ನಮ್ಮೂರಲ್ಲಿ ಕ್ವಾರಂಟೈನ್ ಕೇಂದ್ರ ಬೇಡ; ಸ್ಥಳೀಯರ ವಿರೋಧ, ಅಧಿಕಾರಿಗಳ ಮನವೊಲಿಕೆ ವಿಫಲ
Team Udayavani, Jul 23, 2020, 11:45 AM IST
ನೆಲಮಂಗಲ: ವಿದೇಶದಿಂದ ಬಂದವರ ಕ್ವಾರಂಟೈನ್ಗೆ ತಾಲೂಕಿನ ಜನ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ನಗರದ ಜಯನಗರ ಹಾಗೂ ವಾಜರಹಳ್ಳಿಯ ಮಾರುತಿ ನಗರಗಳ ಹಾಸ್ಟೆಲ್ ನಲ್ಲಿ ವಿದೇಶದಿಂದ ಬಂದವರ ಕ್ವಾರಂಟೈನ್ಗೆ ವಿರೋಧ ವ್ಯಕ್ತಪಡಿಸಿ ಬಸ್ ತಡೆದು ಪ್ರತಿಭಟನೆ ಮಾಡಿದರು. ತಡವಾಗಿ ಬಂದ ಪೊಲೀಸರು, ತಹಶೀಲ್ದಾರ್ ಮಧ್ಯೆ ಪ್ರವೇಶಿಸಿ ಮನವೊಲಿಸಲು ಪ್ರಯತ್ನಪಟ್ಟರೂ ಜನ ಮಾತ್ರ ಕ್ವಾರಂಟೈನ್ಗೆ ಬಿಡುವುದಿಲ್ಲ ಎಂದು ಪ್ರತಿಭಟನೆಗೆ ಮುಂದಾದಾಗ, ಲೋಹಿತ್ನಗರದ ಸರ್ಕಾರಿ ಹಾಸ್ಟೆಲ್ನಲ್ಲಿ 59ಜನರನ್ನು ಹಾಗೂ ದೊಡ್ಡಬಳ್ಳಾಪುರದ ಹಾಸ್ಟೆಲ್ಗೆ 20ಜನರನ್ನು
ಸ್ಥಳಾಂತರಿಸಲಾಗಿದೆ.
ಮಾಲಿಕರ ಬೀಗ: ತಾಲೂಕಿನ ಹಲವು ಸರ್ಕಾರಿ ಹಾಸ್ಟೆಲ್ಗಳನ್ನು ಖಾಸಗಿ ವ್ಯಕ್ತಿಗಳ ಕಟ್ಟಡಗಳಲ್ಲಿ ಬಾಡಿಗೆಗೆ ತೆಗೆದುಕೊಳ್ಳಲಾಗಿದೆ. ಆದರೆ, ವಿದೇಶದಿಂದ ಬಂದವರನ್ನು ಕ್ವಾರಂಟೈನ್ ಮಾಡುತ್ತಾರೆ ಎಂದು ಮಾಲಿಕರು ಕಟ್ಟಡವನ್ನು ಪ್ರವೇಶಿಸುವ ಬಾಗಿಲಿಗೆ ಬೀಗ ಹಾಕಿದ್ದು ಕ್ವಾರಂಟೈನ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಮನವಿ: ಜನ ಹೆಚ್ಚು ವಾಸವಾಗಿರುವ ಪ್ರದೇಶದ ಹಾಸ್ಟೆಲ್ಗಳಲ್ಲಿ ವಿದೇಶದಿಂದ ಬಂದವರಿಗೆ ಕ್ವಾರಂಟೈನ್ ಮಾಡುತ್ತಿರುವುದು ಸರಿಯಲ್ಲ, ನಮ್ಮ ಭಾಗದಲ್ಲಿ ಸುರಕ್ಷತೆಯಿಂದ ಬದುಕುತ್ತಿದ್ದೇವೆ, ಬೇರೆ ಕಡೆಯಿಂದ ಬಂದವರನ್ನು ತಂದು ನಮಗೆ ಸಮಸ್ಯೆ ಮಾಡಬೇಡಿ ಎಂದು ಅಧಿಕಾರಿಗಳಿಗೆ ಸ್ಥಳೀಯರು ಮನವಿ ಮಾಡಿದರು.ತಹಶೀಲ್ದಾರ್ ಶ್ರೀನಿವಾಸ್ ಪ್ರತಿಕ್ರಿಯಿಸಿ, ಕ್ವಾರಂಟೈನ್ ಮಾಡುವವರಿಗೆ ಯಾವುದೇ ಕಾಯಿಲೆ ಇರಲ್ಲ, ಕಡ್ಡಾಯ ಕ್ವಾರಂಟೈನ್ ಇರುವುದರಿಂದ ಅವರಿಗೆ ಸೌಲಭ್ಯ ಮಾಡಲಾಗುತ್ತಿದೆ. ವಿದೇಶದಿಂದ ಬಂದ 79 ಜನರಲ್ಲಿ 59ಜನರನ್ನು ಕ್ವಾರಂಟೈನ್ ಮಾಡಿ ಉಳಿದವರನ್ನು ದೊಡ್ಡಬಳ್ಳಾಪುರಕ್ಕೆ ಕಳುಹಿಸಲಾಗಿದೆ. ಅವರು ನಮ್ಮಂತೆಯೇ ಅಲ್ಲವೇ ವಿರೋಧ ಮಾಡುವುದು ಸರಿಯಲ್ಲ ಎಂದರು.
ಅವ್ಯವಸ್ಥೆಗೆ ಆಕ್ರೋಶ
ದೇವನಹಳ್ಳಿ: ಕ್ವಾರಂಟೈನ್ ಕೇಂದ್ರದಲ್ಲಿ ಸರಿಯಾದ ಸೌಕರ್ಯಗಳಿಲ್ಲದೆ ಪರಿತಪಿಸುವ ಪರಿಸ್ಥಿತಿ ನಿರ್ಮಾಣ ಆಗಿರುವುದರಿಂದ ಬಿ.ಬಿ. ರಸ್ತೆಯ ಸಮಾಜ ಕಲ್ಯಾಣ ಇಲಾಖೆ ಬಾಲಕರ ಹಾಸ್ಟೆಲ್ ಮುಂಭಾಗದಲ್ಲಿ ಕ್ವಾರಂಟೈನ್ನಲ್ಲಿ ಇರುವವರು ಆಕ್ರೋಶ ವ್ಯಕ್ತಪಡಿಸಿದರು. ಒಂದೇ ಕೊಠಡಿಯಲ್ಲಿ 40 ಹಾಸಿಗೆ ಹಾಕಲಾಗಿದೆ. ತಹಶೀಲ್ದಾರ್ ಆಗಲಿ, ಯಾವುದೇ ಅಧಿಕಾರಿಗಳಾಗಲಿ ಕ್ವಾರಂಟೈನ್ ಕೇಂದ್ರಗಳಿಗೆ ಬರುತ್ತಿಲ್ಲ. 100 ಜನಕ್ಕೆ 4 ಶೌಚಾಲಯ, ಸ್ಯಾನಿ ಟೈಸರ್ ಇಲ್ಲ, ಮಾಸ್ಕ್ ಇಲ್ಲ, ಕುಡಿಯಲು ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯ ಸ್ವಚ್ಛತೆ ಇಲ್ಲ. ಈ ವೇಳೆ ಆರೋಗ್ಯ ಸಿಬ್ಬಂದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ