೈಂಡ್‌’ ಕೂಡ ಸೇರುತ್ತದೆ. ಚಿತ್ರದ ಕಥಾಹಂದರ ಕನ್ನಡ ಪ್ರೇಕ್ಷಕರಿಗೆ ಹೊಸದಾಗಿದೆ. ಆದರೆ ಚಿತ್ರಕಥೆ ಮತ್ತು ನಿರೂಪಣೆ ಸಾಮಾನ್ಯ ಪ್ರೇಕ್ಷಕನಿಗೆ ತಕ್ಷಣಕ್ಕೆ ಮನದಟ್ಟಾಗು ವುದು ಕಷ್ಟ. ಚಿತ್ರಕಥೆ ಮತ್ತು ನಿರೂಪಣೆ ಕಡೆಗೆ ಇನ್ನಷ್ಟು ಗಮನ ಕೊಟ್ಟಿದ್ದರೆ, “ರಿವೈಂಡ್‌’ ಇನ್ನೂ ಪರಿಣಾಮ ಕಾರಿಯಾಗಿ ಪ್ರೇಕ್ಷಕರಿಗೆ ಮುಟ್ಟುವ ಸಾಧ್ಯತೆಗಳಿದ್ದವು.

ಇದನ್ನೂ ಓದಿ:ಕ್ಯೂಟ್‌ ಜೋಡಿ ಬೈ ಟು ಲವ್‌: ಗಮನ ಸೆಳೆಯುತ್ತಿದೆ ಫ‌ಸ್ಟ್‌ ಲುಕ್‌ ಪೋಸ್ಟರ್

ಇನ್ನು “ರಿವೈಂಡ್‌’ ಚಿತ್ರದಲ್ಲಿ ತೇಜ್‌ ತೆರೆಮುಂದೆ ನಾಯಕನಾಗಿ, ತೆರೆಹಿಂದೆ ನಾಯಕನಾಗಿ “ಡಬಲ್‌ ರೋಲ್‌’ ನಿರ್ವಹಿಸಿದ್ದಾರೆ. ಅದರಲ್ಲಿ ತೆರೆಹಿಂದಿಗಿಂತ, ತೆರೆಮುಂದೆ ನಾಯಕನಾಗಿ ತೇಜ್‌ ನೋಡುಗರಿಗೆ ಹೆಚ್ಚು ಇಷ್ಟವಾಗುತ್ತಾರೆ. ತನ್ನ ಲುಕ್‌, ಮ್ಯಾನರಿಸಂನಿಂದ ತೇಜ್‌ ನೋಡುಗರ ಗಮನ ಸೆಳೆಯುತ್ತಾರೆ. ಕನ್ನಡದ ಮಟ್ಟಿಗೆ ಹೊಸಥರದ ಪಾತ್ರಗಳನ್ನು ಮಾಡಬಲ್ಲ, ಹೊಸಥರದ ಪಾತ್ರಗಳಿಗೆ ತೆರೆದುಕೊಳ್ಳಬಲ್ಲ ಹೊಸ ತಲೆಮಾರಿನ ನಾಯಕ ನಟನಾಗಿ ತೇಜ್‌ ಭರವಸೆ ಮೂಡಿಸುತ್ತಾರೆ.

ಆದರೆ ಚಿತ್ರದಲ್ಲಿ ತೇಜ್‌, ಸಂಪತ್‌ ಸೇರಿದಂತೆ ಎರಡು ಮೂರು ಪಾತ್ರಗಳನ್ನು ಹೊರತುಪಡಿಸಿದರೆ, ಉಳಿದ ಪಾತ್ರಗಳಾವುದೂ ಮನಸ್ಸಿನಲ್ಲಿ ಅಷ್ಟಾಗಿ ಉಳಿಯುವು ದಿಲ್ಲ. ಕೆಲವು ಪಾತ್ರಗಳು ಚಿತ್ರಕಥೆಯಲ್ಲಿ ಅನಗತ್ಯವಾಗಿ ಪ್ರವೇಶಿಸುವುದರಿಂದ, ಚಿತ್ರದ ಓಟಕ್ಕೆ ಅಲ್ಲಲ್ಲಿ ತಡೆ ಬೀಳುತ್ತದೆ.

ಇನ್ನು ಚಿತ್ರದ ಛಾಯಾಗ್ರಹಣ ಕೆಲಸ ಅಚ್ಚುಕಟ್ಟಾಗಿದೆ. ಒಂದೆರಡು ಹಾಡುಗಳು ಗುನುಗುವಂತಿದೆ. ಸಂಕಲನ ಕಾರ್ಯ ಇನ್ನಷ್ಟು ಹರಿತವಾಗಿದ್ದರೆ ಚೆನ್ನಾಗಿರುತ್ತಿತ್ತು. ಹಿನ್ನೆಲೆ ಸಂಗೀತಕ್ಕೆ ನಿರ್ದೇಶಕರು ಹೆಚ್ಚಿನ ಗಮನ ಕೊಡಬಹುದಿತ್ತು. ಅಲ್ಲಲ್ಲಿ ಹಿಡಿತ ಕಳೆದುಕೊಂಡಿರುವ ನಿರೂಪಣೆ, ಕೆಲ ತಾಂತ್ರಿಕ ಲೋಪಗಳನ್ನು ಹೊರತು ಪಡಿಸಿದರೆ, “ರಿವೈಂಡ್‌’ ಒಂದೊಳ್ಳೆ ಪ್ರಯೋಗ ಎನ್ನಲು ಅಡ್ಡಿಯಿಲ್ಲ. ಸೈನ್ಸ್‌ ಫಿಕ್ಷನ್‌, ಸಸ್ಪೆನ್ಸ್‌ – ಥ್ರಿಲ್ಲರ್‌ ಸಿನಿಮಾಗಳ ಕಡೆಗೆ ಒಲವಿರುವವರು ಒಮ್ಮೆ “ರಿವೈಂಡ್‌’ ನೋಡಲು ಅಡ್ಡಿಯಿಲ್ಲ.

ಜಿ.ಎಸ್‌.ಕೆ ಸುಧನ್‌

ಟಾಪ್ ನ್ಯೂಸ್

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.