ಸರ್ಕಾರದ ಆದೇಶದಂತೆ ಪ್ರಭುಗಳ ಪುಣ್ಯಾರಾಧನೆ
Team Udayavani, Jan 17, 2022, 10:21 PM IST
ತೆಲಸಂಗ: ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ರವಿವಾರ ಗ್ರಾಮ ಸೇರಿದಂತೆ ತೆಲಸಂಗ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪೊಲೀಸರು ಬರಬಹುದೆಂಬ ಕಾರಣಕ್ಕೆ ಕೆಲ ಅಂಗಡಿಕಾರರು ಪೂರ್ತಿ ಅಂಗಡಿ ಬಂದ್ ಮಾಡಿದ್ದರೆ, ಇನ್ನೂ ಕೆಲವರು ಅರ್ಧ ಬಾಗಿಲು ತೆರೆದು ವ್ಯಾಪಾರ ಮಾಡುತ್ತಿರುವುದು ಕಂಡು ಬಂತು.
ಬೆಳಗ್ಗಿನಿಂದಲೇ ಜನರ ಓಡಾಟ ಸಾಮಾನ್ಯವಾಗಿತ್ತು. ಬೀದಿ ವ್ಯಾಪಾರಿಗಳು, ರೈತರ ತರಕಾರಿ ಮಾರಾಟ, ವಾಹನ ಚಾಲಕರು ಕರ್ಫ್ಯೂ ವಿರುದ್ಧ ಕಿಡಿ ಕಾರಿದರು. ಕಳೆದ ಹಿಂದಿನ ಎರಡು ಕರ್ಫ್ಯೂಗಳಲ್ಲಿ ಮಾಡಿದ ಸಾಲ ಇನ್ನೂ ಮುಟ್ಟಿಸಲಾಗುತ್ತಿಲ್ಲ. ಇದೀಗ ಸರ್ಕಾರ ಮತ್ತೆ ಅದೇ ಪ್ರಸಂಗ ತಂದೊಡ್ಡಿದ್ದು, ನಾವು ಬದುಕು ಸಾಗಿಸುವುದು ಹೇಗೆ? ಎಂದು ಸರ್ಕಾರದ ವಿರುದ್ಧ ಆಕ್ರೋಶ ಕೂಡ ವ್ಯಕ್ತವಾದವು.
ಒಟ್ಟಾರೆ ನಿತ್ಯ ದುಡಿದು ತಿನ್ನುವ ಹಾಗೂ ತಿರುಗಾಡಿ, ಸಂತೆ ಸಂತೆ ಮಾರಾಟ ಮಾಡಿಯೇ ಬದುಕುವ ಬಡಜನತೆಗೆ ಕರ್ಫ್ಯೂ ಎಫೆಕ್ಟ್ ತಗುಲಿದ್ದು ಬಿಟ್ಟರೆ ಬಸ್ ಸಂಚಾರ ಸೇರಿದಂತೆ ಉಳಿದೆಲ್ಲವೂ ಸಾಮಾನ್ಯವಾಗಿತ್ತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್
ಪ್ರಧಾನಿ ಮೋದಿಯಿಂದ ಮಾತ್ರ ದೇಶ ರಕ್ಷಣೆ ಸಾಧ್ಯ: ಕುಮಠಳ್ಳಿ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ