ಓಪನ್ ಆಯಿತು ಬೆಂಗಳೂರು
Team Udayavani, Jun 22, 2021, 6:19 PM IST
ಬೆಂಗಳೂರು: ತಿಂಗಳುಗಟ್ಟಲೆ ಸ್ಥಗಿತಗೊಂಡಿದ್ದಸಾರ್ವಜನಿಕ ಸಾರಿಗೆ ಸೇವೆಗಳಿಗೆ ನಗರದಲ್ಲಿಸೋಮವಾರ ಮರುಚಾಲನೆ ದೊರೆಯಿತು.ಸರ್ಕಾರ ಅನ್ಲಾಕ್ ಜತೆಗೆ ಸಂಚಾರ ಸೇವೆಗೆಅನುಮತಿ ನೀಡಿದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಬಿಎಂಟಿಸಿ ಬಸ್ಗಳು ಮತ್ತು “ನಮ್ಮ ಮೆಟ್ರೋ’ರೈಲುಗಳು ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿಕಾರ್ಯಾಚರಣೆ ಆರಂಭಿಸಿದವು.
ಮೊದಲ ದಿನ ಸಾವಿರಾರು ಜನ ಇದರ ಉಪಯೋಗ ಪಡೆದುಕೊಂಡರು.ಸಿಟಿ ರೈಲು ನಿಲ್ದಾಣ ಸೇರಿದಂತೆ ನಗರದ ಪ್ರಮುಖನಿಲ್ದಾಣಗಳಲ್ಲಿ ಬಂದಿಳಿದ ಪ್ರಯಾಣಿಕರು, ಬೆಳಗ್ಗೆಕಚೇರಿ ಮತ್ತಿತರ ಕೆಲಸಗಳಿಗೆ ತೆರಳುವವರು, ಬಸ್ಅಥವಾ ಮೆಟ್ರೋ ಸೇವೆಗಳ ಮೊರೆಹೋದರು. ಈಸಂದರ್ಭದಲ್ಲಿ ಬಹುತೇಕರು ಮಾಸ್ಕ್ ಧರಿಸಿ,ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕಸರ್ಕಾರದ ಮಾರ್ಗ ಸೂಚಿಗಳ ಪಾಲನೆಮಾಡುತ್ತಿರುವುದುಕಂಡುಬಂತು.
ಸೂಚನೆಯಂತೆ ಒಟ್ಟು ಆಸನಗಳಲ್ಲಿ ಶೇ.50ರಷ್ಟುಪ್ರಯಾಣಿಕರ ಸಾಮರ್ಥ್ಯದೊಂದಿಗೆ ಕಾರ್ಯಾಚರಣೆಅವಕಾಶ ಕಲ್ಪಿಸಲಾಗಿತ್ತು. ಮೆಟ್ರೋ ರೈಲುಗಳಲ್ಲಿ ಇದರಪಾಲನೆ ಕಟ್ಟುನಿಟ್ಟಾಗಿತ್ತು. ಆದರೆ, ಬಹುತೇಕ ಬಸ್ಗಳಲ್ಲಿಎಲ್ಲ ಸೀಟುಗಳು ಭರ್ತಿ ಆಗಿದ್ದವು. “ಕೆಲವೆಡೆ ಬಸ್ಗಳಸಂಖ್ಯೆ ಕಡಿಮೆ ಇರುವುದರಿಂದ ಇದು ಅನಿವಾರ್ಯ’ಎಂಬ ಉತ್ತರ ಪ್ರಯಾಣಿಕರಿಂದ ಬಂತು.ಈ ಮಧ್ಯೆ ಹಿಂದಿನ ದಿನವೇ “ನಮ್ಮ ಮೆಟ್ರೋ’ ರೈಲುಮತ್ತು ನಿಲ್ದಾಣಗಳನ್ನು ಸ್ವತ್ಛಗೊಳಿಸಿ, ಮಾರ್ಗಸೂಚಿಪಾಲನೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿತ್ತು.ಸೋಮವಾರ ಖುದ್ದು ಬೆಂಗಳೂರು ಮೆಟ್ರೋ ರೈಲುನಿಗಮ(ಬಿಎಂಆರ್ಸಿಎಲ್)ದ ವ್ಯವಸ್ಥಾಪಕ ನಿರ್ದೇಶಕರಾಕೇಶ್ ಸಿಂಗ್, ಎಂ.ಜಿ. ರಸ್ತೆ ನಿಲ್ದಾಣಕ್ಕೆ ಭೇಟಿ ನೀಡಿಪರಿಶೀಲನೆ ನಡೆಸಿದರು
ಅಲ್ಲದೆ, ಅಲ್ಲಿಂದ ಬಿ.ಆರ್. ಅಂಬೇಡ್ಕರ್ ನಿಲ್ದಾಣವಿಧಾನಸೌಧವರೆಗೆ ಮೆಟ್ರೋದಲ್ಲಿ ಪ್ರಯಾಣಬೆಳೆಸಿದರು. ಈ ವೇಳೆ ಸಾಮಾನ್ಯ ಪ್ರಯಾಣಿಕರಅಭಿಪ್ರಾಯ ಸಂಗ್ರಹಿಸಿದರು. ನಿಗಮದ ನಿರ್ದೇಶಕಎನ್.ಎಂ. ಧೋಕೆ, ಮುಖ್ಯ ಸಾರ್ವಜನಿಕಸಂಪರ್ಕಾಧಿಕಾರಿ ಯಶವಂತ್ ಚವ್ಹಾಣ್ ಸೇರಿದಂತೆಇತರ ಅಧಿಕಾರಿಗಳು ಸಾಥ್ ನೀಡಿದರು.ಅದೇ ರೀತಿ, ಬಿಎಂಟಿಸಿಯಿಂದ ಮೊದಲ ದಿನಎರಡು ಸಾವಿರ ಬಸ್ಗಳನ್ನು ರಸ್ತೆಗಿಳಿಸಲುಉದ್ದೇಶಿಸಲಾಗಿತ್ತು. ಆದರೆ, ನಿರೀಕ್ಷೆ ಮೀರಿ ಅಂದರೆಸಂಜೆವರೆಗೆ 3,154 ಬಸ್ಗಳು ಕಾರ್ಯಾಚರಣೆಮಾಡಿದವು. ಸಾಮಾನ್ಯ ದಿನಗಳಿಗೆ ಹೋಲಿಸಿದರೆ,ಪ್ರಯಾಣಿಕರ ಸಂಖ್ಯೆ ತುಂಬಾ ಕಡಿಮೆ. ಆದಾಗ್ಯೂಮೆಜೆಸ್ಟಿಕ್ ಸೇರಿದಂತೆ ಕೆಲವೆಡೆ “ಪೀಕ್ ಅವರ್’ನಲ್ಲಿಬಸ್ಗಳಿಲ್ಲದೆ ಪರದಾಟ ನಡೆಸಿದರು. ಮಂಗಳವಾರಪ್ರಯಾಣಿಕರದಟ್ಟಣೆಹೆಚ್ಚಿದರೆಮತ್ತಷ್ಟುವಾಹನಗಳನ್ನುರಸ್ತೆಗಿಳಿಸುವುದಾಗಿ ಸಂಸ್ಥೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…