ಪಿಡಿಒರನ್ನು ಕಾರಿನಲ್ಲಿ ಕರೆದೊಯ್ದು ದರೋಡೆ: ನಾಲ್ವರ ಬಂಧನ
Team Udayavani, Jun 21, 2020, 7:06 AM IST
ನೆಲಮಂಗಲ: ಚನ್ನರಾಯಪಟ್ಟಣದ ನುಗ್ಗೇಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಜಿ. ಹರೀಶ್ ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ದರೋಡೆ ಮಾಡಿದ್ದ ಆರೋಪಿಗಳನ್ನು ನೆಲಮಂಗಲ ಪೊಲೀ ಸರು ಬಂಧಿಸಿದ್ದಾರೆ. ಬಳಿಕ ಹೆಚ್ಚುವರಿ ಎಸ್ಪಿ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಚೇತನ್(38), ನಸ್ರುಲ್ಲಾ(43), ಕೃಷ್ಣಸಿಂಗ್ (40), ಸುರೇಂದ್ರ(30) ಬಂಧಿತ ಆರೋಪಿಗಳು.
ಅವರು ಮೇ.8ರಂದು ಬೆಳಗ್ಗೆ 9ರ ಸುಮಾರಿಗೆ ನಗರದ ಕುಣಿಗಲ್ ಬೈಪಾಸ್ ಬಳಿ ಸ್ಕಾರ್ಪಿಯೋ ಕಾರಿನಲ್ಲಿ ಬಂದು ಅವರ ಬಳಿಯಿದ್ದ 2,000 ಹಣ, ಲ್ಯಾಪ್ ಟಾಪ್, ಮೊಬೈಲ್, ಎಟಿಎಂ ತೆಗೆದು ಕೊಂಡು, ಪಿನ್ ನಂಬರ್ ಪಡೆದು 29,700 ಹಣ ತೆಗೆದುಕೊಂಡು ಸೊಂಪುರ ಕೈಗಾರಿಕೆ ಪ್ರದೇಶದಲ್ಲಿ ಬಿಟ್ಟು ಹೋಗಿದ್ದರು. ಅದರ ಬಗ್ಗೆ ಹರೀಶ್ ದೂರು ಸಲ್ಲಿಕೆ ಮಾಡಿದ್ದರು.
ಪ್ರಕರಣ ಬೇಧಿಸಲು ಬೆನ್ನಲು ಹತ್ತಿದ ಡಿವೈಎಸ್ಪಿ ಮೋಹನ್ ಕುಮಾರ ಹಾಗೂ ವೃತ್ತನಿರೀಕ್ಷಕ ಶಿವಣ್ಣ ತಂಡ ನಾಲ್ಕು ಜನ ಆರೋಪಿಗಳನ್ನು ಬಂಧಿಸಿ, ಎರಡು ಲಾಂಗ್, ಚಾಕು, ಲ್ಯಾಪ್ಟಾಪ್, ಮೊಬೈಲ್ ಒಂದು ಕೆಎ 04 ಎಂಸಿ 9076 ಸ್ಕಾರ್ಪಿಯೋ ಕಾರು ವಶಪಡಿಸಿಕೊಂಡಿದ್ದಾರೆ. ಸಂದರ್ಭ ದಲ್ಲಿ ಅಪರ ಪೊಲೀಸ್ ಅಧೀಕ್ಷಕ ಸುಜಿತ್, ಡಿವೈ ಎಸ್ಪಿ ಮೋಹನ್ಕುಮಾರ, ವೃತ್ತ ನಿರೀಕ್ಷಕ ಶಿವಣ್ಣ, ವೀರೇಂದ್ರ ಪ್ರಸಾದ್, ಸಬ್ಇನ್ಸ್ಪೆಕ್ಟರ್ ಡಿ.ಆರ್ ಮಂಜುನಾಥ್, ಡಿ.ಚಿಕ್ಕನರ ಸಿಂಹಯ್ಯ, ಮೋಹನ್ ಹಾಗೂ ಸಿಬ್ಬಂದಿ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…