ಆಡಳಿತಾತ್ಮಕ ವಲಯ ರಚನೆಗೆ ತೀರ್ಮಾನ
Team Udayavani, Jul 27, 2018, 6:00 AM IST
ಬೆಂಗಳೂರು: ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ, ಲೋಕಾಯುಕ್ತ ಕಚೇರಿ, ಉದ್ಯೋಗಸೌಧ, ಮಾಹಿತಿಸೌಧ, ಮಹಾಲೇಖಪಾಲಕರ ಕಚೇರಿ “ಆಡಳಿತಾತ್ಮಕ ವಲಯ’ ವಾಗಲಿದೆ.
ಇದಕ್ಕೆ ಪ್ರತ್ಯೇಕ ಭದ್ರತಾ ವ್ಯವಸ್ಥೆಯೂ ಇರಲಿದೆ. ಕಚೇರಿ ವೇಳೆಯಲ್ಲಿ ಅನಗತ್ಯ ವ್ಯಕ್ತಿಗಳ ಪ್ರವೇಶಕ್ಕೆ ನಿರ್ಬಂಧ
ಹೇರಲು ಇಂತಹದ್ದೊಂದು ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.
ಆಡಳಿತಾತ್ಮಕ ವಲಯ ರಚನೆ ಸಂಬಂಧ ಸದ್ಯದಲ್ಲೇ ಆದೇಶ ಹೊರಬೀಳಲಿದೆ. ಆಗಸ್ಟ್ನಿಂದಲೇ ಇದು ಜಾರಿಯಾಗಲಿದ್ದು ವಿಧಾನಸೌಧ,ವಿಕಾಸಸೌಧ, ಬಹುಮಹಡಿ ಕಟ್ಟಡ, ಉದ್ಯೋಗ ಸೌಧ, ಮಾಹಿತಿ ಸೌಧ, ಮಹಾಲೇಖಪಾಲಕರ ಕಚೇರಿ ಭೇಟಿಗೆ ಪ್ರತ್ಯೇಕ ಪಾಸ್ ವ್ಯವಸ್ಥೆ ಸಹ ಕಲ್ಪಿಸಲು ತೀರ್ಮಾನಿಸಲಾಗಿದೆ.
ವಿಶೇಷ ಸಮವಸ್ತ್ರ: ಮಧ್ಯಾಹ್ಮ 3 ಗಂಟೆ ನಂತರವಷ್ಟೇ ಸಾರ್ವಜನಿಕ ಭೇಟಿಗೆ ಇಲ್ಲಿ ಅವಕಾಶವಿರಲಿದ್ದು, ಉಳಿದಂತೆ ಬೆಳಗ್ಗೆ ಯಾವುದೇ ಕಾರಣಕ್ಕೂ ಪ್ರವೇಶ ಇರುವುದಿಲ್ಲ. ಮೇಲ್ಕಂಡ ವ್ಯಾಪ್ತಿಯ ಭದ್ರತೆಗಾಗಿ ವಿಶೇಷ ಪೊಲೀಸ್ ನೇಮಕ ಮಾಡಲಾಗುವುದು.ಅವರಿಗೆ ಖಾಕಿ ಸಮವಸOಉ ಬದಲು ಹೊಸ ಬಗೆಯ ವಿಶಿಷ್ಟ ಸಮವಸ್ತ್ರ ವಿನ್ಯಾಸ ಮಾಡಲು ಸೂಚಿಸಲಾಗಿದೆ ಎಂದು ಹೇಳಲಾಗಿದೆ.
ಮತ್ತಷ್ಟು ಭದ್ರತೆ: ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹಸಚಿವ ಡಾ.ಜಿ.ಪರಮೇಶ್ವರ್, ಬೆಳಗ್ಗೆಯಿಂದಲೇ ಸಾರ್ವಜನಿಕರ ಪ್ರವೇಶದಿಂದ ದೈನಂದಿನ ಕೆಲಸ-ಕಾರ್ಯಗಳಿಗೆ ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ ಆಡಳಿತಾತ್ಮಕ ವಲಯ ರಚನೆಗೆ ತೀರ್ಮಾನಿಸಲಾಗಿದೆ. ಈಗಿರುವ ಪೊಲೀಸರಿಗಿಂತ ಹೆಚ್ಚಿನ ಭದ್ರತೆ ಒದಗಿಸಲಾಗುವುದು. ಪ್ರಸ್ತುತ 180 ಪೊಲೀಸರು ಭದ್ರತೆಗೆ ನಿಯೋಜಿಸಲಾಗಿದ್ದು ಆ ಸಂಖ್ಯೆ ಮತ್ತಷ್ಟು ಹೆಚ್ಚಿಸಲಾಗುವುದು ಎಂದು ತಿಳಿಸಿದರು.
ವಿಧಾನಸೌಧದಲ್ಲಿ ಅನಗತ್ಯ ವ್ಯಕ್ತಿಗಳ ಓಡಾಟ ಹೆಚ್ಚಾಗಿದೆ. ಇದರಿಂದ ಕೆಲಸಕ್ಕೆ ತೊಂದರೆಯಾಗುತ್ತಿದೆ. ಜತೆಗೆ ಭದ್ರತೆ ದೃಷ್ಟಿಯಿಂದ ಅಪರಿಚಿತ ವ್ಯಕ್ತಿಗಳ ಓಡಾಟಕ್ಕೆ ಕಡಿವಾಣ ಹಾಕುವುದು ಉತ್ತಮ ಎಂದು ಹಿರಿಯ ಪೊಲೀಸರು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಚರ್ಚೆ ನಡೆದಿದೆ ಎಂದರು.
ಮಾಧ್ಯಮದವರಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ಒಂದನೇ ಮಹಡಿಯಲ್ಲಿ ಪತ್ರಕರ್ತರ ಗ್ಯಾಲರಿ ಸ್ಥಾಪಿಸಿ ಅಲ್ಲಿಗೆ
ಸಚಿವರು, ಅಧಿಕಾರಿಗಳು ಬಂದು ಮಾಹಿತಿ ನೀಡಲಿದ್ದಾರೆ. ಪತ್ರಕರ್ತರ ಪ್ರವೇಶಕ್ಕೆ ಪ್ರತ್ಯೇಕ ಪಾಸ್ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಏನಿದು ಆಡಳಿತಾತ್ಮಕ ವಲಯ?
ಆಡಳಿತಾತ್ಮಕ ವಲಯ, ವಿಭಾಗ, ಬ್ಲಾಕ್ ಎಂದು ರಚನೆಯಾದರೆ ಆ ವ್ಯಾಪ್ತಿ ಪ್ರದೇಶ ಸಂಪೂರ್ಣ ನಿಗಾ ವ್ಯವಸ್ಥೆಯಲ್ಲಿರುತ್ತದೆ.ಅಲ್ಲಿನ ಪ್ರವೇಶಕ್ಕೆ ಹಲವು ನಿರ್ಬಂಧ ವಿಧಿಸಬಹುದಾಗಿದೆ. ಭದ್ರತಾ ದೃಷ್ಟಿಯಿಂದ ಪ್ರತ್ಯೇಕ ತೀರ್ಮಾನಗಳನ್ನು ಕೈಗೊಳ್ಳಬಹುದಾಗಿದೆ. ಪ್ರತ್ಯೇಕ ಭದ್ರತೆ ಒದಗಿಸಲು ನಿಯಮಾವಳಿಗಳಲ್ಲಿ ಅವಕಾಶ ಸಿಗಲಿದೆ. ರಾಷ್ಟ್ರೀಯ ಸ್ಮಾರಕ, ಸಂಸತ್, ವಿಧಾನಸೌಧದಂತಹ ಕಟ್ಟಡಗಳು ಇರುವ ಸ್ಥಳಗಳನ್ನು ಈ ರೀತಿ ಪ್ರತ್ಯೇಕ ಬ್ಲಾಕ್ ಅಥವಾ ವಲಯ ಎಂದು ಗುರುತಿಸಲು ಅವಕಾಶವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
MUST WATCH
ಹೊಸ ಸೇರ್ಪಡೆ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು