ಕೋವಿಡ್‌ ಸಂಕಷ್ಟ: 2022ರ ವರೆಗೂ ಸಾಮಾಜಿಕ ಅಂತರ


Team Udayavani, Apr 16, 2020, 2:58 PM IST

ಕೋವಿಡ್‌ ಸಂಕಷ್ಟ: 2022ರ ವರೆಗೂ ಸಾಮಾಜಿಕ ಅಂತರ

ಹೊಸದಿಲ್ಲಿ: ನಗರ ಪಾಲಿಕೆ ಸಿಬಂದಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಿದರು.

ನ್ಯೂಯಾರ್ಕ್‌: ಲಾಕ್‌ಡೌನ್‌ ತೆರವುಗೊಂಡ ಕೂಡಲೇ ಬಂಧುಬಳಗದವರನ್ನು ಕಂಡು ಅಪ್ಪಿ ನಲಿದಾಡಬಹುದು ಎಂದು ಭಾವಿಸಿದ್ದೀರಾ? ಅಮೆರಿಕದ ವಿಜ್ಞಾನಿಗಳು ನಡೆಸಿದ ಹೊಸದೊಂದು ಅಧ್ಯಯನ ನಿಮ್ಮ ಈ ಕನಸಿಗೆ ತಣ್ಣೀರು ಎರಚುವಂತಿದೆ. ಸರಕಾರ ಲಾಕ್‌ಡೌನ್‌ನಂಥ ನಿರ್ಬಂಧಗಳನ್ನು ತೆರವುಗೊಳಿಸಿದರೂ ಜನರು ಸ್ವ ಪ್ರೇರಣೆಯಿಂದ ಸಾಮಾಜಿಕ ಅಂತರವನ್ನು ಪಾಲಿಸಬೇಕು. ಇಲ್ಲದಿದ್ದರೆ ಕೋವಿಡ್‌ ಯಾವುದೇ ಸಮಯದಲ್ಲಿ ಮರಳಿ ವಕ್ಕರಿಸುವ ಅಪಾಯವಿದೆ ಎಂದು ಎಚ್ಚರಿಸಿದೆ ಈ ಅಧ್ಯಯನ.

ಬೇಸಗೆಯಲ್ಲಿ ಕೋವಿಡ್‌-19 ವೈರಸ್‌ ಸಾಯುತ್ತದೆ ಎನ್ನುವುದಕ್ಕೆ ಇಷ್ಟರ ತನಕ ಯಾವ ಪುರಾವೆಯೂ ಸಿಕ್ಕಿಲ್ಲ. ಹೀಗಾಗಿ ಕೋವಿಡ್‌-19 ಪ್ರಕರಣಗಳು ಮರುಕಳಿಸದಿರಲು ಇನ್ನೂ ಎರಡು ವರ್ಷವಾದರೂ ಕೆಲವು ನಿರ್ಬಂಧಗಳನ್ನು ಜನರು ಸ್ವಪ್ರೇರಣೆಯಿಂದ ಪಾಲಿಸುವುದು ಒಳಿತು ಎಂದು ಈ ಅಧ್ಯಯನ ಸಲಹೆ ಮಾಡಿದೆ. ಪರಸ್ಪರರಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು, ಅಪ್ಪುಗೆ, ಚುಂಬನ, ಹಸ್ತಲಾಘವದಂಥ ಪದ್ಧತಿಗಳನ್ನು ತ್ಯಜಿಸುವ ಅನಿವಾರ್ಯತೆ ತಲೆದೋರಬಹುದು ಎಂದು ಅಧ್ಯಯನ ಹೇಳಿದೆ. ಒಂದು ಸಲ ಲಾಕ್‌ಡೌನ್‌ ಹೇರಿದ ಕೂಡಲೇ ಕೋವಿಡ್‌-19 ಹಾವಳಿ ನಿಯಂತ್ರಣಕ್ಕೆ ಬರುತ್ತದೆ ಎನ್ನುವ ಖಾತರಿಯಿಲ್ಲ. ಒಂದೇ ಒಂದು ಪಾಸಿಟಿವ್‌ ಪ್ರಕರಣ ಉಳಿದಿದ್ದರೂ ಮರಳಿ ಸೋಂಕು ವ್ಯಾಪಿಸುವ ಸಾಧ್ಯತೆಯಿದೆ.

“ಸಯನ್ಸ್‌’ ವೈಜ್ಞಾನಿಕ ನಿಯತಕಾಲಿಕದಲ್ಲಿ ಈ ಕುರಿತಾದ ವಿಸ್ತೃತವಾದ ಲೇಖನವೊಂದು ಪ್ರಕಟವಾಗಿದೆ. ಇದರಲ್ಲಿ ಕೋವಿಡ್‌-19 ಪಿಡುಗಿನ ಬಳಿಕದ ದಿನಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಒಂದು ಲಾಕ್‌ಡೌನ್‌ನಿಂದ ಕೋವಿಡ್‌ ಹಾವಳಿ ಮುಗಿಯಿತು ಎಂದು ನೆಮ್ಮದಿಯಾಗಿರಲು ಸಾಧ್ಯವಿಲ್ಲ. ಎರಡನೇ ಸಲ ಮರುಕಳಿಸಿದರೆ ಅದು ಮೊದಲ ಸಲಕ್ಕಿಂತ ಹೆಚ್ಚು ತೀವ್ರವಾಗಿರುವ ಸಾಧ್ಯತೆ ಇದೆ ಎನ್ನುವುದು ಈ ಲೇಖನದ ಒಟ್ಟು ತಾತ್ಪರ್ಯ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಮುಂದಿನ ಕೆಲವು ವರ್ಷದ ಮಟ್ಟಿಗೆ ಜನರು ಸ್ವ ನಿಯಂತ್ರಣ ಹೇರಿಕೊಳ್ಳಬೇಕಾದ ಅಗತ್ಯವನ್ನು ಪ್ರತಿಪಾದಿಸುತ್ತಿದ್ದಾರೆ.

2025ರ ತನಕವಿದೆ ಕೋವಿಡ್‌ ಹಾವಳಿ
ಓರ್ವ ತಜ್ಞ ಹೇಳುವ ಪ್ರಕಾರ ಮನುಕುಲ 2025ರ ತನಕವೂ ಕೋವಿಡ್‌-19 ಪೀಡೆ ಯನ್ನು ಅನುಭವಿಸುತ್ತಿರಬೇಕಾ ಗುತ್ತದೆ. ಪರಿಣಾಮಕಾರಿ ಯಾದ ಚಿಕಿತ್ಸೆ ಅಥವಾ ಲಸಿಕೆ ಸಂಶೋಧನೆಯಾಗುವ ತನಕ ಕೋವಿಡ್‌-19 ಪದೇ ಪದೇ ಕಾಟ ಕೊಡುವ ಸಾಧ್ಯತೆಯಿದೆ. ಇದಕ್ಕೆ ಚೀನದಲ್ಲಿ ಎರಡನೇ ಸುತ್ತಿನ ಕೋವಿಡ್‌ ಹಾವಳಿ ಶುರುವಾಗಿರುವುದನ್ನೇ ಉದಾಹರಣೆಯಾಗಿ ತೋರಿಸುತ್ತಿದ್ದಾರೆ ತಜ್ಞರು. ಹಾರ್ವರ್ಡ್‌ ವಿವಿಯ ವೈರಾಣು ಸಂಶೋಧಕ ಮಾರ್ಕ್‌ ಲಿಪ್‌ಸ್ಟಿಚ್‌ ಹೇಳುವಂತೆ , ಸೋಂಕುಗಳು ಎರಡು ರೀತಿಯಲ್ಲಿ ಹರಡುತ್ತವೆ. ಒಂದು ಸೋಂಕಿತ ವ್ಯಕ್ತಿಯಿಂದ ಇನ್ನೋರ್ವ ವ್ಯಕ್ತಿಗೆ ಮತ್ತು ಅಜ್ಞಾತ ವ್ಯಕ್ತಿಯಿಂದ ಒಂದಿಡೀ ಸಮುದಾಯಕ್ಕೆ. ಸದ್ಯಕ್ಕೆ ಎರಡನೇ ಅಪಾಯವೇ ಹೆಚ್ಚು ಇದೆ.

ಯಾವ ದೇಶವೂ ಲಾಕ್‌ಡೌನ್‌ ಬಳಿಕದ ಯೋಜನೆಗಳನ್ನು ಹೊಂದಿಲ್ಲ. ಎಲ್ಲ ಸರಕಾರಗಳಿಗೂ ಸದ್ಯಕ್ಕೆ ಲಾಕ್‌ಡೌನ್‌ ಮುಗಿಯುವುದೇ ಮುಖ್ಯ. ಇದು ಇನ್ನೊಂದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಲಾಕ್‌ಡೌನ್‌ ಮುಗಿದ ಬಳಿಕ ಜನರು ಏನು ಮಾಡಬೇಕು ಎನ್ನುವ ಸಮಗ್ರ ಯೋಜನೆಯೊಂದನ್ನು ತಯಾರಿಸಿಟ್ಟುಕೊಳ್ಳುವು ಅಗತ್ಯ ಎಂದು ಅಭಿಪ್ರಾಯಪಡುತ್ತಾರೆ ಲಿಪ್‌ಸ್ಟಿಚ್‌.

ಕೋವಿಡ್‌-19 ಹಾವಳಿ ತೀವ್ರವಾಗಿರುವ ಅಮೆರಿಕ, ಇಟಲಿ, ಬ್ರಿಟನ್‌, ಸ್ಪೈನ್‌ ಮತ್ತಿತರ ಕೆಲವು ದೇಶಗಳು ಇನ್ನೂ ಕನಿಷ್ಠ ಎರಡು ವರ್ಷಗಳ ಮಟ್ಟಿಗೆ ಸಾಮಾಜಿಕ ಅಂತರ ಪಾಲನೆಯನ್ನು ಕಡ್ಡಾಯಗೊಳಿಸುವ ಅಗತ್ಯವಿದೆ. 70 ವರ್ಷಕ್ಕಿಂತ ಮೇಲ್ಪಟ್ಟವರನ್ನು ಮತ್ತು ಮಕ್ಕಳನ್ನು ವಿಶೇಷ ಕಾಳಜಿಯಿಂದ ನೋಡಿಕೊಳ್ಳುವುದು, ಸಾಮುದಾಯಿಕ ನೆಲೆಯಲ್ಲಿ ನಿಯಮಿತವಾಗಿ ಕೋವಿಡ್‌ ಪರೀಕ್ಷೆ ನಡೆಸುವಂಥ ಕ್ರಮಗಳನ್ನು ಅನುಷ್ಠಾನಿಸುವುದು ಈ ದೇಶಗಳಿಗೆ ಅನಿವಾರ್ಯವಾಗಬಹುದು. ಬಜೆಟ್‌ನ ದೊಡ್ಡ ಮೊತ್ತವನ್ನು ಕೋವಿಡ್‌ಗಾಗಿ ಮೀಸಲಿರಿಸುವ ಅನಿವಾರ್ಯತೆಯನ್ನು ಸಹಿಸಿಕೊಳ್ಳಬೇಕಾದೀತು ಎನ್ನುತ್ತಾರೆ ತಜ್ಞರು.

ಬದಲಾಗುತ್ತಾ ಜೀವನ ಶೈಲಿ?
ವಿಜ್ಞಾನಿಗಳು ಹೇಳುವ ಸಲಹೆಗಳನ್ನೆಲ್ಲ ಪಾಲಿಸಿದರೆ ಜನರ ಜೀವನ ಶೈಲಿಯೇ ಬದಲಾಗುವ ಸಾಧ್ಯತೆಯಿದೆ. ಪಾಶ್ಚಾತ್ಯ ದೇಶಗಳಲ್ಲಿ ಪರಸ್ಪರರಿಗೆ ಶುಭಕೋರುವ ಹಸ್ತಲಾಘವ, ಅಪ್ಪುಗೆ, ಚುಂಬನದಂಥ ಪದ್ಧತಿಗಳು ಸಂಪೂರ್ಣವಾಗಿ ನೇಪಥ್ಯಕ್ಕೆ ಸರಿಯುವ ಸಾಧ್ಯತೆಯೂ ಇಲ್ಲದಿಲ್ಲ. ಈ ಮೂಲಕ ಒಂದು ಸಂಸ್ಕೃತಿಯೇ ಪಲ್ಲಟವಾಗಬಹುದು ಎಂದು ಕೆಲವು ತಜ್ಞರು ಅಭಿಪ್ರಾಯಪಡುತ್ತಾರೆ.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

1-wwqw

CRPF DIG ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.