ದೇಗುಲ ಬಳಿ ಶಬ್ದ ಮಾಲಿನ್ಯಕ್ಕೆ ವಾಹನಗಳೇ ಕಾರಣ!


Team Udayavani, Jun 17, 2021, 2:28 PM IST

bangalore news

ಬೆಂಗಳೂರು: ನಗರದ ಕೆಲವೊಂದು ಧಾರ್ಮಿಕ ಕೇಂದ್ರಗಳ ಬಳಿ ಶಬ್ದ ಮಾಲಿನ್ಯ ಹೆಚ್ಚಾಗಲು ವಾಹನಗಳ ಸಂಚಾರ ಕಾರಣ ಎಂಬ ಪೊಲೀಸರ ಹೇಳಿಕೆಗೆ ಹೈಕೋರ್ಟ್‌ ಅಚ್ಚರಿ ವ್ಯಕ್ತಪಡಿಸಿದೆ.

ಸುಪ್ರೀಂಕೋರ್ಟ್‌ ಮಾರ್ಗಸೂಚಿಗಳ ಅನ್ವಯ ರಾಜ್ಯದ ಧಾರ್ಮಿಕ ಕೇಂದ್ರಗಳಲ್ಲಿ ಅನಧಿಕೃತವಾಗಿ ಧ್ವನಿ ವರ್ಧಕ ಬಳಸಿ ಶಬ್ದ ಮಾಲಿನ್ಯ ಉಂಟು ಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸಲು ಆದೇಶಿಸುವಂತೆ ಕೋರಿ ಗಿರೀಶ್‌ ಭಾರದ್ವಾಜ್‌ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನುಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಅವರನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಈ ವೇಳೆ ನಗರ ಪೊಲೀಸ್‌ ಆಯುಕ್ತರಕಚೇರಿಯ ಗುಪ್ತಚರ ವಿಭಾಗದ ಡಿಸಿಪಿ ಸಲ್ಲಿಸಿದಪ್ರಮಾಣ ಪತ್ರವನ್ನು ನ್ಯಾಯಪೀಠ ಪರಿಶೀಲಿಸಿತು.ದೂರುಗಳಲ್ಲಿ ಹೇಳಲಾದ ಧಾರ್ಮಿಕ ಕೇಂದ್ರಗಳಸ್ಥಳದಲ್ಲಿ ಶಬ್ದ ಮಾಲಿನ್ಯ ಪ್ರಮಾಣ ಹೆಚ್ಚಿರಲುವಾಹನಗಳ ಸಂಚಾರ ಕಾರಣ ಎಂಬುದಾಗಿಪ್ರಮಾಣಪತ್ರದಲ್ಲಿ ಹೇಳಿರುವುದು ಅಚ್ಚರಿ ತಂದಿದೆ.ವಾಹನ ಸಂಚಾರ ಹೆಚ್ಚಿರುವ ಸಮಯದಲ್ಲಿ ಪರೀಕ್ಷೆಮಾಡಲಾಗಿದೆ. ಅದರ ಬದಲು ವಾಹನ ಸಂಚಾರವಿರಳವಾಗಿರುವ ಬೆಳಗಿನ ಅವಧಿಯಲ್ಲಿಪರೀಕ್ಷಿಸಬಹುದಾಗಿತ್ತಲ್ಲವೇ? ಎಂದು ನ್ಯಾಯಪೀಠಪ್ರಶ್ನಿಸಿತು.

ಡಿಸಿಪಿಗೆ ತರಾಟೆ: ಶಬ್ದ ಮಾಲಿನ್ಯ ನಿಯಂತ್ರಣನಿಯಮಗಳನ್ನು ಉಲ್ಲಂ ಸುವವರ ವಿರುದ್ಧ ಕ್ರಮಜರುಗಿಸುವ ಬದಲು ಶಬ್ದ ಮಾಲಿನ್ಯ (ನಿಯಂತ್ರಣ)ಕಾಯ್ದೆ-2020ರ ನಿಯಮಗಳನ್ನೇ ಮರುಪರಿಶೀಲಿಸುವ ಅಗತ್ಯವಿದೆ ಎಂದು ಪ್ರಮಾಣಪತ್ರಸಲ್ಲಿಸಿದ ಡಿಸಿಪಿ ಅವರನ್ನು ಹೈಕೋರ್ಟ್‌ ತೀವ್ರತರಾಟೆಗೆ ತೆಗೆದುಕೊಂಡಿತು.ಶಬ್ದ ಮಾಲಿನ್ಯ ಕಾಯ್ದೆಯ ನಿಯಮಗಳನ್ನುಉಲ್ಲಂ ಸುವವರನ್ನು ಶಿಕ್ಷಿಸುವ ಬದಲು ಕಾನೂನುಪಾಲಿಸುವಂತೆ ಮನವಿ ಮಾಡುತ್ತಿದ್ದೀರಿ.ಅನಧಿಕೃತವಾಗಿ ಧ್ವನಿವರ್ಧಕಗಳ ಬಳಕೆ ಕುರಿತುದೂರು ಬಂದಾಗ, ಅವುಗಳನ್ನು ಬಳಸಲುಅನುಮತಿ ಪಡೆಯಲಾಗಿದೆಯೋ ಅಥವಾಇಲ್ಲವೋ ಎಂಬುದನ್ನು ಪರಿಶೀಲಿಸಿಲ್ಲ.

ಪರಿಸರಸಂರಕ್ಷಣಾ ಕಾಯ್ದೆ -1986ರ ಪ್ರಕಾರ ತಪ್ಪಿತಸ್ಥರನ್ನುಪ್ರಾಸಿಕ್ಯೂಷನ್‌ಗೆ ಒಳಪಡಿಸದೆ ಸುಮ್ಮನೆ ಬಿಟ್ಟಿದ್ದೀರಿ.ಪ್ರಮಾಣ ಪತ್ರವನ್ನು ನೋಡಿದರೆ ಅನಧಿಕೃತ ಧ್ವನಿವರ್ಧಕಗಳ ಬಳಕೆಯನ್ನು ಡಿಸಿಪಿ ಒಪ್ಪಿಕೊಂಡಿದ್ದಾರೆಎಂದರ್ಥ. ಇನ್ನೂ ಡಿಜಿ-ಐಜಿಪಿ ಸೂಚನೆ ಇದ್ದರೂನಿಯಮ ಉಲ್ಲಂಘನೆ ಮಾಡಿದವರ ವಿರುದ್ಧಕಾನೂನು ಕ್ರಮ ಜರುಗಿಸಿಲ್ಲ ಎಂದು ಕಿಡಿ ಕಾರಿತು.ತರಾಟೆಗೆ ತೆಗೆದುಕೊಂಡಿತು.ಆಗ ಸರ್ಕಾರಿ ವಕೀಲರು, ಪ್ರಮಾಣ ಪತ್ರವನ್ನುಹಿಂಪಡೆದು ಹೊಸದಾಗಿ ಸಲ್ಲಿಸಲಾಗುವುದುಎಂದು ತಿಳಿಸಿದರು.

ಅದನ್ನು ಒಪ್ಪದ ನ್ಯಾಯಪೀಠವುಅರ್ಜಿ ಹಾಗೂ ಅರ್ಜಿ ಕುರಿತ ನ್ಯಾಯಾಲಯದಆದೇಶಗಳು, ಡಿಸಿಪಿಯ ಪ್ರಮಾಣಪತ್ರವನ್ನು ನಗರಪೊಲೀಸ್‌ ಆಯುಕ್ತರಿಗೆ ಒದಗಿಸಬೇಕು. ಅದೆನ್ನೆಲ್ಲಾಪರಿಶೀಲಿಸಿ ಬಳಿಕ ಮತ್ತು ಪ್ರಕರಣದಲ್ಲಿ ಪೋಲಿಸರುಮತ್ತು ಡಿಸಿಪಿಯ ತೋರಿರುವ ನಡೆಗಳ ಬಗ್ಗೆವಿವರಣೆ ನೀಡಿ ಆಯುಕ್ತರು ವೈಯಕ್ತಿಕವಾಗಿಜು.1ರೊಳಗೆ ಖುದ್ದು ಪ್ರಮಾಣಪತ್ರ ಸಲ್ಲಿಸಬೇಕು.ಶಬ್ದ ಮಾಲಿನ್ಯ ಬಗ್ಗೆ ದೂರು ದಾಖಲಾದ ಪೊಲೀಸ್‌ಠಾಣೆಗಳಿಗೆ ಶಬ್ದ ಮಾಲಿನ್ಯ ಅಳೆಯುವ ಮಾಪಕಒದಗಿಸಲಾಗಿದೆ? ಅವುಗಳು ಕಾರ್ಯ ನಿರ್ವಹಣೆಸ್ಥಿತಿಯಲ್ಲಿವೆ? ಅವುಗಳನ್ನು ಬಳಸುವ ತರಬೇತಿಪೊಲೀಸರಿಗೆ ಕಲ್ಪಿಸಲಾಗಿದೆಯೇ? ಎಂಬ ಬಗ್ಗೆವಿವರಣೆ ನೀಡುವಂತೆ ಆಯುಕ್ತರಿಗೆ ಸೂಚಿಸಿವಿಚಾರಣೆಯನ್ನು ಜು.2ಕ್ಕೆ ಮುಂದೂಡಿತು.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.