ತುಂಬಿದ ಬಾವಿಯಲ್ಲಿ ಮಕ್ಕಳ ಯೋಗಾಸನ: ಜನರಿಂದ ಪ್ರಶಂಸೆ

ಅಣ್ಣ-ತಂಗಿ ಸಾಧನೆಗೆ ಅರದೇಶನಹಳ್ಳಿ ಗ್ರಾಮಸ್ಥರ ಮೆಚ್ಚುಗೆ

Team Udayavani, May 8, 2022, 3:09 PM IST

ತುಂಬಿದ ಬಾವಿಯಲ್ಲಿ ಮಕ್ಕಳ ಯೋಗಾಸನ: ಜನರಿಂದ ಪ್ರಶಂಸೆ

ದೇವನಹಳ್ಳಿ: ತಾಲೂಕಿನ ಜಾಲಿಗೆ ಗ್ರಾಪಂ ವ್ಯಾಪ್ತಿಯ ಅರದೇಶನಹಳ್ಳಿ ಗಾಮದ ಜ್ಯೋತಿಷಿ ಡಾ. ಆನಂದ್‌ಕುಮಾರ್‌ ಮತ್ತು ಗೃಹಿಣಿ ರೂಪಾ ದಂಪತಿ ಮಕ್ಕಳಾದ ಲಿಖೀತ್‌ಕುಮಾರ್‌ (12) ಮತ್ತು ತಂಗಿ ದೇವಿಕಾ(8) ಸಾಧನೆ ಇತರರಿಗೆ ಮಾದರಿ ಯಾಗಿದ್ದು, ಯೋಗಾಸಕ್ತಿ ವಿಕ್ಷಕರನ್ನು ಬೆರಗಾಗಿಸುತ್ತದೆ. ಈ ಅಣ್ಣ ತಂಗಿಯ ಸಾಧನೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಯಿ ರೂಪಾ ಮತ್ತು ಅಜ್ಜಿಯಂದಿರಿಬ್ಬರ ಪ್ರೋತ್ಸಾಹ ಮಕ್ಕಳ ಭವಿಷ್ಯಕ್ಕೆ ಬುನಾದಿ ಯಾಗಿದೆ. ಮನೆಯಲ್ಲಿ ಶಾಲೆ, ರಜೆ ಸಮಯ ದಲ್ಲಿ ಓದಿನ ಜೊತೆಗೆ ಜಲಕ್ರೀಡೆ ಆಸಕ್ತಿ ಹೊಂದಿರುವ ಮಕ್ಕಳಿಗೆ ತಂದೆಯ ಶ್ರಮ ಹೆಚ್ಚು ಇದೆ. ಗ್ರಾಮೀಣ ಭಾಗದಲ್ಲಿ ಇಂತಹ ಪ್ರತಿಭೆಗಳನ್ನು ಹೊಂದಿರುವ ಚಿಣ್ಣರು ಬೆರಳೆಣಿಕೆ ಯಷ್ಟು ಮಾತ್ರ ಕಾಣಲು ಸಾಧ್ಯ. ನುರಿತ ತಜ್ಞರ ಜೊತೆಯಲ್ಲಿ ಈಜು ಬರುವವರ ಜೊತೆಯಲ್ಲಿ ಮಾತ್ರ ಇಂತಹ ಜಲ ಕ್ರೀಡೆಗೆ ಮುಂದಾಗಬೇಕು. ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಕೇವಲ 15 ದಿನಗಳಲ್ಲಿ ಇಂತಹ ದೊಡ್ಡ ಸಾಧನೆ ಯನ್ನು ಮಾಡಿದ ಪುಟಾಣಿಗಳ ಯೋಗಾಸನ ಗಮನ ಸೆಳೆಯು ವಂತಹ ದ್ದಾಗಿದೆ ಎಂದು ಸ್ಥಳೀಯ ರೈತ ರಾಮಚಂದ್ರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ನೀರಿನಲ್ಲಿ ಯೋಗಾಸನ: ಜ್ಯೋತಿಷಿ ಡಾ.ಆನಂದ್‌ ಕುಮಾರ್‌ ಮಾತನಾಡಿ, ನಮ್ಮ ಆಡು ಭಾಷೆಯಲ್ಲಿ ಹಿಂಗಾಣಿ, ಮುಂಗಾಣಿ ಡೈ ಹಾಗೂ ಮೀನಿನಂತೆ ನೀರಿನ ಒಳಗಡೆ ಇವರು ಈಜಾಡುವುದನ್ನು ನೋಡಿದರೆ ಇದರ ಹಿಂದಿನ ಶಕ್ತಿ ಒಂದು ಅಡಗಿದೆ ಎಂದು ಭಾಸವಾಗುತ್ತದೆ. ಮೊದಲು ಈ ಇಬ್ಬರು ಮಕ್ಕಳಿಗೆ ಧೈರ್ಯ ತುಂಬಿ, ನೀರಿನಲ್ಲಿ ಸತತವಾಗಿ ತರಬೇತಿಯನ್ನು ನೀಡಲಾಗುತ್ತಿತ್ತು. ಇಷ್ಟು ಬೇಗ ಇಷ್ಟು ಮಟ್ಟದಲ್ಲಿ ಈಜು ಮತ್ತು ಯೋಗಾಸನವನ್ನು ಮಾಡುತ್ತಾರೆಂಬುದು ನಂಬಲು ಸಾಧ್ಯವಾಗುತ್ತಿಲ್ಲ ಎಂದರು.

ದೃಢ ಸಂಕಲ್ಪ, ಏಕಾಗ್ರತೆಯಿಂದ ನೀರಿನಲ್ಲಿ ಯೋಗ ಪ್ರದರ್ಶನ : ನೀರಿನಲ್ಲಿ ಯೋಗಾಸನ ಮಾಡುವುದು ಅಷ್ಟೇನು ಸುಲಭದ ಕೆಲಸವಲ್ಲ, ಬೃಹತ್‌ ಬಾವಿಯೊಂದರಲ್ಲಿ ಈ ಬೇಸಿಗೆಯಲ್ಲಿ ಕೇವಲ 15 ದಿನಗಳ ಸತತ ತರಬೇತಿಯಿಂದ ನೋಡುಗರ ಗಮನ ಸೆಳೆಯುತ್ತಿದ್ದಾರೆ. ಈ ಅಣ್ಣ-ತಂಗಿಯ ಯೋಗಾಸಕ್ತಿ ನಿಜಕ್ಕೂ ಇತರರಿಗೆ ಮಾದರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಸಾಮಾನ್ಯವಾಗಿ ಬಯಲಿನಲ್ಲಿ ಯೋಗಾಸನ ಮಾಡುವುದು ಸಹಜ ಕ್ರಿಯೆಯಾಗಿದೆ. ಯಾವುದೇ ರೀತಿಯ ಪರಿಕರ ಬಳಸದೆಯೇ ದೃಢ ಸಂಕಲ್ಪ ಮತ್ತು ಏಕಾಗ್ರತೆಯಿಂದ ನೀರಿನಲ್ಲಿ ತೇಲುವ ಬಲೂನಿನಂತೆ ಮನುಷ್ಯ ನೀರ ಮೇಲೆ ಉಸಿರಾಡುವ ಕ್ರಿಯೆ ಈ ಚಿಕ್ಕ ಮಕ್ಕಳು ತೋರಿಸಿಕೊಟ್ಟಿದ್ದಾರೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.