![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
ಲಾಕ್ಡೌನ್: ನೀರುಪಾಲಾದ ಸಾವಿರಾರು ಲೀ. ಹಾಲು
Team Udayavani, Apr 1, 2020, 4:16 PM IST
![bg-tdy-1](https://www.udayavani.com/wp-content/uploads/2020/04/bg-tdy-1-620x350.jpg)
ರಾಯಬಾಗ: ಲಾಕ್ ಡೌನ್ ಹಿನ್ನೆಲೆಯಲ್ಲಿ ಸಮೀಪದ ಪಾಲಬಾಂವಿ ಗ್ರಾಮದ ಗೌಳಿಗರು ತಾವು ಎರಡು ತಂಡವಾಗಿ ದಿನನಿತ್ಯ ಸಂಗ್ರಹಿಸಿದ ಸುಮಾರು 3000 ಲೀಟರ್ ಹಾಲನ್ನು ಗ್ರಾಮದ ಹೊರವಲಯದಲ್ಲಿ ಹರಿಯುತ್ತಿರುವ ಘಟಪ್ರಭಾ ಎಡದಂಡೆ ಕಾಲುವೆಗೆ ಸುರಿದ ಘಟನೆ ನಡೆದಿದೆ.
ಗೌಳಿಗರ ಪ್ರಮುಖರಾದ ಹುಸೇನ್ ರಮಜಾನ್ ಕಲಾಲ್ ಹಾಗೂ ಹೈದರ್ ಮುಜಾವರ್ ಮಾತನಾಡಿ, ಒಂದು ದಿನಕ್ಕೆ ಸುಮಾರು 60 ಸಾವಿರ ರೂ. ನಂತೆ ಬಿಲ್ಲು ಹಾಲು ಉತ್ಪಾದಕರಿಗೆ ಪ್ರತಿ ವಾರ ಸಂದಾಯ ಮಾಡುತ್ತಿದ್ದು, ಸಂಗ್ರಹಿಸಿದ ಹಾಲನ್ನು ತೇರದಾಳ, ಕುಡಚಿ, ರಾಯಬಾಗ, ಮೊರಬ ಸೇರಿದಂತೆ ಪುಣೆ-ಮುಂಬೈ ಕಡೆಗೆ ಕಳುಹಿಸಲಾಗುತ್ತಿತ್ತು. ಸೋಮವಾರ ಕುಡಚಿಯಲ್ಲಿ ಪೊಲೀಸರು ಹಾಲಿನ ವಾಹನವನ್ನು ಸೀಜ್ ಮಾಡಿದ ಪರಿಣಾಮವಾಗಿ ಉಳಿದ ಹಾಲನ್ನು ಪಾಲಬಾವಿಯ ಘಟಪ್ರಭಾ ಕಾಲುವೆಗೆ ಸುರಿಯಲಾಯಿತು. ಇದರಿಂದ ಗೌಳಿಗರಿಗೆ ತುಂಬಾ ನಷ್ಟವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾ.ಪಂ.ನವರು ಗೌಳಿಗರಿಗೆ ಹಾಗೂ ಹಾಲು ಉತ್ಪಾದಕರಿಗೆ ಪರಿಹಾರದ ಜೊತೆಗೆ ಹಾಲು ಕಳುಹಿಸಲು ಸಮರ್ಪಕ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
ಗೌಳಿಗರಾದ ಗೋಪಾಲ ಬಳಿಗಾರ, ದಾನಪ್ಪ ಮಾದರ, ಹಣಮಂತ ಮಾದರ, ಅಬ್ಟಾಸ್ ಚೌಧರಿ, ಮಹಾಲಿಂಗ ಹಂದಿಗುಂದ, ಚಿಕ್ಕಪ್ಪ ಸುಲ್ತಾನಪೂರ, ದಾವಲ್ ಕಲಾಲ, ಮಲ್ಲಪ್ಪ ಮಾದರ, ನೀಲಪ್ಪ ನಾಯಿಕ ಇದ್ದರು.
ಹಾಲು ಸಂಗ್ರಹಿಸುವ ಗೌಳಿಗರಿಗೆ ಗ್ರಾ.ಪಂ ನೊಟೀಸ್: ಗ್ರಾಮದಲ್ಲಿರುವ ಡೇರಿಗೆ ಅತಿ ಹೆಚ್ಚು ಜನರು ಸೇರುವ ಸಾಧ್ಯತೆಯಿರುವುದರಿಂದ ಹಾಲು ಸಂಗ್ರಹಿಸದಂತೆ ಗ್ರಾ.ಪಂ ಕಾರ್ಯದರ್ಶಿ ಗೌಳಿಗರಿಗೆ ನೊಟೀಸ್ ನೀಡಿದ್ದಾರೆ. ಇದು ಗೌಳಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಟಾಪ್ ನ್ಯೂಸ್
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.