1,300 ಗ್ರಾಂ ಗಾಂಜಾ ವಶ: ಐವರ ಬಂಧನ
Team Udayavani, Sep 5, 2020, 12:56 PM IST
ನೆಲಮಂಗಲ: ತಾಲೂಕಿನ ಪೊಲೀಸರು ಗಾಂಜಾಮಾರಾಟಗಾರರ ಜಾಲವನ್ನು ಪತ್ತೆ ಹಚ್ಚಿ 5 ಮಂದಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ. ಸಂತೋಷ್ ಚೌಹನ್(35), ದಾಂಜಿ ಕುಮಾರ್ (25), ಗುರುಪ್ರಸಾದ್(31), ಇರ್ಫಾನ್ (21) ಸೇರಿ ದಂತೆ ನಾಲ್ಕು ಜನರನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ರಾಷ್ಟ್ರೀಯ ಹೆದ್ದಾರಿ ಡೆನ್ಸೋ ಫ್ಯಾಕ್ಟರಿ ಪಕ್ಕದ ನರಹರಿಯವರ ಖಾಲಿ ಜಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವಾಗ ಬಂಧಿಸಿದರೆ, ಅಶೋಕ್ ಶರ್ಮ(28) ಎಂಬುವವನನ್ನು ಶಿವಗಂಗೆ ರಸ್ತೆಯ ಲಾರಿ ಪಾರ್ಕಿಂಗ್ನಲ್ಲಿ ಮಾರಾಟ ಮಾಡುವಾಗ ಡಾಬಸ್ಪೇಟೆ ಪೊಲೀಸರು ಬಂಧನಗೊಳಿಸಿದ್ಧಾರೆ.
1ಕೆಜಿ 300ಗ್ರಾಂ ವಶ: ನೆಲಮಂಗಲ ಗ್ರಾಮಾಂತರ ಠಾಣೆಯ ಪಿಎಸ್ಐ ವಸಂತ್ಕುಮಾರ್ ನೇತೃತ್ವದಲ್ಲಿ 4 ಮಾರಾಟಗಾರ ಬಂಧನಗೊಳಿಸಿ 1 ಕೆಜಿ 90 ಗ್ರಾಂ ಗಾಂಜಾ ವಶ ಪಡಿಸಿಕೊಂಡರೆ, ದಾಬಸ್ಪೇಟೆ ಪೊಲೀಸ್ ಠಾಣೆಯ ಪಿಎಸ್ಐ ಡಿ.ಆರ್ ಮಂಜುನಾಥ್ ಅವರು ಒಬ್ಬ ಮಾರಾಟಗಾರನನ್ನು ಬಂಧಿಸಿ 210 ಗ್ರಾಂ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ನೆಲಮಂಗಲದಲ್ಲಿ ಗಾಂಜಾವಿಲ್ಲ ಎನ್ನುತ್ತಿದ್ದ ಪೊಲೀಸರಿಗೆ ಕಾರ್ಯಾಚರಣೆಯಿಂದ ಗಾಂಜಾ ಮಾರಾಟಗಾರರ ಜಾಲ ಪತ್ತೆಯಾಗಿದ್ದು, ಮತ್ತಷ್ಟು ಜನರು ಸಿಕ್ಕಿಬೀಳುವ ಸಾಧ್ಯತೆ ಇದೆ.
ತಹಶೀಲ್ದಾರ್,ಡಿವೈಎಸ್ಪಿ ಪರಿಶೀಲನೆ: ಗಾಂಜಾ ಮಾರಾಟ ಮಾಡುತಿದ್ದ ಸ್ಥಳವನ್ನು ತಹಶೀಲ್ದಾರ್ ಶ್ರೀನಿವಾಸ್ ಹಾಗೂ ಡಿವೈಎಸ್ಪಿ ಮೋಹನ್ ಕುಮಾರ್ ಪರಿಶೀಲನೆ ಮಾಡಿದ್ದು ಹೆಚ್ಚಿನ ಮಾಹಿತಿ ಕಲೆ ಹಾಕಿದ್ದಾರೆ. ಕಾರ್ಯಾಚರಣೆ: ನೆಲಮಂಗಲ ಡಿವೈಎಸ್ಪಿ ಮೋಹನ್ ಕುಮಾರ್, ವೃತ್ತ ನಿರೀಕ್ಷಕ ಶಿವಣ್ಣ, ಪಿಎಸ್ಐ ಡಿ.ಆರ್ ಮಂಜುನಾಥ್, ವಸಂತ್ಕುಮಾರ್, ಸುರೇಶ್ ಹಾಗೂ ಸಿಬ್ಬಂದಿಗಳು ವಿಶೇಷ ತಂಡ ಕಾರ್ಯಾಚಾರಣೆ ಮೂಲಕ ಬಂಧನಗೊಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?