ಕೃಷಿಕರ ಕಂಕಣ ಭಾಗ್ಯ ಯೋಜನೆ ಜಾರಿಯಾಗಲಿ
Team Udayavani, May 26, 2022, 1:31 PM IST
ಸಂಕೇಶ್ವರ: ಅಂತರ್ಜಾತಿ ವಿವಾಹಕ್ಕೆ ನೀಡುವ ಪ್ರೋತ್ಸಾಹಧನದಂತೆ ಯುವ ರೈತರ ಕೈ ಹಿಡಿಯುವ ಯುವತಿಯರಿಗೆ ಕನಿಷ್ಟ 5 ಲಕ್ಷ ಪ್ರೋತ್ಸಾಹಧನ ನೀಡುವ ಕೃಷಿಕರ ಕಂಕಣ ಭಾಗ್ಯ ಯೋಜನೆಯನ್ನು ಜಾತ್ಯತೀತವಾಗಿ ಆರಂಭಿಸಬೇಕೆಂದು ನಿಡಸೋಸಿಯ ಶಿವಲಿಂಗೇಶ್ವರ ಸ್ವಾಮೀಜಿ ಸರಕಾರವನ್ನು ಒತ್ತಾಯಿಸಿದ್ದಾರೆ.
ಸಮೀಪದ ಹರಗಾಪೂರಗಡದ ಕುರಣ ತೋಟದಲ್ಲಿ ಮುಂಗಾರು ಚಟುವಟಿಕೆ ಹಾಗೂ ಕೃಷಿಕರ ಸಮಸ್ಯೆ ಆಲಿಸಿದ ಅವರು, ಇಂದಿನ ದಿನಮಾನಗಳಲ್ಲಿ ಕೃಷಿ ಕ್ಷೇತ್ರವನ್ನು ಬಲಪಡಿಸಲು ಸರಕಾರ ಸಾಕಷ್ಟು ಯೋಜನೆ ಜಾರಿಗೆ ತಂದಿದೆ. ಆದರೂ ಕೃಷಿಕ ಯುವಕರನ್ನು ಮದುವೆಯಾಗಲು ಯುವತಿಯರು ಹಿಂದೇಟು ಹಾಕುತ್ತಿದ್ದು, ಈ ಕುರಿತು ರೈತ ಮುಖಂಡರ ನೇತೃತ್ವದಲ್ಲಿ ಜನಪ್ರತಿನಿಧಿಗಳು ಹಾಗೂ ಸ್ವಾಮೀಜಿ ನೇತೃತ್ವದ ನಿಯೋಗದ ಮೂಲಕ ಸರಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.
ಮದುವೆ ಸಲುವಾಗಿ ಹೆಚ್ಚಿನ ಯುವ ರೈತರು ಗ್ರಾಮೀಣ ಪ್ರದೇಶ ಬಿಟ್ಟು ನಗರಗಳಲ್ಲಿ ನೌಕರಿ ಹಿಡಿಯುತ್ತಿದ್ದಾರೆ. ಯುವತಿಯ ಪೋಷಕರು ಸಹ ಕೃಷಿಕ ಯುವಕರಿಗೆ ಮಗಳನ್ನು ಕೊಡುತ್ತಿಲ್ಲ. ಇಂತಹ ವ್ಯವಸ್ಥೆಗಳ ಬಗೆಗೆ ಸಾಕಷ್ಟು ಜಾಗೃತಿ ಅವಶ್ಯವಾಗಿದೆ ಎಂದರು.
ರೈತ ಸಂತತಿ ಉಳಿದರೆ ಮಾತ್ರ ಭವಿಷ್ಯದ ಬೆಳವಣಿಗೆ ಸಾಧ್ಯ ಹೀಗಾಗಿ ವಿದ್ಯಾವಂತ ಯುವಕರು ಆಧುನಿಕ ಕೃಷಿಯಲ್ಲಿ ತೊಡಗಿಕೊಂಡು ಅನ್ನ ನೀಡುವ ಅನ್ನದಾತನ ಸಂಕುಲಕ್ಕೆ ಬೆಳಕು ಚೆಲ್ಲಬೇಕಾಗಿದೆ ಎಂದರು.
ವೈಜ್ಞಾನಿಕ ಕೃಷಿಯಿಂದ ದೂರ ಉಳಿದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ರೈತರ ಆತ್ಮಹತ್ಯೆ ಪ್ರಕರಣಗಳು ಇಂದಿನ ಯುವ ಸಮುದಾಯವನ್ನು ಕೃಷಿಯಿಂದ ದೂರ ಉಳಿಯುಂತೆ ಮಾಡಿವೆ ಎಂದರು.
ಸಿರಿಧಾನ್ಯ ಬೆಳೆಗಳಿಗೆ ಒತ್ತು ನೀಡಿ: ಇಂದಿನ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳ ಬಳಕೆಯಿಂದ ಆರೋಗ್ಯ ಸದೃಢವಾಗಿಸಿಕೊಳ್ಳ ಬಹುದಾಗಿದ್ದು, ರೈತರು ತಮ್ಮ ಮನೆ ಉಪಯೋಗಕ್ಕೆ ಬೇಕಾದಷ್ಟು ಸಿರಿಧಾನ್ಯ ಬೆಳೆದುಕೊಳ್ಳಬೇಕು. ಶ್ರೀಮಠದಿಂದ ಸಿರಿಧಾನ್ಯ ಪ್ರೋತ್ಸಾಹಿಸಲು ಬೀಜ ವಿತರಣೆ ಮಾಡಲಾಗುವುದು ಎಂದರು. ಹರಗಾಪೂರ, ಅಂಕಲೆ, ನಿಡಸೋಸಿ, ನಿಡಸೋಸಿವಾಡಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ