ಯಂಬ್ರಹಳ್ಳಿಯಲ್ಲಿ ಬಲ್ಲಾಳನ ಕಾಲದ ಶಿಲಾಶಾಸನಗಳು ಪತ್ತೆ


Team Udayavani, Sep 10, 2019, 3:00 AM IST

yanmbrahalli

ದೇವನಹಳ್ಳಿ: ಕರ್ನಾಟಕ ಇತಿಹಾಸ ಪುಟಗಳಲ್ಲಿ ದೇವನಹಳ್ಳಿ ತನ್ನದೇ ಆದ ವೈಶಿಷ್ಟ ಹೊಂದಿದೆ. ಇದಕ್ಕೆ ಇತ್ತೀಚೆಗೆ ತಾಲೂಕಿನ ಕೆಲ ಗ್ರಾಮಗಳಲ್ಲಿ ಪತ್ತೆಯಾಗುತ್ತಿರುವ ಶಿಲಾ ಶಾಸನಗಳು, ವೀರಗಲ್ಲುಗಳೇ ಸಾಕ್ಷಿ. ತಾಲೂಕಿನ ಕಾರಹಳ್ಳಿ ಗ್ರಾಪಂ ವ್ಯಾಪ್ತಿಯ ಯಂಬ್ರಹಳ್ಳಿ ಗ್ರಾಮದಲ್ಲಿ ಪ್ರಾಚೀನ ಕಾಲದ ಅಪ್ರಕಟಿತ ಕನ್ನಡ ಲಿಪಿಯುಳ್ಳ ಶಿಲಾ ಶಾಸನ ಹಾಗೂ ತುರುಗೊಳ್‌ ವೀರಗಲ್ಲುಗಳು ಕಂಡುಬಂದಿವೆ. ಅಲ್ಲದೆ‌, ಕುಂದಾಣ ಹೋಬಳಿಯ ಹಲವಾರು ಗ್ರಾಮದಲ್ಲಿ ವಿವಿಧ ರೀತಿಯ ಶಿಲಾ ಶಾಸನಗಳು, ವೀರಗಲ್ಲುಗಳು ದೊರೆತಿವೆ.

ಮಹನೀಯರು ಹುಟ್ಟಿದ ನಾಡು: ದೇವನಹಳ್ಳಿ ತಾಲೂಕಿನಲ್ಲಿ ಟಿಪ್ಪುಸುಲ್ತಾನ್‌ ಜನ್ಮಸ್ಥಳ, ಕೆಂಪೇಗೌಡರ ಪೂರ್ವಜರ ಆವತಿ ಗ್ರಾಮ, ನಾಡಪ್ರಭು ರಣಬೈರೇಗೌಡ ಆಳಿದ ಸ್ಥಳ, ಡಿ.ವಿ ಗುಂಡಪ್ಪ, ನಿಸಾರ್‌ ಅಹಮದ್‌, ವಿ.ಸೀತಾರಾಮಯ್ಯ, ಸಿ.ಅಶ್ವಥ್‌, ಸ್ವಾತಂತ್ರ್ಯ ಹೋರಾಟಗಾರು ಸೇರಿದಂತೆ ಹಲವು ಮಹನೀಯರು ಹುಟ್ಟಿ ಬೆಳೆದಿದ್ದಾರೆ. ಇಂತಹ ಐತಿಹಾಸಿಕ ತಾಲೂಕನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಸಬೇಕು ಎಂದು ಇತಿಹಾಸಕಾರರು ಒತ್ತಾಯಿಸುತ್ತಿದ್ದಾರೆ.

ಶಾಸನಗಳ ರಕ್ಷಣೆ: ಮಳೆ, ಗಾಳಿ, ಬಿಸಿಲಿಗೆ ಸವೆದಿದ್ದು, ಅನಾಥವಾಗಿ ಬೇಲಿಯೊಂದರಲ್ಲಿ ಬಿದ್ದಿದ ಶಾಸನವನ್ನು ಗ್ರಾಪಂ ಸದಸ್ಯರಾದ ರವಿಕುಮಾರ್‌ ಹಾಗೂ ಗೋಪಾಲ್‌ ಗೌಡ ಅವರು ಗ್ರಾಮದ ಅಶ್ವತ್ಥ್ಕಟ್ಟೆಯ ಹಿಂಬದಯಲ್ಲಿ ತಂದು ನಿಲ್ಲಿಸಿದ್ದಾರೆ. ಒಟ್ಟು ಆರು ವೀರಗಲ್ಲುಗಳು ದೊರೆತಿದ್ದು, ಅದರಲ್ಲಿ ತುಂಡಾಗಿರುವ ಒಂದು ವೀರಗಲ್ಲನ್ನು ಬೇಲಿ ಗಿಡಗಳಲ್ಲಿಯೇ ಬಿಡಲಾಗಿದೆ. ಉಳಿದ ಐದು ವೀರಗಲ್ಲುಗಳು ಹಾಗೂ ಒಂದು ಶಿಲಾ ಶಾಸನವನ್ನು ಒಂದೆಡೆ ಸಂರಕ್ಷಿಸಲಾಗಿದ್ದು, ಸಮೀಪದ ಜಮೀನೊಂದರಲ್ಲಿ ಮೂರು ವೀರಗಲ್ಲುಗಳು ಇದ್ದು, ಅದನ್ನು ಸಹ ಸ್ಥಳಾಂತರಿಸುವ ಕಾರ್ಯವಾಗಬೇಕಿದೆ.

ಶಾಸನಗಳ ಕಾಲ: ಯಂಬ್ರಹಳ್ಳಿಯಲ್ಲಿ ಪತ್ತೆಯಾಗಿರವ ಶಿಲಾ ಶಾಸನದ ಎರಡು ಬದಿಯಲ್ಲಿ ಕನ್ನಡ ಲಿಪಿಯಿದ್ದು, ಇದು 3ನೇ ಬಲ್ಲಾಳನ ಕಾಲದ್ದು, ಅಂದರೆ ಕ್ರಿಶ 1296-97ರದ್ದು ಎಂದು ಸಂಶೋಧಕರು ಹೇಳುತ್ತಾರೆ. 6 ವೀರಗಲ್ಲುಗಳ ಪೈಕಿ 3 ವೀರಗಲ್ಲುಗಳ ಮೇಲೆ ಕನ್ನಡ ಲಿಪಿ ಇದ್ದು, ಸ್ವಸ್ತಿಶ್ರೀ ಶಕ 896 ವರ್ಷ ಎಂದು ಬರೆದಿದ್ದು, ಉಳಿದಭಾಗ ಕಾಣಿಸುತ್ತಿಲ್ಲಂದು ಸಂಶೋಧಕರು ತಿಳಿಸುತ್ತಾರೆ. ಇನ್ನುಳಿದ 2 ವೀರಗಲ್ಲುಗಳ ಮೇಲಿನ ಬರಹವನ್ನು ಇಲಾಖೆ ಅಥವಾ ಸಂಶೋಧಕರು ದಾಖಲು ಪಡಿಸಬೇಕಿದೆ.

ಇತಿಹಾಸ ತಿಳಿಸುವ ಶಾಸನಗಳು: ಯಂಬ್ರಹಳ್ಳಿ ಗ್ರಾಮವು ಇತಿಹಾಸ ಪ್ರಸಿದ್ಧವಾಗಿದ್ದು, ಇದಕ್ಕೆ ಇಲ್ಲಿರುವ ಶಿಲಾ ಶಾಸನಗಳು ಪುಷ್ಟಿ ನೀಡುತ್ತಿವೆ. ಯಂಬ್ರಹಳ್ಳಿ ಬೇಚರಾಕು ಅಪ್ಪಗೊಂಡನಹಳ್ಳಿಯ ತಿಮ್ಮರಾಯ ಸ್ವಾಮಿ ತೋಪಿನಲ್ಲಿರುವ ಶಿಲಾ ಶಾಸನ, ಸಾಧಾರಣ ಸಂವಸ್ತ್ರ ವೈಶಾಖಬಹುಳ 15ರಂದು ತಿಮ್ಮರಾಯಸ್ವಾಮಿಗೆ ಭೂಮಿ ಮಾನ್ಯಕೊಟ್ಟಿರುವ ಬಗ್ಗೆ ತಿಳಿಸುತ್ತದೆ. ಇದೇ ಗ್ರಾಮದ ಉತ್ತರಕ್ಕೆ ಗೌಡನ ತೋಪಿನ ಕಾಲುವೆಯಲ್ಲಿರುವ ತಮಿಳು ಶಾಸನದಲ್ಲಿ ವೀರ ರಾಮನಾಥನ ಹೆಸರು ಪ್ರಸ್ತಾಪವಾಗಿದ್ದು, ಅಂತೆಯೇ ಇಲೆ„ಪಾಡು (ಯಲಹಂಕ) ನಾಡಿನ ಹೆಸರು ಸಹ ಕಾಣಸಿಗುತ್ತದೆ.

ಇದರ ಕಾಲ ಕ್ರಿಶ 1288 ಎಂದು ದೇವನಹಳ್ಳಿ ಶಾಸನಗಳ ಪಟ್ಟಿಯಲ್ಲಿ ನಮೂದಾಗಿದೆ. ಆದರೆ ಈ ಎರಡೂ ಶಾಸನಗಳು ಎಲ್ಲಿವೆ ಎಂಬುವುದು ಪ್ರಶ್ನಾರ್ಥಕವಾಗಿದೆ. ಲಿಂಗೇರಗೊಲ್ಲಹಳ್ಳಿಯಲ್ಲಿ ಆವತಿ ಪಾಳೇಗಾರರ ಕಾಲದ ಕಂಬ ಶಾಸನವೊಂದು ಪತ್ತೆಯಾಗಿದೆ. ಪುರಾತತ್ವ ಇಲಾಖೆ, ಇವುಗಳನ್ನು ಸಂರಕ್ಷಿಸುವುದರ ಜೊತೆಗೆ, ವಸ್ತು ಪ್ರದರ್ಶನಾಲಯ ನಿರ್ಮಿಸಿದರೆ ಇಂದಿನ ಯುವ ಪೀಳಿಗೆಗೆ ಇತಿಹಾಸದ ಮಾಹಿತಿ ತಿಳಿಯಲು ಅನುಕೂಲವಾಗುತ್ತದೆ ಎನ್ನುವುದು ಗ್ರಾಮಸ್ಥರ ಆಶಯ.

ಸಂಶೋಧನಾಕಾರ ಬಿಟ್ಟಸಂದ್ರ ಗುರುಸಿದ್ಧಯ್ಯ ಭೇಟಿ ನೀಡಿದಾಗ ಅನಾಥವಾಗಿ ಬಿದ್ದಿದ್ದ ಶಿಲಾಶಾಸನಗಳು ಪತ್ತೆಯಾಗಿವೆ. ಪೂರ್ವಜರ ಕಾಲದಲ್ಲಿ ಇಲ್ಲಿ ವೀರಗಲ್ಲುಗಳ ಗುಡಿ ಇದ್ದು, ವೇಣುಗೋಪಾಲಸ್ವಾಮಿ ದೇವಾಲಯ ಜೀರ್ಣೋದ್ಧಾರ ವೇಳೆ ಸಂರಕ್ಷಿಸಲಾಗಿದೆ.
-ನರಸಿಂಹ ಮೂರ್ತಿ, ರೈತ ಸಂಘದ ಮುಖಂಡ

ಇದುವರೆಗೂ ದೊರೆತಿರುವ ಅಪ್ರಕಟಿತ ಶಾಸನಗಳು ಯಂಬ್ರಹಳ್ಳಿ ಗ್ರಾಮಕ್ಕೆ ಸೇರಿದ್ದು, 6 ತುರಗೋಳ್‌ ವೀರಗಲ್ಲುಗಳು ಒಂದೇ ರೀತಿಯಲ್ಲಿದ್ದು, ಈ ಗ್ರಾಮ ಪ್ರಾಚೀನ ಕಾಲದಲ್ಲಿ ಅಸ್ಥಿತ್ವದಲ್ಲಿತ್ತು ಎಂದು ತಿಳಿಯುತ್ತದೆ. ಶಾಸನದ ಜಾಡು ಹಿಡಿದಾಗ ಇದು 3ನೇ ಬಲ್ಲಾಳನ ಕಾಲದ್ದಾಗಿರಬಹುದು ಎಂದು ಊಹಿಸಲಾಗಿದ್ದು, ಪುರಾತತ್ವ ಇಲಾಖೆ ಸ್ಥಳಕ್ಕೆ ಬಂದು ಸಂಶೋಧನೆ ನಡೆಸಿ ಈ ಶಾಸನಗಳ ಕಾಲವನ್ನು ಉಲ್ಲೇಖೀಸಬೇಕು.
-ಬಿಟ್ಟಸಂದ್ರ ಗುರುಸಿದ್ದಯ್ಯ.ಬಿ.ಜಿ, ಇತಿಹಾಸ ಸಂಶೋಧಕ, ಸಾಹಿತಿ

* ಎಸ್‌.ಮಹೇಶ್‌

ಟಾಪ್ ನ್ಯೂಸ್

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.