ಛತ್ರಪತಿ ಸಂಭಾಜಿ ಮಹಾರಾಜರ ರಾಜ್ಯಾಭಿಷೇಕ-ಪ್ರತಿಮೆಗೆ ಪೂಜೆ
Team Udayavani, Jan 17, 2022, 10:28 PM IST
ಬೆಳಗಾವಿ: ಹಿಂದೂ ಚಕ್ರವರ್ತಿ, ಛತ್ರಪತಿ ಶಿವಾಜಿ ಮಹಾರಾಜರ ಉತ್ತರಾಧಿ ಕಾರಿ ಛತ್ರಪತಿ ಸಂಭಾಜಿ ಮಹಾರಾಜರ 341ನೇ ರಾಜ್ಯಾಭಿಷೇಕದಂದು ಧರ್ಮವೀರ ನಗರದ ಸಂಭಾಜಿ ವೃತ್ತದಲ್ಲಿ ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ ನೇತೃತ್ವದಲ್ಲಿ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು.
ಸಂಭಾಜಿ ಮಹಾರಾಜರ ಪ್ರತಿಮೆಗೆ ಶಾಸಕ ಅನಿಲ್ ಬೆನಕೆ ಹಾಲಿನ ಅಭಿಷೇಕ ಮಾಡಿ, ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು. ನಂತರ ಮಾತನಾಡಿ, ಛತ್ರಪತಿ ಸಂಭಾಜಿ ಮಹಾರಾಜರ 341ನೇ ರಾಜ್ಯಾಭಿಷೇಕ ದಿನವನ್ನು ಪ್ರತಿ ವರ್ಷ ಜ.16ರಂದು ಆಚರಿಸಲಾಗುತ್ತದೆ. ಸಂಭಾಜಿ ಮಹಾರಾಜರು, ಛತ್ರಪತಿ ಮಹಾರಾಜರ ಶೂರತ್ವ ಇಂದಿನ ಪೀಳಿಗೆಗೆ ಮಾದರಿ.
ಕೊನೆ ಉಸಿರು ಇರುವವರೆಗೂ ಸಂಭಾಜಿ ಮಹಾರಾಜರು ಹಿಂದೂ ಧರ್ಮಕ್ಕಾಗಿ ಹೋರಾಡಿದ್ದಾರೆ. ವೈರಿಗಳ ಬೆದರಿಕೆಗೆ ಬಗ್ಗದೇ ಜೀವ ಪಣಕ್ಕಿಟ್ಟು ಹೋರಾಟ ಮಾಡಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕು ಎಂದರು. ಈ ವೇಳೆ ಶಾಸಕ ಬೆನಕೆ ಬೆಂಬಲಿಗರು, ಛತ್ರಪತಿ ಸಂಬಾಜಿ ಮಹಾರಾಜರ ಅನುಯಾಯಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ